AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ravindra Jadeja: ಸರ್ ಎಂದು ಕರೆಯಬೇಡಿ, ಬಾಪು ಅನ್ನಿ ಸಾಕು: ರವೀಂದ್ರ ಜಡೇಜಾ

India vs Australia Test: ಈ ಭರ್ಜರಿ ಪ್ರದರ್ಶನದ ಫಲವಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದಿದ್ದರು. 5 ತಿಂಗಳುಗಳ ಬಳಿಕ ಕಂಬ್ಯಾಕ್ ಮಾಡಿದ್ದ ಜಡ್ಡು ನಾಗ್ಪುರ ಟೆಸ್ಟ್​ನಲ್ಲಿ ಒಟ್ಟು 7 ವಿಕೆಟ್ ಪಡೆದು ಮಿಂಚಿದ್ದರು.

Ravindra Jadeja: ಸರ್ ಎಂದು ಕರೆಯಬೇಡಿ, ಬಾಪು ಅನ್ನಿ ಸಾಕು: ರವೀಂದ್ರ ಜಡೇಜಾ
Ravindra Jadeja
TV9 Web
| Edited By: |

Updated on: Feb 16, 2023 | 4:00 PM

Share

ಟೀಮ್ ಇಂಡಿಯಾದ (Team India) ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರನ್ನು ಸರ್ ಎಂದು ಕರೆಯುತ್ತಿರುವುದು ಗೊತ್ತೇ ಇದೆ. 2013 ರಲ್ಲಿ ಮಹೇಂದ್ರ ಸಿಂಗ್​ ಧೋನಿ ಸೋಷಿಯಲ್ ಮೀಡಿಯಾದಲ್ಲಿ ಸರ್ ರವೀಂದ್ರ ಜಡೇಜಾ ಎಂದು ಸಂಬೋಧಿಸಿದ ಪರಿಣಾಮ ಅವರ ಹೆಸರಿನ ಮುಂದೆ ಸರ್ ಸೇರ್ಪಡೆಯಾಯಿತು. ಆದರೆ ಜನರು ಸರ್ ಎಂದು ಕರೆಯುತ್ತಿರುವುದು ಖುದ್ದು ಜಡೇಜಾ ಅವರಿಗೂ ಇಷ್ಟವಿಲ್ಲ. ಬದಲಾಗಿ ನನ್ನನ್ನು ಬಾಪು ಎಂದು ಕರೆಯಿರಿ ಎಂದಿದ್ದಾರೆ ಟೀಮ್ ಇಂಡಿಯಾದ ಆಟಗಾರ.

ಸಂದರ್ಶನವೊಂದರಲ್ಲಿ ಮಾತನಾಡಿದ ರವೀಂದ್ರ ಜಡೇಜಾ, ಜನರು ನನ್ನನ್ನು ನನ್ನ ಹೆಸರಿನಿಂದ ಕರೆಯಬೇಕು. ಅಷ್ಟೇ ಸಾಕು. ನಾನು ಸರ್ ಎಂದು ಕರೆಯುವುದನ್ನು ದ್ವೇಷಿಸುತ್ತೇನೆ. ನೀವು ಬಯಸಿದರೆ, ನನ್ನನ್ನು ಬಾಪು ಎಂದು ಕರೆಯಿರಿ. ಅದು ನನಗೆ ಇಷ್ಟವಾಗುತ್ತದೆ. ಈ ಸರ್-ವಾರ್, ನನಗೆ ಇಷ್ಟವಿಲ್ಲ. ವಾಸ್ತವವಾಗಿ, ಜನರು ನನ್ನನ್ನು ಸರ್ ಎಂದು ಕರೆದಾಗ ನಾನು ಹೆಚ್ಚಾಗಿ ಗಮನಿಸುವುದಿಲ್ಲ ಎಂದು ಜಡೇಜಾ ಹೇಳಿದ್ದಾರೆ.

ನಾನು ಗುಜರಾತಿನ ಜಾಮ್‌ನಗರದವ. ಅಲ್ಲಿ ಎಲ್ಲರೂ ನನ್ನನ್ನು ಪ್ರೀತಿಯಿಂದ ‘ಬಾಪು’ ಎಂದು ಕರೆಯುತ್ತಾರೆ. ಹಾಗಾಗಿ ‘ಸರ್’ ಬದಲು ಬಾಪು ಎಂದು ಕರೆಯದರೆ ನನಗೆ ಹೆಚ್ಚು ಇಷ್ಟವಾಗುತ್ತದೆ ಎಂದು ಜಡೇಜಾ ಹೇಳಿದ್ದಾರೆ.

ಇದನ್ನೂ ಓದಿ
Image
India vs Australia 2nd Test: ಟೀಮ್ ಇಂಡಿಯಾಗೆ ಸ್ಟಾರ್ ಆಟಗಾರ ಎಂಟ್ರಿ
Image
Virender Sehwag: ಪುಲ್ವಾಮಾ ದಾಳಿಗೆ 4 ವರ್ಷ: ಕೊಟ್ಟ ಮಾತು ಉಳಿಸಿಕೊಂಡ ವೀರೇಂದ್ರ ಸೆಹ್ವಾಗ್
Image
RCB ತಂಡದ ಸ್ಮೈಲ್ ಸುಂದರಿ ಸ್ಮೃತಿ ಮಂಧಾನ ಅವರ ಶೈಕ್ಷಣಿಕ ಅರ್ಹತೆ ಏನು ಗೊತ್ತಾ?
Image
WPL 2023: ವುಮೆನ್ಸ್​ ಪ್ರೀಮಿಯರ್ ಲೀಗ್​ನಲ್ಲಿ ಕಣಕ್ಕಿಳಿಯುವ 5 ತಂಡಗಳು ಹೀಗಿವೆ

ಇದೇ ವೇಳೆ ಮಾಧ್ಯಮಗಳಿಂದ ದೂರ ಉಳಿಯುತ್ತಿರುವ ಬಗ್ಗೆ ಕೂಡ ಸ್ಪಷ್ಟನೆ ನೀಡಿದರು. ನೀವು ನನ್ನ ಬಗ್ಗೆ ಬರೆದರೆ, ನಾನು ಕಂಬ್ಯಾಕ್ ಮಾಡುತ್ತೇನೆ ಎಂದು ನೀವು ಭಾವಿಸುತ್ತೀರಾ?. ವಿಮರ್ಶಕರು ನಿರಂತರವಾಗಿ ತಮ್ಮನ್ನು ದುರ್ಬಲಗೊಳಿಸಿದಾಗ ನಮಲ್ಲೇ ಆತಂಕ ಮೂಡುತ್ತದೆ. ಇಂತಹ ಸಂದರ್ಭದಲ್ಲಿ ನನಗೆ ತಂದೆ ಹೇಳಿದ ಮಾತೊಂದು ನೆನಪು ಬರುತ್ತದೆ.

ನಮ್ಮ ತಂದೆಯವರು ನನಗೆ ಯಾವತ್ತೂ “ಚಮಚಗಿರಿ” ಮಾಡದಂತೆ ಎಚ್ಚರಿಕೆ ನೀಡಿದ್ದರು. “ಗ್ರೌಂಡ್ ಮೇ ಪ್ರದರ್ಶನ ಕರೋ, ಬಸ್ ಬಾತ್ ಖತಮ್” (ಮೈದಾನದಲ್ಲಿ ಪ್ರದರ್ಶನ ನೀಡು, ಅಲ್ಲಿಗೆ ಎಲ್ಲವೂ ಕೊನೆಗೊಳ್ಳುತ್ತೆ) ಎಂದು ಹೇಳಿದ್ದರು. ಇದನ್ನೇ ಪಾಲಿಸುತ್ತಾ ವೃತ್ತಿ ಜೀವನದಲ್ಲಿ ಬೀಳು ಏಳುಗಳನ್ನು ಕಂಡಿದ್ದೇನೆ ಎಂದು ಜಡೇಜಾ ಹೇಳಿದರು.

ಇದಕ್ಕೆ ಸಾಕ್ಷಿಯೇ ರವೀಂದ್ರ ಜಡೇಜಾ ಅವರ ಇತ್ತೀಚಿನ ಕಂಬ್ಯಾಕ್. ಗಾಯಗೊಂಡು 5 ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿದಿದ್ದ ಜಡೇಜಾ ಅವರಿಗೆ ತಂಡದಲ್ಲಿ ಸ್ಥಾನ ಸಿಗಬೇಕಿದ್ದರೆ ರಣಜಿ ಟೂರ್ನಿ ಆಡಿ ಫಿಟ್​ನೆಸ್ ಸಾಬೀತುಪಡಿಸುವಂತೆ ಬಿಸಿಸಿಐ ಸೂಚಿಸಿತ್ತು. ಅದರಂತೆ ರಣಜಿ ಕ್ರಿಕೆಟ್​ನಲ್ಲಿ ಸೌರಾಷ್ಟ್ರ ಪರ ಕಣಕ್ಕಿಳಿದ ಜಡ್ಡು ತಮಿಳುನಾಡು ವಿರುದ್ಧ 7 ವಿಕೆಟ್ ಪಡೆದು ಮಿಂಚಿದ್ದರು.

ಈ ಭರ್ಜರಿ ಪ್ರದರ್ಶನದ ಫಲವಾಗಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದಿದ್ದರು. 5 ತಿಂಗಳುಗಳ ಬಳಿಕ ಕಂಬ್ಯಾಕ್ ಮಾಡಿದ್ದ ಜಡ್ಡು ನಾಗ್ಪುರ ಟೆಸ್ಟ್​ನಲ್ಲಿ ಒಟ್ಟು 7 ವಿಕೆಟ್ ಪಡೆದು ಮಿಂಚಿದ್ದರು. ಅಷ್ಟೇ ಅಲ್ಲದೆ ಬ್ಯಾಟಿಂಗ್​ನಲ್ಲಿ 70 ರನ್​ ಬಾರಿಸಿದ್ದರು. ಪರಿಣಾಮ ಮೊದಲ ಟೆಸ್ಟ್ ಪಂದ್ಯದ ಗೆಲುವಿನ ರೂವಾರಿಯಾಗಿ ರವೀಂದ್ರ ಜಡೇಜಾ ಮ್ಯಾನ್ ಆಫ್ ದಿ ಮ್ಯಾಚ್ ತಮ್ಮದಾಗಿಸಿಕೊಂಡಿದ್ದರು. ಅಲ್ಲಿಗೆ ಜಡೇಜಾ ಹೇಳಿದಂತೆ ಬಾತ್ ಖತಂ.

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ