AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್‌ ಸ್ವರೂಪದಲ್ಲಿ ಬದಲಾವಣೆ; 4 ತಂಡಗಳ ನಾಯಕರ ಅಸಮಾಧಾನ

2027 World Cup Format Changes: 2027ರ ಏಕದಿನ ವಿಶ್ವಕಪ್ ಸ್ವರೂಪ ಬದಲಾವಣೆ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಐಸಿಸಿಯ ಈ ಹೊಸ ನಿಯಮ, ವಿಶೇಷವಾಗಿ ಅರ್ಹತಾ ಸುತ್ತು, ಬೆಳೆಯುತ್ತಿರುವ ಅಸೋಸಿಯೇಟ್ ತಂಡಗಳಿಗೆ ಹಾನಿಕಾರಕವಾಗಿದೆ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಸಣ್ಣ ರಾಷ್ಟ್ರಗಳು ವಿಶ್ವಕಪ್‌ನಲ್ಲಿ ಆಡುವ ಅವಕಾಶಗಳು ಕುಸಿಯುವ ಭೀತಿ ಎದುರಾಗಿದೆ.

ವಿಶ್ವಕಪ್‌ ಸ್ವರೂಪದಲ್ಲಿ ಬದಲಾವಣೆ; 4 ತಂಡಗಳ ನಾಯಕರ ಅಸಮಾಧಾನ
Jay Shah
ಪೃಥ್ವಿಶಂಕರ
|

Updated on: Jul 17, 2026 | 9:06 PM

Share

2027 ರ ಏಕದಿನ ವಿಶ್ವಕಪ್‌ (2027 ODI World Cup) ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಕೆಲವೇ ದಿನಗಳ ಹಿಂದೆ ಐಸಿಸಿ (ICC) ಮುಂಬರುವ ಏಕದಿನ ವಿಶ್ವಕಪ್​ನ ಸ್ವರೂಪವನ್ನು ಬದಲಾಯಿಸಿತ್ತು. ಇದೀಗ ಐಸಿಸಿಯ ಈ ನಿರ್ಧಾರ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ ಜಯ್ ಶಾ ನೇತೃತ್ವದ ಐಸಿಸಿಯ ಈ ನಿರ್ಧಾರವನ್ನು ವ್ಯಾಪಕವಾಗಿ ಟೀಕಿಸಲಾಗಿದ್ದು, ಕ್ರಿಕೆಟ್​ನಲ್ಲಿ ಈಗಷ್ಟೇ ಬೆಳೆಯುತ್ತಿರುವ ತಂಡಗಳಿಗೆ ಐಸಿಸಿ ರೂಪಿಸಿರುವ ನಿಯಮ ಹಾನಿಕಾರಕವೆಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ನಾಲ್ಕು ತಂಡಗಳ ನಾಯಕರು ಇದರ ವಿರುದ್ಧ ಮಾತನಾಡಿದ್ದಾರೆ.

ವಿಶ್ವಕಪ್‌ನ ಸ್ವರೂಪದಲ್ಲಿ ಏನು ಬದಲಾವಣೆಗಳಾಗಿವೆ?

ಐಸಿಸಿ ಇತ್ತೀಚೆಗೆ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2027 ರ ಪುರುಷರ ವಿಶ್ವಕಪ್ ಮತ್ತು 2028 ರ ಪುರುಷರ ಟಿ20 ವಿಶ್ವಕಪ್‌ನ ಸ್ವರೂಪದಲ್ಲಿ ಬದಲಾವಣೆಗಳನ್ನು ಘೋಷಿಸಿತು. ಇದೀಗ ಏಕದಿನ ವಿಶ್ವಕಪ್‌ನ ಸ್ವರೂಪವು ವಿವಾದ ಹುಟ್ಟುಹಾಕಿದೆ. ವಾಸ್ತವವಾಗಿ, ಈ 14 ತಂಡಗಳ ಟೂರ್ನಮೆಂಟ್‌ನ ಮುಖ್ಯ ಸುತ್ತನ್ನು ಪ್ರವೇಶಿಸಲು ಕೇವಲ 12 ತಂಡಗಳು ಮಾತ್ರ ಅರ್ಹವಾಗಿರುತ್ತವೆ. ಏಕೆಂದರೆ ಕೆಳ ಸ್ಥಾನದಲ್ಲಿರುವ ಮೂರು ತಂಡಗಳ ನಡುವೆ ಅರ್ಹತಾ ಸುತ್ತನ್ನು ಆಡಲಾಗುತ್ತದೆ, ಅದರಲ್ಲಿ ಒಂದು ತಂಡ ಮಾತ್ರ 12 ತಂಡಗಳೊಂದಿಗೆ ಗುಂಪು ಹಂತಕ್ಕೆ ಮುನ್ನಡೆಯುತ್ತದೆ, ಉಳಿದ ಎರಡು ತಂಡಗಳು ಪಂದ್ಯಾವಳಿಯಿಂದ ಹೊರಹೋಗುತ್ತವೆ.

ಈ ನಿರ್ಧಾರವು ಇಡೀ ವಿಶ್ವಕಪ್‌ನಲ್ಲಿ ಆಡುವ ಅಸೋಸಿಯೇಟ್ ತಂಡಗಳು ಟೂರ್ನಮೆಂಟ್‌ಗೆ ಅರ್ಹತೆ ಪಡೆಯುವ ಸಾಧ್ಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಕೆಂದರೆ ಹೆಚ್ಚಿನ ಅಸೋಸಿಯೇಟ್ ತಂಡಗಳು ಮೂರರಲ್ಲಿ ಕೊನೆಯ ಎರಡರಲ್ಲಿ ಸ್ಥಾನ ಪಡೆಯುತ್ತವೆ ಮತ್ತು ಆದ್ದರಿಂದ, ಅವುಗಳಲ್ಲಿ ಒಂದು ತಂಡ ಮಾತ್ರ ಮುಂದಿನ ಸುತ್ತಿಗೆ ಮುನ್ನಡೆಯುತ್ತದೆ. ಈ ಹಿಂದೆ, ವಿಶ್ವಕಪ್ ಅನ್ನು 2003 ರ ಸ್ವರೂಪದಲ್ಲಿ ಆಡುವ ನಿರೀಕ್ಷೆಯಿತ್ತು, ಇದರಲ್ಲಿ ಎಲ್ಲಾ 14 ತಂಡಗಳು ಗುಂಪು ಹಂತದಲ್ಲಿ ಆಡಿದ್ದವು. ಆದರೆ ಈ ಬಾರಿ ವಿಶ್ವಕಪ್ ಸ್ವರೂಪವನ್ನು ಬದಲಿಸಲಾಗಿದೆ.

ಅಸಮಾಧಾನ ಹೊರಹಾಕಿದ ನಾಯಕರು

ಐಸಿಸಿಯ ಈ ನಿರ್ಧಾರವು ನಮೀಬಿಯಾ, ಸ್ಕಾಟ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ಐರ್ಲೆಂಡ್‌ನಂತಹ ತಂಡಗಳ ನಾಯಕರ ಕೋಪಕ್ಕೆ ಕಾರಣವಾಗಿದೆ. ನೆದರ್ಲ್ಯಾಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಕ್ರಿಕೆಟ್ ಅನ್ನು ಉತ್ತೇಜಿಸುವ ಐಸಿಸಿಯ ಹಕ್ಕುಗಳನ್ನು ಪ್ರಶ್ನಿಸಿದ್ದು, ‘ಐಸಿಸಿ ವಿಶ್ವಾದ್ಯಂತ ಆಟವನ್ನು ಅಭಿವೃದ್ಧಿಪಡಿಸುವ ಬಗ್ಗೆ ಬಹಳಷ್ಟು ಮಾತನಾಡುತ್ತದೆ, ಆದರೆ ಈ ರೀತಿಯ ನಿರ್ಧಾರಗಳು ಅಸೋಸಿಯೇಟ್ ರಾಷ್ಟ್ರಗಳು ವಿಶ್ವದ ಅತ್ಯುತ್ತಮ ತಂಡಗಳ ವಿರುದ್ಧ ಆಡಲು ಕಷ್ಟಕರವಾಗಿಸುತ್ತದೆ’ ಎಂದಿದ್ದಾರೆ.

ಹಾಗೆಯೇ ನಮೀಬಿಯಾದ ನಾಯಕ ಗೆರ್ಹಾರ್ಡ್ ಎರಾಸ್ಮಸ್, ‘ನಾವೆಲ್ಲರೂ ವಿಶ್ವಕಪ್‌ನಲ್ಲಿ ಆಡುವ ಹಕ್ಕನ್ನು ಗಳಿಸಬೇಕು ಎಂದು ನಂಬುತ್ತೇವೆ, ಆದರೆ ಅರ್ಹತಾ ಪ್ರಕ್ರಿಯೆಯು ನಮಗೆ ದೊಡ್ಡ ವೇದಿಕೆಯಲ್ಲಿ ಆಡಲು ನಿಜವಾದ ಅವಕಾಶವನ್ನು ಪಡೆಯುವ ರೀತಿಯಲ್ಲಿ ಇರಬೇಕೆಂದು ನಾವು ಬಯಸುತ್ತೇವೆ’ ಎಂದಿದ್ದಾರೆ

ಅದೇ ರೀತಿ, ಸ್ಕಾಟ್ಲೆಂಡ್ ನಾಯಕ ರಿಚಿ ಬೆರಿಂಗ್ಟನ್ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ‘ಆಟಗಾರರು ಪ್ರತಿಯೊಂದು ನಿರ್ಧಾರವನ್ನು ತಾವಾಗಿಯೇ ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುವುದಿಲ್ಲ, ಆದರೆ ಆಟ ಮತ್ತು ಅವರ ವೃತ್ತಿಜೀವನದ ಮೇಲೆ ಪ್ರಮುಖ ಪರಿಣಾಮ ಬೀರುವ ನಿರ್ಧಾರಗಳನ್ನು ಅವರೊಂದಿಗೆ ಸಮಾಲೋಚಿಸಬೇಕು’ ಎಂದಿದ್ದಾರೆ.

ಐಸಿಸಿಯ ಪೂರ್ಣ ಸದಸ್ಯನಾಗಿದ್ದರೂ, ಐರ್ಲೆಂಡ್‌ನಂತಹ ತಂಡವು ಸಹ ಆಡುವುದು ಖಚಿತವಿಲ್ಲ. ತಂಡದ ನಾಯಕ ಪಾಲ್ ಸ್ಟಿರ್ಲಿಂಗ್ ಫಿಫಾ ವಿಶ್ವಕಪ್ ಅನ್ನು ಉದಾಹರಣೆಯಾಗಿ ಉಲ್ಲೇಖಿಸಿ, ‘ಸಣ್ಣ ಮತ್ತು ಅಸೋಸಿಯೇಟ್ ತಂಡಗಳು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿವೆ ಮತ್ತು ಜಾಗತಿಕ ಕಾರ್ಯಕ್ರಮಗಳಿಗೆ ಕೊಡುಗೆ ನೀಡುತ್ತಿವೆ. ಫುಟ್ಬಾಲ್ ವಿಶ್ವಕಪ್ ಇತರ ಕ್ರೀಡೆಗಳಲ್ಲಿ ಇದು ನಡೆಯುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಹೀಗಾಗಿ ಕ್ರಿಕೆಟ್ ಕೂಡ ಇದೇ ರೀತಿಯ ವಿಧಾನವನ್ನು ಅಳವಡಿಸಿಕೊಳ್ಳಬೇಕು’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ