AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಹೊಸ ಹೇರ್ ಸ್ಟೈಲ್​ನಲ್ಲಿ ಮಿಂಚಿದ ಚಹಾಲ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್

IND vs SA: ಸರಣಿ ಆರಂಭಕ್ಕೂ ಮುನ್ನ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಹಲ್ ಹೊಸ ಲುಕ್‌ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

IND vs SA: ಹೊಸ ಹೇರ್ ಸ್ಟೈಲ್​ನಲ್ಲಿ ಮಿಂಚಿದ ಚಹಾಲ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಖತ್ ವೈರಲ್
ಯುಜ್ವೇಂದ್ರ ಚಹಾಲ್
Follow us
TV9 Web
| Updated By: ಪೃಥ್ವಿಶಂಕರ

Updated on: Jun 03, 2022 | 7:21 PM

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ (Cricket South Africa team) 5 ಟಿ20 ಪಂದ್ಯಗಳ ಸರಣಿಗಾಗಿ ಭಾರತಕ್ಕೆ ಆಗಮಿಸಿದೆ. ಸರಣಿಯ ಮೊದಲ ಪಂದ್ಯ (IND vs SA T20) ಜೂನ್ 9 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡವೂ ಸರಣಿಯ ಮೊದಲ ಪಂದ್ಯಕ್ಕಾಗಿ ಜೂನ್ 5 ರಂದು ದೆಹಲಿ ತಲುಪಲಿದೆ. ಸರಣಿ ಆರಂಭಕ್ಕೂ ಮುನ್ನ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ (Yuzvendra Chahal) ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಹಲ್ ಹೊಸ ಲುಕ್‌ನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

ಇದನ್ನೂ ಓದಿ
Image
IPL 2022: ಈ ಐಪಿಎಲ್​ ನನಗೆ ಸಾಕಷ್ಟು ವಿಶಿಷ್ಟವಾಗಿದ್ದರೂ ಅದೊಂದು ನಿರಾಸೆ ನನ್ನನ್ನು ಕಾಡುತ್ತಿದೆ; ಜೋಸ್ ಬಟ್ಲರ್
Image
Rafael Nadal Birthday: 36 ನೇ ವರ್ಷಕ್ಕೆ ಕಾಲಿಟ್ಟ ನಡಾಲ್; ಕಿಂಗ್ ಆಫ್ ಕ್ಲೇ ಜೀವನದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ
Image
ಮುಂಬೈ ತಂಡ ಈ ಐಪಿಎಲ್​ನಲ್ಲಿ ಏಕೆ ಅರ್ಜುನ್​ಗೆ ಅವಕಾಶ ನೀಡಲಿಲ್ಲ? ಕೋಚ್ ನೀಡಿದ ಕಾರಣ ಹೀಗಿದೆ
View this post on Instagram

A post shared by Aalim Hakim (@aalimhakim)

IPL 2022 ರಲ್ಲಿ ಅದ್ಭುತ ಪ್ರದರ್ಶನ

IPL 2022 ರ ಇತ್ತೀಚೆಗೆ ಮುಕ್ತಾಯಗೊಂಡ 15 ನೇ ಋತುವಿನಲ್ಲಿ, ಯುಜ್ವೇಂದ್ರ ಚಹಾಲ್ ಅದ್ಭುತ ಪ್ರದರ್ಶನದೊಂದಿಗೆ ಪರ್ಪಲ್ ಕ್ಯಾಪ್ ಅನ್ನು ಗೆದ್ದರು. ಚಹಲ್ ರಾಜಸ್ಥಾನ್ ರಾಯಲ್ಸ್ ಪರ 17 ಪಂದ್ಯಗಳಲ್ಲಿ 19.51 ಸರಾಸರಿಯಲ್ಲಿ 27 ವಿಕೆಟ್ಗಳನ್ನು ಪಡೆದರು. ಈ ಸೀಸನ್​ನಲ್ಲಿ 40 ರನ್​ಗಳಿಗೆ 5 ವಿಕೆಟ್ ಪಡೆದಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ವನಿಂದು ಹಸರಂಗಾ 26 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಕಗಿಸೊ ರಬಾಡ (23 ವಿಕೆಟ್) ಮೂರನೇ ಸ್ಥಾನದಲ್ಲಿದ್ದಾರೆ. ಚಹಲ್ ತನ್ನ 15 ನೇ ಸೀಸನ್​ನಲ್ಲಿ ಅವರ ಏಕೈಕ ಹ್ಯಾಟ್ರಿಕ್ ಗಳಿಸಿದರು.

T20 ಸರಣಿ ವೇಳಾಪಟ್ಟಿ – ಮೊದಲ T20 ಪಂದ್ಯ: ಜೂನ್ 9, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ – – ಎರಡನೇ T20 ಪಂದ್ಯ: ಜೂನ್ 12, ಬಾರಾಬತಿ ಕ್ರೀಡಾಂಗಣ, ಕಟಕ್ – ಮೂರನೇ T20 ಪಂದ್ಯ: ಜೂನ್ 14, VDCA ಕ್ರಿಕೆಟ್ ಸ್ಟೇಡಿಯಂ, ವಿಶಾಖಪಟ್ಟಣ – ನಾಲ್ಕನೇ T20 ಪಂದ್ಯ: ಜೂನ್ 17, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ, ರಾಜ್‌ಕೋಟ್ – ಐದನೇ ಟಿ20 ಪಂದ್ಯ: ಜೂನ್ 19, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಯಾವ ತಂಡ ಹೆಚ್ಚು ಬಲಶಾಲಿ

ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಟಿ20 ಸರಣಿ ಗೆದ್ದಿರಲಿಲ್ಲ. ಉಭಯ ದೇಶಗಳು ಮೊದಲ ಬಾರಿಗೆ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿವೆ. ಈ ಹಿಂದೆ ದಕ್ಷಿಣ ಆಫ್ರಿಕಾ ತಂಡ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿತ್ತು. ಆದರೆ ಎರಡೂ ಬಾರಿ ಭಾರತಕ್ಕೆ ಸರಣಿ ಗೆಲ್ಲಲಾಗಲಿಲ್ಲ. ಇದೀಗ ದಕ್ಷಿಣ ಆಫ್ರಿಕಾ ಮೂರನೇ ಬಾರಿಗೆ ಭಾರತ ಪ್ರವಾಸ ಕೈಗೊಂಡಿದೆ. ಇಂತಹ ಸನ್ನಿವೇಶದಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಮೊದಲ ಬಾರಿಗೆ ಟಿ20 ಸರಣಿ ಗೆಲ್ಲುವ ಅವಕಾಶವೂ ಇದೆ.

ಟಿ20 ಸರಣಿಗೆ ಭಾರತ ತಂಡ:

ಕೆಎಲ್ ರಾಹುಲ್ (ನಾಯಕ), ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ ಮತ್ತು ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಕುಲ್ಜಾದೀಪ್, ಯುಜುವೇಂದ್ರ ಚಹಲ್ , ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

ಟಿ20 ಸರಣಿಗೆ ಆಫ್ರಿಕಾ ತಂಡ:

ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕೊಕ್, ರೆಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಎನ್ರಿಕ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಸ್, ತಬರಿಸ್ ಶಮ್ಸಿ

ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್