IPL 2022 Final: ಫೈನಲ್ ಪಂದ್ಯದಲ್ಲಿ ಆಟಗಾರರ ಮುಂದಿದೆ ಹಲವು ಮೈಲುಗಲ್ಲು

IPL 2022, Final GT vs RR: ಎರಡೂ ತಂಡಗಳಲ್ಲಿ ಪ್ರಮುಖ ಆಟಗಾರರು ಮಿಂಚಿದ್ದು, ಹೀಗಾಗಿ ಅಂತಿಮ ಹಣಾಹಣಿಯಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

IPL 2022 Final: ಫೈನಲ್ ಪಂದ್ಯದಲ್ಲಿ ಆಟಗಾರರ ಮುಂದಿದೆ ಹಲವು ಮೈಲುಗಲ್ಲು
IPL 2022, Final GT vs RR
Follow us
| Updated By: ಝಾಹಿರ್ ಯೂಸುಫ್

Updated on: May 29, 2022 | 5:43 PM

IPL 2022: 70 ಲೀಗ್ ಪಂದ್ಯಗಳು ಮತ್ತು ಮೂರು ಪ್ಲೇಆಫ್ ಪಂದ್ಯಗಳ ನಂತರ ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್​ಗೆ ವೇದಿಕೆ ಸಜ್ಜಾಗಿದೆ. ಅಂತಿಮ ಹಣಾಹಣಿಯಲ್ಲಿ ಗುಜರಾತ್ ಟೈಟಾನ್ಸ್​ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ದ ಸೆಣಸಲಿದೆ. ಉಭಯ ತಂಡಗಳೂ ಬಲಿಷ್ಠವಾಗಿರುವ ಕಾರಣ ಫೈನಲ್ ಕದನದಲ್ಲಿ ಭರ್ಜರಿ ಕಾದಾಟವನ್ನು ಎದುರು ನೋಡಬಹುದು. ಏಕೆಂದರೆ ಗುಜರಾತ್ ಟೈಟಾನ್ಸ್​ ಪರ ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ಮಿಲ್ಲರ್ ಇಬ್ಬರೂ ಕ್ರಮವಾಗಿ 453 ಮತ್ತು 449 ರನ್‌ ಗಳಿಸಿದ್ದಾರೆ. ಇನ್ನು ಮೊಹಮ್ಮದ್ ಶಮಿ 19 ವಿಕೆಟ್ ಉರುಳಿಸಿದ್ದರೆ, ರಶೀದ್ ಖಾನ್ ಇದುವರೆಗೆ 18 ವಿಕೆಟ್ ಪಡೆದಿದ್ದಾರೆ.

ಅತ್ತ ರಾಜಸ್ಥಾನ್ ರಾಯಲ್ಸ್​ ಪರ ಆರಂಭಿಕ ಆಟಗಾರ ಜೋಸ್ ಬಟ್ಲರ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ನಾಲ್ಕು ಶತಕಗಳು ಮತ್ತು 4 ಅರ್ಧ ಶತಕಗಳೊಂದಿಗೆ 824 ರನ್‌ಗಳಿಸಿದ್ದಾರೆ. ಹಾಗೆಯೇ ಯುಜ್ವೇಂದ್ರ ಚಾಹಲ್ 26 ವಿಕೆಟ್ ಪಡೆಯುವ ಅತೀ ಹೆಚ್ಚು ವಿಕೆಟ್​ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅಂದರೆ ಇಲ್ಲಿ ಎರಡೂ ತಂಡಗಳಲ್ಲಿ ಪ್ರಮುಖ ಆಟಗಾರರು ಮಿಂಚಿದ್ದು, ಹೀಗಾಗಿ ಅಂತಿಮ ಹಣಾಹಣಿಯಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಗೆ ಹಲವು ದಾಖಲೆ ಬರೆಯುವ ಅವಕಾಶ ಕೂಡ ಇದೆ. ಆಗಿದ್ರೆ ಫೈನಲ್ ಪಂದ್ಯದಲ್ಲಿ ಮೂಡಿಬರಲಿರುವ ಮೈಲುಗಲ್ಲುಗಳೇನು ನೋಡೋಣ…

ಇದನ್ನೂ ಓದಿ
Image
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
Image
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
Image
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
  1. ಐಪಿಎಲ್​ನಲ್ಲಿ 50 ಸಿಕ್ಸ್​ ಬಾರಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲು ಶುಭಮನ್ ಗಿಲ್ (46) ಗೆ ನಾಲ್ಕು ಸಿಕ್ಸ್​ಗಳ ಅವಶ್ಯಕತೆಯಿದೆ.
  2. ಐಪಿಎಲ್​ ಸೀಸನ್​ವೊಂದರಲ್ಲಿ ಅತೀ ಹೆಚ್ಚು ರನ್​ ಬಾರಿಸಿದ 2ನೇ ಆಟಗಾರ ಡೇವಿಡ್ ವಾರ್ನರ್ (848) ಅವರ ದಾಖಲೆ ಮುರಿಯಲು ಜೋಸ್ ಬಟ್ಲರ್ (824)ಗೆ 25 ರನ್‌ಗಳ ಅಗತ್ಯವಿದೆ.
  3. ಡೇವಿಡ್ ಮಿಲ್ಲರ್ (2423) ಐಪಿಎಲ್‌ನಲ್ಲಿ 2500 ರನ್ ಪೂರೈಸಲು 77 ರನ್‌ಗಳ ಅಗತ್ಯವಿದೆ.
  4. ಐಪಿಎಲ್​ನಲ್ಲಿ 2500 ರನ್‌ಗಳನ್ನು ತಲುಪಲು ವೃದ್ಧಿಮಾನ್ ಸಹಾ (2422)ಗೆ 78 ರನ್‌ಗಳ ಅವಶ್ಯಕತೆಯಿದೆ.
  5. ಐಪಿಎಲ್ ಸೀಸನ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ದಾಖಲೆ ಬರೆಯಲು ಯುಜ್ವೇಂದ್ರ ಚಹಾಲ್​ಗೆ ಕೇವಲ ಒಂದು ವಿಕೆಟ್ ಅಗತ್ಯವಿದೆ.
  6. ಹಾರ್ದಿಕ್ ಪಾಂಡ್ಯ (1929) ಐಪಿಎಲ್​ ಲೀಗ್‌ನಲ್ಲಿ 2000 ರನ್‌ಗಳನ್ನು ಪೂರ್ಣಗೊಳಿಸಲು 71 ರನ್‌ಗಳ ಅಗತ್ಯವಿದೆ.
  7. ಐಪಿಎಲ್​ನಲ್ಲಿ 100 ವಿಕೆಟ್‌ಗಳನ್ನು ಪೂರೈಸಲು ಮೊಹಮ್ಮದ್ ಶಮಿಗೆ 2 ವಿಕೆಟ್ ಅಗತ್ಯವಿದೆ.
  8. ಐಪಿಎಲ್​ನಲ್ಲಿ 150 ಬೌಂಡರಿಗಳನ್ನು ತಲುಪಲು ಹಾರ್ದಿಕ್ ಪಾಂಡ್ಯಗೆ ಏಳು ಬೌಂಡರಿಗಳ ಅವಶ್ಯಕತೆಯಿದೆ.
  9. ಪ್ರಸಿದ್ಧ್ ಕೃಷ್ಣ (48) ಐಪಿಎಲ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಲು ಎರಡು ವಿಕೆಟ್‌ಗಳ ಅಗತ್ಯವಿದೆ.
  10. ಟಿ20 ಕ್ರಿಕೆಟ್‌ನಲ್ಲಿ 4000 ರನ್ ಗಳಿಸಲು ವೃದ್ಧಿಮಾನ್ ಸಹಾ (3962)ಗೆ 38 ರನ್‌ಗಳ ಅಗತ್ಯವಿದೆ.
  11. T20 ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಲು ಅಲ್ಜಾರಿ ಜೋಸೆಫ್ (48) ಗೆ ಎರಡು ವಿಕೆಟ್‌ಗಳ ಅಗತ್ಯವಿದೆ.
  12. ಐಪಿಎಲ್‌ನಲ್ಲಿ ಐದನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲು ಆರ್ ಅಶ್ವಿನ್ (157) ಅವರಿಗೆ ಕೇವಲ ಒಂದು ವಿಕೆಟ್​ನ ಅಗತ್ಯವಿದೆ.
  13. ಟಿ20 ಕ್ರಿಕೆಟ್‌ನಲ್ಲಿ 300 ಬೌಂಡರಿಗಳನ್ನು ಪೂರೈಸಲು ಮ್ಯಾಥ್ಯೂ ವೇಡ್ (295)ಗೆ ಐದು ಬೌಂಡರಿಗಳ ಅಗತ್ಯವಿದೆ.
  14. T20 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್​ ಪರ 250 ಬೌಂಡರಿಗಳನ್ನು ಪೂರೈಸಲು ಸಂಜು ಸ್ಯಾಮ್ಸನ್ (247) ಗೆ ಮೂರು ಬೌಂಡರಿಗಳ ಅಗತ್ಯವಿದೆ.
  15. ಐಪಿಎಲ್​ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲು ಯುಜುವೇಂದ್ರ ಚಹಾಲ್​ಗೆ 2 ವಿಕೆಟ್​ಗಳ ಅವಶ್ಯಕತೆಯಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ