Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಇದು ಕ್ರಿಕೆಟ್​ ಅಲ್ಲ, ಬರೀ ಬ್ಯಾಟಿಂಗ್: ಐಪಿಎಲ್​ ವಿರುದ್ಧ ತಿರುಗಿ ನಿಂತ ರಬಾಡ

IPL 2025: ಈ ಬಾರಿಯ ಐಪಿಎಲ್​ನ ಮೊದಲ 5 ಪಂದ್ಯಗಳಲ್ಲೇ 6 ತಂಡಗಳು 200+ ಸ್ಕೋರ್​ಗಳಿಸಿದ್ದಾರೆ. ಅದರಲ್ಲೂ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ ಬರೋಬ್ಬರಿ 286 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಹೀಗೆ ಪ್ರತಿ ಪಂದ್ಯಗಳಲ್ಲೂ ಹೈ ಸ್ಕೋರಿಂಗ್ ಮೂಡಿಬರುತ್ತಿರುವ ಬಗ್ಗೆ ಗುಜರಾತ್ ಟೈಟಾನ್ಸ್ ತಂಡದ ವೇಗಿ ಕಗಿಸೊ ರಬಾಡ ಅಸಮಾಧಾನ ಹೊರಹಾಕಿದ್ದಾರೆ.

IPL 2025: ಇದು ಕ್ರಿಕೆಟ್​ ಅಲ್ಲ, ಬರೀ ಬ್ಯಾಟಿಂಗ್: ಐಪಿಎಲ್​ ವಿರುದ್ಧ ತಿರುಗಿ ನಿಂತ ರಬಾಡ
Kagiso Rabada
Follow us
ಝಾಹಿರ್ ಯೂಸುಫ್
|

Updated on: Mar 27, 2025 | 9:31 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಸೌತ್ ಆಫ್ರಿಕಾ ವೇಗಿ ಕಗಿಸೊ ರಬಾಡ ಇದೀಗ ಟೂರ್ನಿಯ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅಲ್ಲದೆ ಬ್ಯಾಟಿಂಗ್ ಸ್ನೇಹಿ ಪಿಚ್​​ಗಳನ್ನು ರೂಪಿಸುತ್ತಿರುವ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಬಾರಿಯ ಐಪಿಎಲ್​ನ ಪ್ರತಿ ಪಂದ್ಯಗಳಲ್ಲೂ ಬೃಹತ್ ಸ್ಕೋರ್​ಗಳು ಮೂಡಿಬರುತ್ತಿದೆ. ಅಲ್ಲದೆ ಬ್ಯಾಟರ್​ಗಳು ಸಿಕ್ಸ್​-ಫೋರ್​ಗಳ ಸುರಿಮಳೆಗೈಯ್ಯುತ್ತಿದ್ದಾರೆ. ಆದರೆ ಇಂತಹ ಹೈ-ಸ್ಕೋರಿಂಗ್ ಪಂದ್ಯಗಳಿಂದ ರಬಾಡ ಪ್ರಭಾವಿತರಾಗಿಲ್ಲ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕಗಿಸೊ ರಬಾಡ, ಐಪಿಎಲ್​ನಲ್ಲಿ ಬ್ಯಾಟ್ ಮತ್ತು ಚೆಂಡಿನ ನಡುವೆ ಸಮತೋಲನವಿಲ್ಲ ಎಂದಿದ್ದಾರೆ. ಹೈ-ಸ್ಕೋರಿಂಗ್ ಪಂದ್ಯಗಳು ಇರುತ್ತವೆ, ಇರಲಿ. ಅದಕ್ಕೆ ನನಗೆ ಯಾವುದೇ ಸಮಸ್ಯೆಗಳಿಲ್ಲ. ಆದರೆ ಇದು ಪ್ರತಿ ಪಂದ್ಯಗಳಲ್ಲೂ ಪುನರಾವರ್ತನೆಯಾಗುತ್ತಿದೆ. ಇಂತಹ ಆವರ್ತನ ಕಡಿಮೆಯಾಗಬೇಕು ಎಂದಿದ್ದಾರೆ.

ನೀವು ಪ್ರತಿ ಪಂದ್ಯಕ್ಕೂ ಸಮತಟ್ಟಾದ ಪಿಚ್ ನಿರ್ಮಿಸುತ್ತಿರುವುದರಿಂದ ಬೌಲರ್​ಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಏಕೆಂದರೆ ಕ್ರಿಕೆಟ್ ಆಟವು ಸಮತೋಲನದಿಂದ ಕೂಡಿರಬೇಕು. ಅಂದರೆ ಮಾತ್ರ ಪಂದ್ಯದ ಮಜ ಸಿಗುತ್ತದೆ. ಆದರೆ ಇದೀಗ ಫ್ಲಾಟ್​ ಪಿಚ್​ಗಳನ್ನು ನಿರ್ಮಿಸಿ ಈ ಮಜವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಕಗಿಸೊ ರಬಾಡ ಹೇಳಿದ್ದಾರೆ.

ಇದನ್ನೂ ಓದಿ
Image
ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನಕ್ಕೆ ಇದುವೇ ಅಸಲಿ ಕಾರಣ
Image
RCB ದಾಖಲೆ ಧೂಳೀಪಟ ಮಾಡಿದ ಡೆಲ್ಲಿ ಬಾಯ್ಸ್
Image
David Warner: ಡೇವಿಡ್ ವಾರ್ನರ್​ಗೆ ಒಲಿದ ನಾಯಕತ್ವ..!
Image
VIDEO: ಎಂಎಸ್ ಧೋನಿ ಎಂಟ್ರಿಗೆ ಕಿವಿ ಮುಚ್ಚಿ ಕೂತ ನೀತಾ ಅಂಬಾನಿ

ಇದೇ ರೀತಿ ಸಮತಟ್ಟಾದ ಪಿಚ್ ನಿರ್ಮಿಸಿ ಬ್ಯಾಟರ್​ಗಳಿಗೆ ಮಾತ್ರ ಸಹಕಾರಿಯಾಗುವಂತೆ ಮಾಡುವುದಾರೆ, ನಮ್ಮ ಈ ಕ್ರೀಡೆಯನ್ನು ಕ್ರಿಕೆಟ್ ಎನ್ನಲಾಗುವುದಿಲ್ಲ. ಬದಲಾಗಿ ಬ್ಯಾಟಿಂಗ್ ಎಂದು ಕರೆಯಬೇಕಾಗುತ್ತದೆ ಎಂದು ರಬಾಡ ಅಸಮಾಧಾನ ಹೊರಹಾಕಿದ್ದಾರೆ.

ಸದ್ಯ ಒಬ್ಬ ಬೌಲರ್ ಆಗಿ ನಾನು ಈ ಪರಿಸ್ಥಿತಿಗಳ ಬಗ್ಗೆ ದೂರು ನೀಡುತ್ತಾ ಕುಳಿತುಕೊಳ್ಳಲು ಸಾಧ್ಯವಿಲ್ಲ. ಬೌಲರ್ ಆಗಿ ನಾವು ಅದರ ಬಗ್ಗೆ ಏನಾದರೂ ಮಾಡಲೇಬೇಕಾಗುತ್ತದೆ. ನೀವು ಹೆಚ್ಚಿನ ಸ್ಕೋರ್ ಪಂದ್ಯವನ್ನು ನೋಡಿ ಅಥವಾ ಕಡಿಮೆ ಸ್ಕೋರ್​ನ ಪಂದ್ಯಗಳನ್ನು ಸಹ ವೀಕ್ಷಿಸಿ, ಯಾವಾಗಲೂ ನೀರಸವಾಗಿರುತ್ತದೆ. ಆದರೆ ಅತ್ಯಂತ ರೋಮಾಂಚಕಾರಿ ಪಂದ್ಯಗಳು ಮೂಡಿಬಂದಿರುವುದು ಸಮತೋಲನದಿಂದ ಕೂಡಿದ ಪಿಚ್​ಗಳಲ್ಲಿ ಮಾತ್ರ. ಹೀಗಾಗಿ ಪ್ರಸ್ತುತ ಸನ್ನಿವೇಶದಲ್ಲಿ ಈ ಬಗ್ಗೆ ಗಮನಹರಿಸಬೇಕಾದ ಅಗತ್ಯತೆ ಇದೆ ಎಂದು ಕಗಿಸೊ ರಬಾಡ ಹೇಳಿದ್ದಾರೆ.

ಕಗಿಸೊ ರಬಾಡ ಹೇಳಿದಂತೆ ಐಪಿಎಲ್​ನಲ್ಲಿ ಈಗ 250+ ಸ್ಕೋರ್​ಗಳು ಸಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಸನ್​ರೈಸರ್ಸ್ ಹೈದರಾಬಾದ್​ನಂತಹ ತಂಡಗಳ ಬ್ಯಾಟರ್​ಗಳು ನಮ್ಮ ಮುಂದಿನ ಗುರಿ 300 ರನ್​ಗಳು ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ, ಭಾರತೀಯ ಪಿಚ್​ಗಳು ಬ್ಯಾಟಿಂಗ್ ಸ್ನೇಹಿಯಾಗಿ ಮಾರ್ಪಡುತ್ತಿರುವುದು ಸುಳ್ಳಲ್ಲ.

ಇದಾಗ್ಯೂ ಚೆನ್ನೈನ ಚೆಪಾಕ್ ಮೈದಾನವು ಈಗಲೂ ಸ್ಪಿನ್ ಸ್ನೇಹಿ ಪಿಚ್​ ಅನ್ನೇ ಬಳಸಿಕೊಳ್ಳುತ್ತಿದೆ. ಇದೇ ಕಾರಣದಿಂದ ಚೆನ್ನೈನಲ್ಲಿ ನಡೆಯುವ ಪಂದ್ಯಗಳಲ್ಲಿ ಲೋ ಸ್ಕೋರ್ ಮೂಡಿಬರುತ್ತಿದ್ದು, ಗೆಲುವಿಗಾಗಿ ಉಭಯ ತಂಡಗಳಿಂದ ಉತ್ತಮ ಪೈಪೋಟಿ ಕೂಡ ಕಂಡು ಬರುತ್ತಿದೆ.

ಇದನ್ನೂ ಓದಿ: VIDEO: ಮೈದಾನಕ್ಕೆ ನುಗ್ಗಿದ ರಿಯಾನ್ ಪರಾಗ್ ಅಭಿಮಾನಿ: ಆಮೇಲೇನಾಯ್ತು ನೀವೇ ನೋಡಿ

ಸದ್ಯ ಐಪಿಎಲ್ ಪಿಚ್​ ಬಗ್ಗೆ ಕಗಿಸೊ ರಬಾಡ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಇದಕ್ಕೆ ಇತರೆ ಬೌಲರ್​ಗಳು ಕೂಡ ಧ್ವನಿಗೂಡಿಸಲಿದ್ದಾರಾ ಎಂಬುದನ್ನು  ಕಾದು ನೋಡಬೇಕಿದೆ.

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ