AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಸರ್‌ಗಳ ಮಳೆಗರೆಯುವ ವೈಭವ್ ವಿರುದ್ಧ ಮೇಡನ್ ಓವರ್ ಎಸೆದ ಬೌಲರ್ ಯಾರು ಗೊತ್ತಾ?

Vaibhav Sooryavanshi IPL 2026: 2026ರ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಬಿರುಗಾಳಿಯಂತೆ ಅಬ್ಬರಿಸಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕ್ವಾಲಿಫೈಯರ್ 2 ಹಂತಕ್ಕೆ ತಲುಪಿಸಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಎದುರಾಳಿ ಬೌಲರ್‌ಗಳಿಗೆ ಸವಾಲಾಗಿದೆ. ಆದರೆ, ಲಕ್ನೋ ವಿರುದ್ಧದ ಪಂದ್ಯದಲ್ಲಿ ಮೊಹ್ಸಿನ್ ಖಾನ್ ವೈಭವ್‌ಗೆ ಒಂದೇ ಒಂದು ರನ್ ನೀಡದೆ ಮೇಡನ್ ಓವರ್ ಬೌಲ್ ಮಾಡಿ, ವಿಕೆಟ್ ಪಡೆದು ಗಮನ ಸೆಳೆದಿದ್ದರು. ಈ ಆವೃತ್ತಿಯಲ್ಲಿ ವೈಭವ್ ಎದುರು ಈ ಸಾಧನೆ ಮಾಡಿದ ಏಕೈಕ ಬೌಲರ್ ಇವರು.

ಸಿಕ್ಸರ್‌ಗಳ ಮಳೆಗರೆಯುವ ವೈಭವ್ ವಿರುದ್ಧ ಮೇಡನ್ ಓವರ್ ಎಸೆದ ಬೌಲರ್ ಯಾರು ಗೊತ್ತಾ?
Vaibhav SooryavanshiImage Credit source: PTI
ಪೃಥ್ವಿಶಂಕರ
|

Updated on:May 29, 2026 | 4:02 PM

Share

2026 ರ ಐಪಿಎಲ್‌ನಲ್ಲಿ (IPL 2026) ವೈಭವ್ ಸೂರ್ಯವಂಶಿ (Vaibhav Sooryavanshi) ಎಂಬ ಬಿರುಗಾಳಿಯನ್ನು ಕಟ್ಟಿಹಾಕುವುದೇ ಎದುರಾಳಿ ತಂಡದ ಬೌಲರ್​ಗಳ ದೊಡ್ಡ ಸವಾಲಾಗಿದೆ. ಪಂದ್ಯದಿಂದ ಪಂದ್ಯಕ್ಕೆ ಉಗ್ರರೂಪಿಯಾಗುತ್ತಿರುವ ವೈಭವ್ ಏಕಾಂಗಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಇದರ ಪರಿಣಾಮವಾಗಿಯೇ ರಾಜಸ್ಥಾನ್ ರಾಯಲ್ಸ್ ತಂಡ ಇಂದು ಕ್ವಾಲಿಫೈಯರ್ 2 ಆಡಲು ಸಿದ್ಧವಾಗಿದೆ. ಗುಜರಾತ್ ವಿರುದ್ಧದ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದರೆ ನೇರವಾಗಿ ಫೈನಲ್​ ಆಡಲಿದೆ. ಅದು ಸಾಧ್ಯವಾಗಬೇಕಾದರೆ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸ್ಫೋಟಕ ಇನ್ನಿಂಗ್ಸ್ ಆಡಬೇಕಾಗುತ್ತದೆ. ಆದರೆ ಅದಕ್ಕೂ ಮುನ್ನ ಮೊದಲ ಎಸೆತದಿಂದಲೇ ಸಿಕ್ಸರ್​ಗಳ ಮಳೆ ಸುರಿಸಲು ನೋಡುವ ವೈಭವ್​ಗೆ ಒಂದು ಓವರ್​ನಲ್ಲಿ ಒಂದೇ ಒಂದು ಸಿಕ್ಸರ್ ಇರಲಿ, ಒಂದೇ ಒಂದು ರನ್ ಕೂಡ ನೀಡದ ಬೌಲರ್​ ಬಗ್ಗೆ ತಿಳಿಯೋಣ.

11 ಎಸೆತಗಳಲ್ಲಿ 8 ರನ್ ಬಾರಿಸಿದ್ದ ವೈಭವ್

ವಾಸ್ತವವಾಗಿ ಏಪ್ರಿಲ್ 22 ರಂದು ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವೆ 32ನೇ ಲೀಗ್ ಪಂದ್ಯ ನಡೆದಿತ್ತು. ಅಂದಿನ ಪಂದ್ಯದಲ್ಲಿ ರಾಜಸ್ಥಾನ್ ಗೆಲುವು ಸಾಧಿಸಿತ್ತಾದರೂ, ವೈಭವ್ ಸೂರ್ಯವಂಶಿಗೆ ಒಂದಂಕಿ ದಾಟಲು ಸಾಧ್ಯವಾಗಿರಲಿಲ್ಲ. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ರಾಜಸ್ಥಾನ್​ಗೆ ಕೇವಲ 159 ರನ್ ಕಲೆಹಾಕಲಷ್ಟೇ ಸಾಧ್ಯವಾಯಿತು. ಆ ಪಂದ್ಯದಲ್ಲೂ ಆರಂಭಿಕನಾಗಿ ಆಡಿದ್ದ ವೈಭವ್ 11 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸಿ ಔಟಾಗಿದ್ದರು. ವೈಭವ್ ಅವರ ಈ ರನ್ ಬರಕ್ಕೆ ಕಾರಣವಾಗಿದ್ದ ಲಕ್ನೋ ತಂಡದ ವೇಗಿ ಮೊಹ್ಸಿನ್ ಖಾನ್.

ಮೇಡನ್ ಓವರ್ ಎಸೆದಿದ್ದ ಮೊಹ್ಸಿನ್

ರಾಜಸ್ಥಾನ್ ಇನ್ನಿಂಗ್ಸ್​ನ 4ನೇ ಓವರ್ ಬೌಲ್ ಮಾಡುವ ಜವಾಬ್ದಾರಿ ಮೊಹ್ಸಿನ್ ಖಾನ್​ಗೆ ನೀಡಲಾಯಿತು. ಆ ಓವರ್​ನಲ್ಲಿ ಸ್ಟ್ರೈಕ್​ನಲ್ಲಿ ಇದ್ದದ್ದು ವೈಭವ್ ಸೂರ್ಯವಂಶಿ. ಆ ಹೊತ್ತಿಗೆ ವೈಭವ್ 5 ಎಸೆತಗಳನ್ನು ಎದುರಿಸಿ 8 ರನ್ ಬಾರಿಸಿದ್ದರು. ಇದರಲ್ಲಿ 2 ಬೌಂಡರಿಗಳು ಸೇರಿದ್ದವು. ಹೀಗಾಗಿ ರನ್ ಗಳಿಸಬೇಕಾದ ಒತ್ತಡ ವೈಭವ್ ಮೇಲಿತ್ತು. ಆದರೆ ಇದಕ್ಕೆ ಮೊಹ್ಸಿನ್ ಖಾನ್ ಅವಕಾಶ ಮಾಡಿಕೊಡಲಿಲ್ಲ.

IPL 2026: 30 ಕೋಟಿಗೆ ಹರಾಜಾಗ್ತಾರೆ ವೈಭವ್ ಸೂರ್ಯವಂಶಿ; ಭವಿಷ್ಯ ನುಡಿದ ಸೆಹ್ವಾಗ್

ಮೊಹ್ಸಿನ್ ಖಾನ್ ಎಸೆತದ 4ನೇ ಓವರ್​ನಲ್ಲಿ ವೈಭವ್​ಗೆ ಒಂದೇ ಒಂದು ರನ್ ಬಾರಿಸಲು ಸಾಧ್ಯವಾಗಲಿಲ್ಲ. ಈ ಓವರ್​ನ 6 ಎಸೆತಗಳನ್ನು ವೈಭವ್ ಎದುರಿಸಿದರು. ಇದರಲ್ಲಿ ಮೊದಲ ಐದು ಎಸೆತಗಳಲ್ಲಿ ವೈಭವ್ ದೊಡ್ಡ ಹೊಡೆತಕ್ಕೆ ಕೈ ಹಾಕಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಹೀಗಾಗಿ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದ ವೈಭವ್ ಕವರ್ಸ್​ ದಿಕ್ಕಿನಲ್ಲಿ ದಿಗ್ವೇಶ್ ರಾಠಿಗೆ ಕ್ಯಾಚಿತ್ತು ನಿರ್ಗಮಿಸಿದರು. ಅಂದರೆ ಮೊಹ್ಸಿನ್ ಖಾನ್ ಮೇಡನ್ ಓವರ್ ಬೌಲ್ ಮಾಡುವುದರ ಜೊತೆಗೆ ವೈಭವ್ ಅವರ ವಿಕೆಟ್ ಕೂಡ ಉರುಳಿಸಿದರು. ಈ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಎದುರು ಮೇಡನ್ ಓವರ್ ಬೌಲ್ ಮಾಡಿ ವಿಕೆಟ್ ಉರುಳಿಸಿದ ಏಕೈಕ ವೇಗಿ ಎಂಬ ದಾಖಲೆ ಮೊಹ್ಸಿನ್ ಖಾನ್ ಹೆಸರಿನಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Fri, 29 May 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಈಕೆಯೇ ಕಾರಣ!
ಡಿಕೆ ಶಿವಕುಮಾರ್​​​​​​​ ಸಿಎಂ ಆಗಲು ಈಕೆಯೇ ಕಾರಣ!
ಅಪ್ಪನಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಪುಟ್ಟ ಬಾಲಕಿ
ಅಪ್ಪನಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಪುಟ್ಟ ಬಾಲಕಿ
ರಾಜೀನಾಮೆ ಬಳಿಕವೂ ಸಿದ್ದರಾಮಯ್ಯ-ಡಿಕೆಶಿ ನಡುವೆ ಅನ್ಯೂನ್ಯತೆ ಹೇಗಿದೆ ನೋಡಿ
ರಾಜೀನಾಮೆ ಬಳಿಕವೂ ಸಿದ್ದರಾಮಯ್ಯ-ಡಿಕೆಶಿ ನಡುವೆ ಅನ್ಯೂನ್ಯತೆ ಹೇಗಿದೆ ನೋಡಿ
ಎಸ್ಟೇಟ್​​​ನಲ್ಲಿ ಬೀಡುಬಿಟ್ಟ ಕಾಡಾನೆಗಳು: ಗಜಪಡೆ ಕಂಡು ಸ್ಥಳೀಯರು ಕಂಗಾಲು
ಎಸ್ಟೇಟ್​​​ನಲ್ಲಿ ಬೀಡುಬಿಟ್ಟ ಕಾಡಾನೆಗಳು: ಗಜಪಡೆ ಕಂಡು ಸ್ಥಳೀಯರು ಕಂಗಾಲು
ಕೊನೆಗೂ ಮೌನ ಮುರಿದ ಡಿಕೆಶಿ, ಪ್ರಮಾಣವಚನದ ಬಗ್ಗೆ ಹೇಳಿದ್ದಿಷ್ಟು
ಕೊನೆಗೂ ಮೌನ ಮುರಿದ ಡಿಕೆಶಿ, ಪ್ರಮಾಣವಚನದ ಬಗ್ಗೆ ಹೇಳಿದ್ದಿಷ್ಟು
ಯುವತಿ ದೇಹ ಸುಟ್ಟು ಹೋಗಿದ್ದರೂ ಆಕೆಯನ್ನೇ ಮದುವೆಯಾದ ವರ
ಯುವತಿ ದೇಹ ಸುಟ್ಟು ಹೋಗಿದ್ದರೂ ಆಕೆಯನ್ನೇ ಮದುವೆಯಾದ ವರ
ಸಿದ್ದರಾಮಯ್ಯ ಆಪ್ತರೇ ಸಹಿ ಸಂಗ್ರಹಿಸಿ ಬೆನ್ನಿಗೆ ಚೂರಿ ಹಾಕಿದ್ರಾ?
ಸಿದ್ದರಾಮಯ್ಯ ಆಪ್ತರೇ ಸಹಿ ಸಂಗ್ರಹಿಸಿ ಬೆನ್ನಿಗೆ ಚೂರಿ ಹಾಕಿದ್ರಾ?
ಸಿದ್ದರಾಮಯ್ಯ ಟೀಮ್​​​ಗೆ ಢವಢವ: ಈ 13 ಜನರಿಗೆ ಸಚಿವ ಸ್ಥಾನ ಫಿಕ್ಸ್​​?
ಸಿದ್ದರಾಮಯ್ಯ ಟೀಮ್​​​ಗೆ ಢವಢವ: ಈ 13 ಜನರಿಗೆ ಸಚಿವ ಸ್ಥಾನ ಫಿಕ್ಸ್​​?
ರಾಯಚೂರು ಡೀಸೆಲ್ ಕೊರತೆ: ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ
ರಾಯಚೂರು ಡೀಸೆಲ್ ಕೊರತೆ: ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ
ಕನ್ನಡ ಚಿತ್ರರಂಗಕ್ಕೆ ಗಟ್ಟಿ ನಾಯಕತ್ವದ ಅವಶ್ಯಕತೆ ಇದೆ: ಸುಮಲತಾ
ಕನ್ನಡ ಚಿತ್ರರಂಗಕ್ಕೆ ಗಟ್ಟಿ ನಾಯಕತ್ವದ ಅವಶ್ಯಕತೆ ಇದೆ: ಸುಮಲತಾ