AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mumbai vs Uttarakhand: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ: ಪೃಥ್ವಿ ಶಾ ಪಡೆಗೆ ಬರೋಬ್ಬರಿ 725 ರನ್​​ಗಳ ಗೆಲುವು

Ranji Trophy 2021-22: ರಣಜಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಪೃಥ್ವಿ ಶಾ ನಾಯಕತ್ವದ ಮುಂಬೈ ತಂಡ ವಿಶ್ವ ದಾಖಲೆ ನಿರ್ಮಿಸಿದೆ. ಉತ್ತರಕಂಡ ವಿರುದ್ಧದ ಕಾದಾಟದಲ್ಲಿ ಮುಂಬೈ ಬರೋಬ್ಬರಿ 725 ರನ್​ಗಳ ಅಮೋಘ ಗೆಲುವು ಕಂಡಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಒಂದು ನೂತನ ದಾಖಲೆ.

Mumbai vs Uttarakhand: ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ: ಪೃಥ್ವಿ ಶಾ ಪಡೆಗೆ ಬರೋಬ್ಬರಿ 725 ರನ್​​ಗಳ ಗೆಲುವು
Mumbai vs Uttarakhand Ranji Trophy
TV9 Web
| Updated By: Vinay Bhat|

Updated on:Jun 09, 2022 | 2:00 PM

Share

ಐಪಿಎಲ್ 2022 ಮುಕ್ತಾಯದ ಬಳಿಕ ಆರಂಭಗೊಂಡ ರಣಜಿ ಕ್ವಾರ್ಟರ್‌ಫೈನಲ್ (Ranji Trophy 2022, Quarterfinals) ಪಂದ್ಯದಲ್ಲಿ ಪೃಥ್ವಿ ಶಾ (Prithvi Shaw) ನಾಯಕತ್ವದ ಮುಂಬೈ ತಂಡ ವಿಶ್ವ ದಾಖಲೆ ನಿರ್ಮಿಸಿದೆ. ಉತ್ತರಕಂಡ ವಿರುದ್ಧದ ಕಾದಾಟದಲ್ಲಿ ಮುಂಬೈ (Mumbai vs Uttarakhand) ಬರೋಬ್ಬರಿ 725 ರನ್​ಗಳ ಅಮೋಘ ಗೆಲುವು ಕಂಡಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಒಂದು ನೂತನ ದಾಖಲೆ. ಫಸ್ಟ್ ಕ್ಲಾಸ್ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್​​ಗಳ ಅಂತರದಲ್ಲಿ ಗೆದ್ದ ತಂಡ ಇದೀಗ ಮುಂಬೈ ಆಗಿದೆ. ಇದಕ್ಕೂ ಮುನ್ನ 1929/30 ರಲ್ಲಿ ನ್ಯೂ ಸೌತ್ ವೇಲ್ಸ್ ತಂಡ 685 ರನ್​ಗಳ ಜಯ ಸಾಧಿಸಿದ್ದು ಇತಿಹಾಸವಾಗಿತ್ತು. ನಂತರ 1928/29 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 675 ರನ್​​ಗಳ ಜಯ ಮತ್ತು 1920/21 ರಲ್ಲಿ ಸೌತ್ ಆಸ್ಟ್ರೇಲಿಯಾ ವಿರುದ್ಧ ನ್ಯೂ ಸೌತ್ ವೇಲ್ಸ್ 638 ರನ್​ಗಳ ಜಯ ಕಂಡಿತ್ತು.

ಉತ್ತರಕಂಡ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಬೆಟ್ಟದಂತಹ ಮೊತ್ತ ಕಲೆಹಾಕಿತು. ಆರಂಭಿಕರಾದ ನಾಯಕ ಪೃಥ್ವಿ ಶಾ (21) ಹಾಗೂ ಯಶಸ್ವಿ ಜೈಸ್ವಾಲ್ (35) ಬೇಗನೆ ಔಟಾದರೂ ಅರ್ಮನ್ ಜಫರ್ 60 ರನ್ ಗಳಿಸಿದರು. ನಂತರ ಶುರುವಾಗಿದ್ದು ಸುವೇದ್ ಪರ್ಕರ್ ಹಾಗೂ ಸರ್ಫರಾಜ್ ಖಾನ್ ಜೊತೆಯಾಟ. ಉತ್ತರಕಂಡ ಬೌಲರ್​ಗಳಿಗೆ ಸರಿಯಾಗಿ ಉತ್ತರ ನೀಡಿದ ಇವರಿಬ್ಬರು ಬೊಂಬಾಟ್ ಆಟ ಪ್ರದರ್ಶಿಸಿದರು.

IND vs SA: ಮೊದಲ ಟಿ20 ಫೈಟ್​ಗೆ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ: ಫೋಟೋ

ಇದನ್ನೂ ಓದಿ
Image
Babar Azam: ವಿರಾಟ್ ಕೊಹ್ಲಿಯ ವಿಶ್ವದಾಖಲೆ ಮುರಿದ ಬಾಬರ್ ಅಜಾಮ್: ಈ ಸಾಧನೆ ಮಾಡಿದ ಮೊದಲ ಬ್ಯಾಟರ್
Image
IND vs SA: ದ್ರಾವಿಡ್​ಗೆ ತಲೆನೋವಾದ ರಾಹುಲ್ ಅಲಭ್ಯತೆ: ಪ್ಲೇಯಿಂಗ್ XI ನಲ್ಲಿ ದೊಡ್ಡ ಬದಲಾವಣೆ
Image
IND vs SA: ಇಂದು ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ: ಯಂಗ್ ಇಂಡಿಯಾ ಮೇಲೆ ಎಲ್ಲರ ಕಣ್ಣು
Image
ಸೌತ್​ ಆಫ್ರಿಕಾ ಸರಣಿಯಿಂದ ಕೊನೇ ಕ್ಷಣದಲ್ಲಿ ಹೊರ ನಡೆದ ಕನ್ನಡಿಗ ರಾಹುಲ್​; ಪಂತ್​ಗೆ ನಾಯಕತ್ವ

176 ರನ್​ಗೆ 3ನೇ ವಿಕೆಟ್ ಕಳೆದುಕೊಂಡ ಮುಂಬೈ ತನ್ನ 4ನೇ ವಿಕೆಟ್ ಕಳೆದುಕೊಂಡಿದ್ದು 443 ರನ್​ಗೆ. ಪರ್ಕರ್ ಹಾಗೂ ಸರ್ಫರಾಜ್ 267 ರನ್​​ಗಳ ಅಮೋಘ ಜೊತೆಯಾಟ ಆಡಿದರು. ಇದರಲ್ಲಿ ಸುವೇದ್ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದರೆ, ಸರ್ಫರಾಜ್ ಶತಕ ಚಚ್ಚಿದರು. 447 ಎಸೆತಗಳಲ್ಲಿ 21 ಫೋರ್, 4 ಸಿಕ್ಸರ್​​ನೊಂದಿಗೆ ಸುವೇದ್ 252 ರನ್ ಗಳಿಸಿ ಔಟಾದರೆ, ಖಾನ್ 205 ಎಸೆತಗಳಲ್ಲಿ 14 ಫೋರ್, 4 ಸಿಕ್ಸರ್​​ ಸಿಡಿಸಿ 153 ರನ್ ಬಾರಿಸಿದರು. ಶಾಮ್ಸ್ ಮುಲಾನಿ 59 ರನ್​ಗಳ ಕಾಣಿಕೆ ನೀಡಿದರು. ಪರಿಣಾಮ ಮುಂಬೈ 166.4 ಓವರ್​ನಲ್ಲಿ 8 ವಿಕಟ್ ಕಳೆದುಕೊಂಡು 647 ರನ್​ಗೆ ಡಿಕ್ಲೇರ್ ಘೋಷಿಸಿತು.

ಇತ್ತ ಬ್ಯಾಟಿಂಗ್​ಗೆ ಇಳಿದ ಉತ್ತರಕಂಡ ತಂಡ ಮುಂಬೈ ಬೌಲಿಂಗ್ ಬಿರುಗಾಳಿಗೆ ತತ್ತರಿಸಿ ಹೋಯಿತು. ಕಮಲ್ ಸಿಂಗ್ 40 ರನ್ ಗಳಿಸಿದ್ದೇ ಹೆಚ್ಚು. ಮೂರು ಬ್ಯಾಟರ್​ಗಳ ಸ್ಕೋರ್ ಮಾತ್ರ ಎರಡಂಕಿ ದಾಟಿತು. 41.1 ಓವರ್​​ನಲ್ಲಿ 114 ರನ್​ಗೆ ಸರ್ವಪತನ ಕಂಡಿತು. ಮುಂಬೈ ಪರ ಶಾಮ್ಸ್ ಮುಲಾನಿ 5 ವಿಕೆಟ್ ಕಿತ್ತರೆ, ಮೋಹಿತ್ ಅವಸ್ತಿ 2 ವಿಕೆಟ್ ಪಡೆದರು.

ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಮುಂಬೈ ಮತ್ತೊಮ್ಮೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಯಶಸ್ವಿ ಜೈಸ್ವಾಲ್ 150 ಎಸೆತಗಳಲ್ಲಿ 103 ರನ್ ಗಳಿಸಿದರೆ, ನಾಯಕ ಪೃಥ್ವಿ ಶಾ 72 ರನ್ ಹಾಗೂ ಆದಿತ್ಯ ತಾರೆ 57 ರನ್​ ಬಾರಿಸಿದರು. 58 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿದ್ದಾಗ ಮುಂಬೈ ಡಿಕ್ಲೇರ್ ಘೋಷಿಸಿ ಎದುರಾಳಿಗೆ 795 ರನ್​ಗಳ ಟಾರ್ಗೆಟ್ ನೀಡಿತು. ಆದರೆ, ಉತ್ತರಕಂಡ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 69 ರನ್​ಗೆ ಆಲೌಟ್ ಆಯಿತು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:58 pm, Thu, 9 June 22

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು