RCB vs CSK Highlights, IPL 2025: ರಣರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಆರ್ಸಿಬಿ
Royal Challengers Bengaluru vs Chennai Super Kings Highlights in Kannada: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರೋಮಾಂಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 2 ರನ್ಗಳಿಂದ ಸೋಲಿಸುವ ಮೂಲಕ ತನ್ನ ಯಶಸ್ಸಿನ ಓಟವನ್ನು ಮುಂದುವರೆಸಿತು.

ರೋಮಾಂಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ರನ್ಗಳಿಂದ ಸೋಲಿಸಿ ಪ್ಲೇಆಫ್ಗೆ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿತು. ಈ ಗೆಲುವಿನೊಂದಿಗೆ ಆರ್ಸಿಬಿ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಏತನ್ಮಧ್ಯೆ, ಸಿಎಸ್ಕೆ ತನ್ನ ಒಂಬತ್ತನೇ ಸೋಲಿನ ನಂತರ 10 ನೇ ಸ್ಥಾನದಲ್ಲಿಯೇ ಉಳಿದಿದೆ. ಶನಿವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಸಿಎಸ್ಕೆ ನಿಗದಿತ ಓವರ್ಗಳಲ್ಲಿ ಐದು ವಿಕೆಟ್ಗಳನ್ನು ಕಳೆದುಕೊಂಡು 211 ರನ್ ಗಳಿಸಲು ಶಕ್ತವಾಯಿತು. ಸಿಎಸ್ಕೆ ಪರ ಆಯುಷ್ ಮ್ಹಾತ್ರೆ 94 ಮತ್ತು ರವೀಂದ್ರ ಜಡೇಜಾ 77* ರನ್ ಗಳಿಸಿದರೆ, ಆರ್ಸಿಬಿ ಪರ ಲುಂಗಿ ಎನ್ಗಿಡಿ ಮೂರು ವಿಕೆಟ್ ಪಡೆದರೆ, ಕೃನಾಲ್ ಪಾಂಡ್ಯ ಮತ್ತು ಯಶ್ ದಯಾಳ್ ತಲಾ ಒಂದು ವಿಕೆಟ್ ಪಡೆದರು.
LIVE NEWS & UPDATES
-
2 ರನ್ ಜಯ
ರೋಚಕ ಪಂದ್ಯದಲ್ಲಿ ಬೆಂಗಳೂರು ತಂಡ ಚೆನ್ನೈ ತಂಡವನ್ನು ಸೋಲಿಸಿತು. ಕೊನೆಯ ಓವರ್ನಲ್ಲಿ ಚೆನ್ನೈಗೆ 15 ರನ್ಗಳು ಬೇಕಾಗಿದ್ದವು. ಆದರೆ ಯಶ್ ದಯಾಳ್ ಮೊದಲು ಧೋನಿಯನ್ನು ಔಟ್ ಮಾಡಿ ನಂತರ ಕೇವಲ 12 ರನ್ ನೀಡುವ ಮೂಲಕ ತಮ್ಮ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
-
ಧೋನಿ ಔಟ್
ಕೊನೆಯ ಓವರ್ನಲ್ಲಿ ಯಶ್ ದಯಾಳ್ ಅದ್ಭುತ ಯಾರ್ಕರ್ ಮೂಲಕ ಎಂಎಸ್ ಧೋನಿ ವಿಕೆಟ್ ಪಡೆದರು. ಆ ಓವರ್ನ ಮೂರನೇ ಎಸೆತದಲ್ಲಿ ದಯಾಳ್ ಧೋನಿಯನ್ನು ಎಲ್ಬಿಡಬ್ಲ್ಯೂ ಆಗಿ ಔಟ್ ಮಾಡಿದರು.
-
-
ಸತತ 2 ಎಸೆತಗಳಲ್ಲಿ 2 ವಿಕೆಟ್
ಲುಂಗಿ ಎನ್ಗಿಡಿ ಚೆನ್ನೈ ತಂಡಕ್ಕೆ ಸತತ ಎರಡು ಎಸೆತಗಳಲ್ಲಿ 2 ಶಾಕ್ ನೀಡಿದ್ದಾರೆ. 17 ನೇ ಓವರ್ನಲ್ಲಿ ಬಂದ ಎನ್ಗಿಡಿ ಮೊದಲು ಆಯುಷ್ ಮ್ಹಾತ್ರೆ ಅವರ ವಿಕೆಟ್ ಪಡೆದರು. ನಂತರ ಮುಂದಿನ ಎಸೆತದಲ್ಲಿ ಹೊಸ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ ಎಲ್ಬಿಡಬ್ಲ್ಯೂ ಆಗಿ ಔಟಾದರು.
-
ಒಂದೇ ಓವರ್ನಲ್ಲಿ ಎರಡು ಕ್ಯಾಚ್ ಡ್ರಾಪ್
ಆರ್ಸಿಬಿಯ ಇಂದಿನ ಫೀಲ್ಡಿಂಗ್ ನಿರಾಶೆ ಮೂಡಿಸಿದೆ. 16ನೇ ಓವರ್ನಲ್ಲಿ ಇಬ್ಬರೂ ಬ್ಯಾಟ್ಸ್ಮನ್ಗಳ ತಲಾ ಒಂದು ಕ್ಯಾಚ್ ಮಿಸ್ ಆದವು. ಮೊದಲು, ನಾಯಕ ರಜತ್ ಪತಿದಾರ್ ಆಯುಷ್ ಮ್ಹಾತ್ರೆ ಅವರ ಕ್ಯಾಚ್ ಅನ್ನು ಕೈಬಿಟ್ಟರು. ನಂತರ ಕೊನೆಯ ಎಸೆತದಲ್ಲಿ ಜಡೇಜಾ ಅವರ ಕ್ಯಾಚ್ ಅನ್ನು ಲುಂಗಿ ಎನ್ಗಿಡಿ ಕೈಬಿಟ್ಟರು. ಯಶ್ ದಯಾಳ್ ಬೌಲಿಂಗ್ ಮಾಡುತ್ತಿದ್ದರು.
-
100 ರನ್ ಪೂರ್ಣ
10ನೇ ಓವರ್ನಲ್ಲಿ ರೊಮಾರಿಯೊ ಶೆಫರ್ಡ್ ಎಸೆತದಲ್ಲಿ ಆಯುಷ್ ಮ್ಹಾತ್ರೆ 2 ಸಿಕ್ಸರ್ಗಳು ಮತ್ತು 1 ಬೌಂಡರಿ ಬಾರಿಸಿದರು. ಇದರೊಂದಿಗೆ ಚೆನ್ನೈ ಕೇವಲ 10 ಓವರ್ಗಳಲ್ಲಿ 100 ರನ್ಗಳನ್ನು ಪೂರ್ಣಗೊಳಿಸಿತು.
-
-
ಮ್ಹಾತ್ರೆ ಅದ್ಭುತ ಅರ್ಧಶತಕ
ಆಯುಷ್ ಮ್ಹಾತ್ರೆ ಅದ್ಭುತ ಅರ್ಧಶತಕ ಗಳಿಸಿದ್ದಾರೆ. ಈ 17 ವರ್ಷದ ಬ್ಯಾಟ್ಸ್ಮನ್ ತಮ್ಮ ನಾಲ್ಕನೇ ಐಪಿಎಲ್ ಪಂದ್ಯದಲ್ಲಿ ಮೊದಲ ಅರ್ಧಶತಕ ಗಳಿಸಿದರು. ಮ್ಹಾತ್ರೆ ಕೇವಲ 25 ಎಸೆತಗಳಲ್ಲಿ ಈ ಬಿರುಗಾಳಿಯ ಅರ್ಧಶತಕವನ್ನು ಗಳಿಸಿದರು.
-
ಎರಡನೇ ವಿಕೆಟ್ ಪತನ
ಸತತ ಎರಡು ಓವರ್ಗಳಲ್ಲಿ ಚೆನ್ನೈ ಎರಡನೇ ವಿಕೆಟ್ ಕಳೆದುಕೊಂಡಿತು. ಈ ಬಾರಿ ಸ್ಯಾಮ್ ಕರನ್ ಪೆವಿಲಿಯನ್ಗೆ ಮರಳಿದ್ದಾರೆ. ಲುಂಗಿ ಎನ್ಗಿಡಿ, ಪವರ್ಪ್ಲೇನ ಕೊನೆಯ ಓವರ್ನಲ್ಲಿ ಸ್ಯಾಮ್ ಕರನ್ ಅವರ ವಿಕೆಟ್ ಪಡೆದರು.
-
ಮೊದಲ ವಿಕೆಟ್ ಪತನ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊದಲ ವಿಕೆಟ್ ಪತನಗೊಂಡಿದೆ. ಐದನೇ ಓವರ್ನಲ್ಲಿ ಶೇಖ್ ರಶೀದ್ (14) ವಿಕೆಟ್ ಪಡೆದ ಕೃನಾಲ್ ಪಾಂಡ್ಯ.
-
ಅದ್ಭುತ ಬ್ಯಾಟಿಂಗ್
ಚೆನ್ನೈ ಪರ ಯುವ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಭರ್ಜರಿ ಆರಂಭ ನೀಡಿದ್ದು, ಭುವನೇಶ್ವರ್ ಎಸೆದ ನಾಲ್ಕನೇ ಓವರ್ನಲ್ಲಿ ಮ್ಹಾತ್ರೆ 5 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ ಒಟ್ಟು 26 ರನ್ ಗಳಿಸಿದರು.
-
ಚೆನ್ನೈ ಇನ್ನಿಂಗ್ಸ್ ಆರಂಭ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಆರಂಭವಾಗಿದೆ. ಇದಕ್ಕಾಗಿ ಯುವ ಆರಂಭಿಕ ಜೋಡಿ ಶೇಖ್ ರಶೀದ್ ಮತ್ತು ಆಯುಷ್ ಮ್ಹಾತ್ರೆ ಕ್ರೀಸ್ಗೆ ಬಂದಿದ್ದಾರೆ. ಈ ಬಾರಿ ಬೆಂಗಳೂರಿನ ಸ್ಪಿನ್ನರ್ ಕೃನಾಲ್ ಪಾಂಡ್ಯ ಬೌಲಿಂಗ್ ಆರಂಭಿಸಿದರು.
-
213 ರನ್ ಟಾರ್ಗೆಟ್
ಬೆಂಗಳೂರು ತಂಡ 20 ಓವರ್ಗಳಲ್ಲಿ 213 ರನ್ಗಳ ಬೃಹತ್ ಸ್ಕೋರ್ ಗಳಿಸಿತು. 19 ಮತ್ತು 20ನೇ ಓವರ್ಗಳಲ್ಲಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಸಿಡಿಸಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ರೊಮಾರಿಯೊ ಶೆಫರ್ಡ್ ಬೆಂಗಳೂರು ತಂಡವನ್ನು ಈ ಸ್ಥಾನಕ್ಕೆ ಕರೆದೊಯ್ದರು. ಇದು ಐಪಿಎಲ್ನಲ್ಲಿ ಆರ್ಸಿಬಿ ಪರ ದಾಖಲಾದ ಅತ್ಯಂತ ವೇಗದ ಅರ್ಧಶತಕ ಮತ್ತು ಈ ಸೀಸನ್ನ ಅತ್ಯಂತ ವೇಗದ ಅರ್ಧಶತಕವಾಗಿದೆ. ಅವರು ಕೇವಲ 14 ಎಸೆತಗಳಲ್ಲಿ 53 ರನ್ ಗಳಿಸಿದರು.
-
ಶಫರ್ಡ್ ಸುನಾಮಿ
19ನೇ ಓವರ್ನಲ್ಲಿ ರೊಮಾರಿಯೊ ಶೆಫರ್ಡ್ ಖಲೀಲ್ ಅಹ್ಮದ್ ಅವರ ಓವರ್ನಲ್ಲಿ ಶೆಫರ್ಡ್ 4 ಸಿಕ್ಸರ್ಗಳು ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಈ ಓವರ್ನಲ್ಲಿ ಒಟ್ಟಾರೆಯಾಗಿ 33 ರನ್ಗಳು ಬಂದಿದ್ದು, ಇದು ಈ ಸೀಸನ್ನ ಅತ್ಯಂತ ದುಬಾರಿ ಓವರ್ ಆಗಿದೆ.
-
ರಜತ್ ಕೂಡ ಔಟ್
ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಕೂಡ ಔಟಾಗಿದ್ದು ತಂಡವು ತನ್ನ ಐದನೇ ವಿಕೆಟ್ ಕಳೆದುಕೊಂಡಿದೆ. ಪತಿರಾನ ಮೂರನೇ ವಿಕೆಟ್ ಪಡೆದರು.
-
ಜಿತೇಶ್ ಔಟ್
ಬೆಂಗಳೂರಿನ ಇನ್ನಿಂಗ್ಸ್ ನಿಧಾನವಾಗಲು ಪ್ರಾರಂಭಿಸಿದ್ದು ನಾಲ್ಕನೇ ವಿಕೆಟ್ ಕೂಡ ಪತನಗೊಂಡಿದೆ. ನೂರ್ ಅಹ್ಮದ್ ಜಿತೇಶ್ ಶರ್ಮಾ ಅವರನ್ನು ಪೆವಿಲಿಯನ್ ಗೆ ವಾಪಸ್ ಕಳುಹಿಸಿದರು.
-
ಮೂರನೇ ವಿಕೆಟ್ ಪತನ
ದೇವದತ್ ಪಡಿಕ್ಕಲ್ (17) ಔಟಾದ ಕಾರಣ ಬೆಂಗಳೂರು ತಂಡಕ್ಕೆ ಮೂರನೇ ಪೆಟ್ಟು ಬಿದ್ದಿತು. 16ನೇ ಓವರ್ನಲ್ಲಿ ಬಂದ ಪತಿರಾನ ಈ ವಿಕೆಟ್ ಪಡೆದರು.
-
ಕೊಹ್ಲಿ ಔಟ್
ವಿರಾಟ್ ಕೊಹ್ಲಿ ಇನ್ನಿಂಗ್ಸ್ ಮುಗಿದಿದೆ. 12ನೇ ಓವರ್ನಲ್ಲಿ ಸ್ಯಾಮ್ ಕರನ್ ಕೊಹ್ಲಿಯನ್ನು ಔಟ್ ಮಾಡಿ ಬೆಂಗಳೂರಿಗೆ ಎರಡನೇ ಹೊಡೆತ ನೀಡಿದರು. ಕೊಹ್ಲಿ 33 ಎಸೆತಗಳಲ್ಲಿ 62 ರನ್ ಗಳಿಸಿದರು.
-
ಕೊಹ್ಲಿ ಅರ್ಧಶತಕ
ಬೆಥೆಲ್ ನಂತರ, ವಿರಾಟ್ ಕೊಹ್ಲಿ ಕೂಡ ಬಿರುಗಾಳಿಯ ಅರ್ಧಶತಕವನ್ನು ಪೂರೈಸಿದರು. ಜಡೇಜಾ ಎಸೆದ 11ನೇ ಓವರ್ನಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಕೊಹ್ಲಿ ಈ ಸೀಸನ್ನ ಏಳನೇ ಅರ್ಧಶತಕ ಗಳಿಸಿದರು. ಈ ಬಾರಿ ಕೊಹ್ಲಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
-
ಮೊದಲ ವಿಕೆಟ್
ಬೆಂಗಳೂರು ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. 10ನೇ ಓವರ್ನಲ್ಲಿ ಬಂದ ಮಥಿಷ ಪತಿರಾನ, ಜಾಕೋಬ್ ಬೆಥೆಲ್ ಅವರ ಅದ್ಭುತ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಡೆವಾಲ್ಡ್ ಬ್ರೆವಿಸ್ ಅದ್ಭುತ ಕ್ಯಾಚ್ ಹಿಡಿದರು. ಬೆಥೆಲ್ 33 ಎಸೆತಗಳಲ್ಲಿ 55 ರನ್ ಗಳಿಸಿದರು.
-
ಬೆಥೆಲ್ ಅರ್ಧಶತಕ
ಯುವ ಬ್ಯಾಟ್ಸ್ಮನ್ ಜಾಕೋಬ್ ಬೆಥೆಲ್ ಐಪಿಎಲ್ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದ್ದಾರೆ. 9ನೇ ಓವರ್ನಲ್ಲಿ ಬೌಂಡರಿ ಬಾರಿಸುವ ಮೂಲಕ ಬೆಥೆಲ್ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅವರು ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
-
ಪವರ್ಪ್ಲೇ ಪೂರ್ಣ
ಬೆಂಗಳೂರಿನ ಇನ್ನಿಂಗ್ಸ್ನ ಪವರ್ಪ್ಲೇ ಮುಗಿದಿದ್ದು, ಆರಂಭಿಕರು ಬಿರುಗಾಳಿಯ ಆರಂಭವನ್ನು ಮಾಡಿದ್ದಾರೆ. ಬೆಥೆಲ್ ಮತ್ತು ಕೊಹ್ಲಿ ಮೊದಲ 6 ಓವರ್ಗಳಲ್ಲಿ 71 ರನ್ಗಳನ್ನು ಗಳಿಸಿದರು. ಆರನೇ ಓವರ್ನಲ್ಲಿ ಕೊಹ್ಲಿ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು.
-
5 ಓವರ್ಗಳಲ್ಲಿ 50 ರನ್
ಬೆಂಗಳೂರು ತಂಡ 5ನೇ ಓವರ್ನಲ್ಲಿಯೇ 50 ರನ್ಗಳನ್ನು ಪೂರ್ಣಗೊಳಿಸಿತು. ನೂರ್ ಅಹ್ಮದ್ ಅವರ ಓವರ್ನಲ್ಲಿ, ಬೆಥೆಲ್ ಸತತ ಬೌಂಡರಿ ಮತ್ತು ಸಿಕ್ಸರ್ಗಳನ್ನು ಬಾರಿಸಿ ತಂಡವನ್ನು 50 ರನ್ಗಳ ಗಡಿ ದಾಟಿಸಿದರು.
-
ಆಕ್ರಮಣಕಾರಿ ಆರಂಭ
ಜಾಕೋಬ್ ಬೆಥೆಲ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭವನ್ನು ನೀಡಿದ್ದಾರೆ. ಬೆಥೆಲ್ ಮೊದಲ ಓವರ್ನಲ್ಲಿ 3 ಬೌಂಡರಿಗಳು ಮತ್ತು ಮೂರನೇ ಓವರ್ನಲ್ಲಿ ಒಂದು ಸಿಕ್ಸರ್ ಬಾರಿಸಿದರು. ನಂತರ ನಾಲ್ಕನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಖಲೀಲ್ ಅಹ್ಮದ್ ಎಸೆತದಲ್ಲಿ ಸತತ ಎರಡು ಸಿಕ್ಸರ್ಗಳನ್ನು ಬಾರಿಸಿದರು.
-
ಬ್ಯಾಟಿಂಗ್ ಆರಂಭ
ಬೆಂಗಳೂರು ಪರ ಜಾಕೋಬ್ ಬೆಥೆಲ್ ಮತ್ತು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಖಲೀಲ್ ಅಹ್ಮದ್ ಅವರ ಮೊದಲ ಓವರ್ ಅನ್ನು ಬೆಥೆಲ್ ಬೌಲ್ ಮಾಡಿ 3 ಬೌಂಡರಿಗಳನ್ನು ಒಳಗೊಂಡಂತೆ 13 ರನ್ ಗಳಿಸಿದರು.
-
ಚೆನ್ನೈ ಸೂಪರ್ ಕಿಂಗ್ಸ್
ಶೇಖ್ ರಶೀದ್, ಆಯುಷ್ ಮ್ಹಾತ್ರೆ, ಸ್ಯಾಮ್ ಕರನ್, ರವೀಂದ್ರ ಜಡೇಜಾ, ಡೆವಾಲ್ಡ್ ಬ್ರೆವಿಸ್, ದೀಪಕ್ ಹೂಡಾ, ಎಂಎಸ್ ಧೋನಿ (ನಾಯಕ), ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್, ಮತಿಶಾ ಪತಿರಾನ.
-
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಲುಂಗಿ ಎನ್ಗಿಡಿ, ಯಶ್ ದಯಾಳ್.
-
ಟಾಸ್ ಗೆದ್ದ ಸಿಎಸ್ಕೆ
ಟಾಸ್ ಗೆದ್ದ ಸಿಎಸ್ಕೆ ನಾಯಕ ಎಂ ಎಸ್ ಧೋನಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - May 03,2025 7:01 PM
