AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs GT Highlights, IPL 2025: ತವರಿನಲ್ಲಿ ಮೊದಲ ಪಂದ್ಯ ಸೋತ ಆರ್​ಸಿಬಿ

ಪೃಥ್ವಿಶಂಕರ
|

Updated on:Apr 02, 2025 | 11:14 PM

Royal Challengers Bengaluru vs Gujarat Titans Highlights in Kannada: ಐಪಿಎಲ್ 2025 ರ 14 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡವು 170 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡವು ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಕೇವಲ 2 ವಿಕೆಟ್‌ ಕಳೆದುಕೊಂಡು ಜಯ ಗಳಿಸಿತು.

RCB vs GT Highlights, IPL 2025: ತವರಿನಲ್ಲಿ ಮೊದಲ ಪಂದ್ಯ ಸೋತ ಆರ್​ಸಿಬಿ
Rcb Vs Gt

ಮೊಹಮ್ಮದ್ ಸಿರಾಜ್ ಅವರ ಮಾರಕ ಬೌಲಿಂಗ್ ಮತ್ತು ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಬುಧವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ 17.5 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.

LIVE NEWS & UPDATES

The liveblog has ended.
  • 02 Apr 2025 11:11 PM (IST)

    ಗುಜರಾತ್​ಗೆ 8 ವಿಕೆಟ್‌ ಜಯ

    ಗುಜರಾತ್ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಆರ್​ಸಿಬಿ ನೀಡಿದ 170 ರನ್‌ಗಳ ಗುರಿಯನ್ನು 13 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿದೆ. ತಂಡದ ಪರ ಜೋಸ್ ಬಟ್ಲರ್ 39 ಎಸೆತಗಳಲ್ಲಿ 187 ಸ್ಟ್ರೈಕ್ ರೇಟ್‌ನಲ್ಲಿ 73 ರನ್ ಗಳಿಸಿದರು. ಅವರಲ್ಲದೆ, ಸಾಯಿ ಸುದರ್ಶನ್ ಆರಂಭಿಕರಾಗಿ 36 ಎಸೆತಗಳಲ್ಲಿ 49 ರನ್ ಗಳಿಸಿದರು ಮತ್ತು ಕೊನೆಯಲ್ಲಿ ಶೆರ್ಫಾನ್ ರುದರ್ಫೋರ್ಡ್ 18 ಎಸೆತಗಳಲ್ಲಿ 30 ರನ್ ಗಳಿಸಿದರು.

  • 02 Apr 2025 10:57 PM (IST)

    ಗೆಲುವಿನ ಹಾದಿಯಲ್ಲಿ ಗುಜರಾತ್

    17 ಓವರ್‌ಗಳ ಆಟ ಮುಗಿದಿದೆ. ಗುಜರಾತ್ ತಂಡ 2 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದೆ. ಈಗ ಗೆಲ್ಲಲು 18 ಎಸೆತಗಳಲ್ಲಿ ಕೇವಲ 20 ರನ್ ಗಳಿಸಬೇಕು.

  • 02 Apr 2025 10:40 PM (IST)

    ಚೆಂಡು ಬದಲಾವಣೆ

    12ನೇ ಓವರ್ ನಂತರ ಅಂಪೈರ್ ಚೆಂಡನ್ನು ಬದಲಾಯಿಸಿದ್ದಾರೆ. ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಇದರಿಂದ ಅತೃಪ್ತರಾಗಿದ್ದಾರೆ. ಜೋಸ್ ಬಟ್ಲರ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

  • 02 Apr 2025 10:40 PM (IST)

    ಗುಜರಾತ್ 100 ರನ್ ಪೂರ್ಣ

    ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಇಬ್ಬರೂ ಈಗ ವೇಗವಾಗಿ ರನ್ ಗಳಿಸುತ್ತಿದ್ದಾರೆ. 12 ಓವರ್‌ಗಳಲ್ಲಿ 17 ರನ್‌ಗಳು ಬಂದವು. ಇದರೊಂದಿಗೆ ಗುಜರಾತ್ 1 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ.

  • 02 Apr 2025 10:39 PM (IST)

    ಅರ್ಧಶತಕದ ಜೊತೆಯಾಟ

    ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ನಡುವೆ ಅರ್ಧಶತಕದ ಜೊತೆಯಾಟವಿದೆ. ಅವರು ಒಟ್ಟಾಗಿ 32 ಎಸೆತಗಳಲ್ಲಿ 50 ರನ್ ಗಳಿಸಿದ್ದಾರೆ ಮತ್ತು ಇನ್ನೂ ಕ್ರೀಸ್‌ನಲ್ಲಿದ್ದಾರೆ. 10 ಓವರ್‌ಗಳು ಮುಗಿದಾಗ ಗುಜರಾತ್ ಸ್ಕೋರ್ 1 ವಿಕೆಟ್ ನಷ್ಟಕ್ಕೆ 82 ರನ್ ಆಗಿದೆ.

  • 02 Apr 2025 10:38 PM (IST)

    ವಿಕೆಟ್‌ಗಳ ಹುಡುಕಾಟದಲ್ಲಿ ಆರ್​ಸಿಬಿ

    9 ಓವರ್‌ಗಳ ಅಂತ್ಯಕ್ಕೆ ಗುಜರಾತ್ ತಂಡ 1 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿದೆ. ಜೋಸ್ ಬಟ್ಲರ್ ಮತ್ತು ಸಾಯಿ ಸುದರ್ಶನ್ ಕ್ರೀಸ್‌ನಲ್ಲಿದ್ದಾರೆ. ಬೆಂಗಳೂರು ತಂಡ ವಿಕೆಟ್ ಹುಡುಕುತ್ತಿದೆ ಮತ್ತು ಈಗ ರಜತ್ ಪಾಟಿದಾರ್ ಚೆಂಡನ್ನು ಕೃನಾಲ್ ಪಾಂಡ್ಯಗೆ ಹಸ್ತಾಂತರಿಸಿದ್ದಾರೆ.

  • 02 Apr 2025 10:12 PM (IST)

    ಗುಜರಾತ್ 50 ರನ್ ಪೂರ್ಣ

    ಆರಂಭಿಕ ಹಿನ್ನಡೆಯ ನಂತರ, ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಇನ್ನಿಂಗ್ಸ್ ಮೇಲೆ ಹಿಡಿತ ಸಾಧಿಸಿದ್ದಾರೆ. 7 ಓವರ್‌ಗಳ ಅಂತ್ಯಕ್ಕೆ ಗುಜರಾತ್ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ.

  • 02 Apr 2025 09:59 PM (IST)

    ಗುಜರಾತ್‌ ಮೇಲೆ ಬೆಂಗಳೂರು ಪ್ರಾಬಲ್ಯ

    ಪ್ರಸ್ತುತ ಬೆಂಗಳೂರು ತಂಡ ಗುಜರಾತ್ ಮೇಲೆ ಪ್ರಾಬಲ್ಯ ಸಾಧಿಸುತ್ತಿರುವಂತೆ ಕಾಣುತ್ತಿದೆ. ಬೆಂಗಳೂರು ಬೌಲರ್‌ಗಳು 5 ಓವರ್‌ಗಳಲ್ಲಿ ಕೇವಲ 33 ರನ್‌ಗಳನ್ನು ನೀಡಿ 1 ವಿಕೆಟ್ ಪಡೆದಿದ್ದಾರೆ.

  • 02 Apr 2025 09:59 PM (IST)

    ಗುಜರಾತ್‌ಗೆ ಮೊದಲ ಹೊಡೆತ

    ಶುಭ್‌ಮನ್ ಗಿಲ್ ವಿಕೆಟ್ ಪಡೆದ ಭುವನೇಶ್ವರ್ ಕುಮಾರ್. 7 ಎಸೆತಗಳಲ್ಲಿ 7 ರನ್ ಗಳಿಸಿ ಗಿಲ್ ಔಟಾದರು. ಗುಜರಾತ್ ತನ್ನ ಮೊದಲ ಹಿನ್ನಡೆಯನ್ನು ಅನುಭವಿಸಿದೆ.

  • 02 Apr 2025 09:51 PM (IST)

    ನಿಧಾನಗತಿಯ ಆರಂಭ

    ಬೆಂಗಳೂರು ಬೌಲರ್‌ಗಳು ಉತ್ತಮ ಬೌಲಿಂಗ್ ಮೂಲಕ ಎದುರಾಳಿಗೆ ರನ್ ಗಳಿಸಲು ಯಾವುದೇ ಅವಕಾಶವನ್ನು ನೀಡುತ್ತಿಲ್ಲ. ಅದಕ್ಕಾಗಿಯೇ ಗುಜರಾತ್ ತಂಡ ನಿಧಾನಗತಿಯ ಆರಂಭವನ್ನು ಮಾಡಿದೆ. ಮೊದಲ 3 ಓವರ್‌ಗಳಲ್ಲಿ ಅವರು ಕೇವಲ 15 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.

  • 02 Apr 2025 09:26 PM (IST)

    ಗುಜರಾತ್‌ಗೆ 170 ರನ್‌ಗಳ ಗುರಿ

    ಬೆಂಗಳೂರು ಪರ ಟಿಮ್ ಡೇವಿಡ್ ಅಂತಿಮವಾಗಿ ಅದ್ಭುತ ಇನ್ನಿಂಗ್ಸ್ ಆಡಿದರು. ಪ್ರಸಿದ್ಧ್ ಕೃಷ್ಣ ವಿರುದ್ಧ 20ನೇ ಓವರ್‌ನಲ್ಲಿ 16 ರನ್ ಕಲೆಹಾಕಿದರು. ಆದಾಗ್ಯೂ, ಅವರು 18 ಎಸೆತಗಳಲ್ಲಿ 32 ರನ್ ಗಳಿಸಿ ಕೊನೆಯ ಎಸೆತದಲ್ಲಿ ಔಟಾದರು. ಇದರ ಆಧಾರದ ಮೇಲೆ ಬೆಂಗಳೂರು ಗುಜರಾತ್‌ಗೆ 170 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ.

  • 02 Apr 2025 09:17 PM (IST)

    19ನೇ ಓವರ್‌ನಲ್ಲಿ ಕೇವಲ 4 ರನ್‌

    19ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಕೇವಲ 4 ರನ್ ನೀಡಿದರು. ಇದರೊಂದಿಗೆ ಬೆಂಗಳೂರು ತಂಡದ ಸ್ಕೋರ್ 7 ವಿಕೆಟ್ ನಷ್ಟಕ್ಕೆ 153 ರನ್ ಆಗಿದೆ.

  • 02 Apr 2025 09:17 PM (IST)

    ಸಿರಾಜ್​ಗೆ 3ನೇ ವಿಕೆಟ್

    ಸಿರಾಜ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಲಿವಿಂಗ್‌ಸ್ಟೋನ್ ಅವರನ್ನು ಔಟ್ ಮಾಡುವ ಮೂಲಕ ಮೂರನೇ ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಬೆಂಗಳೂರು ತನ್ನ 7ನೇ ವಿಕೆಟ್ ಕಳೆದುಕೊಂಡಿದೆ. ಲಿವಿಂಗ್‌ಸ್ಟೋನ್ 40 ಎಸೆತಗಳಲ್ಲಿ 54 ರನ್ ಗಳಿಸಿದರು.

  • 02 Apr 2025 09:16 PM (IST)

    ಲಿವಿಂಗ್‌ಸ್ಟೋನ್ ಅರ್ಧಶತಕ

    ಲಿಯಾಮ್ ಲಿವಿಂಗ್‌ಸ್ಟೋನ್ ರಶೀದ್ ಖಾನ್ ವಿರುದ್ಧ ಒಂದೇ ಓವರ್‌ನಲ್ಲಿ 3 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಬಿರುಗಾಳಿಯನ್ನು ಸೃಷ್ಟಿಸಿದ್ದಾರೆ. ಅವರು ತಮ್ಮ ಅರ್ಧಶತಕವನ್ನೂ ಪೂರೈಸಿದ್ದಾರೆ. ಅವರು 39 ಎಸೆತಗಳಲ್ಲಿ 54 ರನ್ ಗಳಿಸಿದ್ದಾರೆ. ಈ ಓವರ್‌ನಲ್ಲಿ ಒಟ್ಟು 20 ರನ್‌ಗಳು ಬಂದವು. ಇದರೊಂದಿಗೆ ಬೆಂಗಳೂರು 149 ರನ್ ಗಳಿಸಿದೆ.

  • 02 Apr 2025 09:16 PM (IST)

    17 ಮುಕ್ತಾಯ

    ಸಾಯಿ ಕಿಶೋರ್ 17ನೇ ಓವರ್‌ನಲ್ಲಿ 10 ರನ್ ನೀಡಿದರು. ಇದರೊಂದಿಗೆ ಬೆಂಗಳೂರು 6 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿದೆ. ಮತ್ತೊಂದೆಡೆ, ಸಾಯಿ ಕಿಶೋರ್ 4 ಓವರ್‌ಗಳಲ್ಲಿ 22 ರನ್‌ಗಳಿಗೆ 2 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಅದ್ಭುತ ಪ್ರದರ್ಶನವನ್ನು ಪೂರ್ಣಗೊಳಿಸಿದರು.

  • 02 Apr 2025 09:00 PM (IST)

    ರಶೀದ್ ಖಾನ್ ದುಬಾರಿ

    16ನೇ ಓವರ್‌ನಲ್ಲಿ ರಶೀದ್ ಖಾನ್ 14 ರನ್ ನೀಡಿದರು. ಇದರೊಂದಿಗೆ ಬೆಂಗಳೂರು ತಂಡದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 119 ರನ್ ಆಗಿದೆ. ಲಿಯಾಮ್ ಲಿವಿಂಗ್‌ಸ್ಟೋನ್ 31 ಎಸೆತಗಳಲ್ಲಿ 33 ರನ್‌ಗಳೊಂದಿಗೆ ಮತ್ತು ಟಿಮ್ ಡೇವಿಡ್ 5 ಎಸೆತಗಳಲ್ಲಿ 6 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.

  • 02 Apr 2025 09:00 PM (IST)

    15 ಓವರ್‌ಗಳ ನಂತರ ಆರ್‌ಸಿಬಿ- 105/6

    15 ಓವರ್‌ಗಳ ಆಟ ಮುಗಿದಿದೆ. ಬೆಂಗಳೂರು ತಂಡ 6 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಟಿಮ್ ಡೇವಿಡ್ ಕ್ರೀಸ್‌ನಲ್ಲಿದ್ದಾರೆ. ಈಗ ಇನ್ನಿಂಗ್ಸ್‌ನಲ್ಲಿ ಕೇವಲ 30 ಎಸೆತಗಳು ಮಾತ್ರ ಉಳಿದಿವೆ.

  • 02 Apr 2025 08:37 PM (IST)

    ಲಿವಿಂಗ್‌ಸ್ಟೋನ್ ಕ್ಯಾಚ್ ಮಿಸ್

    ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಸುಲಭ ಕ್ಯಾಚ್ ಅನ್ನು ರಾಹುಲ್ ತೆವಾಟಿಯಾ ಕೈಚೆಲ್ಲಿದರು. 11 ಓವರ್‌ಗಳ ಅಂತ್ಯಕ್ಕೆ ಬೆಂಗಳೂರು 4 ವಿಕೆಟ್‌ಗಳ ನಷ್ಟಕ್ಕೆ 80 ರನ್ ಗಳಿಸಿದೆ.

  • 02 Apr 2025 08:21 PM (IST)

    ಪಾಟಿದಾರ್ ಕೂಡ ಔಟ್

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ 12 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. ಇಶಾಂತ್ ಶರ್ಮಾ ಅವರನ್ನು ಬೇಟೆಯಾಡಿದರು. ಇದರೊಂದಿಗೆ ಬೆಂಗಳೂರು ತನ್ನ ನಾಲ್ಕನೇ ವಿಕೆಟ್ ಅನ್ನು ಕಳೆದುಕೊಂಡಿದೆ.

  • 02 Apr 2025 08:08 PM (IST)

    ಸಿರಾಜ್ ಮಾರಕ

    ಸಿರಾಜ್ ಅವರ ಮಾರಕ ಬೌಲಿಂಗ್ ಬೆಂಗಳೂರು ತಂಡವನ್ನು ಬೆಚ್ಚಿಬೀಳಿಸಿದೆ. ಮೊದಲ 5 ಓವರ್‌ಗಳಲ್ಲಿಯೇ ಅದು 3 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 35 ರನ್‌ಗಳನ್ನು ಗಳಿಸಲು ಶಕ್ತವಾಯಿತು.

  • 02 Apr 2025 08:07 PM (IST)

    ಮೂರನೇ ಹೊಡೆತ ನೀಡಿದ ಸಿರಾಜ್

    ಮೊಹಮ್ಮದ್ ಸಿರಾಜ್ ಆರ್‌ಸಿಬಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅವರು ಫಿಲ್ ಸಾಲ್ಟ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಆರ್​ಸಿಬಿಗೆ ಆಘಾತ ನೀಡಿದರು. ಬೆಂಗಳೂರು ತಂಡ ತನ್ನ ಮೂರನೇ ವಿಕೆಟ್ ಕಳೆದುಕೊಂಡಿದೆ.

  • 02 Apr 2025 07:59 PM (IST)

    ಆರ್​ಸಿಬಿಗೆ ಕಳಪೆ ಆರಂಭ

    ಬೆಂಗಳೂರು ತಂಡವು ತವರಿನಲ್ಲಿ ಅತ್ಯಂತ ಕಳಪೆ ಆರಂಭವನ್ನು ಕಂಡಿದೆ. ಮೊದಲ ಮೂರು ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 15 ರನ್ ಮಾತ್ರ ಗಳಿಸಿದೆ. ನಾಯಕರಾದ ರಜತ್ ಪಾಟಿದಾರ್ ಮತ್ತು ಫಿಲ್ ಸಾಲ್ಟ್ ಪ್ರಸ್ತುತ ಕ್ರೀಸ್‌ನಲ್ಲಿದ್ದಾರೆ.

  • 02 Apr 2025 07:48 PM (IST)

    ಬೆಂಗಳೂರಿಗೆ ಎರಡನೇ ಹೊಡೆತ

    ಸಿರಾಜ್, ದೇವದತ್ ಪಡಿಕಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ. ಬೆಂಗಳೂರು ಎರಡನೇ ಹಿನ್ನಡೆ ಅನುಭವಿಸಿದೆ.

  • 02 Apr 2025 07:46 PM (IST)

    ಕೊಹ್ಲಿ ಔಟ್

    ಅರ್ಷದ್ ಖಾನ್ ವಿರಾಟ್ ಕೊಹ್ಲಿಯನ್ನು ಬೇಟೆಯಾಡಿದ್ದಾರೆ. ಕೊಹ್ಲಿ ಗಾಳಿಯಲ್ಲಿ ಪುಲ್ ಶಾಟ್ ಹೊಡೆದರು ಆದರೆ ಬ್ಯಾಕ್‌ವರ್ಡ್ ಸ್ಕ್ವೇರ್‌ನಲ್ಲಿ ಪ್ರಸಿದ್ಧ್ ಸುಲಭ ಕ್ಯಾಚ್ ಪಡೆದರು. 2 ಓವರ್‌ಗಳು ಮುಗಿಯುವ ಹೊತ್ತಿಗೆ ತಂಡವು 1 ವಿಕೆಟ್ ನಷ್ಟಕ್ಕೆ 12 ರನ್‌ಗಳನ್ನು ಗಳಿಸಿದೆ.

  • 02 Apr 2025 07:40 PM (IST)

    ಸಾಲ್ಟ್​ಗೆ ಜೀವದಾನ

    ಮೊದಲ ಓವರ್‌ನಲ್ಲೇ ಗುಜರಾತ್ ಟೈಟಾನ್ಸ್ ವಿಕೆಟ್ ಕೀಪರ್ ಜೋಸ್ ಬಟ್ಲರ್ ಫಿಲ್ ಸಾಲ್ಟ್ ಅವರ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಸಾಲ್ಟ್ ಕೇವಲ 1 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಬೆಂಗಳೂರು ತಂಡವು ಒಂದು ಓವರ್ ನಂತರ 6 ರನ್ ಗಳಿಸಿತು.

  • 02 Apr 2025 07:39 PM (IST)

    ಕೊಹ್ಲಿ ಬೌಂಡರಿ

    ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಸಿರಾಜ್ ಎಸೆದ ಮೊದಲ ಎಸೆತದಲ್ಲೇ ಕೊಹ್ಲಿ ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ ಅವರು ಸಿಂಗಲ್ ಪಡೆದರು.

  • 02 Apr 2025 07:39 PM (IST)

    ಆರ್‌ಸಿಬಿಯ ಪ್ಲೇಯಿಂಗ್-11

    ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಲ್.

  • 02 Apr 2025 07:38 PM (IST)

    ಗುಜರಾತ್ ಟೈಟನ್ಸ್ ಪ್ಲೇಯಿಂಗ್-11

    ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಅರ್ಷದ್ ಖಾನ್, ರಶೀದ್ ಖಾನ್, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ.

  • 02 Apr 2025 07:03 PM (IST)

    ಟಾಸ್ ಗೆದ್ದ ಗುಜರಾತ್

    ಟಾಸ್ ಗೆದ್ದ ಗುಜರಾತ್ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ.

Published On - Apr 02,2025 7:02 PM

Follow us
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ
ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ; ಪಾಕಿಸ್ತಾನಕ್ಕೆ ಮೋದಿ ಎಚ್ಚರಿಕೆ