AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಸೊನ್ನೆ ಸುತ್ತಿದ ಪಂತ್; ಮಾಲೀಕನಿಗೆ ಹೆದರುತ್ತಲೇ ಪೆವಿಲಿಯನ್ ಸೇರಿದ ನಾಯಕ

Rishabh Pant's IPL 2025 Debut Flops: ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 2025ರ ನಾಲ್ಕನೇ ಪಂದ್ಯದಲ್ಲಿ ರಿಷಭ್ ಪಂತ್ ಶೂನ್ಯಕ್ಕೆ ಔಟ್ ಆದರು. 27 ಕೋಟಿ ರೂ.ಗಳಿಗೆ ಖರೀದಿಸಲಾದ ಪಂತ್ ಅವರ ಚೊಚ್ಚಲ ಪಂದ್ಯದಲ್ಲಿನ ವೈಫಲ್ಯ ಲಕ್ನೋ ತಂಡಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಆದಾಗ್ಯೂ, ಮಾರ್ಷ್​ ಮತ್ತು ನಿಕೋಲಸ್ ಪೂರನ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಲಕ್ನೋ 209 ರನ್ ಗಳಿಸಿತು.

IPL 2025: ಸೊನ್ನೆ ಸುತ್ತಿದ ಪಂತ್; ಮಾಲೀಕನಿಗೆ ಹೆದರುತ್ತಲೇ ಪೆವಿಲಿಯನ್ ಸೇರಿದ ನಾಯಕ
ರಿಷಬ್ ಪಂತ್, ಸಂಜೀವ್ ಗೋಯಂಕಾ
ಪೃಥ್ವಿಶಂಕರ
|

Updated on: Mar 24, 2025 | 9:58 PM

Share

2025 ರ ಐಪಿಎಲ್​ನ ನಾಲ್ಕನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 210 ರನ್​ಗಳ ಟಾರ್ಗೆಟ್ ನೀಡಿದೆ. ಲಕ್ನೋ ಕಲೆಹಾಕಿರುವ ಈ ಬೃಹತ್ ಮೊತ್ತಕ್ಕೆ ಪೂರನ್ ಹಾಗೂ ಮಾರ್ಷ್​ ಕೂಡುಗೆಯ ಅಪಾರವಾಗಿತ್ತು. ಆದಾಗ್ಯೂ ಲಕ್ನೋ ತಂಡದ ಹೊಸ ನಾಯಕ ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಪಂತ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಎಲ್ಲರ ಭರವಸೆಯನ್ನು ಹುಸಿಗೊಳಿಸಿದ್ದಾರೆ.

27 ಕೋಟಿ ಪಡೆದಿರುವ ಪಂತ್

ವಾಸ್ತವವಾಗಿ ಸೀಸನ್ ಆರಂಭಕ್ಕೂ ಮುನ್ನ ನಡೆದಿದ್ದ ಮೆಗಾ ಹರಾಜಿನಲ್ಲಿ ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತಕ್ಕೆ ಅಂದರೆ ಬರೋಬ್ಬರಿ 27 ಕೋಟಿ ರೂ. ಪಡೆದು ಲಕ್ನೋ ತಂಡವನ್ನು ಸೇರಿಕೊಂಡಿದ್ದರು. ತಂಡವನ್ನು ಸೇರಿದ್ದ ಬಳಿಕ ಪಂತ್​ಗೆ ನಾಯಕತ್ವವನ್ನು ವಹಿಸಲಾಗಿತ್ತು. ವಾಸ್ತವವಾಗಿ ಈ ಹಿಂದೆ ತಂಡದ ನಾಯಕನಾಗಿದ್ದ ರಾಹುಲ್ ಬದಲಿಯಾಗಿ ಹಾಗೂ ರಾಹುಲ್​ಗೆ ಟಕ್ಕರ್ ನೀಡುವ ಸಲುವಾಗಿಯೇ ಲಕ್ನೋ ಫ್ರಾಂಚೈಸಿ ಮತ್ತೊಬ್ಬ ವಿಕೆಟ್​ಕೀಪರ್ ಬ್ಯಾಟ್ಸ್‌ಮನ್ ರಿಷಬ್​ ಪಂತ್​ರನ್ನು ಅತ್ಯಧಿಕ ಮೊತ್ತ ನೀಡಿ ಖರೀದಿಸಿದೆ ಎಂದು ಹೇಳಲಾಗುತ್ತಿತ್ತು.

ರಾಹುಲ್- ಸಂಜೀವ್ ನಡುವೆ ಮನಸ್ತಾಪ

ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡದ ನಾಯಕತ್ವ ಕೆಎಲ್ ರಾಹುಲ್​ ಕೈನಲ್ಲಿತ್ತು. ಈ ಸೀಸನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡ ಹೀನಾಯವಾಗಿ ಸೋತಿತ್ತು. ಅದರಲ್ಲೂ ಹೈದರಾಬಾದ್‌ ತಂಡ ಮೈದಾನದಲ್ಲಿ ರನ್​ಗಳ ಮಳೆ ಹರಿಸಿತ್ತು. ಈ ಪಂದ್ಯ ಮುಗಿದ ಬಳಿಕ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯಂಕಾ ಮೈದಾನದಲ್ಲೇ ನಾಯಕ ರಾಹುಲ್​ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಹಿರಂಗವಾಗಿಯೇ ರಾಹುಲ್​ರನ್ನು ನಿಂದಿಸಿದ್ದರು. ಇದರಿಂದ ಬೇಸರಗೊಂಡಿದ್ದ ರಾಹುಲ್ ಹರಾಜಿಗೂ ಮುನ್ನ ತಂಡವನ್ನು ತೊರೆದಿದ್ದರು. ಈ ನಡುವೆ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಪ್ರಯತ್ನ ಮಾಡಲಾಗಿತ್ತಾದರೂ ರಾಹುಲ್​ ತಂಡದಲ್ಲಿ ಉಳಿದುಕೊಂಡಿರಲಿಲ್ಲ.

ಪಂತ್​ಗೆ ಟ್ರೋಲಿಗರ ಕಾಟ

ಆ ಸಂದರ್ಭದಲ್ಲಿ ಲಕ್ನೋ ಮಾಲೀಕ ಸಂಜೀವ್ ಗೋಯಂಕಾ ಕೂಡ ರಾಹುಲ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದರು. ಆ ನಂತರ ನಡೆದಿದ್ದ ಮೆಗಾ ಹರಾಜಿನಲ್ಲಿ ರಾಹುಲ್​ಗೆ ಟಕ್ಕರ್ ನೀಡಲೆಂದೇ ಸಂಜೀವ್, ಪಂತ್​ರನ್ನು ಅತ್ಯಧಿಕ ಮೊತ್ತ ನೀಡಿ ಖರೀದಿಸಿದ್ದರು. ಆದರೆ ಪಂತ್ ಆಡಿದ ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿದ್ದಾರೆ. ಹೀಗಾಗಿ ಪಂತ್​ ಸೊನ್ನೆಗೆ ಔಟಾಗಿದ್ದನ್ನು ಟ್ರೋಲ್ ಮಾಡಿರುವ ಫ್ಯಾನ್ಸ್, ಪಂತ್​ ಡ್ರೆಸಿಂಗ್ ರೂಂಗೆ ಮರಳಿದ ಬಳಿಕ ಮಾಲೀಕನಿಂದ ಮಂಗಳಾರತಿ ಕಾದಿದೆ ಎಂದಿದ್ದಾರೆ.

ಪೂರನ್- ಮಾರ್ಷ್​ ಅಬ್ಬರ

ಈ ಪಂದ್ಯದಲ್ಲಿ ಪಂತ್ ನಿರಾಶೆ ಮೂಡಿಸಿದರಾದರೂ ಉಳಿದ ಆಟಗಾರರ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಆರಂಭಿಕನಾಗಿ ಕಣಕ್ಕಿಳಿದಿದ್ದ ಮಾರ್ಷ್​ 36 ಎಸೆತಗಳಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 72 ರನ್ ಬಾರಿಸಿದರೆ, ನಿಕೋಲಸ್ ಪೂರನ್ ಕೂಡ 30 ಎಸೆತಗಳಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್​ಗಳ ಸಹಾಯದಿಂದ 75ರನ್ ಸಿಡಿಸಿದರು. ಅಂತಿಮವಾಗಿ ಲಕ್ನೋ ತಂಡ 20 ಓವರ್​ಗಳ ಅಂತ್ಯಕ್ಕೆ 209 ರನ್ ಕಲೆಹಾಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್