Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಷ್ಟದ ದಿನಗಳಲ್ಲಿ ಧೋನಿಯ ಕೈ ಹಿಡಿದಿದ್ರು ನಮ್ಮ ರೆಬೆಲ್​ಸ್ಟಾರ್; ಫೋಟೋ ಮೂಲಕ ಘಟನೆ ಸ್ಮರಿಸಿದ ಸುಮಲತಾ

ತಮ್ಮ ಪೇಸ್​ಬುಕ್ ಖಾತೆಯಲ್ಲಿ ಅಂಬರೀಶ್ ಅವರು ಧೋನಿಗೆ ಸಹಾಯ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಸುಮಲತಾ ಅವರು, ಬೆಲೆಯನ್ನೇ ಕಟ್ಟಲಾಗದ ಫೋಟೋವೊಂದು ಇಂದು ನನಗೆ ಸಿಕ್ಕಿದೆ. 2006 ರಲ್ಲಿ , ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂಬರೀಶ್ ಅವರು 2 ಲಕ್ಷ ರೂಗಳ ಚೆಕ್ ಅನ್ನು ಅಂದಿನ ಉದಯೋನ್ಮುಖ ಪ್ರತಿಭೆ ಎಂಎಸ್ ಧೋನಿ ಅವರಿಗೆ ನೀಡಿದ್ದರು ಎಂದು ಬರೆದುಕೊಂಡಿದ್ದಾರೆ.

ಕಷ್ಟದ ದಿನಗಳಲ್ಲಿ ಧೋನಿಯ ಕೈ ಹಿಡಿದಿದ್ರು ನಮ್ಮ ರೆಬೆಲ್​ಸ್ಟಾರ್; ಫೋಟೋ ಮೂಲಕ ಘಟನೆ ಸ್ಮರಿಸಿದ ಸುಮಲತಾ
ಧೋನಿಯೊಂದಿಗೆ ಅಂಬರೀಶ್
Follow us
ಪೃಥ್ವಿಶಂಕರ
|

Updated on: Aug 25, 2023 | 8:27 AM

ರೆಬೆಲ್ ಸ್ಟಾರ್ ಅಂಬರೀಶ್ (Ambareesh)… ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್. ಕಲಿಯುಗದ ಕರ್ಣನೆಂದೇ ಬಿಂಬಿತರಾಗಿದ್ದ ಅಂಬರೀಶ್ ಅಲಿಯಾಸ್ ಅಮರನಾಥ್, ಕರ್ನಾಟಕ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅಭಿಮಾನಿಗಳ ಬಳಗ ಹಾಗೂ ಸಾಕಷ್ಟು ಮಿತ್ರ ಬಳಗವನ್ನು ಹೊಂದಿದ್ದಂತಹ ನಟ. ಬದುಕಿರುವವರೆಗೂ ಕಷ್ಟ ಎಂದವರ ನೆರವಿಗೆ ನಿಲ್ಲುತ್ತಿದ್ದ ಅಂಬರೀಶ್ ಅವರಿಂದ ಸಹಾಯ ಪಡೆದವರ ಪಟ್ಟಿಯಲ್ಲಿ ಸಿನಿಮಾ ನಟ/ ನಟಿಯರು, ರಾಜಕೀಯ ಪುಡಾರಿಗಳು, ಬಡ ಕ್ರೀಡಾ ಸ್ಪರ್ಧಿಗಳು ಸೇರಿದ್ದಾರೆ. ಅವರಿಂದ ಸಹಾಯ ಪಡೆದವರು ಇಂದು ಬದುಕಿನ ಉತ್ತುಂಗದಲ್ಲಿದ್ದಾರೆ. ಅಂತಹವರಲ್ಲಿ ಟೀಂ ಇಂಡಿಯಾದ (Team India) ಮಾಜಿ ನಾಯಕ ಹಾಗೂ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (MS Dhoni) ಕೂಡ ಒಬ್ಬರು.

ತನ್ನ ಚಾಣಾಕ್ಷ ನಾಯಕತ್ವದಿಂದ ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಮಹೇಂದ್ರ ಸಿಂಗ್ ಧೋನಿ ತೀರ ಬಡ ಕುಟುಂಬದಿಂದ ಬಂದವರು. ಇದನ್ನು ನಾವು ಅವರ ಬಯೋಗ್ರಫಿಯಲ್ಲೇ ನೋಡಿದ್ದೇವೆ. ಅಂತಹ ಧೋನಿಗೆ ಅವರ ವೃತ್ತಿ ಬದುಕಿನ ಆರಂಭದಲ್ಲಿ ಕರ್ನಾಟಕದ ಸೂಪರ್​ಸ್ಟಾರ್ ಅಂಬರೀಶ್ ಹಣ ಸಹಾಯ ಮಾಡಿದ್ದರು ಎಂಬ ಸುದ್ದಿ ಬಹಳಷ್ಟು ಹಿಂದೆಯೇ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಆ ಸುದ್ದಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

MS Dhoni: ನನ್ನ ಪತ್ನಿಗೆ ತಮಿಳಿನ ಕೆಟ್ಟ ಪದಗಳು ಗೊತ್ತು ಎಂದ ಧೋನಿ..! ವಿಡಿಯೋ ನೋಡಿ

ಅಂದಿನ ಘಟನೆ ಸ್ಮರಿಸಿದ ಸುಮಲತಾ

ಅಂಬರೀಶ್ ಅವರ ಪತ್ನಿ ಹಾಗೂ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಈ ವಿಚಾರವನ್ನು ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ತಮ್ಮ ಪೇಸ್​ಬುಕ್ ಖಾತೆಯಲ್ಲಿ ಅಂಬರೀಶ್ ಅವರು ಧೋನಿಗೆ ಸಹಾಯ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಸುಮಲತಾ ಅವರು, ಬೆಲೆಯನ್ನೇ ಕಟ್ಟಲಾಗದ ಫೋಟೋವೊಂದು ಇಂದು ನನಗೆ ಸಿಕ್ಕಿದೆ. 2006 ರಲ್ಲಿ , ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂಬರೀಶ್ ಅವರು 2 ಲಕ್ಷ ರೂಗಳ ಚೆಕ್ ಅನ್ನು ಅಂದಿನ ಉದಯೋನ್ಮುಖ ಪ್ರತಿಭೆ ಎಂಎಸ್ ಧೋನಿ ಅವರಿಗೆ ನೀಡಿದ್ದರು.

ವಾಸ್ತವವಾಗಿ ಈ ಘಟನೆಗೂ ಮುನ್ನ ಅಂಭಿ ಅವರು ಧೋನಿಯವರ ತಂದೆಯ ಸಂದರ್ಶನವೊಂದನ್ನು ನೋಡಿದ್ದರು. ಅದರಲ್ಲಿ ಧೋನಿ ಜನಪ್ರಿಯತೆಯ ಬಗ್ಗೆ ಮಾತನಾಡಿದ್ದ ಧೋನಿ ಅವರ ತಂದೆ, ಧೋನಿ ಈಗ ಜನಪ್ರಿಯವಾಗುತ್ತಿದ್ದಾರೆ. ಹೀಗಾಗಿ ಧೋನಿಯವರನ್ನು ಸಂದರ್ಶಿಸಲು ಸಾಕಷ್ಟು ಸಂದರ್ಶಕರು ಮನೆಗೆ ಬರುತ್ತಿದ್ದಾರೆ. ಆದರೆ ಅವರು ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಇದು ಅಪಾರ ಕ್ರೀಡಾ ಮತ್ತು ಕ್ರಿಕೆಟ್ ಅಭಿಮಾನಿಯಾಗಿದ್ದ ಅಂಬರೀಶ್ ಅವರನ್ನು ಬೆಚ್ಚಿಬೀಳಿಸಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಧೋನಿ ಪಂದ್ಯವನ್ನಾಡಲು ಬಂದಿದ್ದಾಗ ಅಂಬರೀಶ್ ತಮ್ಮ ಕೈಲಾದ ಸಹಾಯ ಮಾಡಿದ್ದರು. ಆ ಸಮಯದಲ್ಲಿ ತೆಗೆದಿದ್ದ ಫೋಟೋವನ್ನು ನಾನು ಕಳೆದುಕೊಂಡಿದ್ದೆ. ಅದಕ್ಕಾಗಿ ಸಾಕಷ್ಟು ಹುಡುಕಾಟ ಮಾಡಿದ್ದೇವು. ಇಂದು ಆ ಫೋಟೋ ಸಿಕ್ಕಿತು. ಹಾಗಾಗಿ ಅಂದಿನ ಘಟನೆಯನ್ನು ಮತ್ತೊಮ್ಮೆ ಸ್ಮರಿಸಲು ಸಾಧ್ಯವಾಯಿತು ಎಂದು ಸುಮಲತಾ ಬರೆದುಕೊಂಡಿದ್ದಾರೆ.

2 ಲಕ್ಷ ರೂಗಳ ಚೆಕ್

ವಾಸ್ತವವಾಗಿ ಏಕದಿನ ಸರಣಿಗಾಗಿ ಶ್ರೀಲಂಕಾ, ಭಾರತ ಪ್ರವಾಸ ಮಾಡಿತ್ತು. ಆ ಪ್ರವಾಸದಲ್ಲಿ ಒಂದು ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಧೋನಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ವೇಳೆ ಪಂದ್ಯ ವೀಕ್ಷಿಸಲು ಹೋಗಿದ್ದ ಅಂಬರೀಶ್, ಧೋನಿಯವರ ಆರ್ಥಿಕ ಪರಿಸ್ಥಿತಿಯನ್ನು ಈ ಮೊದಲೇ ಅರಿತಿದ್ದರು. ಹೀಗಾಗಿ ಧೋನಿ ಅವರಿಗೆ 2 ಲಕ್ಷ ರೂಗಳ ಚೆಕ್ ಅನ್ನು ನೀಡಿ, ಬಡ ಕ್ರಿಕೆಟಿಗನ ಬೆನ್ನಿಗೆ ನಿಂತಿದ್ದರು. ಈ ವಿಚಾರ ತಡವಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ವೀಕೆಂಡ್​​ನಲ್ಲಿ ಮಾತ್ರ ಪ್ರವಾಸಿಗರಿಗೆ ನಂದಿಹಿಲ್ಸ್ ಓಪನ್
ವೀಕೆಂಡ್​​ನಲ್ಲಿ ಮಾತ್ರ ಪ್ರವಾಸಿಗರಿಗೆ ನಂದಿಹಿಲ್ಸ್ ಓಪನ್
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಏಕನಾಥ್​ ಶಿಂಧೆಯನ್ನು ಅಪಹಾಸ್ಯ ಮಾಡಿದ ಕುನಾಲ್ ಕಮ್ರಾ
ಏಕನಾಥ್​ ಶಿಂಧೆಯನ್ನು ಅಪಹಾಸ್ಯ ಮಾಡಿದ ಕುನಾಲ್ ಕಮ್ರಾ
ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಬಿತ್ತು ಕೇಸ್; ಸಂಕಷ್ಟದಲ್ಲಿ ಗೆಳೆಯರು
ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಬಿತ್ತು ಕೇಸ್; ಸಂಕಷ್ಟದಲ್ಲಿ ಗೆಳೆಯರು
ಜಿಮ್ಸ್​ನಲ್ಲಿ ಆಕ್ಸಿಜನ್​ಗಾಗಿ ರೋಗಿಗಳ ನರಳಾಟ, ವಿಡಿಯೋ ವೈರಲ್
ಜಿಮ್ಸ್​ನಲ್ಲಿ ಆಕ್ಸಿಜನ್​ಗಾಗಿ ರೋಗಿಗಳ ನರಳಾಟ, ವಿಡಿಯೋ ವೈರಲ್