Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಮೈದಾನದಲ್ಲಿ ಚಿರತೆಯಂತೆ ಎಗರಿ ಕ್ಯಾಚ್​ ಹಿಡಿದ ವಿರಾಟ್.. ಕೊಹ್ಲಿಯ ಈ ಅದ್ಭುತ ಕ್ಯಾಚ್​ ಭಾರತವನ್ನು ಗೆಲ್ಲಿಸಿತು! ವಿಡಿಯೋ ನೋಡಿ

Virat Kohli Catch Video: 40 ನೇ ಓವರ್‌ನಲ್ಲಿ ರಶೀದ್ ಶಾರ್ದುಲ್ ಅವರ ಎರಡನೇ ಎಸೆತವನ್ನು ಕವರ್ಸ್​ ಕಡೆ ಆಡಿದರು. ಅಲ್ಲಿ ಹಾಜರಿದ್ದ ಭಾರತದ ನಾಯಕ ಕೊಹ್ಲಿ, ಚಿರತೆಯಂತೆ ಎಗರಿ ಕೇವಲ ಒಂದೇ ಕೈಯಿಂದ ಅಚ್ಚರಿಯ ಕ್ಯಾಚ್ ತೆಗೆದುಕೊಂಡರು.

India vs England: ಮೈದಾನದಲ್ಲಿ ಚಿರತೆಯಂತೆ ಎಗರಿ ಕ್ಯಾಚ್​ ಹಿಡಿದ ವಿರಾಟ್.. ಕೊಹ್ಲಿಯ ಈ ಅದ್ಭುತ ಕ್ಯಾಚ್​ ಭಾರತವನ್ನು ಗೆಲ್ಲಿಸಿತು! ವಿಡಿಯೋ ನೋಡಿ
ವಿರಾಟ್​ ಕೊಹ್ಲಿ ಅದ್ಭತ ಕ್ಯಾಚ್
Follow us
ಪೃಥ್ವಿಶಂಕರ
| Updated By: Digi Tech Desk

Updated on:Mar 29, 2021 | 11:17 AM

ಪುಣೆ: ಕಳೆದ ಒಂದೂವರೆ ತಿಂಗಳಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಕದನ ಮಾರ್ಚ್ 28 ರ ಭಾನುವಾರ ಪುಣೆಯಲ್ಲಿ ನಡೆದ ಅದ್ಭುತ ಪಂದ್ಯದೊಂದಿಗೆ ಕೊನೆಗೊಂಡಿತು. ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಕೇವಲ 7 ರನ್‌ಗಳ ಅಂತರದಿಂದ ಇಂಗ್ಲೆಂಡ್‌ನ್ನು ಸೋಲಿಸಿ ಸರಣಿಯನ್ನು 2-1 ರಿಂದ ತನ್ನ ಮುಡಿಗೆರಿಸಿಕೊಂಡಿತು. ಈ ಪಂದ್ಯದಲ್ಲಿ, ಎರಡೂ ತಂಡಗಳಿಂದ ಅನೇಕ ಅತ್ಯುತ್ತಮ ಪ್ರದರ್ಶನಗಳು ಕಂಡುಬಂದವು. ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಮತ್ತು ಸ್ಯಾಮ್ ಕರಣ್ ಅವರ ಅತ್ಯುತ್ತಮ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು. ಆದರೆ ಶಾರ್ದುಲ್ ಠಾಕೂರ್ ಮತ್ತು ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಪಂದ್ಯವನ್ನು ಭಾರತದ ಪರವಾಗಿ ತಿರುಗಿಸುವಲ್ಲಿ ಪ್ರಮುಖ ಪಾತ್ರವಹಿಸಿತು. ಅದೇ ಸಮಯದಲ್ಲಿ, ವಿರಾಟ್ ಕೊಹ್ಲಿಗೆ, ಈ ಪಂದ್ಯವು ಬ್ಯಾಟಿಂಗ್ ವಿಷಯದಲ್ಲಿ ನಿರಾಶಾದಾಯಕವಾಗಿತ್ತು. ಆದರೆ ಕಿಂಗ್ ಕೊಹ್ಲಿ ಅಚ್ಚರಿಯ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಇಂಗ್ಲೆಂಡ್ ಎದುರು 330 ರನ್ ಗಳಿಸುವ ಗುರಿಯನ್ನು ನೀಡಿತ್ತು. ತಂಡಕ್ಕೆ ಶಿಖರ್ ಧವನ್ (67), ರಿಷಭ್ ಪಂತ್ (78) ಮತ್ತು ಹಾರ್ದಿಕ್ ಪಾಂಡ್ಯ (64) ಅರ್ಧಶತಕ ಬಾರಿಸಿದರು. ಅದೇ ಸಮಯದಲ್ಲಿ, ಹಿಂದಿನ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಈ ಬಾರಿ ಕೇವಲ 7 ರನ್ ಗಳಿಸುವ ಮೂಲಕ ಔಟಾದರು. ಕೊಹ್ಲಿಗೆ ಬ್ಯಾಟಿಂಗ್‌ನಿಂದ ಯಾವುದೇ ಮಹತ್ವದ ಕೊಡುಗೆ ನೀಡಲು ಸಾಧ್ಯವಾಗದಿದ್ದರೂ, ಅವರು ಫೀಲ್ಡಿಂಗ್‌ನಲ್ಲಿ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಸಹಾಯ ಮಾಡಿದರು ಮತ್ತು ಪ್ರಮುಖ ಪಾಲುದಾರಿಕೆಯನ್ನು ಮುರಿಯುವಲ್ಲಿ ಸಹಕರಿಸಿದರು.

ಕವರ್ಸ್​ನಲ್ಲಿ ಕೊಹ್ಲಿಯ ಅದ್ಭುತ ಕ್ಯಾಚ್ ಭಾರತ ಬೌಲಿಂಗ್‌ನಲ್ಲಿ ಉತ್ತಮ ಆರಂಭವನ್ನು ನೀಡಿತ್ತು ಮತ್ತು ಇಂಗ್ಲೆಂಡ್‌ನ ಅಗ್ರ 4 ಬ್ಯಾಟ್ಸ್‌ಮನ್‌ಗಳನ್ನು 95 ರನ್‌ಗಳಿಸುವಷ್ಟರಲ್ಲೇ ಔಟ್​ ಮಾಡಿತು. ಇದರಿಂದಾಗಿ ಇಂಗ್ಲೆಂಡ್‌ನ 7 ವಿಕೆಟ್‌ಗಳು 200 ರನ್‌ಗಳಿಸುವಷ್ಟರಲ್ಲಿ ಕುಸಿತ ಕಂಡವು. ಇಲ್ಲಿಂದ, ಸ್ಯಾಮ್ ಕರಣ್ ಮತ್ತು ಆದಿಲ್ ರಶೀದ್ ತಂಡವನ್ನು ಉಳಿಸುವ ಕೆಲಸವನ್ನು ಪ್ರಾರಂಭಿಸಿದರು. ಇವರಿಬ್ಬರ ನಡುವೆ ಅರ್ಧಶತಕ ಉತ್ತಮ ಪಾಲುದಾರಿಕೆ ಇತ್ತು. ಭಾರತ ವಿಕೆಟ್ ಹುಡುಕುತ್ತಿತ್ತು ಮತ್ತು ಅಂತಹ ಪರಿಸ್ಥಿತಿಯಲ್ಲಿ ಕೊಹ್ಲಿ ಶಾರ್ದುಲ್ ಠಾಕೂರ್ ಅವರನ್ನು ಬೌಲಿಂಗ್ ಮಾಡಲು ಕರೆದರು.

40 ನೇ ಓವರ್‌ನಲ್ಲಿ ರಶೀದ್ ಶಾರ್ದುಲ್ ಅವರ ಎರಡನೇ ಎಸೆತವನ್ನು ಕವರ್ಸ್​ ಕಡೆ ಆಡಿದರು. ಅಲ್ಲಿ ಹಾಜರಿದ್ದ ಭಾರತದ ನಾಯಕ ಕೊಹ್ಲಿ, ಚಿರತೆಯಂತೆ ಎಗರಿ ಕೇವಲ ಒಂದೇ ಕೈಯಿಂದ ಅಚ್ಚರಿಯ ಕ್ಯಾಚ್ ತೆಗೆದುಕೊಂಡರು. ಇದರಿಂದ ಟೀಂ ಇಂಡಿಯಾದ ಗೆಲುವಿಗೆ ಕಂಟಕವಾಗಿದ್ದ ಈ ಜೋಡಿಯ ಜೊತೆಯಾಟವನ್ನು ಕೊಹ್ಲಿ ಕೊನೆಗಾಣಿಸಿದರು.

ಟೀಮ್ ಇಂಡಿಯಾ 4 ಕ್ಯಾಚ್‌ಗಳನ್ನು ಕೈಬಿಟ್ಟಿತು ಕೊಹ್ಲಿಯ ಈ ಕ್ಯಾಚ್ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತು. ಆದರೆ ಸ್ವತಃ ಕೊಹ್ಲಿಯೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಕೊಹ್ಲಿಯ ಈ ಕ್ಯಾಚ್ ರಶೀದ್ ಮತ್ತು ಕರಣ್ ನಡುವಿನ 57 ರನ್‌ಗಳ ಪಾಲುದಾರಿಕೆಯನ್ನು ಮುರಿಯಿತು. ಫೀಲ್ಡಿಂಗ್ ಸಮಯದಲ್ಲಿ ಭಾರತೀಯ ತಂಡವು 4 ಕ್ಯಾಚ್‌ಗಳನ್ನು ಕೈಬಿಟ್ಟಿದರಿಂದ ಕೊಹ್ಲಿಯ ಕ್ಯಾಚ್ ಕೂಡ ಈ ವಿಷಯದಲ್ಲಿ ಮಹತ್ವದ್ದಾಗಿತ್ತು. ಅದರಲ್ಲಿ ಒಂದು ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರಣ್ ಅವರ 2 ಕ್ಯಾಚ್‌ಗಳು ಡ್ರಾಪ್ ಆದವು.

ಸ್ಯಾಮ್ ಕರಣ್ ಕೊನೆಯವರೆಗೂ ಹೋರಾಟ ಆದರೆ, ಈ ವಿಕೆಟ್‌ನ ನಂತರವೂ ಸ್ಯಾಮ್ ಕರಣ್ ಅವರು ಭಾರತ ತಂಡವನ್ನು ಕೊನೆಯವರೆಗೂ ಪೀಡಿಸುತ್ತಿದ್ದರು. ಕರಣ್, ಮಾರ್ಕ್ ವುಡ್ ಜೊತೆಗೆ, ಒಂಬತ್ತನೇ ವಿಕೆಟ್‌ಗೆ 60 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು ಮತ್ತು ಪಂದ್ಯವನ್ನು ಕೊನೆಯ ಎಸೆತದವರೆಗೂ ಕೊಂಡೊಯ್ದರು. 95 ರನ್ ಗಳಿಸಿದ ಕರಣ್ ಅಜೇಯರಾಗಿ ಉಳಿದಿದ್ದರು, ಆದರೆ ಭಾರತ ಪಂದ್ಯವನ್ನು ಗೆದ್ದಿತು.

ಇದನ್ನೂ ಓದಿ:India vs England: ರೋಚಕ ಹಣಾಹಣಿಯಲ್ಲಿ ಸರಣಿ ಗೆದ್ದ ಕೊಹ್ಲಿ ಪಡೆ, ಇಂಗ್ಲೆಂಡ್​ಗೆ ವೀರೋಚಿತ ಸೋಲು

Published On - 11:11 am, Mon, 29 March 21

ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ