AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಕ್ಕೆ ತನ್ನ ದೇಶದ ಹೆಸರನ್ನೂ ಬರೆಯೋಕಾಗದ ದುಃಸ್ಥಿತಿ ಬಂತಾ!

ಪಾಕಿಸ್ತಾನ ಕ್ರಿಕೆಟಿಗರು ಆಗಾಗ ಎಡವಟ್ಟುಗಳನ್ನ ಮಾಡಿಕೊಂಡು ಟ್ರೋಲ್​ಗೆ ಆಹಾರವಾಗೋದು ಕಾಮನ್ ಬಿಡಿ. ಆದ್ರೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದೆ. ಯಾವ ಮಟ್ಟಿಗೆ ಅಂದ್ರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತನ್ನ ದೇಶದ ಹೆಸರನ್ನು ಸರಿಯಾಗಿ ಬರೆಯೋಕು ಬರೋದಿಲ್ಲ ಅಂತಾ ಟ್ರೋಲ್​ಗೆ ಒಳಗಾಗ್ತಿದೆ. ಜುಲೈ 30 ರಿಂದ ಪಾಕಿಸ್ತಾನ ತಂಡ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​​ಗೆ ಪ್ರಯಾಣ ಬೆಳೆಸಿದೆ. ಹಾಗೇ ಇಂಗ್ಲೆಂಡ್​ನಲ್ಲಿ ಪಾಕ್ ಕ್ರಿಕೆಟಿಗರು ಮೊದಲು 14 ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತೆ. ಈ ವಿಚಾರವನ್ನ ಹೇಳೋ ಭರದಲ್ಲಿ ಪಾಕಿಸ್ತಾನ […]

ಪಾಕಿಸ್ತಾನಕ್ಕೆ ತನ್ನ ದೇಶದ ಹೆಸರನ್ನೂ ಬರೆಯೋಕಾಗದ ದುಃಸ್ಥಿತಿ ಬಂತಾ!
ಸಾಧು ಶ್ರೀನಾಥ್​
|

Updated on: Jun 30, 2020 | 5:12 PM

Share

ಪಾಕಿಸ್ತಾನ ಕ್ರಿಕೆಟಿಗರು ಆಗಾಗ ಎಡವಟ್ಟುಗಳನ್ನ ಮಾಡಿಕೊಂಡು ಟ್ರೋಲ್​ಗೆ ಆಹಾರವಾಗೋದು ಕಾಮನ್ ಬಿಡಿ. ಆದ್ರೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಎಡವಟ್ಟು ಮಾಡಿಕೊಂಡು ನಗೆಪಾಟಲಿಗೀಡಾಗಿದೆ. ಯಾವ ಮಟ್ಟಿಗೆ ಅಂದ್ರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತನ್ನ ದೇಶದ ಹೆಸರನ್ನು ಸರಿಯಾಗಿ ಬರೆಯೋಕು ಬರೋದಿಲ್ಲ ಅಂತಾ ಟ್ರೋಲ್​ಗೆ ಒಳಗಾಗ್ತಿದೆ.

ಜುಲೈ 30 ರಿಂದ ಪಾಕಿಸ್ತಾನ ತಂಡ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್​​ಗೆ ಪ್ರಯಾಣ ಬೆಳೆಸಿದೆ. ಹಾಗೇ ಇಂಗ್ಲೆಂಡ್​ನಲ್ಲಿ ಪಾಕ್ ಕ್ರಿಕೆಟಿಗರು ಮೊದಲು 14 ದಿನಗಳ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತೆ. ಈ ವಿಚಾರವನ್ನ ಹೇಳೋ ಭರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಎಡವಟ್ಟು ಮಾಡಿಕೊಂಡಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್​ಗೆ ತೆರಳೋ ಫೋಟೋವನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ, ಪಾಕಿಸ್ತಾನ ತಂಡ ಇಂಗ್ಲೆಂಡ್​ಗೆ ತೆರಳುತ್ತಿದೆ ಅನ್ನಬೇಕಿತ್ತು. ಆದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟ್ವಿಟರ್​ನಲ್ಲಿ ಪಾಕಿಸ್ತಾನ (Pakistan) ಅನ್ನೋ ಬದಲು, ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದೆ. ಪಾಕಿಯಾಟನ್ (Pakiatan) ತಂಡ ಇಂಗ್ಲೆಂಡ್​ಗೆ ತೆರಳುತ್ತಿದೆ ಅಂತಾ ಬರೆದುಕೊಂಡಿದೆ.

ಪಿಸಿಬಿ ಹೀಗೆ ಟ್ವೀಟ್ ಮಾಡುತ್ತಿದ್ದಂತೆ, ನೆಟ್ಟಿಗರು ಸರಿಯಾಗೇ ಟ್ರೋಲ್ ಮಾಡಿದ್ದಾರೆ. ನಿಮಗೆ ನಿಮ್ಮ ದೇಶದ ಹೆಸರು ಬರೆಯೋಕಾಗದಷ್ಟು ದುಸ್ಥಿತಿ ಬಂತಾ? ಅಂತಾ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ತಮಾಷೆ ವಿಷ್ಯ ಅಂದ್ರೆ, ಪಿಸಿಬಿಗೆ ಈ ಫೋಸ್ಟ್ ಮಾಡಿದ ಒಂದು ಗಂಟೆ ಬಳಿಕ ತನ್ನ ತಪ್ಪಿನ ಅರಿವಾಗಿದೆ. ಇದಕ್ಕೂ ನೆಟ್ಟಿಗರು ಪಿಸಿಬಿ ಕಾಲೆಳೆದಿದ್ದಾರೆ. ನಿಮ್ಮ ತಪ್ಪು ಗೊತ್ತಾಗೋಕೆ ಒಂದು ಗಂಟೆ ಬೇಕಾಯ್ತಾ ಅಂತಾ ಕಾಲೆಳೆದಿದ್ದಾರೆ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ