AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Paralympics: 8 ನೇ ವಯಸ್ಸಿಗೆ ಪಾರ್ಶ್ವವಾಯು.. ಕೋಚ್ ಇಲ್ಲದೆ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಯೋಗೀಶ್ ಜೀವನಗಾಥೆಯಿದು

Tokyo Paralympics: ಯೋಗೀಶ್ ಕಥುನಿಯಾ ಅವರು ಎಂಟು ವರ್ಷದವರಾಗಿದ್ದಾಗ, ಪಾರ್ಶ್ವವಾಯು ದಾಳಿಯಿಂದಾಗಿ ಅವರಿಗೆ ದೇಹದ ಕೆಳ ಭಾಗದಲ್ಲಿ ಸಮಸ್ಯೆ ಉಂಟಾಯಿತು.

Tokyo Paralympics: 8 ನೇ ವಯಸ್ಸಿಗೆ ಪಾರ್ಶ್ವವಾಯು.. ಕೋಚ್ ಇಲ್ಲದೆ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದ ಯೋಗೀಶ್ ಜೀವನಗಾಥೆಯಿದು
ಯೋಗೀಶ್ ಕಥುನಿಯಾ
TV9 Web
| Updated By: ಪೃಥ್ವಿಶಂಕರ|

Updated on: Aug 30, 2021 | 6:52 PM

Share

ಭಾರತೀಯ ಡಿಸ್ಕಸ್ ಎಸೆತಗಾರ ಯೋಗೀಶ್ ಕಥುನಿಯಾಗೆ, ಟೋಕಿಯೊ ಪ್ಯಾರಾಲಿಂಪಿಕ್ಸ್ 2020 ರಲ್ಲಿ ಬೆಳ್ಳಿ ಪದಕ ಗೆದ್ದಿರಬಹುದು. ಆದರೆ ಅವರಿಗೆ ಆ ಪದಕ ಚಿನ್ನದ ಪದಕಕ್ಕೆ ಸಮನಾಗಿದೆ. ಏಕೆಂದರೆ ಅವರು ತರಬೇತುದಾರರಿಲ್ಲದೆ ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಸರಿಯಾದ ತರಬೇತಿಯಿಲ್ಲದೆ ಸಾಧನೆ ಮಾಡಿದ್ದಾರೆ. 24 ವರ್ಷದ ಅಥ್ಲೀಟ್ ಸೋಮವಾರ ತನ್ನ ಆರನೇ ಮತ್ತು ಕೊನೆಯ ಪ್ರಯತ್ನದಲ್ಲಿ 44.38 ಮೀ ಡಿಸ್ಕಸ್ ಥ್ರೋ ಮೂಲಕ ಪುರುಷರ ಡಿಸ್ಕಸ್ ಥ್ರೋನ ಎಫ್ 56 ವರ್ಗೀಕರಣದಲ್ಲಿ ಬೆಳ್ಳಿ ಪದಕ ಗೆದ್ದರು. ಈ ಬಗ್ಗೆ ಮಾತನಾಡಿದ ಯೋಗೀಶ್, ಇದು ಅದ್ಭುತವಾದ ಅನುಭವವಾಗಿದೆ. ಬೆಳ್ಳಿ ಗೆದ್ದಿರುವುದು ನನಗೆ 2024 ರಲ್ಲಿ ಪ್ಯಾರಿಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಹೆಚ್ಚು ಪ್ರೇರಣೆಯನ್ನು ನೀಡಿದೆ. ಬ್ರೆಜಿಲ್‌ನ ಕ್ಲೌಡಾನಿ ಬಟಿಸ್ಟಾ ಡಾಸ್ ಸ್ಯಾಂಟೋಸ್ 45.59 ಮೀ ಡಿಸ್ಕಸ್ ಎಸೆದರು ಚಿನ್ನ ಗೆದ್ದರು. ಕ್ಯೂಬಾದ ಲಿಯೊನಾರ್ಡೊ ಡಯಾಜ್ ಅಲ್ಡಾನಾ 43.36 ಮೀ ಡಿಸ್ಕಸ್ ಎಸೆಯುವ ಮೂಲಕ ಬೆಳ್ಳಿ ಗೆದ್ದರು.

ನನಗೆ ಕೋಚ್ ಕೂಡ ಇರಲಿಲ್ಲ ಲಾಕ್‌ಡೌನ್‌ನಿಂದಾಗಿ ಕಳೆದ ಒಂದೂವರೆ ವರ್ಷದಿಂದ ಹೆಚ್ಚಿನ ತರಬೇತಿ ಸೌಲಭ್ಯಗಳು ಸಿಗದ ಕಾರಣ ಕ್ರೀಡಾಕೂಟಕ್ಕೆ ತಯಾರಿ ಮಾಡುವುದು ಕಷ್ಟ ಎಂದು ಕಥುನಿಯಾ ಹೇಳಿದರು. ಕಳೆದ 18 ತಿಂಗಳಲ್ಲಿ ತಯಾರಿ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಭಾರತದಲ್ಲಿ ಲಾಕ್‌ಡೌನ್‌ನಿಂದಾಗಿ ಪ್ರತಿ ಕ್ರೀಡಾಂಗಣವೂ ಆರು ತಿಂಗಳು ಮುಚ್ಚಿತ್ತು. ಹೀಗಾಗಿ ನಾನು ಸ್ವಂತವಾಗಿ ಅಭ್ಯಾಸ ಮಾಡಬೇಕಾಗಿತ್ತು. ಆಗ ನನಗೆ ಕೋಚ್ ಕೂಡ ಇರಲಿಲ್ಲ ಮತ್ತು ನಾನು ಇನ್ನೂ ಕೋಚ್ ಇಲ್ಲದೆ ಅಭ್ಯಾಸ ಮಾಡುತ್ತಿದ್ದೇನೆ. ತರಬೇತುದಾರರಿಲ್ಲದಿದ್ದರೂ ನಾನು ಬೆಳ್ಳಿ ಪದಕ ಗೆಲ್ಲಲು ಸಾಧ್ಯವಾಗಿರುವುದು ಅದ್ಭುತವಾಗಿದೆ. ಮುಂದಿನ ಬಾರಿ ಚಿನ್ನದ ಪದಕ ಗೆಲ್ಲಲು ಶ್ರಮಿಸುತ್ತೇನೆ ಎಂದು ಹೇಳಿದರು.

ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ನಾನು ಚಿನ್ನದ ಪದಕಕ್ಕಿಂತ ಕೇವಲ ಒಂದು ಮೀಟರ್ ಹಿಂದೆ ಇದ್ದೆ ಆದರೆ ಪ್ಯಾರಿಸ್‌ನಲ್ಲಿ ನಾನು ವಿಶ್ವದಾಖಲೆಯನ್ನು ಮುರಿಯಲು ಪ್ರಯತ್ನಿಸುತ್ತೇನೆ. ಇಂದು ನನ್ನ ದಿನವಾಗಿರಲಿಲ್ಲ. ನಾನು ವಿಶ್ವ ದಾಖಲೆಯನ್ನು ಮುರಿಯಲು ಸಜ್ಜಾಗಿದ್ದೆ ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ ಎಂದರು.

8 ನೇ ವಯಸ್ಸಿನಲ್ಲಿ ಪಾರ್ಶ್ವವಾಯು ಯೋಗೀಶ್ ಕಥುನಿಯಾ ಅವರು ಎಂಟು ವರ್ಷದವರಾಗಿದ್ದಾಗ, ಪಾರ್ಶ್ವವಾಯು ದಾಳಿಯಿಂದಾಗಿ ಅವರಿಗೆ ದೇಹದ ಕೆಳ ಭಾಗದಲ್ಲಿ ಸಮಸ್ಯೆ ಉಂಟಾಯಿತು. ಅವರ ತಂದೆ ಸೇನೆಯಲ್ಲಿದ್ದಾರೆ. ಯೋಗೇಶ್ ದೆಹಲಿಯ ಕಿರೋರಿ ಮಾಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಇಲ್ಲಿ ಓದುತ್ತಿರುವಾಗ, ಅನೇಕ ತರಬೇತುದಾರರು ಯೋಗೀಶ್ ನೆರವಿಗೆ ಬಂದರು. ನಂತರ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ತರಬೇತುದಾರ ಸತ್ಯಪಾಲ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಯೋಗೀಶ್ ತರಬೇತಿ ಪಡೆದರು. ನಂತರ ಅವರು ತರಬೇತುದಾರ ನವಲ್ ಸಿಂಗ್ ಅವರಿಂದ ಕಲಿಯಲು ಆರಂಭಿಸಿದರು.

2018 ರಲ್ಲಿ ಬರ್ಲಿನ್‌ನಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ಅವರ ಮೊದಲ ಅಂತರಾಷ್ಟ್ರೀಯ ಪಂದ್ಯಾವಳಿಯಾಗಿದೆ. ಇದರಲ್ಲಿ ಅವರು ಎಫ್ 36 ವರ್ಗಕ್ಕೆ ಸೇರಿ ವಿಶ್ವ ದಾಖಲೆ ಮಾಡಿದರು. 2019 ರಲ್ಲಿ, ದುಬೈನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು 42.51 ಮೀ ಎಸೆದರು ಕಂಚು ಗೆದ್ದರು. ಈ ಕಾರಣದಿಂದಾಗಿ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದರು.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!