AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಇನ್ನೂ ಸರಿಯಾಗಿಲ್ಲ ವಿರಾಟ್​ ಕೊಹ್ಲಿ ಕಣ್ಣು; ಟಾಸ್​ ವೇಳೆ ಬಹಿರಂಗವಾಯ್ತು ವಿಚಾರ

18ನೇ ಓವರ್​ನ ಮೊದಲ ಬಾಲ್​ನಲ್ಲಿ ಕೃನಾಲ್​ ಪಾಂಡ್ಯ ಹೊಡೆದ ಶಾಟ್​ ವಿರಾಟ್​ ಕೊಹ್ಲಿ ಬಳಿ ಹೋಗಿತ್ತು. ಈ ಕ್ಯಾಚ್​ ಹಿಡಿಯೋಕೆ ಹೋದಾಗ ಬಾಲ್​ ನೇರವಾಗಿ ಕಣ್ಣಿನ ಮೇಲೆ ಬಿದ್ದಿತ್ತು.

Virat Kohli: ಇನ್ನೂ ಸರಿಯಾಗಿಲ್ಲ ವಿರಾಟ್​ ಕೊಹ್ಲಿ ಕಣ್ಣು; ಟಾಸ್​ ವೇಳೆ ಬಹಿರಂಗವಾಯ್ತು ವಿಚಾರ
ರಾಜೇಶ್ ದುಗ್ಗುಮನೆ
|

Updated on: Apr 14, 2021 | 7:34 PM

Share

ಮುಂಬೈ ವಿರುದ್ಧದ ಮ್ಯಾಚ್​ನಲ್ಲಿ ಕ್ಯಾಚ್​ ಹಿಡಿಯಲು ಹೋಗಿ ವಿರಾಟ್​ ಕೊಹ್ಲಿ ಕಣ್ಣಿಗೆ ಬಾಲ್​ ಬಡಿದಿತ್ತು. ಅವರ ಕಣ್ಣು ಸ್ವಲ್ಪ ಊದಿಕೊಂಡಿತ್ತು. ಈ ಮ್ಯಾಚ್​ ಪೂರ್ಣಗೊಂಡು ಐದು ದಿನ ಕಳೆದರೂ ವಿರಾಟ್​ ಕೊಹ್ಲಿ ಕಣ್ಣು ಸರಿ ಹೋದಂತೆ ಕಾಣುತ್ತಿಲ್ಲ. ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧದ ಮ್ಯಾಚ್​ನ  ಟಾಸ್​ ವೇಳೆ ಈ ವಿಚಾರ ಗೊತ್ತಾಗಿದೆ. ಏಪ್ರಿಲ್​ 9ರಂದು ನಡೆದ ಮೊದಲ ಪಂದ್ಯದಲ್ಲಿ ಆರ್​ಸಿಬಿ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಿತ್ತು. ಮುಂಬೈ ಮೊದಲು ಬ್ಯಾಟಿಂಗ್​ಗೆ ಇಳಿದಿತ್ತು. 18ನೇ ಓವರ್​ನ ಮೊದಲ ಬಾಲ್​ನಲ್ಲಿ ಕೃನಾಲ್​ ಪಾಂಡ್ಯ ಹೊಡೆದ ಶಾಟ್​ ವಿರಾಟ್​ ಕೊಹ್ಲಿ ಬಳಿ ಹೋಗಿತ್ತು. ಈ ಕ್ಯಾಚ್​ ಹಿಡಿಯೋಕೆ ಹೋದಾಗ ಬಾಲ್​ ನೇರವಾಗಿ ಕಣ್ಣಿನ ಮೇಲೆ ಬಿದ್ದಿತ್ತು. ಕೊಹ್ಲಿ ಕಣ್ಣು ಉಬ್ಬಿದಂತೆ ಕಂಡಿತ್ತು. ಆದಾಗ್ಯೂ, ಅವರು ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೆ ಇಳಿದಿದ್ದರು.

ಕೊಹ್ಲಿ ಕ್ಯಾಚ್​ ಬಿಟ್ಟ ಬಗ್ಗೆ ಎಲ್ಲರೂ ಅಪಸ್ವರ ತೆಗೆದಿದ್ದರು. ಆದರೆ, ಪಂದ್ಯ ಮುಗಿದ ನಂತರ ಕೊಹ್ಲಿ ಮಾತನಾಡೋಕೆ ಬಂದಾಗ ಕಣ್ಣು ಊದಿಕೊಂಡಿದ್ದು ಸರಿಯಾಗಿ ಕಾಣಿಸಿತ್ತು. ಈ ಬಗ್ಗೆ ಸಾಕಷ್ಟು ಜನರು ಬೇಸರ ಹೊರ ಹಾಕಿದ್ದರು.

ಇಂದು ಸನ್​ ರೈಸರ್ಸ್​ ಹೈದರಾಬಾದ್ ತಂಡವನ್ನು ರಾಯಲ್​ ಚಾಲೆಂಜರ್ಸ್​ ತಂಡ ಎದುರಿಸುತ್ತಿದೆ. ಟಾಸ್​ ಮಾಡೋಕೆ ಕೊಹ್ಲಿ ಬಂದಾಗ ಎಲ್ಲರ ಗಮನ ನೆಟ್ಟಿದ್ದು ಅವರ ಕಣ್ಣಿನ ಮೇಲೆ. ಅವರ ಬಲಗಣ್ಣು ಇನ್ನೂ ಊದಿಕೊಂಡೆ ಇದೆ. ಇದನ್ನು ನೋಡಿದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ. ಇನ್ನೂ ಕೆಲವರು, ಕೊಹ್ಲಿ ಕ್ರೀಡಾಸ್ಫೂರ್ತಿಗೆ ಮೆಚ್ಚುಗೆ ಹೊರ ಹಾಕಿದ್ದಾರೆ.

ಇದನ್ನೂ ಓದಿ: Suresh Raina IPL 2021 CSK Team Player: ಕೊಹ್ಲಿ, ರೋಹಿತ್​ಗೂ ಮೊದಲು ಐಪಿಎಲ್​ನಲ್ಲಿ ಎಲ್ಲರ ಹೃದಯ ಗೆದ್ದ ಆಟಗಾರನೆಂದರೆ ಅದು ಸುರೇಶ್​ ರೈನಾ!

IPL 2021: ಕ್ಯಾಚ್​ ಬಿಟ್ಟು ಟ್ರೋಲಾದ ಕೊಹ್ಲಿ! ಮೊದಲ ಪಂದ್ಯದಲ್ಲೇ ಆರ್​ಸಿಬಿ ಬಿಟ್ಟಿದ್ದು ಬರೋಬ್ಬರಿ 5 ಕ್ಯಾಚ್

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ