AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಔಟ್​ ಆಗಿದ್ದಕ್ಕೆ ಕೊಹ್ಲಿ ರೌದ್ರರೂಪ ; ಪೆವಿಲಿಯನ್​ ಚೇರ್​ಗಳು ಚೆಲ್ಲಾಪಿಲ್ಲಿ, ವಿಡಿಯೋ ವೈರಲ್​

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ ರೈಸರ್ಸ್​ ಹೈದರಾಬಾದ್ ತಂಡ ಚೆನ್ನೈನಲ್ಲಿ ಮುಖಾಮುಖಿ ಆಗಿವೆ. ಟಾಸ್​ ಗೆದ್ದ ಎಸ್​ಆರ್​ಎಚ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್​ಗೆ ಇಳಿದ ಆರ್​​ಸಿಬಿ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ.

Virat Kohli: ಔಟ್​ ಆಗಿದ್ದಕ್ಕೆ ಕೊಹ್ಲಿ ರೌದ್ರರೂಪ ; ಪೆವಿಲಿಯನ್​ ಚೇರ್​ಗಳು ಚೆಲ್ಲಾಪಿಲ್ಲಿ, ವಿಡಿಯೋ ವೈರಲ್​
ಚೇರ್​ಗಳನ್ನು ತಳ್ಳಿ ಹಾಕಿದ ಕೊಹ್ಲಿ
ರಾಜೇಶ್ ದುಗ್ಗುಮನೆ
| Edited By: |

Updated on: Apr 14, 2021 | 9:34 PM

Share

ವಿರಾಟ್​ ಕೊಹ್ಲಿ ತಮ್ಮ ಯಶಸ್ವಿ ನಾಯಕತ್ವ ಹಾಗೂ ಅದ್ಭುತ ಬ್ಯಾಟಿಂಗ್​ ಮೂಲಕ ಹೆಸರಾದವರು. ಅಷ್ಟೇ ಅಲ್ಲ, ಆಗಾಗ ತಮ್ಮ ಸಿಟ್ಟಿನ ಮೂಲಕ ಕೊಹ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ತುಂಬಾನೇ ಕಾಮ್​ ಆಗಿದ್ದ ಅವರು, ಇಂದು ಮತ್ತೆ ತಮ್ಮ ರೌದ್ರರೂಪ ತೋರಿದ್ದಾರೆ. ಬಹುಬೇಗ ಔಟ್​ ಆಗಿದ್ದಕ್ಕೆ ಪೆವಿಲಿಯನ್​ ಚೇರ್​ಗಳನ್ನು ಬ್ಯಾಟ್​ ಮೂಲಕ ಚೆಲ್ಲಾಪಿಲ್ಲಿ ಮಾಡಿದ್ದಾರೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ ರೈಸರ್ಸ್​ ಹೈದರಾಬಾದ್ ತಂಡ ಚೆನ್ನೈನಲ್ಲಿ ಮುಖಾಮುಖಿ ಆಗಿವೆ. ಟಾಸ್​ ಗೆದ್ದ ಎಸ್​ಆರ್​ಎಚ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್​ಗೆ ಇಳಿದ ಆರ್​​ಸಿಬಿ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ತಂಡದ ಮೊತ್ತ 19 ರನ್​ ಆದಾಗ ದೇವದತ್​ ಪಡಿಕ್ಕಲ್​ ಕ್ಯಾಚ್​ಕೊಟ್ಟು ಪೆವಿಲಿಯನ್​ ಸೇರಿದರು. ಶಹಬಾಜ್​ ಅಹ್ಮದ್​ ಕೂಡ ಹೆಚ್ಚು ಹೊತ್ತು ಕ್ರೀಜ್​ನಲ್ಲಿ ನಿಲ್ಲಲಿಲ್ಲ.

ಎರಡು ವಿಕೆಟ್ ಪತನದ​ ನಂತರ ಆರ್​ಸಿಬಿ ಉತ್ತಮ ಲಯಕಂಡುಕೊಳ್ಳುತ್ತಿತ್ತು. ಆದರೆ, ಹೋಲ್ಡರ್​ ಬೌಲಿಂಗ್​ ವೇಳೆ ಕೊಹ್ಲಿ ಸಿಕ್ಸ್​ ಹೊಡೆಯುವ ಪ್ರಯತ್ನ ಮಾಡಿದರು. ಎಡ್ಜ್​ ಆಗಿ ಅದು ಕ್ಯಾಚ್​ ಆಗಿತ್ತು. ಈ ಮೂಲಕ ಕೊಹ್ಲಿ ಕೇವಲ 33 ರನ್​ಗಳಿಗೆ ನಿರ್ಗಮಿಸಿದರು.

ಇಂದು ಕೊಹ್ಲಿ ಅದ್ಭುತವಾಗಿ ಆಡುವ ಸೂಚನೆ ನೀಡಿದ್ದರು. ನಾಲ್ಕು ಬೌಂಡರಿಗಳು ಕೂಡ ಅವರ ಬ್ಯಾಟ್​ನಿಂದ ಸಿಡಿದಿದ್ದವು. ಆದರೆ, 33 ರನ್​ಗೆ ಔಟ್​ ಆಗಿದ್ದು, ಅವರಿಗೇ ಖುಷಿ ನೀಡಲಿಲ್ಲ. ಅಷ್ಟೇ ಅಲ್ಲ, ಈ ಬಗ್ಗೆ ಕೊಹ್ಲಿ ತುಂಬಾನೇ ಸಿಟ್ಟಾಗಿದ್ದರು. ಗ್ರೌಂಡ್​ನಿಂದ ನಿರ್ಗಮಿಸುವವರೆಗೆ ತುಂಬಾನೇ ಕಾಮ್​ ಆಗಿದ್ದಂತೆ ತೋರ್ಪಡಿಸಿದ ಅವರು, ಪೆವಿಲಿಯನ್​ ಸೇರುತ್ತಿದ್ದಂತೆ ಅಲ್ಲಿದ್ದ ಕೂರ್ಚಿಗಳನ್ನು ಬ್ಯಾಟ್​ನಿಂದ ಚೆಲ್ಲಾಪಿಲ್ಲಿ ಮಾಡಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ಇನ್ನು, ಕೊಹ್ಲಿ ಔಟ್​ ಆದ ವಿಚಾರ ಕೂಡ ತುಂಬಾ ಚರ್ಚೆ ಆಗುತ್ತಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ 29 ಬಾಲ್​ಗಳಲ್ಲಿ 33 ರನ್​ ಗಳಿಸಿದ್ದರು. ಅವರ ಬ್ಯಾಟ್​ನಿಂದ ನಾಲ್ಕು ಬೌಂಡರಿ ಕೂಡ ಬಂದಿತ್ತು. ಅವರು ಔಟ್​ ಆಗಿದ್ದು 13ನೇ ಓವರ್​ನ ಮೊದಲ ಬಾಲ್​ನಲ್ಲಿ. ಇಂದು ಕೂಡ ಸೇಮ್​ ಪ್ಯಾಟರ್ನ್​ ರಿಪೀಟ್​ ಆಗಿದೆ.

ಇದನ್ನೂ ಓದಿ: Virat Kohli: ಇನ್ನೂ ಸರಿಯಾಗಿಲ್ಲ ವಿರಾಟ್​ ಕೊಹ್ಲಿ ಕಣ್ಣು; ಟಾಸ್​ ವೇಳೆ ಬಹಿರಂಗವಾಯ್ತು ವಿಚಾರ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್