AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒನ್​​ಪ್ಲಸ್​ ನಾರ್ಡ್ 2 5ಜಿ ಫೋನ್ ಸ್ಟೋಟ ಪ್ರಕರಣ; ಫೋನ್‌ ನಂತರ ಈ ಬಾರಿ ಚಾರ್ಜರ್ ಬ್ಲಾಸ್ಟ್​; ಕಂಪನಿ ಪ್ರತಿಕ್ರಿಯೆ ಏನಿತ್ತು ಗೊತ್ತಾ?

OnePlus Nord 2 5G: ಇದ್ದಕ್ಕಿದ್ದಂತೆಯೇ ಮೊಬೈಲ್ ಚಾರ್ಜರ್ ಸ್ಟೋಟಗೊಂಡಿತು ಬಳಕೆದಾರರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಆದರೆ ಮೊಬೈಲ್ ಚಾರ್ಜರ್ ಇದ್ದಕ್ಕಿದ್ದಂತೆ ಸ್ಟೋಟಗೊಂಡಿದ್ದರಿಂದ ಆಘಾತದಲ್ಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ.

ಒನ್​​ಪ್ಲಸ್​ ನಾರ್ಡ್ 2 5ಜಿ ಫೋನ್ ಸ್ಟೋಟ ಪ್ರಕರಣ; ಫೋನ್‌ ನಂತರ ಈ ಬಾರಿ ಚಾರ್ಜರ್ ಬ್ಲಾಸ್ಟ್​; ಕಂಪನಿ ಪ್ರತಿಕ್ರಿಯೆ ಏನಿತ್ತು ಗೊತ್ತಾ?
ಒನ್​​ಪ್ಲಸ್​ ನಾರ್ಡ್ 2 5ಜಿ ಫೋನ್ ಸ್ಟೋಟ ಪ್ರಕರಣ; ಫೋನ್‌ ನಂತರ ಈ ಬಾರಿ ಚಾರ್ಜರ್ ಬ್ಲಾಸ್ಟ್
TV9 Web
| Edited By: |

Updated on:Sep 29, 2021 | 11:41 AM

Share

ಇತ್ತೀಚೆಗಷ್ಟೇ ದೆಹಲಿಯ ಮೂಲದ ವಕೀಲರ ಒನ್​ಪ್ಲಸ್​ ನಾರ್ಡ್ 2 5ಜಿ ಸ್ಮಾರ್ಟ್ ಫೋನ್ ಜೇಬಿನಲ್ಲಿ ಸ್ಟೋಟಗೊಂಡ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಮತ್ತೋರ್ವ ಗ್ರಾಹಕರ ಮೊಬೈಲ್​ ಚಾರ್ಜರ್​ ಬ್ಲಾಸ್ಟ್​ ಆಗಿದೆ. ಈ ಬಾರಿ ಕೇರಳ ಮೂಲದ ಸಾಫ್ಟ್​ವೇರ್​ ಎಂಜಿನಿಯರ್ ಸ್ಮಾರ್ಟ್ ಫೋನ್ ಚಾರ್ಜರ್​ ಸ್ಟೋಟಗೊಂಡಿದೆ. ಈ ಕುರಿತಂತೆ ಜಿಮ್ಮಿ ಜೋಸ್ ಒನ್​ಪ್ಲಸ್​ ನಾರ್ಡ್ 2 5ಜಿ ಚಾರ್ಜರ್ ಇದ್ದಕ್ಕಿದ್ದಂತೆ ಸ್ಟೋಟಗೊಂಡಿತು ಎಂದು ಟ್ವಿಟರ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಇದ್ದಕ್ಕಿದ್ದಂತೆಯೇ ಮೊಬೈಲ್ ಚಾರ್ಜರ್ ಸ್ಟೋಟಗೊಂಡಿತು ಬಳಕೆದಾರರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಆದರೆ ಮೊಬೈಲ್ ಚಾರ್ಜರ್ ಇದ್ದಕ್ಕಿದ್ದಂತೆ ಸ್ಟೋಟಗೊಂಡಿದ್ದರಿಂದ ಆಘಾತದಲ್ಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಸಾಫ್ಟ್​ವೇರ್​ ಎಂಜಿನಿಯರ್ ಒನ್​ಪ್ಲಸ್​ ಕಂಪನಿಯನ್ನು ಸಂಪರ್ಕಿಸಿ ಮಾತನಾಡಿದಾಗ, ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡುವಂತೆ ಕಂಪನಿಯು ಕೇಳಿದೆ ಎಂದು ಅವರು ವಿವರಿಸಿದ್ದಾರೆ. ಸ್ಟೋಟಗೊಂಡ ಚಾರ್ಜರ್​ಅನ್ನು ಪರಿಶೀಲಿಸಿದ ಬಳಿಕ ವಿದ್ಯುತ್ ಏರಿಕೆಯಿಂದಾಗಿ ಈ ಸ್ಟೋಟ ಸಂಭವಿಸಿರಬಹುದು ಎಂದು ವಿವರಿಸಿದರು. ಬಹುಶಃ ನನ್ನ ಫೋನನ್ನು ಚಾರ್ಜ್ ಮಾಡಲು ನಾನು ವೋಲ್ಟೇಜ್ ಸ್ಟೆಬಿಲೈಜರ್ ಪಡೆಯಬೇಕು ಎಂದು ಬಳಕೆದಾರರು ಹೇಳಿದ್ದಾರೆ.

ಒನ್​ಪ್ಲಸ್ ನ್ಯೂಸ್ 18ಗೆ ಹೇಳಿದ ಹೇಳಿಕೆಯಲ್ಲಿ, ಇಂತಹ ವಿಷಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಜತೆಗೆ ಬಳಕೆದಾರರಿಗೆ ಬದಲಿ ಅವಕಾಶಗಳನ್ನು ನೀಡಲಾಗಿದೆ. ಸಮಸ್ಯೆಗಳು ಹೇಗೆ ಉದ್ಭವಿಸಬಹುದು ಎಂಬುದಕ್ಕೆ ಉತ್ತರಿಸಿದ ಕಂಪನಿಯು, ಒನ್​ಪ್ಲಸ್​ ಚಾರ್ಜರ್​ಗಳು ಅಂತರ್ನಿರ್ಮಿತ ಕೆಪಾಸಿಟರ್ಗಳನ್ನು ಹೊಂದಿದ್ದು, ಅದು ಪವರ್​ಅನ್ನು (ವಿದ್ಯುತ್​) ನಿಯಂತ್ರಿಸುತ್ತದೆ. ಜತೆಗೆ ಬೇಕಾದಷ್ಟು ಮಾತ್ರ ಸಂಗ್ರಹಿಸುತ್ತದೆ. ವೋಲ್ಟೇಜ್ ಏರಿಳಿತಗಳಿಂದ ಇಂತಹ ಘಟನೆಗಳು ನಡೆಯಬಹುದು ಎಂದು ಕಂಪನಿ ಉತ್ತರಿಸಿದೆ. ಬಳಕೆದಾರರು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸುವಂತೆ ಒನ್​ಪ್ಲಸ್​ ಬಳಕೆದಾರರಿಗೆ ಒತ್ತಾಯಿಸಿದೆ. ದೆಹಲಿ ಮೂಲದ ವಕೀಲರ ಒನ್​ಪ್ಲಸ್​ ನಾರ್ಡ್ 2 ಸ್ಮಾರ್ಟ್ ಫೋನ್ ಜೇಬಿನಲ್ಲಿ ಸ್ಟೋಟಗೊಂಡ ಕೆಲವೇ ವಾರಗಳಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿಯೂ ಸಹ ಬಳಕೆದಾರರು ಕಂಪನಿಯ ಸ್ಪಷ್ಟೀಕರಣದಿಂದ ತೃಪ್ತಿ ಹೊಂದಿಲ್ಲ.

ಈ ಹಿಂದೆ ದೆಹಲಿ ಮೂಲದ ವಕೀಲರು ತಮ್ಮ ಒನ್​ಪ್ಲಸ್​ ನಾರ್ಡ್ 2 5ಜಿ ಸ್ಟೋಟಗೊಂಡ ನಂತರ ಗಾಯಗೊಂಡರು. ನಂತರ ಒನ್​ಪ್ಲಸ್​ ದೆಹಲಿ ಮೂಲದ ವಕೀಲರಿಗೆ ಕಾನೂನು ನೋಟೀಸ್ ಕಳುಹಿಸಿತು. ಜತೆಗೆ ಸಾಮಾಜಿಕ ಮಾಧ್ಯಮದಿಂದ ಪೋಸ್ಟ್​ಗಳನ್ನು ತೆಗೆದು ಹಾಕುವಂತೆ ಕೇಳಿತು. ಈ ಹಿಂದೆ ಬೆಂಗಳೂರಿನಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಒನ್ ಪ್ಲಸ್ ನಾರ್ಡ್ 2 5ಜಿ ಮಹಿಳೆಯೋರ್ವರ ಬ್ಯಾಗ್​ನಲ್ಲಿ ಸ್ಪೋಟಗೊಂಡಿತ್ತು. ಇದು ಉತ್ಪಾದನೆ ಅಥವಾ ವಿನ್ಯಾಸದ ಸೋಷಗಳಿಂದಲ್ಲ ಎಂದು ಒನ್​ಪ್ಲಸ್​ ಹೇಳಿತ್ತು.

ಇದನ್ನೂ ಓದಿ:

ಕೋರ್ಟ್​ ಆವರಣದಲ್ಲೇ ವಕೀಲರ ಸ್ಮಾರ್ಟ್​ಫೋನ್ ಬ್ಲಾಸ್ಟ್: ಭಯ ಹುಟ್ಟಿಸಿದ ಒನ್​ಪ್ಲಸ್​ನ ಈ ಫೋನ್

(Another oneplus nord 2 5G blast This time user charging brick explodes company reactions full story)

Published On - 11:32 am, Wed, 29 September 21

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ