AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನೀರಿನಲ್ಲಿ ಬಿದ್ದ ಮೊಬೈಲ್ ಅನ್ನು ಅಕ್ಕಿಯಲ್ಲಿ ಇಡುವುದು ಉತ್ತಮವೇ?

ಕೆಲವೊಂದು ಬಾರಿ ಸ್ಮಾರ್ಟ್‌ಫೋನ್‌ಗಳು ಆಕಸ್ಮಿಕವಾಗಿ ನೀರಿನಲ್ಲಿ ಬೀಳುತ್ತವೆ. ಆಗ ಹಲವರು ತಮ್ಮ ಫೋನ್ ನೀರಿನಲ್ಲಿ ಬೀಳಿಸಿದ ತಕ್ಷಣ ಸರಿ ಉಂಟೊ ಇಲ್ಲವೋ ಎಂದು ನೋಡಲು ಆನ್ ಮಾಡುತ್ತಾರೆ. ಅಥವಾ ಕೆಲವರು ಫೋನನ್ನು ಆನ್ ಮಾಡದೆ ಅಕ್ಕಿಯಲ್ಲಿಟ್ಟರೆ ಸರಿ ಆಗುತ್ತದೆ ಎಂದು ನಂಬಿದ್ದಾರೆ. ಅಕ್ಕಿ ಫೋನ್‌ನಲ್ಲಿರುವ ತೇವಾಂಶವನ್ನೆಲ್ಲ ಹೀರಿಕೊಂಡು ಸರಿಯಾಗುತ್ತದೆ ಎಂಬ ವಿಡಿಯೋಗಳು ಯೂಟ್ಯೂಬ್‌ನಲ್ಲಿವೆ. ಆದರೆ, ಹೀಗೆ ಮಾಡುವ ಮುನ್ನ ಒಮ್ಮೆ ಈ ಸ್ಟೋರಿ ಓದಿ.

Tech Tips: ನೀರಿನಲ್ಲಿ ಬಿದ್ದ ಮೊಬೈಲ್ ಅನ್ನು ಅಕ್ಕಿಯಲ್ಲಿ ಇಡುವುದು ಉತ್ತಮವೇ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 28, 2024 | 2:28 PM

Share

ಫೋನ್ ನೀರಿನಲ್ಲಿ ಬೀಳುವುದು ಮತ್ತು ಒದ್ದೆಯಾಗುವುದು ಸಾಮಾನ್ಯ ಘಟನೆಗಳು. ಹೆಚ್ಚಿನವರಿಗೆ ಈ ರೀತಿಯ ತೊಂದರೆ ಅನುಭವಿಸುತ್ತಿರುತ್ತಾರೆ. ಅದಕ್ಕಾಗಿಯೇ ಈಗ ಬರುತ್ತಿರುವ ಹೆಚ್ಚಿನ ಸ್ಮಾರ್ಟ್ ಫೋನ್‌ಗಳು ನೀರಿನ ಪ್ರತಿರೋಧದ (ವಾಟರ್ ಪ್ರೂಫ್) ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಆದರೆ, ಫೋನ್ ನೀರಿನಲ್ಲಿ ಬಿದ್ದರೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಫೋನ್ ನೀರಿನಲ್ಲಿ ಬಿದ್ದರೆ ಏನು ಮಾಡಬೇಕೆಂದು ನೀವು ಮೊದಲು ತಿಳಿದುಕೊಳ್ಳಬೇಕು. ನಮ್ಮಲ್ಲಿ ಹೆಚ್ಚಿನವರು ಮಾಡುವ ಮೊದಲ ಕೆಲಸವೆಂದರೆ ಒದ್ದೆಯಾದ ಫೋನ್ ಅನ್ನು ಅಕ್ಕಿಗೆ ಹಾಕುವುದು. ಆದರೆ ಇದು ಸರಿಯಾದ ಕೆಲಸವೇ? ಇದು ಪ್ರಯೋಜನಕಾರಿಯಾಗಬಹುದೇ? ತಜ್ಞರು ಏನು ಹೇಳುತ್ತಾರೆಂದು ನೋಡೋಣ.

ಒದ್ದೆಯಾದ ಫೋನ್ ಅನ್ನು ಅಕ್ಕಿಯಲ್ಲಿ ಇಡಬಹುದೇ?:

ಫೋನ್ ನೀರಿನಲ್ಲಿ ಬಿದ್ದರೆ, ಮೊದಲನೆಯದಾಗಿ, ನೀವು ಬಟ್ಟೆಯಿಂದ ನೀರು ಮತ್ತು ತೇವಾಂಶವನ್ನು ಒರೆಸಬೇಕು. ಅದರ ನಂತರ, ಫೋನ್ ಅನ್ನು ಕಂಟೇನರ್ ಅಥವಾ ಬ್ಯಾಗ್​ನಲ್ಲಿ ಸಂಗ್ರಹಿಸುವುದು ಮುಖ್ಯವಾಗಿದೆ. ಇದನ್ನು ಅನ್ನದಲ್ಲಿ ಇಟ್ಟುಕೊಳ್ಳುವುದರಿಂದ ಫೋನ್‌ನಲ್ಲಿರುವ ನೀರು ಸಂಪೂರ್ಣವಾಗಿ ಹೀರಲ್ಪಡುತ್ತದೆ ಎಂದು ಅನೇಕರು ನಂಬಿದ್ದಾರೆ. ಆದರೆ ಫೋನ್ ಅನ್ನು ಅಕ್ಕಿಯೊಳಗೆ ಕನಿಷ್ಠ ಆರು ಗಂಟೆಗಳ ಕಾಲ ಸಂಗ್ರಹಿಸಬೇಕು ಎಂಬ ಮಾತಿದೆ.

ಆದಾಗ್ಯೂ, ಈ ವರ್ಷದ ಆರಂಭದಲ್ಲಿ ಆ್ಯಪಲ್ ಕಂಪನಿ ತನ್ನ ಐಫೋನ್ ಬಳಕೆದಾರರಿಗೆ ತಮ್ಮ ಫೋನ್‌ಗಳನ್ನು ಅಕ್ಕಿಯಲ್ಲಿ ಸಂಗ್ರಹಿಸದಂತೆ ಸಲಹೆಯನ್ನು ನೀಡಿತು. ಇದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ ಎಂದು ಆ್ಯಪಲ್ ಎಚ್ಚರಿಸಿದೆ. ಫೋನ್‌ಗೆ ನೀರು ಬರದಂತೆ ಅಕ್ಕಿಯಲ್ಲಿ ಸಂಗ್ರಹಿಸಿದರೆ, ಅಕ್ಕಿಯ ಸಣ್ಣ ಕಣಗಳು ಫೋನ್‌ಗೆ ಪ್ರವೇಶಿಸಿ ಫೋನ್‌ಗೆ ಹಾನಿಯಾಗುವ ಸಾಧ್ಯತೆ ಹೆಚ್ಚು ಎಂದು ಐಫೋನ್ ತಯಾರಕ ಆ್ಯಪಲ್ ಹೇಳಿದೆ. ಆದಾಗ್ಯೂ, ಇತರ ಯಾವುದೇ ಪ್ರಮುಖ ಆಂಡ್ರಾಯ್ಡ್ ಫೋನ್ ತಯಾರಕರು ಈ ನಿಟ್ಟಿನಲ್ಲಿ ಎಚ್ಚರಿಕೆಯನ್ನು ನೀಡದ ಕಾರಣ ಅನೇಕರು ಇನ್ನೂ ಈ ಅಭ್ಯಾಸವನ್ನು ಅನುಸರಿಸುತ್ತಿದ್ದಾರೆ.

ಇದನ್ನೂ ಓದಿ: 200MP ಕ್ಯಾಮೆರಾ ಹೊಂದಿರುವ ಈ AI ಫೋನ್ ಮೇಲೆ ಬರೋಬ್ಬರಿ ಶೇ. 51 ರಷ್ಟು ಡಿಸ್ಕೌಂಟ್

ಫೋನ್ ನೀರಿನಲ್ಲಿ ಬಿದ್ದರೆ ಮೊದಲು ಏನು ಮಾಡಬೇಕು?:

ನೀರಿನಲ್ಲಿ ಬಿದ್ದ ಫೋನ್ ಅನ್ನು ತಕ್ಷಣ ಆನ್ ಮಾಡಲು ಎಂದಿಗೂ ಪ್ರಯತ್ನಿಸಬೇಡಿ. ನೀರಿನಲ್ಲಿ ಬಿದ್ದ ನಂತರ ಫೋನ್ ಆಫ್ ಆಗದಿದ್ದರೆ, ತಕ್ಷಣ ಅದನ್ನು ಆಫ್ ಮಾಡಿ.

ಫೋನ್ ಬಟನ್‌ಗಳನ್ನು ಅನಗತ್ಯವಾಗಿ ಒತ್ತಬೇಡಿ. ಅಲ್ಲದೆ, ನೀರನ್ನು ತಪ್ಪಿಸಲು ಫೋನ್ ಅನ್ನು ಅಲ್ಲಾಡಿಸಬೇಡಿ ಅಥವಾ ಸ್ಪ್ಲಾಶ್ ಮಾಡಬೇಡಿ.

ಫೋನ್ ಆಫ್ ಮಾಡಿದ ನಂತರ SIM ಕಾರ್ಡ್, ಮೈಕ್ರೋ SD ಕಾರ್ಡ್ ಇತ್ಯಾದಿಗಳನ್ನು ತೆಗೆದುಹಾಕಿ.

ಫೋನ್‌ನಿಂದ ನೀರನ್ನು ಹೊರಹಾಕಲು ಚಾರ್ಜರ್ ಪಾಯಿಂಟ್‌ಗೆ ಗಾಳಿ ಹಾಕುವುದು, ಊದುವುದು ಮಾಡಬೇಡಿ. ಇದರಿಂದ ನೀರು ಇನ್ನಷ್ಟು ಒಳಗೆ ಹೋಗುತ್ತಿದೆ.

ನೀವು ಬಟ್ಟೆಯಿಂದ ಫೋನ್‌ನಲ್ಲಿನ ನೀರನ್ನು ಒರೆಸಬಹುದು. ಹೇರ್ ಡ್ರೈಯರ್, ಮೈಕ್ರೋವೇವ್ ಮೂಲಕ ಫೋನ್ ಅನ್ನು ಬಿಸಿಮಾಡಲು ಎಂದಿಗೂ ಪ್ರಯತ್ನಿಸಬೇಡಿ.

ಫೋನ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅದನ್ನು ಮೊಬೈಲ್ ರಿಪೇರಿ ಕೇಂದ್ರಗಳು ಅಥವಾ ಶೋರೂಮ್‌ಗಳಿಗೆ ಕೊಂಡೊಯ್ಯಿರಿ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ