AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಬೈಪಾಸ್ ಚಾರ್ಜಿಂಗ್ ಎಂದರೇನು?: ಈ ಆಯ್ಕೆ ನಿಮ್ಮ ಫೋನ್​ನಲ್ಲೂ ಇದೆಯೇ?

ಇತ್ತೀಚಿನ ದಿನಗಳಲ್ಲಿ, ಸ್ಮಾರ್ಟ್‌ಫೋನ್‌ಗಳಲ್ಲಿ ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಪರಿಚಯಿಸುವ ನಿಜವಾದ ಉದ್ದೇಶವೇನು?. ಇದು ಸ್ಮಾರ್ಟ್‌ಫೋನ್ ಬ್ಯಾಟರಿಯ ಮೇಲೆ ಯಾವ ಪರಿಣಾಮ ಬೀರುತ್ತದೆ? ಮತ್ತು ಇದು ತುಂಬಾ ಪರಿಣಾಮಕಾರಿಯಾಗಿದ್ದರೆ, ಭವಿಷ್ಯದಲ್ಲಿ ಫೋನ್ ಬ್ಯಾಟರಿಗಳ ಅಗತ್ಯವು ಕಣ್ಮರೆಯಾಗುತ್ತದೆಯೇ?. ಈ ಪ್ರಶ್ನೆಗಳಿಗೆ ಉತ್ತರಗಳನ್ನು ನೋಡುವುದಾದರೆ...

Tech Tips: ಬೈಪಾಸ್ ಚಾರ್ಜಿಂಗ್ ಎಂದರೇನು?: ಈ ಆಯ್ಕೆ ನಿಮ್ಮ ಫೋನ್​ನಲ್ಲೂ ಇದೆಯೇ?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 24, 2024 | 11:37 AM

Share

Bypass Charging Smartphones: ಸ್ಮಾರ್ಟ್‌ಫೋನ್‌ಗಳು ಈಗ ನಮ್ಮ ಜೀವನದ ಅತ್ಯಗತ್ಯ ಭಾಗವಾಗಿದೆ. ಕಾಲಕ್ಕೆ ಅನುಗುಣವಾಗಿ ಇದು ಕೂಡ ನಮ್ಮ ಜೀವನಕ್ಕೆ ಹೊಂದಿಕೊಳ್ಳಲು ಅನೇಕ ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ, ಸ್ಮಾರ್ಟ್‌ಫೋನ್‌ಗಳಲ್ಲಿ ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಇದು ಮೊಬೈಲ್ ತಂತ್ರಜ್ಞಾನದಲ್ಲಿ ಪ್ರಮುಖ ಸುಧಾರಣೆ ಎಂದು ಪರಿಗಣಿಸಲಾಗಿದೆ. ಈ ವೈಶಿಷ್ಟ್ಯವು ವಿಶೇಷವಾಗಿ ದುಬಾರಿ ಮತ್ತು ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಕಂಡುಬರುತ್ತದೆ.

ಆದರೆ ಪ್ರಶ್ನೆಯೆಂದರೆ, ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಪರಿಚಯಿಸುವ ನಿಜವಾದ ಉದ್ದೇಶವೇನು?. ಇದು ಸ್ಮಾರ್ಟ್‌ಫೋನ್ ಬ್ಯಾಟರಿಯ ಮೇಲೆ ಯಾವ ಪರಿಣಾಮ ಬೀರುತ್ತದೆ? ಮತ್ತು ಇದು ತುಂಬಾ ಪರಿಣಾಮಕಾರಿಯಾಗಿದ್ದರೆ, ಭವಿಷ್ಯದಲ್ಲಿ ಫೋನ್ ಬ್ಯಾಟರಿಗಳ ಅಗತ್ಯವು ಕಣ್ಮರೆಯಾಗುತ್ತದೆಯೇ?. ಈ ಪ್ರಶ್ನೆಗಳಿಗೆ ಉತ್ತರಗಳನ್ನು ನೋಡುವುದಾದರೆ…

ಬೈಪಾಸ್ ಚಾರ್ಜಿಂಗ್ ಎಂದರೇನು?:

ಡಿಸೆಂಬರ್ 2024 ರಲ್ಲಿ, ಪಿಕ್ಸೆಲ್ ಡ್ರಾಪ್ ಸಾಫ್ಟ್‌ವೇರ್‌ನಲ್ಲಿ ಪಿಕ್ಸೆಲ್ ಸರಣಿಯ ಫೋನ್‌ಗಳಿಗೆ ಹೊಸ ಚಾರ್ಜಿಂಗ್ ತಂತ್ರಜ್ಞಾನವನ್ನು ಗೂಗಲ್ ಪರಿಚಯಿಸಿತು. ಇದು ಬೈಪಾಸ್ ಚಾರ್ಜಿಂಗ್ ಆಗಿದೆ, ಇದು ಪವರ್ ಅಡಾಪ್ಟರ್‌ನಿಂದ ನೇರವಾಗಿ ಸ್ಮಾರ್ಟ್‌ಫೋನ್ ಅನ್ನು ಪವರ್ ಮಾಡುತ್ತದೆ. ಅಂದರೆ ಬೈಪಾಸ್ ಚಾರ್ಜಿಂಗ್ ಹೊಂದಿರುವ ಫೋನ್ ಅನ್ನು ನೀವು ಚಾರ್ಜ್ ಮಾಡಿದಾಗ ವಿದ್ಯುತ್ ನೇರವಾಗಿ ಬ್ಯಾಟರಿಗೆ ಹೋಗುವ ಬದಲು, ಅಡಾಪ್ಟರ್‌ಗೆ ಹೋಗಿ ಅಲ್ಲಿಂದ ನೇರವಾಗಿ ಫೋನ್ ಚಾರ್ಜ್ ಆಗುತ್ತದೆ.

ಬೈಪಾಸ್ ಚಾರ್ಜಿಂಗ್ ಕಾರಣ, ಸ್ಮಾರ್ಟ್​ಫೋನ್ ಬ್ಯಾಟರಿಯಿಂದ ಶಕ್ತಿಯನ್ನು ತೆಗೆದುಕೊಳ್ಳುವುದಿಲ್ಲ, ಬದಲಾಗಿ ಇದು ಪವರ್ ಅಡಾಪ್ಟರ್​ನಿಂದ ನೇರವಾಗಿ ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಈ ವೈಶಿಷ್ಟ್ಯವು ಎರಡು ಪ್ರಯೋಜನಗಳನ್ನು ಹೊಂದಿದೆ – ಇದು ಬ್ಯಾಟರಿ ಬಿಸಿಯಾಗುವುದನ್ನು ತಡೆಯುತ್ತದೆ ಮತ್ತು ಗೇಮ್​ಗಳನ್ನು ಆಡುವಾಗ ಫೋನ್ ಅನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

ಸಾಮಾನ್ಯ ಫೋನ್‌ನಲ್ಲಿ ಏನಾಗುತ್ತದೆ?:

ಸಾಮಾನ್ಯ ಸ್ಮಾರ್ಟ್‌ಫೋನ್‌ ಅನ್ನು ಚಾರ್ಜ್ ಮಾಡುವಾಗ, ವಿದ್ಯುತ್ ಮೊದಲು ಬ್ಯಾಟರಿಗೆ ಹೋಗುತ್ತದೆ. ನಂತರ ಅದನ್ನು ಪ್ರೊಸೆಸರ್ ಮತ್ತು ಡಿಸ್​ಪ್ಲೇಯಂತಹ ವಿಭಿನ್ನ ಘಟಕಗಳಿಂದ ಎಳೆಯಲಾಗುತ್ತದೆ. ಬೈಪಾಸ್ ಚಾರ್ಜಿಂಗ್ ಮೋಡ್‌ನಲ್ಲಿ, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಪಿಸಿಗಳಲ್ಲಿ ಬಳಸುವಂತೆ, ಅಗತ್ಯವಿರುವ ಶಕ್ತಿಯನ್ನು ನೇರವಾಗಿ ಪವರ್ ಅಡಾಪ್ಟರ್‌ನಿಂದ ಪಡೆಯಲಾಗುತ್ತದೆ.

ಇದನ್ನೂ ಓದಿ: ವಾಟ್ಸ್​ಆ್ಯಪ್ ಬಳಸುತ್ತಿರುವವರಿಗೆ ಶಾಕ್: ಜನವರಿ 1 ರಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್‌ ಬಂದ್

ಭವಿಷ್ಯದಲ್ಲಿ ಫೋನ್ ಬ್ಯಾಟರಿ ಬೇಡವೇ?:

ವಿವಿಧ ಕಂಪನಿಗಳ ಫೋನ್‌ಗಳಲ್ಲಿ ಬೈಪಾಸ್ ಚಾರ್ಜಿಂಗ್ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಪಿಕ್ಸೆಲ್ ಸ್ಮಾರ್ಟ್‌ಫೋನ್ 80 ಪ್ರತಿಶತದಷ್ಟು ಚಾರ್ಜ್ ಮಾಡಿದ ನಂತರವೇ ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯವು ಕಾರ್ಯನಿರ್ವಹಿಸುತ್ತದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ S24 Ultra ಅಂತಹ ಫೋನ್​ನಲ್ಲಿ ಇದು ನಿರ್ಬಂಧವನ್ನು ಹೊಂದಿಲ್ಲ, ಆದರೆ ವಿಡಿಯೋ ಗೇಮ್​ಗಳನ್ನು ಆಡುವಾಗ ಮಾತ್ರ ಅದನ್ನು ಆನ್ ಮಾಡಬಹುದು. ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯವು ಫೋನ್‌ನಲ್ಲಿ ಬ್ಯಾಟರಿಯ ಅಗತ್ಯವನ್ನು ನಿವಾರಿಸುವುದಿಲ್ಲ. ಸದ್ಯಕ್ಕೆ ಬ್ಯಾಟರಿಯ ಅವಶ್ಯಕತೆ ಬೇಕಾಗುತ್ತದೆ.

ಇದೇ ರೀತಿಯ ವೈಶಿಷ್ಟ್ಯವನ್ನು ಐಕ್ಯೂ 13 ರಲ್ಲಿ ಒದಗಿಸಲಾಗಿದೆ, ಇದು ನೇರ ವಿದ್ಯುತ್ ಪೂರೈಕೆಯನ್ನು ಒದಗಿಸುತ್ತದೆ. ಬೈಪಾಸ್ ಚಾರ್ಜಿಂಗ್ ವೈಶಿಷ್ಟ್ಯವು ಎಲ್ಲರಿಗೂ ಲಭ್ಯವಿಲ್ಲ. ಈ ವೈಶಿಷ್ಟ್ಯವು ವಿಶೇಷವಾಗಿ ಗೇಮಿಂಗ್ ಸ್ಮಾರ್ಟ್​ಫೋನ್​ನಲ್ಲಿ ನೀಡಲಾಗಿದೆ. ಗೇಮಿಂಗ್ ಆಡುವಾಗ ಚಾರ್ಜ್ ಮಾಡುವುದರಿಂದ ಫೋನ್ ಬಿಸಿಯಾಗುತ್ತದೆ. ಆದ್ದರಿಂದ ಚಾರ್ಜಿಂಗ್ ಸಮಯದಲ್ಲಿ ಗೇಮಿಂಗ್ ಮೇಲೆ ಯಾವುದೇ ಗಂಭೀರ ತಾಪನದ ಅಪಾಯವನ್ನು ಉಂಟುಮಾಡದಂತೆ ಇದನ್ನು ಬಳಸಲಾಗುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ಗೊಬ್ಬರಕ್ಕಾಗಿ ಪರದಾಡುತ್ತಿರುವ ಅನ್ನದಾತರು, ಅಂಗಡಿಗಳ ಮುಂದೆ ಉದ್ದುದ್ದ ಸಾಲ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ
ರಾಹುಲ್ ಗಾಂಧಿ ಪ್ರಾಮಾಣಿಕತೆಗೆ ಅಭಿನಂದನೆ ಸಲ್ಲಿಸಬೇಕು: ಈಶ್ವರಪ್ಪ