Upendra
ಉಪೇಂದ್ರ ಅವರು ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ. ಅವರು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದು, ತೆಲುಗು ಹಾಗೂ ತಮಿಳು ರಂಗದಲ್ಲೂ ಹೆಸರು ಮಾಡಿದ್ದಾರೆ. ಅವರು ರಾಜಕೀಯಕ್ಕೂ ಕಾಲಿಟ್ಟಿದ್ದು, ‘ಪ್ರಜಾಕೀಯ’ ಹೆಸರಿನ ಪಕ್ಷ ಆರಂಭಿಸಿದ್ದಾರೆ. ಅವರು ‘ಎ’, ‘ಓಂ’ ‘ಉಪೇಂದ್ರ ರೀತಿಯ ಸಿನಿಮಾಗಳನ್ನು ನಿರ್ದೇಶನ ಮಾಡಿ ಖ್ಯಾತಿ ಪಡೆದಿದ್ದಾರೆ. ಅವರ ನಿರ್ದೇಶನದ, ಶಿವರಾಜ್ಕುಮಾರ್ ನಟನೆಯ ‘ಓಂ’ ಸಿನಿಮಾ ನೂರಾರು ಬಾರಿ ಥಿಯೇಟರ್ ನಲ್ಲಿ ರೀ-ರಿಲೀಸ್ ಆಗಿ ದಾಖಲೆ ಬರೆದಿತ್ತು. ಉಪೇಂದ್ರ ಅವರ ಆಲೋಚನೆಗಳು ಭಿನ್ನವಾಗಿ ಇರುತ್ತವೆ. ಈ ಕಾರಣಕ್ಕೆ ಅವರ ಸಿನಿಮಾಗಳು ಜನರಿಗೆ ಇಷ್ಟ ಆಗುತ್ತವೆ. ಉಪೇಂದ್ರ ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಪ್ರಿಯಾಂಕ ಅವರನ್ನು ಉಪೇಂದ್ರ ಮದುವೆ ಆಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳು
ಇನ್ನೂ ಹೆಚ್ಚು ಓದಿ‘ಟಾಕ್ಸಿಕ್’ ಸಿನಿಮಾ ನೋಡಿ ಮೆಚ್ಚಿಕೊಂಡ ಸುದೀಪ್; ಕಿಚ್ಚನ ಚಪ್ಪಾಳೆ ಪಡೆದ ಯಶ್
ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದ ‘ಟಾಕ್ಸಿಕ್’ ಸಿನಿಮಾಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸಾಥ್ ನೀಡುತ್ತಿದ್ದಾರೆ. ಯಶ್ ಮಾಡಿರುವ ಈ ಬಿಗ್ ಬಜೆಟ್ ಪ್ರಯತ್ನಕ್ಕೆ ಅನೇಕರು ಬೆಂಬಲ ನೀಡುತ್ತಿದ್ದಾರೆ. ಉಪೇಂದ್ರ, ಆರ್. ಚಂದ್ರು ಬಳಿಕ ಕಿಚ್ಚ ಸುದೀಪ್ ಅವರು ‘ಟಾಕ್ಸಿಕ್’ ಸಿನಿಮಾದ ಪರವಾಗಿ ನಿಂತಿದ್ದಾರೆ.
- Madan Kumar
- Updated on: Aug 28, 2026
- 8:10 pm
‘ಟಾಕ್ಸಿಕ್’ ನೋಡಿ ಮೆಚ್ಚಿಕೊಂಡ ಉಪೇಂದ್ರ; ಆದರೆ ನೆಟ್ಟಿಗರ ಅಭಿಪ್ರಾಯವೇ ಬೇರೆ
‘ಟಾಕ್ಸಿಕ್’ ಸಿನಿಮಾಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇಂಥ ಸಂದರ್ಭದಲ್ಲಿ ಉಪೇಂದ್ರ ಅವರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಆದರೆ ಉಪೇಂದ್ರ ಅವರ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Aug 28, 2026
- 3:44 pm
ಉಪೇಂದ್ರ ನಟನೆಯ ‘ನೆಕ್ಸ್ಟ್ ಲೆವೆಲ್’ ಸಿನಿಮಾಗೆ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿ
ಉಪೇಂದ್ರ ಅವರ ಹೊಸ ಸಿನಿಮಾಗೆ ಮಾಲಾಶ್ರೀ ಮಗಳು ಆರಾಧನಾ ರಾಮ್ ಅವರು ನಾಯಕಿ ಆಗಿದ್ದಾರೆ. ಈ ಸಿನಿಮಾಗೆ ‘ನೆಕ್ಸ್ಟ್ ಲೆವೆಲ್’ ಎಂದು ಶೀರ್ಷಿಕೆ ಇಡಲಾಗಿದೆ. ಅದ್ದೂರಿಯಾಗಿ ಮುಹೂರ್ತ ಮಾಡಲಾಗಿದೆ. ತರುಣ್ ಶಿವಪ್ಪ ಅವರ ನಿರ್ಮಾಣ, ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
- Madan Kumar
- Updated on: Aug 13, 2026
- 8:16 pm
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ ಉಪೇಂದ್ರ
ನಟಿ ಪ್ರಿಯಾಂಕಾ ಉಪೇಂದ್ರ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಆದರೂ ಕೂಡ ಕೆಲವು ಹೀರೋಗಳ ಜೊತೆ ನಟಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆ ಬಗ್ಗೆ ಅವರು ಮಾತನಾಡಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು ಆ ದಿನಗಳನ್ನು ನೆನಪಿಸಿಕೊಂಡರು. ಪ್ರಿಯಾಂಕಾ ಉಪೇಂದ್ರ ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
- Mangala RR
- Updated on: Aug 3, 2026
- 8:13 pm
ಅಂದು ಶಿವಣ್ಣ, ಇಂದು ಧನುಷ್; ‘ಓಂ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಘೋಷಣೆ
‘ಓಂ’ ಸಿನಿಮಾದ ಹೆಸರು ಕೇಳಿದರೆ ಸಿನಿಪ್ರಿಯರಿಗೆ ಥ್ರಿಲ್ ಆಗುತ್ತದೆ. ಆ ಚಿತ್ರದ ಶೀರ್ಷಿಕೆಗೆ ಇರುವ ಪವರ್ ಅಂಥದ್ದು. ನಿರ್ದೇಶಕ ಉಪೇಂದ್ರ ಮತ್ತು ನಟ ಶಿವರಾಜ್ಕುಮಾರ್ ಅವರ ಕಾಂಬಿನೇಷನ್ನಲ್ಲಿ ಬಂದ ಆ ಸಿನಿಮಾದ ಕ್ರೇಜ್ ಸಾಮಾನ್ಯದ್ದಲ್ಲ. ‘ಓಂ’ ಶೀರ್ಷಿಕೆ ಈಗ ಕಾಲಿವುಡ್ನಲ್ಲಿ ಕೂಡ ಸದ್ದು ಮಾಡುತ್ತಿದೆ.
- Madan Kumar
- Updated on: Jun 18, 2026
- 10:43 pm
ಉಪೇಂದ್ರ ಅಣ್ಣನ ಮಗ ನಿರಂಜನ್ ನಿಶ್ಚಿತಾರ್ಥ; ಹುಡುಗಿ ಬಗ್ಗೆ ಇಲ್ಲಿದೆ ಮಾಹಿತಿ
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಮನೆಮಾಡಿದೆ. ಅವರ ಅಣ್ಣನ ಮಗ, ನಟ ನಿರಂಜನ್ ಸುಧೀಂದ್ರ ಅವರು ವೈದ್ಯೆ ಸಂಜನಾ ಬಿ ರಾಜ್ ಅವರೊಂದಿಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಈ ಸಮಾರಂಭದಲ್ಲಿ ಆಪ್ತರು ಮಾತ್ರ ಭಾಗಿಯಾಗಿದ್ದರು. ಸಂಜನಾ ಬಿ ರಾಜ್ ಸ್ತ್ರೀರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
- Rajesh Duggumane
- Updated on: May 26, 2026
- 7:25 am
‘ಉಪೇಂದ್ರ’ ಸಿನಿಮಾ ಮರುಬಿಡುಗಡೆ: ಸರಿಯಾದ ಉತ್ತರ ನೀಡಿದರೆ 1 ಕೋಟಿ ರೂ. ಬಹುಮಾನ
‘ಉಪೇಂದ್ರ’ ಸಿನಿಮಾ ಮೂಲಕ ಬುದ್ಧಿವಂತ ಪ್ರೇಕ್ಷಕರಿಗೆ ಪ್ರಶ್ನೆ ಕೇಳಲಾಗುತ್ತದೆ. ಸರಿ ಉತ್ತರ ನೀಡಿದರೆ ಕೋಟ್ಯಂತರ ರೂಪಾಯಿ ಬಹುಮಾನ ಸಿಗಲಿದೆ. ಕೋಟ್ಯಾಧಿಪತಿ ಆಗುವ ಅವಕಾಶ ಯಾರಿಗೆ ಸಿಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ‘ಉಪೇಂದ್ರ’ ಸಿನಿಮಾದ ಮರು ಬಿಡುಗಡೆ ಪ್ರಯುಕ್ತ ಈ ಆಫರ್ ನೀಡಲಾಗಿದೆ.
- Madan Kumar
- Updated on: May 11, 2026
- 7:23 pm
‘ಕತ್ತರಿಗುಪ್ಪೆಯಲ್ಲಿ ನಾನು ಚುನಾವಣೆಗೆ ನಿಲ್ಲಬಹುದು’: ಏನಿದು ಉಪೇಂದ್ರ ಪ್ಲ್ಯಾನ್?
ನಟ ಉಪೇಂದ್ರ ಅವರು ಹೊಸ ಆಲೋಚನೆಗಳ ಮೂಲಕ ಹೆಸರಾದವರು. ಈಗ ಅವರು ಪ್ರಜಾಕೀಯದ ಮೂಲಕ ಮತ್ತೆ ಜನರ ಎದುರು ಬಂದಿದ್ದಾರೆ. ತಮ್ಮ ಪಕ್ಷದ ಹೊಸ ಆ್ಯಪ್ ಶುರು ಮಾಡಿದ್ದಾರೆ. ಆದರೆ ಈವರೆಗೂ ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರೇ ಮಾತನಾಡಿದ್ದಾರೆ.
- Madan Kumar
- Updated on: Apr 1, 2026
- 10:45 pm
ಉಪೇಂದ್ರ ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ರಿಯಲ್ ಸ್ಟಾರ್
ನಟ, ನಿರ್ದೇಶಕ ಉಪೇಂದ್ರ ಅವರು ಮತ್ತೆ ಪ್ರಜಾಕೀಯ ಕೆಲಸಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇಂದು (ಏಪ್ರಿಲ್ 1) ಅವರು ‘ದಿ ರಿಯಲ್ ಪ್ರಜಾಕೀಯ’ ಆ್ಯಪ್ ಬಿಡುಗಡೆ ಮಾಡಿದರು. ಈ ವೇಳೆ ಅವರು ಸುದ್ದಿಗೋಷ್ಠಿ ನಡೆಸಿದರು. ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡಿದರು. ವಿಡಿಯೋ ನೋಡಿ..
- Madan Kumar
- Updated on: Apr 1, 2026
- 8:32 pm
Upendra on April Fool Day: ಏಪ್ರಿಲ್ ಮೂರ್ಖರ ದಿನವಲ್ಲ, ಬುದ್ಧಿವಂತರ ದಿನ: ಉಪೇಂದ್ರ
Upendra Press Meet on April Fool Day: ಏಪ್ರಿಲ್ 1ರಂದು ಮೂರ್ಖರ ದಿನ ಎಂದು ಆಚರಣೆ ಮಾಡಲಾಗುತ್ತದೆ. ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸ ಇಂದು ಆಗುತ್ತದೆ. ಆದರೆ, ಈ ದಿನವನ್ನು ಬುದ್ಧಿವಂತರ ದಿನವನ್ನಾಗಿ ಆಚರಿಸಬೇಕು ಎಂದು ಉಪೇಂದ್ರ ಕೋರಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
- Rajesh Duggumane
- Updated on: Apr 1, 2026
- 12:48 pm
ಥ್ರಿಲ್ಲರ್ ಮಂಜು, ಉಪೇಂದ್ರ ನಡುವಿನ 35 ವರ್ಷಗಳ ಸ್ನೇಹ ಎಂಥದ್ದು ನೋಡಿ
ಉಪೇಂದ್ರ ಮತ್ತು ಥ್ರಿಲ್ಲರ್ ಮಂಜು ಒಟ್ಟಿಗೆ ಪ್ರಯಾಣ ಮಾಡಿದ್ದಾರೆ. ಎಲ್ಲಿಗೆ ಎಂಬುದನ್ನು ಮಂಜು ವಿವರಿಸಿದ್ದಾರೆ. ಆತ್ಮೀಯ ಆಹ್ವಾನವನ್ನು ಸ್ವೀಕರಿಸಿ ಬಂದಿದ್ದಕ್ಕೆ ಉಪೇಂದ್ರ ಅವರಿಗೆ ಥ್ರಿಲ್ಲರ್ ಮಂಜು ಧನ್ಯವಾದ ತಿಳಿಸಿದ್ದಾರೆ. ‘ಉಪೇಂದ್ರ ಅವರು ನನ್ನ ಆತ್ಮೀಯರು, ಸ್ನೇಹಿತರು, ನನ್ನ ಸಹೋದರ. ಎಲ್ಲಕ್ಕಿಂತ ಮಿಗಿಲಾಗಿ ಒಳ್ಳೆಯ ವ್ಯಕ್ತಿ’ ಎಂದು ಥ್ರಿಲ್ಲರ್ ಮಂಜು ಹೇಳಿದ್ದಾರೆ.
- Madan Kumar
- Updated on: Feb 6, 2026
- 10:32 pm
ಉಪೇಂದ್ರ, ರಮ್ಯಾ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾ ಜನವರಿ 30ಕ್ಕೆ ರಿಲೀಸ್
ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ರಕ್ತ ಕಾಶ್ಮೀರ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ರಮ್ಯಾ, ಉಪೇಂದ್ರ, ದೊಡ್ಡಣ್ಣ, ಕುರಿ ಪ್ರತಾಪ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ದೇಶಭಕ್ತಿ ಕಥಾಹಂದರ ಹೊಂದಿರುವ ಈ ಸಿನಿಮಾ ಜನವರಿ 30ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದೆ.
- Madan Kumar
- Updated on: Jan 26, 2026
- 3:18 pm