AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಡಾಕ್ಟರ್ ಆದ ಪುಟ್ಟ ಹುಡುಗ! ಅವರ ಮನೆ ನಾಯಿನೇ ಅವನಿಗೆ ಪೇಶೆಂಟ್; ಹೇಗಿದೆ ನೋಡಿ ಈ ಜೋಡಿ

ಒಂದು ಮುದ್ದಾದ ವೀಡಿಯೋದಲ್ಲಿ ಪುಟ್ಟ ಹುಡುಗ ವೈದ್ಯನಂತೆ ನಟಿಸುತ್ತಾ ತನ್ನ ನಾಯಿಯ ತಪಾಸಣೆ ಮಾಡುತ್ತಿದ್ದಾನೆ. ಇವರಿಬ್ಬರ ಜೋಡಿ ನೋಡಿದವರು ಮಂತ್ರಮುಗ್ಧ ರಾಗಿದ್ದಾರೆ. ವಿಡಿಯೋ ಮುಗಿಯೋದೇ ಗೊತ್ತಾಗಲ್ಲ ಎಷ್ಟು ಚೆನ್ನಾಗಿದೆ ಈ ವಿಡಿಯೋ.

Viral Video: ಡಾಕ್ಟರ್ ಆದ ಪುಟ್ಟ ಹುಡುಗ! ಅವರ ಮನೆ ನಾಯಿನೇ ಅವನಿಗೆ ಪೇಶೆಂಟ್; ಹೇಗಿದೆ ನೋಡಿ ಈ ಜೋಡಿ
Viral VideoImage Credit source: Twitter
ಪ್ರೀತಿ ಭಟ್​, ಗುಣವಂತೆ
| Edited By: |

Updated on:Apr 27, 2023 | 7:04 PM

Share

ನೀವು ಬೆಳಿಗ್ಗೆಯಿಂದ ಸಪ್ಪಗಿದ್ದೀರಾ? ಹಾಗಾದರೆ ಈ ವಿಡಿಯೋ ನೋಡಿ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವೀಡಿಯೋದಲ್ಲಿ ಒಂದು ಪುಟ್ಟ ಹುಡುಗ ತುಂಬಾ ಚೆನ್ನಾಗಿ ವೈದ್ಯರಂತೆ ನಟಿಸುತ್ತಾ ತಮ್ಮ ಮನೆಯ ನಾಯಿಯ ತಪಾಸಣೆ ಮಾಡುತ್ತಿದ್ದಾನೆ. ನೀವು ಈ ವೀಡಿಯೋವನ್ನು ನೋಡಿ ಮುಗಿಸುವುದರೊಳಗೆ ನಿಮ್ಮ ಮುಖದ ಮೇಲೆ ಒಂದು ವಿಶಾಲವಾದ ನಗು ಮೂಡದೆ ಇರೋದಕ್ಕೆ ಸಾಧ್ಯನೇ ಇಲ್ಲ.

ಈ ಮುದ್ದಾದ ವೀಡಿಯೊವನ್ನು @buitengebieden ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ನಾಯಿ ಮತ್ತು ಮಗು ಆಟವಾಡುವ ಪ್ರದೇಶದಲ್ಲಿ ಕುಳಿತಿರುವುದನ್ನು ತೋರಿಸಲಾಗುತ್ತದೆ. ಹುಡುಗ ಬೆಂಚಿನ ಮೇಲಿ ಕುಳಿತುಕೊಂಡಿದ್ದು ನಾಯಿ ನೆಲದ ಮೇಲೆ ಅವನನ್ನೇ ನೋಡುತ್ತಾ ಕುಳಿತಿದೆ. ವೀಡಿಯೋ ಮುಂದುವರಿಯುತ್ತಿದಂತೆ ಆ ಹುಡುಗ ತನ್ನ ಪಕ್ಕದಲ್ಲಿರುವ ಆಟಿಕೆಗಳನ್ನು ಒಂದೊಂದಾಗಿ ತೆಗೆದುಕೊಂಡು ತನ್ನ ಮುದ್ದಾದ ನಾಯಿಯ ತಪಾಸಣೆ ಮಾಡುತ್ತಿರುವಂತೆ ನಟಿಸುತ್ತಿದ್ದಾನೆ. ಈ ವೀಡಿಯೋ ಹಂಚಿಕೊಂಡವರು ಇದಕ್ಕೆ ಮುದ್ದಾದ ಶೀರ್ಷಿಕೆಯನ್ನೂ ನೀಡಿದ್ದು “ಭವಿಷ್ಯದ ಪಶುವೈದ್ಯರು ಮತ್ತು ಅವರ ರೋಗಿ” ಎಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 15 ನಿಮಿಷಗಳಲ್ಲಿ ಎಟಿಎಂ ಒಡೆಯುವುದನ್ನು ಯುವಕರಿಗೆ ಹೇಳಿಕೊಟ್ಟ ‘ಎಟಿಎಂ ಬಾಬಾ’; ಲಕ್ನೋ ಪೊಲೀಸರು ಶಾಕ್

ಈ ಪೋಸ್ಟ್ ಈಗಾಗಲೇ ಮೂರು ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಹಲವಾರು ಮಂದಿ ಶೇರ್ ಮಾಡಿದ್ದು ಅತೀ ಹೆಚ್ಚು ಲೈಕ್ ಮತ್ತು ಕಾಮೆಂಟ್ ಗಳನ್ನು ಸಹ ಹೊಂದಿದೆ. ಈ ವೀಡಿಯೋಗೆ ಕಾಮೆಂಟ್ ಮಾಡಿದ ಹಲವಾರು ಜನ ಈ ನಾಯಿ ಮುದ್ದಾಗಿದೆ ನಮಗೆ ಬೇಕು ಎಂದಿದ್ದಾರೆ. ಇನ್ನು ಕೆಲವು ಬಳಕೆದಾರರು “ಮುದ್ದಾದ ಹುಡುಗ ಮತ್ತು ಅವನ ನಾಯಿ, ಅದನ್ನು ಪ್ರೀತಿಸಿ!” ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವು ಬಳಕೆದಾರರು ನಾಯಿಗೆ ತುಂಬಾ ತಾಳ್ಮೆ ಇದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ;

Published On - 7:04 pm, Thu, 27 April 23

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ