AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಸಫಾರಿಗೆ ಹೋದ ಪ್ರವಾಸಿಗರ ಮೇಲೆ ಎಗರಿದ ಹುಲಿ! ಇಲ್ಲಿದೆ ಭಯಾನಕ ವೀಡಿಯೊ

ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ನೀರಿಳಿಸಿದೆ. ವಾಹನದಲ್ಲಿದ್ದವರು ಜೀವ ಉಳಿಸಿಕೊಂಡು ಮನೆಗೆ ಬಂದರೆ ಸಾಕು ಎಂಬಂತೆ ಮಾಡಿ ಕಾಡಿನೊಳಗೆ ಹೋಗಿದೆ. ಈ ವಿಡಿಯೋ ಎಲ್ಲೆಡೆ ವೈರೆಲ್ ಆಗಿದೆ.

Video Viral: ಸಫಾರಿಗೆ ಹೋದ ಪ್ರವಾಸಿಗರ ಮೇಲೆ ಎಗರಿದ ಹುಲಿ! ಇಲ್ಲಿದೆ ಭಯಾನಕ ವೀಡಿಯೊ
ವೈರಲ್ ವೀಡಿಯೊ
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk|

Updated on:Oct 26, 2023 | 12:39 PM

Share

ಸಫಾರಿ ಹೋಗುವುದೇ ಪ್ರಾಣಿಗಳನ್ನು ನೋಡಲು. ಆದರೆ ಕೆಲವು ಬಾರಿ ಹೆಚ್ಚು ಪ್ರಾಣಿಗಳು ಕಾಣಸಿಗುವುದಿಲ್ಲ. ಅದೃಷ್ಟ ಚೆನ್ನಾಗಿದ್ದರೆ ಹುಲಿ, ಸಿಂಹ ನೋಡಲು ಸಿಗಬಹುದು. ಆದರೆ ಇಲ್ಲೊಂದಿಷ್ಟು ಪ್ರವಾಸಿಗರಿಗೆ ಸಫಾರಿಗೆ ಹೋದ ಸಂದರ್ಭದಲ್ಲಿ ಮೈ ಜುಮ್ ಎನಿಸುವ ಘಟನೆ ನಡೆದಿದೆ. ಸಫಾರಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಗರ ಗುಂಪೊಂದು ಅರಣ್ಯದ ಸೌಂದರ್ಯವನ್ನು ನೋಡುತ್ತ ಮುಂದೆ ಸಾಗುತ್ತಿದ್ದಾಗ ಅಲ್ಲಿಯೇ ಹಿಂಡಿನಲ್ಲಿದ್ದ ಹುಲಿ ಕೋಪಗೊಂಡು ದಾಳಿ ಮಾಡಲು ವಾಹನದ ಬಳಿ ಬಂದಿದೆ. ಡ್ರೈವರ್ ಅದು ದೂರದಲ್ಲಿ ಬರುವುದನ್ನು ನೋಡಿ ವಾಹನವನ್ನು ಹಿಂದಕ್ಕೆ ಮುಂದಕ್ಕೆ ವಾಹನ ಚಲಿಸಲು ಪ್ರಯತ್ನಿಸಿದ್ದು ಆದರೂ ವಾಹನದ ಬಳಿ ಬಂದು ಹುಲಿ ಘರ್ಜಿಸಿದೆ. ಇದರಿಂದ ಭಯಗೊಂಡ ವಾಹನದಲ್ಲಿ ಕುಳಿತ ಪ್ರವಾಸಿಗರು ಕಿರುಚಿದ್ದಾರೆ. ಈ ಭಯಾನಕ ದೃಶ್ಯವನ್ನು ಪ್ರವಾಸಿಗರೊಬ್ಬರು ವೀಡಿಯೊ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ಭಾರೀ ವೈರಲ್ ಆಗಿದೆ. ಇಂಡಿಯಾ ಟುಡೇ ಗ್ರೂಪ್ ಪ್ರಕಾರ, ಈ ಘಟನೆ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿ ನಡೆದಿದೆ.

ಇದನ್ನೂ ಓದಿ:Viral video: ಮಾವಿನಹಣ್ಣಿನ ಹಪ್ಪಳ ತಯಾರಿಸುವುದು ಹೇಗೆ? ಈ ವೈರಲ್ ವೀಡಿಯೊ ನೋಡಿ

ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಂತ ನಂದಾ ಅವರು ಈ ವೀಡಿಯೊವನ್ನು ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ವಾಹನದಲ್ಲಿದ್ದ ವ್ಯಕ್ತಿಗಳು ಪೊದೆಗಳ ಹಿಂದೆ ಅಡಗಿಕೊಂಡಿರುವ ಹುಲಿಯನ್ನು ಕಾಣುತ್ತಿದ್ದಂತೆ ತಮ್ಮ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲು ಪ್ರಯತ್ನ ಮಾಡಿದ್ದಾರೆ. ಬಳಿಕ ನೋಡ ನೋಡುತ್ತಿದಂತೆ ಹುಲಿಯ ಜೋರಾಗಿ ಘರ್ಜಿಸುತ್ತಾ ವಾಹನದ ಬಳಿ ಬರುವಾಗ ಪ್ರವಾಸಿಗರು ಕಂಗಾಲಾಗಿ ಚೀರಿಕೊಂಡಿದ್ದಾರೆ. ಸಫಾರಿ ವಾಹನದ ಚಾಲಕ ಸ್ಮಾರ್ಟ್ ಆಗಿ ವಾಹನ ಚಲಾಯಿಸಿಕೊಂಡು ಬಂದಿದ್ದು, ಇದಕ್ಕೆ ಕೋಪಗೊಂಡ ಹುಲಿ ಮತ್ತೆ ಅಲ್ಲಿಂದ ಕಾಡಿನತ್ತ ಹೋಗಿದೆ. ಕಾಡಿನ ಪ್ರಾಣಿಗಳನ್ನು ನೋಡುವ ಉತ್ಸಾಹದಲ್ಲಿ ಕೆಲವೊಂದು ಬಾರಿ ಅಪಾಯವನ್ನು ಉಂಟು ಮಾಡಬಹುದು ಮತ್ತು ಅಲ್ಲಿ ಪ್ರಾಣಿಗಳ ಸಂಚಾರ ಹೇಗಿದೆ. ಅಲ್ಲಿ ವಾಸ ಮಾಡುತ್ತಿರುವ ಜನರ ದಿನನಿತ್ಯ ಚಟುವಟಿಕೆಯಲ್ಲಿ ಇಂತಹ ಅಪಾಯಗಳು ಹೇಗೆ ಬರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಸುಸಂತ ನಂದಾ ಈ ವಿಡಿಯೋ ಜತೆಗೆ ಇದಕ್ಕೆ ಶೀರ್ಷಿಕೆಯನ್ನು ನೀಡಿದ್ದಾರೆ. “ಸನ್ಯಾಸಿ ಕಿರಿಕಿರಿಗೊಂಡಿದ್ದಾರೆ. ಪ್ರತಿ ದಿನ ಗೊತ್ತುಪಡಿಸಿದ ಸಮಯದಲ್ಲಿ ಜನರು ನಿಮ್ಮ ಮನೆಗೆ ನುಗ್ಗಿದರೆ ನೀವು ಏನು ಮಾಡುತ್ತೀರಿ?” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ಈಗಾಗಲೇ 41 ಸಾವಿರ ಜನ ವೀಕ್ಷಿಸಿದ್ದು., ಹಲವಾರು ಬಳಕೆದಾರರು ಈ ವಿಡಿಯೋಗೆ ಕೆಮೆಂಟ್ ಮಾಡಿದ್ದು ಸರಕಾರ ಈ ನಿಯಮ ಬದಲಾಯಿಸಿ ಜನರು ಸಫಾರಿಗೆ ಹೋಗುವುದನ್ನು ತಡೆಯಬೇಕು ಎಂದಿದ್ದಾರೆ. ಇನ್ನು ಕೆಲವು ಬಳಕೆದಾರರು ಇಂತಹ ಸಫಾರಿಗಳಿಂದಲೇ ಹಣ ಬರುತ್ತಿದ್ದು ಹುಲಿಗಳ ಸಂಖ್ಯೆ ಜಾಸ್ತಿಯಾಗಲು ಕಾರಣವಾಗಿದೆ ಎಂದಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ಮಾಡಿ

Published On - 1:32 pm, Thu, 27 April 23

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್