AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಹೋಮ್ ವರ್ಕ್ ನಿಂದ ತಪ್ಪಿಸಿಕೊಳ್ಳಲು ಈ ಪುಟಾಣಿಯೂ ಅಮ್ಮನಿಗೆ ಹೇಳಿದ ನೆಪ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಈ ಪುಟಾಣಿಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಪುಟ್ಟ ಕಂದಮ್ಮಗಳು ಮಾಡುವ ತರಲೆ ತುಂಟಾಟಗಳು ಒಂದೆರಡಲ್ಲ. ಅದರಲ್ಲಿಯೂ ಓದಲು ಅಥವಾ ಹೋಮ್ ವರ್ಕ್ ಮಾಡಲು ಕುಳಿತಾಗ ತಾಯಿಗೆ ಹೇಳುವ ಸುಳ್ಳು ಒಂದೆರಡರಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ಪುಸ್ತಕ ತೆರೆದು ಹೋಮ್ ವರ್ಕ್ ಮಾಡಲು ಕುಳಿತಿದ್ದು, ನೆಪ ಹೇಳಿ ಹೋಮ್ ವರ್ಕ್ ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

Viral : ಹೋಮ್ ವರ್ಕ್ ನಿಂದ ತಪ್ಪಿಸಿಕೊಳ್ಳಲು ಈ ಪುಟಾಣಿಯೂ ಅಮ್ಮನಿಗೆ ಹೇಳಿದ ನೆಪ ನೋಡಿ
Viral VideoImage Credit source: Instagram
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 24, 2025 | 2:24 PM

ಪುಟಾಣಿ ಮಕ್ಕಳೇ (little kids) ಹಾಗೆ, ಏನು ಮಾಡಿದರೂ ಮುದ್ದು ಮುದ್ದಾಗಿ ಕಾಣಿಸುತ್ತದೆ. ಮಕ್ಕಳ ತಮ್ಮ ಮುದ್ದು ಮುದ್ದಾದ ಮಾತು, ತರಲೆ ತುಂಟಾಟಗಳನ್ನು ನೋಡುವುದೇ ಚಂದ. ಆದರೆ ಬೆಳೆಯುತ್ತ ಬಂದಂತೆಲ್ಲ ಮಕ್ಕಳನ್ನು ಶಾಲೆಗೆ ಸೇರಿಸಿ ಓದಿಸುವ ಜವಾಬ್ದಾರಿಯೂ ಹೆತ್ತವರ ಮೇಲೆ ಇರುತ್ತದೆ. ಅದರಲ್ಲಿ ಪುಟಾಣಿಗಳು ಹೋಮ್ ವರ್ಕ್ (home work) ಮಾಡುವಾಗಲಂತೂ ತಾಯಿಗೆ ಕೊಡುವ ತೊಂದರೆ ಅಷ್ಟಿಷ್ಟಲ್ಲ. ಹೇಗೋ ಸಮಾಧಾನ ಪಡಿಸಿ ತಾಯಿಯಾದವಳು ಹೋಮ್ ಮಾಡಿ ಮುಗಿಸುತ್ತಾಳೆ. ಇದೀಗ ವೈರಲ್ (viral) ಆಗಿರುವ ವಿಡಿಯೋದಲ್ಲಿ ಪುಟಾಣಿಯೊಂದು ಹೋಮ್ ವರ್ಕ್ ಮಾಡಲು ಕುಳಿತುಕೊಂಡಿದ್ದು, ಹೋಮ್ ವರ್ಕ್ ಮಾಡಲು ಸ್ವಲ್ಪ ಕೂಡ ಇಷ್ಟ ಇಲ್ಲ. ಹೀಗಾಗಿ ಅಳುತ್ತಾ ನನಗೆ ಉಸಿರುಗಟ್ಟುತ್ತಿದೆ, ಉಸಿರಾಡಲು ತೊಂದರೆಯಾಗುತ್ತಿದೆ ಎಂದು ಹೇಳಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Tarun shakla ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಪುಟಾಣಿಯೊಂದು ಹೋಮ್ ವರ್ಕ್ ಮಾಡಲು ಕುಳಿತಿದೆ. ತಾಯಿಯೂ ತನ್ನ ಮಗುವಿಗೆ ಕಲಿಸಲು ಕುಳಿತಿರುವುದನ್ನು ನೋಡಬಹುದು. ಪುಟಾಣಿ ಮುಂದೆ ಗಣಿತ ಪುಸ್ತಕವಿದ್ದು, ಅದರಲ್ಲಿ ಸಂಖ್ಯೆಗಳನ್ನು ಬರೆಯುತ್ತಿದ್ದಾನೆ. ಹೋಮ್ ವರ್ಕ್ ಮಾಡಲು ಇಷ್ಟವಿಲ್ಲದ ಕಾರಣ ಜೋರಾಗಿ ಅಳಲು ಶುರು ಮಾಡಿದ್ದು, ಅದೇ ವೇಳೆ ತನ್ನ ತಾಯಿ ಬಳಿ ನನಗೆ ಉಸಿರಾಡಲು ಕಷ್ಟವಾಗುತ್ತಿದೆ , ಉಸಿರಾಡಲು ಸರಿಯಾಗಿ ಆಗುತ್ತಿಲ್ಲ ಎಂದು ಹೇಳುತ್ತಿರುವುದನ್ನು ಗಮನಿಸಬಹುದು. ಪುಟಾಣಿ ನೆಪಕ್ಕೆ ತಲೆ ಕೆಡಿಸಿಕೊಳ್ಳದೇ, ಆಟ ಆಡುವಾಗ ನಿನಗೆ ಏನು ಆಗಲ್ಲ, ಓದುವಾಗ ಯಾಕೆ ಉಸಿರುಗಟ್ಟುತ್ತದೆ ಎಂದು ಕೇಳಿದ್ದಾಳೆ. ಕೊನೆಗೆ ತನ್ನ ತಂದೆಗೆ ಕರೆ ಮಾಡಲು ಹೇಳುತ್ತದೆ. ಅಷ್ಟೇ ಅಲ್ಲದೇ ತನ್ನ ಕೈಯಲ್ಲಿರುವ ಗಾಯ ತೋರಿಸಿದ್ದು, ಬೀಳುವುದರಿಂದ ಬೆಳೆಯಲು ಸಾಧ್ಯ ಎಂದು ಹೇಳುವುದನ್ನು ನೋಡಬಹುದು.

ಇದನ್ನೂ ಓದಿ
Image
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
Image
ಅಬ್ಬಬಾ! ಸೀರೆ ಧರಿಸಿ ಜಿಮ್ ಗೆ ಬಂದ ಮಹಿಳೆ, ಮಾಡಿದ ಕಸರತ್ತು ನೋಡಿ 
Image
ಪ್ರಿಯಕರನ್ನು ಟ್ರಂಕ್​​ನಲ್ಲಿ ಬಚ್ಚಿಟ್ಟ ವಿವಾಹಿತ ಮಹಿಳೆ,ಮುಂದೇನಾಯ್ತು ನೋಡಿ
Image
ಮದುವೆ ಮಂಟಪದಿಂದ ಅರ್ಧಕ್ಕೆ ಎದ್ದು ಹೋದ ಮದುಮಗ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಇಪ್ಪತ್ತೊಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ಪುಟಾಣಿಯ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಈ ವಿಡಿಯೋಗೆ ಬಳಕೆದಾರರು, ನಾವು ಸಣ್ಣವರಿದ್ದಾಗ ನಮ್ಮ ಅಮ್ಮ ಈ ರೀತಿ ಹೋಮ್ ವರ್ಕ್ ಮಾಡಿಸುತ್ತಿರಲಿಲ್ಲ. ‘ಸಂಜೆ ಮನೆಗೆ ಬರುತ್ತಿದ್ದಂತೆ ಬ್ಯಾಗ್ ಬಿಸಾಡಿ ಆಟ ಆಡಲು ಹೋಗುತ್ತಿದ್ದೆವು’ ಎಂದು ಕಾಮೆಂಟ್ ಮಾಡಿ ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ : Viral : ಇದಪ್ಪಾ ಫ್ರೆಂಡ್ಶಿಪ್ ಅಂದ್ರೆ ಏಳು ವರ್ಷಗಳ ಬಳಿಕ ಅನಿರೀಕ್ಷಿತ ಭೇಟಿಯಾದ ಸ್ನೇಹಿತರು

ಇನ್ನೊಬ್ಬರು, ‘ಈಗಿನ ಮಕ್ಕಳು ಎಲ್ಲರೂ ಹೀಗೆಯೇ, ಪುಸ್ತಕ, ಹೋಮ್ ವರ್ಕ್ ಎಂದರೆ ಮಾರುದ್ದ ಓಡುತ್ತಾರೆ’ ಎಂದಿದ್ದಾರೆ. ಮತ್ತೊರ್ವ ಬಳಕೆದಾರರು, ‘ನನಗೆ ಈ ಪುಟಾಣಿಯ ಅಪ್ಪ ಬಂದ ಮೇಲಿನ ಪಾರ್ಟ್ 2 ವಿಡಿಯೋ ಬೇಕು’ ಎಂದು ಕೇಳಿದ್ದಾರೆ. ಈ ಪುಟಾಣಿಯೂ ನೆಪ ಹೇಳುವುದನ್ನು ಕೇಳಿ ನಗುವ ಇಮೋಜಿ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಇದು ಆತ್ಮದ ಹಾಡು; ‘ಶಿವಂ ಶಿವಂ ಸನಾತನಂ’ ಬಗ್ಗೆ ವಿಜಯ್ ಪ್ರಕಾಶ್ ಮಾತು
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು