AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅರರೇ ಏನಿದು ಆಶ್ಚರ್ಯ…. ಮಳೆ ಬಂದ ಖುಷಿಯಲ್ಲಿ ಕುಣಿದಾಡಿದ ಇಲಿ

ಸಾಮಾನ್ಯವಾಗಿ ಇಲಿಗಳು ರಾತ್ರಿ  ಹೊತ್ತಿನಲ್ಲಿ  ಮನೆಯಲ್ಲಿರುವ ಇತರೆ ವಸ್ತುಗಳಾಗಿರಲಿ  ಅಥವಾ ಮನೆಯಲ್ಲಿರುವ ತರಕಾರಿಗಳನ್ನೆಲ್ಲಾ ತಿಂದು ಅಥವಾ ಕದ್ದೊಯ್ದು ಮೆಲ್ಲಗೆ ಎಸ್ಕೇಪ್‌ ಆಗುತ್ತವೆ. ಆದರೆ ಇಲ್ಲೊಂದು ಅಚ್ಚರಿಯ ಸಂಗತಿ ನಡೆದಿದ್ದು, ಮಳೆ ಬಂದ ಖುಷಿಯಲ್ಲಿ ಇಲಿಯೊಂದು ನಡು ರಸ್ತೆಯಲ್ಲಿಯೇ ಕುಣಿದು ಕುಪ್ಪಳಿಸುತ್ತಾ, ಮಳೆ ನೀರಿನಲ್ಲಿ ಆಟವಾಡಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗಿದೆ. 

Viral Video: ಅರರೇ ಏನಿದು ಆಶ್ಚರ್ಯ.... ಮಳೆ ಬಂದ ಖುಷಿಯಲ್ಲಿ ಕುಣಿದಾಡಿದ ಇಲಿ
ಮಾಲಾಶ್ರೀ ಅಂಚನ್​
| Edited By: |

Updated on: Jun 10, 2024 | 10:16 AM

Share

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಸಾಮ್ರಾಜ್ಯಗಳಿಗೆ ಸಂಬಂಧಿಸಿದ ವಿಸ್ಮಯಕಾರಿ ವಿಡಿಯೋಗಳು ಕೆಲವೊಮ್ಮೆ ಹರಿದಾಡುತ್ತಿರುತ್ತವೆ. ಇಂತಹ ದೃಶ್ಯಗಳನ್ನು ನೋಡಿದಾಗ ಅರರೇ ಏನಿದು ವಿಸ್ಮಯ, ಹೀಗೆಲ್ಲಾ ನಡೆಯೋಕೇ ಸಾಧ್ಯಾನ  ಅಂತಾ ನಮಗೆ ಭಾಸವಾಗುತ್ತದೆ. ಸದ್ಯ ಅಂತಹದೇ ಅಚ್ಚರಿಯ ಹಾಗೇನೇ ತಮಾಷೆಯ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಪುಟಾಣಿ ಇಲಿಯೊಂದು ಮಳೆರಾಯ ಧರೆಗಿಳಿದ ಖುಷಿಯಲ್ಲಿ ಮಳೆ ನೀರಿನಲ್ಲಿ ಒದ್ದೆಯಾಗುತ್ತಾ  ಕುಣಿದು ಕುಪ್ಪಳಿಸುತ್ತಾ ಆಟವಾಡಿದೆ.  ಈ ಮುದ್ದಾದ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಉರಿ ಬಿಸಿಲಿನಲ್ಲಿ ಬಸವಳಿದಾಗ ದಿಢೀರ್‌ ಮಳೆ ಬಂದೆರೆ ಅದರ ಮಜಾವೇ ಬೇರೆ. ಹೀಗೆ ಮಳೆ ಬರುವ ಸಂದರ್ಭದಲ್ಲಿ ಹೆಚ್ಚಿನವರು ಮಳೆ ನೀರಿನಲ್ಲಿ ಆಟವಾಡುತ್ತಾರೆ, ಕುಣಿದು ಕುಪ್ಪಳಿಸುತ್ತಾರೆ. ಮನುಷ್ಯರಷ್ಟೇ ಅಲ್ಲ ಪ್ರಾಣಿಗಳು ಸಹ ಮಳೆಯಲ್ಲಿ ಆಟವಾಡುತ್ತವೆ ಎಂಬುದನ್ನು ಇಲ್ಲೊಂದು ಇಲಿ ತೋರಿಸಿಕೊಟ್ಟಿದೆ.

ಈ ವಿಶೇಷ ವಿಡಿಯೋವನ್ನು AMAZINGNATURE ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ವೈರಲ್‌ ವಿಡಿಯೋದಲ್ಲಿ ಇಲಿಯೊಂದು ಮಳೆ ನೀರಿನಲ್ಲಿ ನೆನೆಯುತ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಜೋರಾಗಿ ಮಳೆ ಬರುವಂತಹ ಸಂದರ್ಭದಲ್ಲಿ ನಡು ರಸ್ತೆಯಲ್ಲಿದ್ದ ಇಲಿಯೊಂದು ದೇವ್ರೇ ಇಗಲಾದರೂ ಮಳೆ ಬಂತಲ್ವಾ ಎನ್ನುತ್ತಾ ಆಕಾಶದ ಕಡೆ ಮುಖ ಮಾಡಿ ಖುಷಿಯಲ್ಲಿ ಕುಣಿದಿದೆ. ಜೊತೆಗೆ ಜಿಗಿ ಜಿಗಿದು ಮಳೆ ನೀರಿನಲ್ಲಿ ಆಟವಾಡಿದೆ.

ಇದನ್ನೂ ಓದಿ: ಸಾವಿರಾರೂ ರೂ. ಪಾವತಿಸಿ ಐಷಾರಾಮಿ ಹೋಟೆಲ್‌ ರೂಮ್​​​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200ರಕ್ಕೂ ಹೆಚ್ಚು ತಿಗಣೆ ಕಡಿತ

ಜೂನ್‌ 05 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಅಯ್ಯಯ್ಯೋ ಈ ದೃಶ್ಯವಂತೂ ತುಂಬಾನೇ ಮುದ್ದಾಗಿದೆ ಎಂದು ಇಲಿಯ ಖುಷಿಯ ಕುಣಿತಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಮಗ ಆಯುಷ್ ಸಿನಿಮಾ ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ಪ್ರಿಯಾಂಕಾ ಉಪೇಂದ್ರ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ಜಂತರ್​ ಮಂತರ್​ನಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ವೃಷಭ ರಾಶಿಯಲ್ಲಿ ಕುಜ ಸಂಚಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
ಬಿಜೆಪಿ ನಾಯಕರು ಹೇಡಿಗಳು; ಬಂಧನದ ಬಳಿಕ ಪ್ರಿಯಾಂಕಾ ಗಾಂಧಿ ಆಕ್ರೋಶ
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಕೃಷ್ಣಾ ನದಿಗೆ ಹರಿದುಬಂತು 60,000 ಕ್ಯೂಸೆಕ್ ನೀರು
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ಪ್ರಧಾನಿ ಮನೆ ಮುಂದೆ ಕರ್ನಾಟಕದ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಧರಣಿ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ