Viral Video: ಬಿಯರ್ ಖರೀದಿಸುವಾಗ ತಂದೆ ಕೈಗೆ ತಗ್ಲಾಕೊಂಡ ಯುವಕ, ಬಾರ್​​​ನಲ್ಲಿ ಎಲ್ಲರ ಮುಂದೆ ಮಗನಿಗೆ ಚಪ್ಪಲಿ ಏಟು

ಬಾರ್ ಒಂದರಲ್ಲಿ ಬಿಯರ್ ಖರೀದಿಸುತ್ತಿರುವಾಗ ಯುವಕಕನೊಬ್ಬ ತನ್ನ ತಂದೆಯ ಕೈಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಮಗನಿಗೆ ಕುಡಿತ ಚಟ ಇದೆ ಎಂದು ಗೊತ್ತಾದ ತಕ್ಷಣ ಬಾರ್ನಲ್ಲಿ ಎಲ್ಲರ ಎದುರೇ ಆ ತಂದೆ ತಮ್ಮ ಮಗನಿಗೆ ಚಪ್ಪಲಿಯಲ್ಲಿ ಧರ್ಮದೇಟು ನೀಡಿದ್ದಾರೆ. ತಂದೆ ಮಗನ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ತಂದೆಯ ನಡೆಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

Viral Video: ಬಿಯರ್ ಖರೀದಿಸುವಾಗ ತಂದೆ ಕೈಗೆ ತಗ್ಲಾಕೊಂಡ ಯುವಕ, ಬಾರ್​​​ನಲ್ಲಿ ಎಲ್ಲರ ಮುಂದೆ ಮಗನಿಗೆ ಚಪ್ಪಲಿ ಏಟು
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 10, 2024 | 4:15 PM

ಪ್ರತಿಯೊಬ್ಬ ತಂದೆ ತಾಯಿಯು ತಮ್ಮ ಮಗ ಕುಡಿತದ ಚಟಕ್ಕೆ ದಾಸನಾಗಬಾರದು ಅಂತಾನೇ ಬಯಸುತ್ತಾರೆ. ಆದ್ರೆ ಈ ಚಾಲಾಕಿ ಯುವಕರು ತಂದೆ ತಾಯಿಯ ಕಣ್ತಿಪ್ಪಿಸಿ ಸ್ನೇಹಿತ ಜೊತೆ ಸೇರಿ ಕುಡಿಯುತ್ತಾ ಮಜಾ ಮಾಡುತ್ತಾರೆ. ಒಂದು ವೇಳೆ ಡ್ರಿಂಕ್ಸ್ ಮಾಡಿದ್ದು ಗೊತ್ತಾದ್ರೇ ತಂದೆಯ ಕೈಯಿಂದ ಇವರುಗಳಿಗೆ ಧರ್ಮದೇಟು ಬೀಳುವುದಂತೂ ಗ್ಯಾರಂಟಿ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಯುವಕನೊಬ್ಬ ಬಾರ್ ಒಂದರಲ್ಲಿ ಬಿಯರ್ ಖರೀದಿಸುತ್ತಿದ್ದ ವೇಳೆ ಆತನ ತಂದೆಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳುತ್ತಾನೆ. ನನ್ ಮಗ್ನೆ ಬಾರ್ಗೆ ಬಂದು ಕುಡಿಯುವಷ್ಟು ಬೆಳೆದುಬಿಟ್ಟಿಯಾ ಎಂದು ಸಿಟಿಗೆದ್ದ ತಂದೆ ಅಲ್ಲೇ ಎಲ್ಲರ ಎದುರಲ್ಲಿ ತಮ್ಮ ಮಗನಿಗೆ ಚಪ್ಪಲಿಯನ್ನು ಧರ್ಮದೇಟು ನೀಡಿದ್ದಾರೆ. ತಂದೆ ಮಗನ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತಂದೆಯ ಈ ನಡೆಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

ಈ ಘಟನೆ ಹರಿಯಾಣದಲ್ಲಿ ನಡೆದಿದ್ದು, ಇಲ್ಲಿನ ಸ್ಥಳೀಯ ಬಾರ್ ಒಂದರಲ್ಲಿ ಬಿಯರ್ ಖರೀದಿಸುತ್ತಿದ್ದಾಗ ಯುವಕನೊಬ್ಬ ತನ್ನ ತಂದೆಯ ಕೈಗೆ ರೆಡ್ಹ್ಯಾಂಡ್ ಸಿಕ್ಕಿಬಿದ್ದಿದ್ದಾನೆ. ಮಗನಿಗೆ ಕುಡಿತದ ಚಟ ಇದೆ ಎಂದು ಸಿಟ್ಟಿಗೆದ್ದ ತಂದೆ, ಈತ ಈ ಜನ್ಮದಲ್ಲಿ ಇನ್ನೂ ಕುಡಿಯಬಾರದು ಎಂದು ಬಾರ್ನಲ್ಲಿ ಎಲ್ಲರ ಎದುರೇ ಮಗನಿಗೆ ಚಪ್ಪಲಿ ಏಟು ನೀಡಿದ್ದಾರೆ.

ಈ ವಿಡಿಯೋವನ್ನು peddlermedia ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ತಂದೆಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಗನಿಗೆ ಧರ್ಮದೇಟು ಬೀಳುತ್ತಿರುವ ದೃಶ್ಯವನ್ನು ಕಾಣಬಹುದು. ಯುವಕನೊಬ್ಬ ಬಾರ್ ಒಂದರಲ್ಲಿ ಬಿಯರ್ ಖರೀದಿಸುತ್ತಿದ್ದ ವೇಳೆ ಆತನ ತಂದೆಯ ಕೈಗೆ ಸಿಕ್ಕಿ ಬೀಳುತ್ತಾನೆ. ನನ್ ಮಗ್ನೆ ಬಾರ್ಗೆ ಬಂದು ಕುಡಿಯುವಷ್ಟು ಬೆಳೆದುಬಿಟ್ಟಿಯಾ ಎಂದು ಸಿಟಿಗೆದ್ದ ತಂದೆ ಅಲ್ಲೇ ಸಾರ್ವಜನಿಕರ ಎದುರಲ್ಲೇ ಮಗನಿಗೆ ಚಪ್ಪಲಿ ಏಟು ನೀಡಿದ್ದಾರೆ.

ಇದನ್ನೂ ಓದಿ: ತೂಕ ಇಳಿಸಿಕೊಳ್ಳಿ ಭರ್ಜರಿ ಬೋನಸ್ ಪಡೆಯಿರಿ, ಉದ್ಯೋಗಿಗಳ ಆರೋಗ್ಯಕ್ಕೆ ಹೊಸ ಕ್ರಮ ತಂದ ಟೆಕ್ ಕಂಪೆನಿ

ಜೂನ್ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 8.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ತಂದೆಯ ಈ ನಡೆ, ಮತ್ತು ಮಗನ ಮೇಲಿನ ಕಾಳಜಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ