AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿರಾರೂ ರೂ. ಪಾವತಿಸಿ ಐಷಾರಾಮಿ ಹೋಟೆಲ್‌ ರೂಮ್​​​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200ರಕ್ಕೂ ಹೆಚ್ಚು ತಿಗಣೆ ಕಡಿತ

ಆದರೆ ಒಂದೇ ರಾತ್ರಿಯಲ್ಲಿ ಭಯಾನಕ ಅನುಭವವಾಗಿದ್ದು, ದುಡ್ಡಿಗಿಂತಲೂ ಆರೋಗ್ಯ ಮುಖ್ಯ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಅಷ್ಟಕ್ಕೂ ಆ ಮಹಿಳೆಗೆ ಯಾವುದೋ ದೈವ,ಭೂತ ಅಥವಾ ಮನುಷ್ಯರ ಕಾಟವಲ್ಲ, ಇದಕ್ಕಿಂತಲೂ ಮಿಗಿಲಾಗಿ ಒಂದೇ ರಾತ್ರಿಯಲ್ಲಿ 200ರಕ್ಕೂ ಹೆಚ್ಚು ತಿಗಣೆಗಳು ಮಹಿಳೆಯ ರಕ್ತ ಹೀರಿದೆ.

ಸಾವಿರಾರೂ ರೂ. ಪಾವತಿಸಿ ಐಷಾರಾಮಿ ಹೋಟೆಲ್‌ ರೂಮ್​​​ನಲ್ಲಿ ಮಲಗಿದ್ದ ಮಹಿಳೆಗೆ ಒಂದೇ ರಾತ್ರಿ 200ರಕ್ಕೂ ಹೆಚ್ಚು ತಿಗಣೆ ಕಡಿತ
ಅಕ್ಷತಾ ವರ್ಕಾಡಿ
|

Updated on: Jun 09, 2024 | 4:00 PM

Share

ದೂರ ಪ್ರಯಾಣ ಮಾಡುವಾಗ ಉಳಿದುಕೊಳ್ಳಲು ಒಂದು ಒಳ್ಳೆ ರೂಮ್​​​ ಬೇಕು, ಜಾಗ ಬದಲಾದರೂ ಕೂಡ ನಿದ್ದೆ ಚೆನ್ನಾಗಿ ಬರಬೇಕು ಎಂಬುದು ಪ್ರಯಾಣ ಬೆಳೆಸುವ ಮುನ್ನವೇ ಯೋಚನೆ ಮಾಡುವುದು ಸಹಜ. ಅದರಂತೆಯೇ ಎಂದೆರಡು ದಿನಕ್ಕೆ ಬಾಡಿಗೆ ಜಾಸ್ತಿ ಕೇಳಿದರೂ ಕೂಡ ಯೋಚನೆ ಮಾಡದೇ ಹಣ ಪಾವತಿ ಮಾಡಿ ಬಿಡುತ್ತೇವೆ. ಐಷಾರಾಮಿ ಹೋಟೆಲ್​ ಎಂದರೆ ಸೌಲಭ್ಯಗಳಿಗೆ ಏನೂ ಕೊರತೆ ಇರಲ್ಲ ಬಿಡಿ. ಅಂದರಂತೆಯೇ ಇಲ್ಲೊಬ್ಬರು ಮಹಿಳೆ ಹೋಟೆಲ್‌ ರೂಮ್​​ ಒಂದರಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಲು ಬರೋಬ್ಬರಿ 17000 ರೂ. ಪಾವತಿ ಮಾಡಿದ್ದಾರೆ. ಆದರೆ ಒಂದೇ ರಾತ್ರಿಯಲ್ಲಿ ಭಯಾನಕ ಅನುಭವವಾಗಿದ್ದು, ದುಡ್ಡಿಗಿಂತಲೂ ಆರೋಗ್ಯ ಮುಖ್ಯ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ. ಅಷ್ಟಕ್ಕೂ ಆ ಮಹಿಳೆಗೆ ಯಾವುದೋ ದೈವ,ಭೂತ ಅಥವಾ ಮನುಷ್ಯರ ಕಾಟವಲ್ಲ, ಇದಕ್ಕಿಂತಲೂ ಮಿಗಿಲಾಗಿ ಒಂದೇ ರಾತ್ರಿಯಲ್ಲಿ 200ರಕ್ಕೂ ಹೆಚ್ಚು ತಿಗಣೆಗಳು ಮಹಿಳೆಯ ರಕ್ತ ಹೀರಿದೆ.

ಯುನೈಟೆಡ್ ಕಿಂಗ್‌ಡಂನ ಬ್ಲ್ಯಾಕ್‌ಪೂಲ್‌ನಲ್ಲಿರುವ ಕ್ಯಾಲಿಪ್ಸೊ ಎಂಬ ಹೋಟೆಲ್​​​ನಲ್ಲಿ ಶರೋನ್ ಹಸ್ಲಾಮ್(65) ತನ್ನ ಸ್ನೇಹಿತೆ ಮರಿಯನ್ ಪಿಯರ್ಸನ್ ಅವರ ಬರ್ತ್​ ಡೇ ಪಾರ್ಟಿಯ ಸಲುವಾಗಿ ಹೋಟೆಲ್‌ನಲ್ಲಿ ಕೊಠಡಿಯನ್ನು ಎರಡು ದಿನಕ್ಕೆ 17,000 ರೂ ಕೊಟ್ಟು ಕಾಯ್ದಿರಿಸಿದ್ದರು. ಕೋಣೆಗೆ ಪ್ರವೇಶಿಸಿದಾಗ ಹಾಸಿಗೆಯು ಸ್ವಚ್ಛವಾಗಿತ್ತು ಮತ್ತು ಎಲ್ಲಾ ಸೌಲಭ್ಯಗಳು ಚೆನ್ನಾಗಿಯೇ ಇತ್ತು ಎಂದು ಹಸ್ಲಾಮ್ ಹೇಳಿದ್ದಾರೆ.

ಇದನ್ನೂ ಓದಿ: 5 ಕೋಟಿ ರೂ ಬೆಲೆಯ ವಿಶ್ವದ ಅತ್ಯಂತ ದುಬಾರಿ ಹಾಸಿಗೆ; ಇದರ ವಿಶೇಷತೆ ಏನು ಗೊತ್ತಾ?

ಹಸ್ಲಾಮ್ಗೆ ಪಾರ್ಟಿ ಮಾಡಿ ಸಾಕಷ್ಟು ಸುಸ್ತಾಗಿದ್ದರಿಂದ ಒಳ್ಳೆ ನಿದ್ದೆ ಬಂದಿದೆ. ಆದರೆ ಬೆಳಗ್ಗೆ ಏಳುವ ಹೊತ್ತಿಗೆ ಮೈಯೆಲ್ಲಾ ತುರಿಕೆ ಮತ್ತು ದದ್ದು ಕಾಣಿಸಿಕೊಂಡಿದೆ. ಇದಲ್ಲದೇ ಹಾಸಿಗೆಯ ಮೇಲೆ ಅಲ್ಲಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದೆ. ಆದರೆ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಸ್ಲಾಮ್ ಹತ್ತು ನಿಮಿಷ ತೆಗೆದುಕೊಂಡಿದ್ದಾರೆ. ತೆವಳುತ್ತಿರುವ ಜೀವಂತ ತಿಗಣೆಯನ್ನು ಹಾಸಿಗೆ ಮೇಲೆ ನೋಡಿದ್ದಾರೆ. ಬಳಿಕ ಹೋಟೆಲ್​​ ಅವರ ನಿರ್ಲಕ್ಷ್ಯದ ವಿರುದ್ದ ದೂರು ನೀಡಿದ್ದು, ಸಂಪೂರ್ಣ ಹಣವನ್ನು ಹೋಟೆಲ್​​​​​ ಮರುಪಾವತಿ ಮಾಡುವುದರ ಜೊತೆಗೆ 8,787 ರೂ ಹಣವನ್ನು ಪರಿಹಾರದ ರೂಪದಲ್ಲಿ ನೀಡಿದೆ ಎಂದು ವೇಲ್ಸನ್‌ಲೈನ್ ವರದಿಯಿಂದ ತಿಳಿದುಬಂದಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ
ಅವನ ಮರ್ಯಾದೆ ತೆಗೆಯದೇ ಬಿಡಲ್ಲ: ನಿರ್ಮಾಪಕನ ವಿರುದ್ಧ ಕಿಡಿಕಾರಿದ ಹಂಸಾ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನ ನೈಜ ಚಿತ್ರಣ ಇಲ್ಲಿದೆ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗಿದ್ದ ದೇಗುಲ ಗೋಚರ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಲಂಚದ ಬೇಡಿಕೆಯಿಟ್ಟ ಟಿಕೆಟ್​ ಇನ್​ಸ್ಪೆಕ್ಟರ್ ಮೈಚಳಿ ಬಿಡಿಸಿದ ಪ್ರಯಾಣಿಕ
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು
ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಆಸ್ಪತ್ರೆಗೆ ದೌಡು