AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಇಲ್ಲಿ ಈ ಆಟ ಆಡುವವರೆಲ್ಲ ಡೈಪರ್ ಹಾಕಿಕೊಳ್ಳಲೇಬೇಕು!’

Rollercoaster : ಬದುಕಿನುದ್ದಕ್ಕೂ ರೋಲರ್​ಕೋಸ್ಟರ್ ಆಡಿದ್ದೇನೆ, ಆಡುತ್ತಲೂ ಇದ್ದೇನೆ. ಹಾಗಾಗಿ ಮತ್ತಿದನ್ನು ಹಣಕೊಟ್ಟು ಇದನ್ನು ಆಡುವುದು ಬೇಡವೆಂದು ತೀರ್ಮಾನಿಸಿದ್ದೇನೆ ಎಂದಿದ್ದಾರೆ ನೆಟ್ಟಿಗರೊಬ್ಬರು. ನೀವು?

Viral Video: 'ಇಲ್ಲಿ ಈ ಆಟ ಆಡುವವರೆಲ್ಲ ಡೈಪರ್ ಹಾಕಿಕೊಳ್ಳಲೇಬೇಕು!'
ರೋಲರ್​ಕೋಸ್ಟರ್​
ಶ್ರೀದೇವಿ ಕಳಸದ
|

Updated on:Jul 20, 2023 | 6:06 PM

Share

Amusement Games : ಈ ವಿಡಿಯೋ ನೋಡಿಯೇ ನನ್ನ ಎದೆಬಡಿತ ನಿಂತುಹೋಗಿದೆ. ನಾನು ಭೂಮಿಯ ಮೇಲೆಯೇ ಇರಬಯಸುತ್ತೇನೆ. ನಾನಂತೂ ರೋಲರ್​ಕೋಸ್ಟರ್ ಆಡಲಾರೆ, ಆದರೆ ನಿಂತು ನೋಡುವಷ್ಟು ಧೈರ್ಯ ಇದೆ. ಈ ವಿಡಿಯೋದಿಂದ ತಿರುಗುತ್ತಿರುವ ತಲೆಯನ್ನೇ ನಿಲ್ಲಿಸಿಕೊಳ್ಳಲಾಗುತ್ತಿಲ್ಲ ಇನ್ನೂ… ಅಂತೆಲ್ಲ ನೆಟ್ಟಿಗರು ಈ ವಿಡಿಯೋದಡಿ ಪ್ರತಿಕ್ರಿಯಿಸುತ್ತಿದ್ದಾರೆ. ಈತನಕ 3.4 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. 28,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 4,000ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.

ಇದು ಕೆನಡಾದ ವಂಡರ್​​​ಲ್ಯಾಂಡ್​ನಲ್ಲಿರುವ ಯುಕಾನ್​! ಎಂದು ಹೇಳಿದ್ಧಾರೆ ಒಬ್ಬರು. ಅರೆ ನಾನು ಕಳೆದ ವರ್ಷ ಇದನ್ನು ಇಲ್ಲಿಯೇ ಆಡಿದ್ದೆ, ಹಳೆಯ ಮೊಬೈಲ್​ನಲ್ಲಿ ವಿಡಿಯೋ ಕೂಡ ಇದೆ ಎಂದಿದ್ದಾರೆ. ಇದು ಭಯಂಕರವಾಗಿದೆ, ಆಡುವುದಲ್ಲ ನಾನಂತೂ ಮತ್ತೊಮ್ಮೆ ಈ ವಿಡಿಯೋ ನೋಡಲಾರೆ ಎನ್ನುತ್ತಿದ್ದಾರೆ ನೆಟ್ಟಿಗರು.

ಇದನ್ನೂ ಓದಿ : Viral Video: ನೀರಿನೊಳಗೆ ಹಾಕಿದ ಮೇಲೂ ನೀ ಯಾಕೆ ಈಜುತ್ತಿಲ್ಲ, ಒಮ್ಮೆ ಮಿಸುಕಾಡು ಪ್ಲೀಸ್​

ನಾನು ಇಡೀ ಜೀವನಪೂರ್ತಿ ರೋಲರ್​ಕೋಸ್ಟರ್​ ಸವಾರಿ ಮಾಡಿದ್ಧೇನೆ ಹಾಗಾಗಿ ಇದನ್ನು ಅಮ್ಯೂಸ್​ಮೆಂಟ್​ ಪಾರ್ಕ್​ಗೆ ಹಣ ಕೊಟ್ಟು ಆಡಲು ಸಾಧ್ಯವೇ ಇಲ್ಲ ಎಂದಿದ್ದಾರೆ ಒಬ್ಬರು. ಇನ್ನೊಮ್ಮೆ ಇಂಥ ವಿಡಿಯೋಗಳನ್ನು ದಯವಿಟ್ಟು ಪೋಸ್ಟ್​ ಮಾಡಬೇಡಿ ಕನಸಿನಲ್ಲಿಯೂ ಭಯ ಬೀಳುವಂತಿದೆ ಎಂದಿದ್ದಾರೆ ಮತ್ತೊಬ್ಬರು. ಖಂಡಿತ ಈ ಆಟ ಆಡುವವರು ಡೈಪರ್ ಹಾಕಿಕೊಳ್ಳಲೇಬೇಕು ಎಂದಿದ್ಧಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಬಲೆಗೆ ಬಿದ್ದಾಗ ನೀ ಅರಿವೆ ಈ ಸಂಚು! ಜೋಕೆ ನೀವು ಪಾಪದ ಇಲಿಗಳೇ?

ಚಿಕ್ಕಂದಿನಲ್ಲಿ ಜಾತ್ರೆಗಳಲ್ಲಿ ಜಾಯಿಂಟ್​ ವ್ಹೀಲ್​ ಆಡಿಯೇ ನಾನು ವಾಂತಿ ಮಾಡಿಕೊಳ್ಳುತ್ತಿದ್ದೆ. ಇನ್ನು ಇದನ್ನು ಆಡಿದರೆ ಖಂಡಿತ ಹಾರ್ಟ್​ ಅಟ್ಯಾಕ್ ಎಂದಿದ್ಧಾರೆ ಮಗದೊಬ್ಬರು. ನಿಮಗೆ ರೋಲರ್ ಕೋಸ್ಟರ್​ ಆಡಿ ಅಭ್ಯಾಸವಿದೆಯೇ, ಇಂಥ ಆಟಗಳನ್ನು ಆಡುವುದಕ್ಕೆ ಇಷ್ಟ ಇದೆಯೇ? ಇಲ್ಲವಾದಲ್ಲಿ ಯಾಕೆ ಎಂದು ಕಾರಣ ತಿಳಿಸಬಹುದೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:03 pm, Thu, 20 July 23

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ