AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮರಿಗಳನ್ನು ಮುಟ್ಟಿದಕ್ಕೆ ವ್ಯಕ್ತಿಯನ್ನು ಅಟ್ಟಾಡಿಸಿ ದಾಳಿ ಮಾಡಿದ ವಿಡಿಯೋ ಸಖತ್ ವೈರಲ್

ಈ ವಿಡಿಯೋ ಒಮ್ಮೆ ನೋಡಿದಾಗ ನಿಮಗೆ ಹಾಸ್ಯಾಸ್ಪದ ಎನಿಸದರೂ ಕೂಡ, ತಾಯಿ ಬಾತುಕೋಳಿ ತನ್ನ ಮರಿಗಳಿಗೆ ಹೇಗೆ ರಕ್ಷಣೆಯನ್ನು ನೀಡಿದ್ದಾಳೆ ಎಂಬುದನ್ನು ಇಲ್ಲಿ ಕಾಣಬಹುದು.

Viral Video: ಮರಿಗಳನ್ನು ಮುಟ್ಟಿದಕ್ಕೆ ವ್ಯಕ್ತಿಯನ್ನು ಅಟ್ಟಾಡಿಸಿ ದಾಳಿ ಮಾಡಿದ ವಿಡಿಯೋ ಸಖತ್ ವೈರಲ್
Goose Attacks Man
TV9 Web
| Edited By: |

Updated on: Nov 30, 2022 | 4:19 PM

Share

ತಾಯಿ ಪ್ರೀತಿಯೆಂದರೆ ಹಾಗೇ ಎಲ್ಲಕ್ಕಿಂತ ಶ್ರೇಷ್ಠವಾದುದು. ಅದು ಮನುಷ್ಯನೇ ಆಗಿರಲಿ ಅಥವಾ ಪ್ರಾಣಿಯಾಗಿರಲಿ ತಾಯಿಯಾದವಳು ಯಾವಾಗಲೂ ತನ್ನ ಮಗುವಿಗೆ ರಕ್ಷ ಕವಚವಾಗಿರುತ್ತಾಳೆ. ತನ್ನ ಮಗುವಿನ ತಂಟೆಗೆ ಬಂದರೆ ಅವರನ್ನು ಬಿಡುವ ಮಾತೇ ಇಲ್ಲ. ಅಂಥದ್ದೇ ಘಟನೆ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿ ವೈರಲ್ ಆಗಿದೆ.

ಈ ವಿಡಿಯೋ ಒಮ್ಮೆ ನೋಡಿದಾಗ ನಿಮಗೆ ಹಾಸ್ಯಾಸ್ಪದ ಎನಿಸದರೂ ಕೂಡ, ತಾಯಿ ಬಾತುಕೋಳಿ ತನ್ನ ಮರಿಗಳಿಗೆ ಹೇಗೆ ರಕ್ಷಣೆಯನ್ನು ನೀಡಿದ್ದಾಳೆ ಎಂಬುದನ್ನು ಇಲ್ಲಿ ಕಾಣಬಹುದು. ಈ ವಿಡಿಯೋವನ್ನು ನೀವೇ ಒಮ್ಮೆ ನೋಡಿ.

ಎರಡು ದೊಡ್ಡ ಬಾತುಕೋಳಿಗಳು ಜೊತೆಗೆ ಅದರ ಮರಿಗಳು ರಸ್ತೆ ಬದಿಯಲ್ಲಿ ಅವರ ಪಾಡಿಗೆ ಗುಂಪಾಗಿ ಹೋಗುತ್ತಿದೆ. ಇದನ್ನು ನೋಡಿದ ವ್ಯಕ್ತಿಯೊಬ್ಬ ಮರಿಗಳನ್ನು ಮುಟ್ಟಲು ಹೋಗುತ್ತಾನೆ. ಮರಿಗಳನ್ನು ಮುಟ್ಟಲು ಬಂದ ವ್ಯಕ್ತಿಯನ್ನು ನೋಡಿದ ಕೂಡಲೇ ದೊಡ್ಡ ಬಾತುಕೋಳಿಗಳೆರಡು ವ್ಯಕ್ತಿಯನ್ನು ರೋಡಿನಲ್ಲಿ ಕುಕ್ಕಿ, ಅಟ್ಟಾಡಿಸಿ ಓಡಾಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನು ಓದಿ: ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್ ಹೊರಟರೆ ಏನಾಗುತ್ತದೆ ನೋಡಿ

ಇಲ್ಲಿ ತಾಯಿ ಬಾತುಕೋಳಿ ತನ್ನ ಮರಿಗಳನ್ನು ಯಾರೋ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದು ಗಾಬರಿಗೊಂಡು ತನ್ನ ಮರಿಗಳನ್ನು ಮುಟ್ಟಲು ಬಂದ ವ್ಯಕ್ತಿಯ ಮೇಲೆ ಕೋಪಗೊಂಡು ಸಾಕಷ್ಟು ದೂರದ ವರೆಗೆ ಆತನನ್ನು ಓಡಾಡಿಸಿಕೊಂಡು ಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದಂತೆ ಸಾಕಷ್ಟು ವೀಕ್ಷಕರೂ ತಾಯಿಯ ಪ್ರೀತಿಯೇ ವಿಶೇಷವಾದುದು ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಪ್ರಾಣಿ ಪ್ರಿಯರೂ ತಮ್ಮ ಖಾತೆಗಳಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಚಿತ್ರೀಕರಿಸುತ್ತಿದ್ದ ಮಹಿಳೆ ಈ ಅನೀರಿಕ್ಷಿತ ಪ್ರಸಂಗವನ್ನು ಕಂಡು ನಗುತ್ತಿರುವುದು ವಿಡಿಯೋದ ಮೂಲಕ ಕೇಳಬಹುದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ:

Follow Us
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ನಾಗೇಂದ್ರ ಮತ್ತಷ್ಟು ಸಂಕಷ್ಟ: ಪ್ರಾಸಿಕ್ಯೂಷನ್‌ಗೆ ಅನುಮತಿ ಸಿಬಿಐ ಪತ್ರ!
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ
2 ಕೋಟಿ ರೂ. ವೆಚ್ಚದಲ್ಲಿ 700 ವರ್ಷಗಳ ಪುರಾತನ ದೇಗುಲ ಜೀರ್ಣೋದ್ಧಾರ