AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್ ಹೊರಟರೆ ಏನಾಗುತ್ತದೆ ನೋಡಿ

Viral Video : ಮುಗ್ಗರಿಸಿಕೊಂಡು ಬಿದ್ದರೂ, ನಾಯಿ ದರದರನೆ ಇವನನ್ನು ಎಳೆದುಕೊಂಡು ಹೋದರೂ ಈತ ಮಾತ್ರ ನಾಯಿಯನ್ನು ನಿಯಂತ್ರಿಸುವುದನ್ನು ಬಿಡುವುದಿಲ್ಲ. ಮಿಲಿಯನ್​ಗಟ್ಟಲೆ ಜನ ನೋಡಿದ ಈ ವಿಡಿಯೋ ಇಲ್ಲಿದೆ.

ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್ ಹೊರಟರೆ ಏನಾಗುತ್ತದೆ ನೋಡಿ
ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್​ ಹೊರಟಾಗ
TV9 Web
| Updated By: ಶ್ರೀದೇವಿ ಕಳಸದ|

Updated on: Nov 29, 2022 | 4:59 PM

Share

Viral Video : ಈ ರಸ್ತೆ ದಟ್ಟವಾದ ಹಿಮದಿಂದ ಆವರಿಸಿದೆ. ರಾತ್ರಿ ಸಮಯ ಬೇರೆ. ಆದರೂ ಈ ವ್ಯಕ್ತಿಗೆ ತನ್ನ ನಾಯಿಯೊಂದಿಗೆ ವಾಕಿಂಗ್​ ಮಾಡಬೇಕೆನ್ನಿಸಿದೆ. ಅಂತೂ ರಸ್ತೆಗಿಳಿದಿದ್ದಾನೆ. ತನ್ನ ನಡಿಗೆಗೆ ಅದರ ನಡಿಗೆಯನ್ನು ನಿಯಂತ್ರಿಸಲು ಆತ ನೋಡುತ್ತಿದ್ದಾನೆ. ಆದರೆ ನಾಯಿಯೋ ತನ್ನದೇ ಲೋಕದಲ್ಲಿ ಓಡುತ್ತಿದೆ. ರಸ್ತೆಯ ತಿರುವು ದಾಟಿಕೊಂಡು ಬರುವ ಹೊತ್ತಿಗೆ ಬೆಕ್ಕೋ ನಾಯಿಯೋ ಒಟ್ಟಿನಲ್ಲಿ ಒಂದು ಪ್ರಾಣಿ ಓಡಿಹೋಗುತ್ತಿದ್ದಂತೆ ನಾಯಿಗೆ ಹುಕಿ ಬಂದು ಓಡಲು ಶುರುಮಾಡುತ್ತದೆ. ಪೋಷಕನನ್ನು ದರದರನೆ ಎಳೆದೊಯ್ಯುತ್ತದೆ.

ಆನ್​ಲೈನ್​ನಲ್ಲಿ ಮಂದಿ ಇದನ್ನು ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. ಬೇಕಿತ್ತಾ ಇಂಥ ರಾತ್ರಿಯಲ್ಲಿ ವಾಕಿಂಗ್​ ಎಂದು ಕೇಳುತ್ತಿದ್ದಾರೆ. ಸಾಕಿದ ಮಾತ್ರಕ್ಕೆ ನಾಯಿ ನಿಮ್ಮ ಮಾತು ಕೇಳಲೇಬೇಕು ಅಂತಿಲ್ಲ. ಅದನ್ನು ನಿಯಂತ್ರಿಸಲು ಹೋದರೆ ಏನಾಗುತ್ತದೆ ನೋಡಿ ಎಂದಿದ್ದಾರೆ ಒಬ್ಬರು. ಒಂದಲ್ಲ ಎರಡು ಮೂರು ಸಲ ಬಿದ್ದು ಎದ್ದು ನಾಯಿಯ ಹಿಂದೆ ಓಡಿದ್ದಾಯ್ತಲ್ಲ, ಇನ್ನೊಮ್ಮೆ ಹೀಗೆ ಚಳಿಯಲ್ಲಿ, ಹಿಮದಲ್ಲಿ ನಾಯಿಯನ್ನು ವಾಕಿಂಗ್​ ಕರೆದುಕೊಂಡು ಬರುತ್ತೀಯಾ ಎಂದು ಈ ವ್ಯಕ್ತಿಗೆ ಒಬ್ಬರು ಕೇಳಿದ್ದಾರೆ. ಇಂಥ ಹುಚ್ಚಾಟಗಳಿಗೆ ಬೀಳಬೇಡಿ ಇದು ಅಪಾಯ ಎಂದಿದ್ದಾರೆ ಹಲವಾರು ಜನ.

ಈ ವಿಡಿಯೋ ಅನ್ನು ಈಗಾಗಲೇ 2 ಮಿಲಿಯನ್​ ಜನರು ನೋಡಿದ್ದಾರೆ. 6,000ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಸುಮಾರು 70,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ