AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್ ಹೊರಟರೆ ಏನಾಗುತ್ತದೆ ನೋಡಿ

Viral Video : ಮುಗ್ಗರಿಸಿಕೊಂಡು ಬಿದ್ದರೂ, ನಾಯಿ ದರದರನೆ ಇವನನ್ನು ಎಳೆದುಕೊಂಡು ಹೋದರೂ ಈತ ಮಾತ್ರ ನಾಯಿಯನ್ನು ನಿಯಂತ್ರಿಸುವುದನ್ನು ಬಿಡುವುದಿಲ್ಲ. ಮಿಲಿಯನ್​ಗಟ್ಟಲೆ ಜನ ನೋಡಿದ ಈ ವಿಡಿಯೋ ಇಲ್ಲಿದೆ.

ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್ ಹೊರಟರೆ ಏನಾಗುತ್ತದೆ ನೋಡಿ
ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್​ ಹೊರಟಾಗ
TV9 Web
| Edited By: |

Updated on: Nov 29, 2022 | 4:59 PM

Share

Viral Video : ಈ ರಸ್ತೆ ದಟ್ಟವಾದ ಹಿಮದಿಂದ ಆವರಿಸಿದೆ. ರಾತ್ರಿ ಸಮಯ ಬೇರೆ. ಆದರೂ ಈ ವ್ಯಕ್ತಿಗೆ ತನ್ನ ನಾಯಿಯೊಂದಿಗೆ ವಾಕಿಂಗ್​ ಮಾಡಬೇಕೆನ್ನಿಸಿದೆ. ಅಂತೂ ರಸ್ತೆಗಿಳಿದಿದ್ದಾನೆ. ತನ್ನ ನಡಿಗೆಗೆ ಅದರ ನಡಿಗೆಯನ್ನು ನಿಯಂತ್ರಿಸಲು ಆತ ನೋಡುತ್ತಿದ್ದಾನೆ. ಆದರೆ ನಾಯಿಯೋ ತನ್ನದೇ ಲೋಕದಲ್ಲಿ ಓಡುತ್ತಿದೆ. ರಸ್ತೆಯ ತಿರುವು ದಾಟಿಕೊಂಡು ಬರುವ ಹೊತ್ತಿಗೆ ಬೆಕ್ಕೋ ನಾಯಿಯೋ ಒಟ್ಟಿನಲ್ಲಿ ಒಂದು ಪ್ರಾಣಿ ಓಡಿಹೋಗುತ್ತಿದ್ದಂತೆ ನಾಯಿಗೆ ಹುಕಿ ಬಂದು ಓಡಲು ಶುರುಮಾಡುತ್ತದೆ. ಪೋಷಕನನ್ನು ದರದರನೆ ಎಳೆದೊಯ್ಯುತ್ತದೆ.

ಆನ್​ಲೈನ್​ನಲ್ಲಿ ಮಂದಿ ಇದನ್ನು ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. ಬೇಕಿತ್ತಾ ಇಂಥ ರಾತ್ರಿಯಲ್ಲಿ ವಾಕಿಂಗ್​ ಎಂದು ಕೇಳುತ್ತಿದ್ದಾರೆ. ಸಾಕಿದ ಮಾತ್ರಕ್ಕೆ ನಾಯಿ ನಿಮ್ಮ ಮಾತು ಕೇಳಲೇಬೇಕು ಅಂತಿಲ್ಲ. ಅದನ್ನು ನಿಯಂತ್ರಿಸಲು ಹೋದರೆ ಏನಾಗುತ್ತದೆ ನೋಡಿ ಎಂದಿದ್ದಾರೆ ಒಬ್ಬರು. ಒಂದಲ್ಲ ಎರಡು ಮೂರು ಸಲ ಬಿದ್ದು ಎದ್ದು ನಾಯಿಯ ಹಿಂದೆ ಓಡಿದ್ದಾಯ್ತಲ್ಲ, ಇನ್ನೊಮ್ಮೆ ಹೀಗೆ ಚಳಿಯಲ್ಲಿ, ಹಿಮದಲ್ಲಿ ನಾಯಿಯನ್ನು ವಾಕಿಂಗ್​ ಕರೆದುಕೊಂಡು ಬರುತ್ತೀಯಾ ಎಂದು ಈ ವ್ಯಕ್ತಿಗೆ ಒಬ್ಬರು ಕೇಳಿದ್ದಾರೆ. ಇಂಥ ಹುಚ್ಚಾಟಗಳಿಗೆ ಬೀಳಬೇಡಿ ಇದು ಅಪಾಯ ಎಂದಿದ್ದಾರೆ ಹಲವಾರು ಜನ.

ಈ ವಿಡಿಯೋ ಅನ್ನು ಈಗಾಗಲೇ 2 ಮಿಲಿಯನ್​ ಜನರು ನೋಡಿದ್ದಾರೆ. 6,000ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಸುಮಾರು 70,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ