AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್ ಹೊರಟರೆ ಏನಾಗುತ್ತದೆ ನೋಡಿ

Viral Video : ಮುಗ್ಗರಿಸಿಕೊಂಡು ಬಿದ್ದರೂ, ನಾಯಿ ದರದರನೆ ಇವನನ್ನು ಎಳೆದುಕೊಂಡು ಹೋದರೂ ಈತ ಮಾತ್ರ ನಾಯಿಯನ್ನು ನಿಯಂತ್ರಿಸುವುದನ್ನು ಬಿಡುವುದಿಲ್ಲ. ಮಿಲಿಯನ್​ಗಟ್ಟಲೆ ಜನ ನೋಡಿದ ಈ ವಿಡಿಯೋ ಇಲ್ಲಿದೆ.

ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್ ಹೊರಟರೆ ಏನಾಗುತ್ತದೆ ನೋಡಿ
ಹಿಮತುಂಬಿದ ರಸ್ತೆಯಲ್ಲಿ ನಾಯಿಯೊಂದಿಗೆ ವಾಕಿಂಗ್​ ಹೊರಟಾಗ
TV9 Web
| Edited By: ಶ್ರೀದೇವಿ ಕಳಸದ|

Updated on: Nov 29, 2022 | 4:59 PM

Share

Viral Video : ಈ ರಸ್ತೆ ದಟ್ಟವಾದ ಹಿಮದಿಂದ ಆವರಿಸಿದೆ. ರಾತ್ರಿ ಸಮಯ ಬೇರೆ. ಆದರೂ ಈ ವ್ಯಕ್ತಿಗೆ ತನ್ನ ನಾಯಿಯೊಂದಿಗೆ ವಾಕಿಂಗ್​ ಮಾಡಬೇಕೆನ್ನಿಸಿದೆ. ಅಂತೂ ರಸ್ತೆಗಿಳಿದಿದ್ದಾನೆ. ತನ್ನ ನಡಿಗೆಗೆ ಅದರ ನಡಿಗೆಯನ್ನು ನಿಯಂತ್ರಿಸಲು ಆತ ನೋಡುತ್ತಿದ್ದಾನೆ. ಆದರೆ ನಾಯಿಯೋ ತನ್ನದೇ ಲೋಕದಲ್ಲಿ ಓಡುತ್ತಿದೆ. ರಸ್ತೆಯ ತಿರುವು ದಾಟಿಕೊಂಡು ಬರುವ ಹೊತ್ತಿಗೆ ಬೆಕ್ಕೋ ನಾಯಿಯೋ ಒಟ್ಟಿನಲ್ಲಿ ಒಂದು ಪ್ರಾಣಿ ಓಡಿಹೋಗುತ್ತಿದ್ದಂತೆ ನಾಯಿಗೆ ಹುಕಿ ಬಂದು ಓಡಲು ಶುರುಮಾಡುತ್ತದೆ. ಪೋಷಕನನ್ನು ದರದರನೆ ಎಳೆದೊಯ್ಯುತ್ತದೆ.

ಆನ್​ಲೈನ್​ನಲ್ಲಿ ಮಂದಿ ಇದನ್ನು ನೋಡಿ ಬಿದ್ದುಬಿದ್ದು ನಗುತ್ತಿದ್ದಾರೆ. ಬೇಕಿತ್ತಾ ಇಂಥ ರಾತ್ರಿಯಲ್ಲಿ ವಾಕಿಂಗ್​ ಎಂದು ಕೇಳುತ್ತಿದ್ದಾರೆ. ಸಾಕಿದ ಮಾತ್ರಕ್ಕೆ ನಾಯಿ ನಿಮ್ಮ ಮಾತು ಕೇಳಲೇಬೇಕು ಅಂತಿಲ್ಲ. ಅದನ್ನು ನಿಯಂತ್ರಿಸಲು ಹೋದರೆ ಏನಾಗುತ್ತದೆ ನೋಡಿ ಎಂದಿದ್ದಾರೆ ಒಬ್ಬರು. ಒಂದಲ್ಲ ಎರಡು ಮೂರು ಸಲ ಬಿದ್ದು ಎದ್ದು ನಾಯಿಯ ಹಿಂದೆ ಓಡಿದ್ದಾಯ್ತಲ್ಲ, ಇನ್ನೊಮ್ಮೆ ಹೀಗೆ ಚಳಿಯಲ್ಲಿ, ಹಿಮದಲ್ಲಿ ನಾಯಿಯನ್ನು ವಾಕಿಂಗ್​ ಕರೆದುಕೊಂಡು ಬರುತ್ತೀಯಾ ಎಂದು ಈ ವ್ಯಕ್ತಿಗೆ ಒಬ್ಬರು ಕೇಳಿದ್ದಾರೆ. ಇಂಥ ಹುಚ್ಚಾಟಗಳಿಗೆ ಬೀಳಬೇಡಿ ಇದು ಅಪಾಯ ಎಂದಿದ್ದಾರೆ ಹಲವಾರು ಜನ.

ಈ ವಿಡಿಯೋ ಅನ್ನು ಈಗಾಗಲೇ 2 ಮಿಲಿಯನ್​ ಜನರು ನೋಡಿದ್ದಾರೆ. 6,000ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಸುಮಾರು 70,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ