AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಪಿತೃತ್ವ ರಜೆ ಕೊಡೋದು ಬಿಟ್ಟು ವರ್ಗಾವಣೆ ಮಾಡಲು ಮುಂದಾದ ಬಾಸ್; ಕೋಪಕ್ಕೆ 8 ಕೋಟಿ ರೂ. ಸಂಬಳದ ಉದ್ಯೋಗ ತ್ಯಜಿಸಿದ ವಕೀಲ

ಸೋಷಿಯಲ್‌ ಮೀಡಿಯಾ ಬಳಕೆದಾರರು ಪ್ರತಿನಿತ್ಯ ಒಂದಲ್ಲಾ ಒಂದು ಇಂಟರೆಸ್ಟಿಂಗ್‌ ಕಥೆಗಳ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿ ಕೆಲವು ಪೋಸ್ಟ್‌ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. ಇದೀಗ ಅದೇ ರೀತಿ ಲಾಯರ್‌ ಒಬ್ಬರ ಕಥೆ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಪತ್ನಿ 8 ತಿಂಗಳ ಗರ್ಭಿಣಿ ಆಗಿದ್ದ ಕಾರಣ ನನ್ನನ್ನು ವರ್ಗಾವಣೆ ಮಾಡಬೇಡಿ, ಪಿತೃತ್ವ ರಜೆ ಕೊಡಿ ಕೇಳಿದ್ದು, ಆದ್ರೆ ಬಾಸ್‌ ಇದಕ್ಕೆ ನಿರಾರಿಸಿದ್ದು, ಇದರಿಂದ ವಕೀಲ 8 ಕೋಟಿ ರೂ. ಸಂಬಳದ ಉದ್ಯೋಗವನ್ನೇ ತ್ಯಜಿಸಿದ್ದಾರೆ.

Viral: ಪಿತೃತ್ವ ರಜೆ ಕೊಡೋದು ಬಿಟ್ಟು ವರ್ಗಾವಣೆ ಮಾಡಲು ಮುಂದಾದ ಬಾಸ್; ಕೋಪಕ್ಕೆ 8 ಕೋಟಿ ರೂ. ಸಂಬಳದ ಉದ್ಯೋಗ ತ್ಯಜಿಸಿದ ವಕೀಲ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Feb 28, 2025 | 5:22 PM

Share

ಕೆಲಸದ ಜೊತೆ ಜೊತೆಗೆ ಕುಟುಂಬಕ್ಕೂ ಸಮಯ ನೀಡುವುದು ಮುಖ್ಯವಾಗಿದೆ. ಸಂಬಳಕ್ಕಿಂತ ವೈಯಕ್ತಿಕ ಜೀವನವೇ ಮುಖ್ಯ ಎನ್ನುವವರು ಹಲವರಿದ್ದಾರೆ. ಹೀಗೆ ಒತ್ತಡದ ಕೆಲಸದ ಕಾರಣದಿಂದ ಕುಟುಂಬದ ಜೊತೆ ಸಮಯ ಕಳೆಯಲು ಸಾಧ್ಯವಿಲ್ಲ ಎಂದು ಕೈ ತುಂಬಾ ಸಂಬಳ ಸಿಗುವ ದೊಡ್ಡ ಹುದ್ದೆಯನ್ನೇ ತ್ಯಜಿಸಿದವರು ಇದ್ದಾರೆ. ಅದೇ ರೀತಿ ಇಲ್ಲೊಬ್ರು ವಕೀಲ 8 ಕೋಟಿ ಸಂಬಳ ಸಿಗುವ ಉದ್ಯೋಗವನ್ನೇ ತ್ಯಜಿಸಿದ್ದಾರೆ. ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಪತ್ನಿ 8 ತಿಂಗಳ ಗರ್ಭಿಣಿ ಆಗಿದ್ದ ಕಾರಣ ನನ್ನನ್ನು ವರ್ಗಾವಣೆ ಮಾಡಬೇಡಿ, ಪಿತೃತ್ವ ರಜೆ ಕೊಡಿ ಕೇಳಿದ್ದು, ಆದ್ರೆ ಬಾಸ್‌ ಇದಕ್ಕೆ ನಿರಾರಿಸಿದ್ದು, ಬಾಸ್‌ನ ಈ ನಿರ್ಧಾರದಿಂದ ಬೇಸತ್ತ ವಕೀಲ ಕೈ ತುಂಬಾ ಸಂಬಳ ಸಿಗುವ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕದ ವಕೀಲರೊಬ್ಬರು ತಮ್ಮ ಬಾಸ್ ವರ್ಗಾವಣೆ ಮಾಡುವುದರ ಜೊತೆಗೆ ತಾನು ಕೇಳಿದ್ದ ಪಿತೃತ್ವ ರಜೆ ನಿರಾಕರಿಸಿದಕ್ಕೆ ಬೇಸರಗೊಂಡು ವಾರ್ಷಿಕವಾಗಿ ಸುಮಾರು $900,000 ಅಂದರೆ ಸುಮಾರು 7.8 ಕೋಟಿ ರೂ. ಸಂಬಳ ಸಿಗುತ್ತಿದ್ದ ಕೆಲಸವನ್ನೇ ತೊರೆದಿದ್ದಾರೆ.

ಇದನ್ನೂ ಓದಿ
Image
ಮೂತ್ರ ವಿಸರ್ಜಿಸಲು ರೈಲನ್ನೇ ನಿಲ್ಲಿಸಿದ ಲೋಕೋ ಪೈಲಟ್
Image
ಇಂಥ ಮಕ್ಕಳೂ ಇರ್ತಾರಾ… ಹೊಡೆದು ಬಡಿದು ತಾಯಿಯನ್ನೇ ಹಿಂಸಿಸಿದ ಮಗಳು
Image
ಪರೀಕ್ಷಾ ಕೊಠಡಿಯಲ್ಲಿ ಬೋರ್ಡ್​ ಮೇಲೆ ಉತ್ತರಗಳ ಬರೆದ ಶಿಕ್ಷಕಿ, ಅಮಾನತು
Image
ಕುಂಭಮೇಳದಲ್ಲಿ 37 ವರ್ಷಗಳ ಬಳಿಕ ಮುಖಾಮುಖಿಯಾದ ಸ್ನೇಹಿತರು

ನಿಕ್ ಹ್ಯೂಬರ್ (Nick Huber) ವಕೀಲರ ಈ ಕಥೆಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿದ್ದು, ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸುವ ವಿಷಯಕ್ಕೆ ಬಂದಾಗ ಪ್ರತಿಯೊಬ್ಬರೂ ತಮ್ಮ ಜೀವನದ ಒಂದು ಹಂತದಲ್ಲಿ ಇಂತಹ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಹೇಳಿದ್ದಾರೆ.

ವಾರ್ಷಿಕವಾಗಿ ಸುಮಾರು $900,000 ಅಂದರೆ 7.8 ಕೋಟಿ ರೂ. ಗಳಿಸುತ್ತಿದ್ದ 32 ವರ್ಷದ ವಕೀಲರು ತಮ್ಮ ಬಾಸ್‌ನ ನಡೆಯಿಂದ ಕೆಲಸವನ್ನು ತೊರೆಯಬೇಕಾಯಿತು. ಈ ಲಾಯರ್ ಕಳೆದ ಐದು ವರ್ಷಗಳಿಂದ ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದ ವಿಷಯದ ಬಗ್ಗೆ ತುಂಬಾ ನಿಷ್ಠಾವಂತರಾಗಿದ್ದ ಇವರು ವಾರಕ್ಕೆ ಸುಮಾರು 80 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಆದರೆ ಇವರ ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದಾಗಲೇ, ಇವರ ಬಾಸ್ ಇವರನ್ನು ಬೇರೆಡೆ ವರ್ಗಾವಣೆ ಮಾಡಲು ನಿರ್ಧರಿಸಿದರು.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಹೆರಿಗೆಯ ಸಮಯದಲ್ಲಿ ತನ್ನ ಹೆಂಡತಿಯೊಂದಿಗೆ ಇರಬೇಕೆಂದು ಬಯಸಿದ ಲಾಯರ್‌ ವರ್ಗಾವಣೆ ಮಾಡ್ಬೇಡಿ, ನನಗೆ ಒಂದಷ್ಟು ದಿನ ಪಿತೃತ್ವ ರಜೆ ನೀಡುವಂತೆ ವಿನಂತಿಸಿದರು. ಆದರೆ ಬಾಸ್‌ ಅವರ ಕೋರಿಕೆಯನ್ನು ತಿರಸ್ಕರಿಸಿದ್ದು, ಆ ತಕ್ಷಣವೇ ಲಾಯರ್‌ ಕೆಲಸ ತ್ಯಜಿಸಿದ್ದಾರೆ. ಸದ್ಯ ಈ ಪೋಸ್ಟ್‌ ಸಖತ್‌ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಟ್ರೈನ್ ನಿಲ್ಲಿಸಿ ರೈಲ್ವೆ ಹಳಿಯ ಮೇಲೆಯೇ ಮೂತ್ರ ವಿಸರ್ಜಿಸಿದ ಲೋಕೋ ಪೈಲಟ್‌; ವಿಡಿಯೋ ವೈರಲ್‌

ಫೆಬ್ರವರಿ 26 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 4.9 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಣಕ್ಕಿಂತ ವಕೀಲ ಅವರ ಸ್ವಾತಂತ್ರ್ಯವನ್ನು ಆಯ್ಕೆ ಮಾಡಿದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಸ್ಟೋರಿ ತುಂಬಾ ಆಸಕ್ತಿಕರವಾಗಿತ್ತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹಣಕ್ಕಿಂತ ಕುಟುಂಬವೇ ಮುಖ್ಯವೆಂದು ಇವರು ತಿಳಿಸಿಕೊಟ್ಟಿದ್ದಾರೆʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Fri, 28 February 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್