AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಳ್ಳುಹೆಗ್ಗಣಗಳ ಮರಿಗಳನ್ನು ನೋಡಿದ್ದೀರಾ? ಮಿಲಿಯನ್​ಗಟ್ಟಲೆ ಜನರನ್ನು ಸೆಳೆದಿದೆ ಈ ವಿಡಿಯೋ

Baby Hedgehogs : ಪುಟ್ಟ ಪುಟ್ಟ ಮುಳ್ಳುಹೆಗ್ಗಣಗಳನ್ನು ನೋಡಿದ ಒಬ್ಬರು ಇವು ಎರೇಸರ್​ನಂತಿವೆಯಲ್ಲ, ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ಮರಿಗಳನ್ನು ನೋಡಿದಾಗ ನಿಮಗೇನು ಅನ್ನಿಸುತ್ತದೆ? ತಿಳಿಸಿ.

ಮುಳ್ಳುಹೆಗ್ಗಣಗಳ ಮರಿಗಳನ್ನು ನೋಡಿದ್ದೀರಾ? ಮಿಲಿಯನ್​ಗಟ್ಟಲೆ ಜನರನ್ನು ಸೆಳೆದಿದೆ ಈ ವಿಡಿಯೋ
ತನ್ನ ಮರಿಗಳೊಂದಿಗೆ ತಾಯಿಮುಳ್ಳುಹೆಗ್ಗಣ
TV9 Web
| Edited By: ಶ್ರೀದೇವಿ ಕಳಸದ|

Updated on:Nov 26, 2022 | 10:38 AM

Share

Viral Video : ಇಲಿಮರಿಯಾದರೇನು ಕೋಳಿಮರಿಯಾದರೇನು ಹಂದಿಮರಿಯಾದರೇನು ಮುಳ್ಳಹಂದಿಮರಿಯಾದರೇನು ಮರಿಗಳು ಯಾವತ್ತೂ ಮುದ್ದುಮುದ್ದು. ಆಗಷ್ಟೇ ಹುಟ್ಟಿದ ಮರಿಗಳಂತೂ ಮೃದುಮೃದು. ನೀವು ಈ ಮುಳ್ಳುಹೆಗ್ಗಣದ ಮರಿಗಳನ್ನು ನೋಡಿದ್ದೀರಾ? ನೋಡಿಲ್ಲವಾದರೆ ಈ ವಿಡಿಯೋದಲ್ಲಿ ನೋಡಿ. ಸಾಮಾಜಿಕ ಜಾಲತಾಣಗಳಲ್ಲಿ ಜನ ಈ ಅಮ್ಮ ಮತ್ತು ಮರಿಗಳನ್ನು ಬೆರಗಿನಿಂದ ನೋಡುತ್ತಿದ್ದಾರೆ.

ಇವುಗಳನ್ನು ನೋಡಿದ ಹಲವರು, ಮೊದಲಸಲ ಮುಳ್ಳುಹೆಗ್ಗಣಗಳ ಮರಿಗಳನ್ನು ನೋಡುತ್ತಿರುವುದು, ಹೀಗಿರುತ್ತವೆ ಎಂಬ ಅಂದಾಜೇ ಇರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಿಳಿಗುಲಾಬಿ ಬಣ್ಣದ ಮರಿಗಳು ಔಡಲಕಾಯಿಗಳನ್ನು ಹೋಲುವ ವಿನ್ಯಾಸದಲ್ಲಿವೆಯಲ್ಲ? ಈತನಕ ಈ ವಿಡಿಯೋ ಅನ್ನು 4.7 ಮಿಲಿಯನ್​ ಜನರು ನೋಡಿದ್ದಾರೆ. 1,93,400 ಜನರು ಇಷ್ಟಪಟ್ಟಿದ್ದಾರೆ. 17,800 ಜನರು ರೀಟ್ವೀಟ್​ ಮಾಡಿದ್ದಾರೆ. 1,700 ಜನರು ಪ್ರತಿಕ್ರಿಯಿಸಿದ್ದಾರೆ.

ಓಹ್​ ದೇವರೇ ಇವು ಪುಟ್ಟ ಎರೇಸರ್​ನಂತೆ ಕಂಡವು ನನಗೆ ಎಂದಿದ್ದಾರೆ ಒಬ್ಬರು. ಎಂಥ ಮುದ್ದಾಗಿವೆ ಅದರ ಎಳೇಮುಳ್ಳುಗಳು, ಆ ತಿಳಿಗುಲಾಬಿ, ಮಕ್ಕಳ ಕೈಗೆ ಸಿಕ್ಕರೆ ಆಟವಾಡಲು ಶುರುಮಾಡುತ್ತಾರಷ್ಟೇ ಎಂದಿದ್ದಾರೆ ಇನ್ನೂ ಒಬ್ಬರು. ನಾನು ಮೊದಲ ಸಲ ಈ ಮುಳ್ಳುಹೆಗ್ಗಣಗಳನ್ನು ನೋಡುತ್ತಿದ್ದೇನೆ ಮುಟ್ಟಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ನೀವು ಈ ಮೊದಲು ನೋಡಿದ್ದೀರಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:38 am, Sat, 26 November 22

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​