
ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನಲ್ಲಿ ರುಚಿಕರ ಖಾದ್ಯಗಳಿಗೆ ಈ ವಿದ್ಯಾರ್ಥಿ ಭವನ ರೆಸ್ಟೋರೆಂಟ್ ಸಿಕ್ಕಾಪಟ್ಟೆ ಫೇಮಸ್. ಶನಿವಾರ, ಭಾನುವಾರವಂತೂ ದೋಸೆ ಸೇರಿದಂತೆ ಇನ್ನಿತ್ತರ ಖಾದ್ಯ ಸವಿಯಲು ಆಹಾರ ಪ್ರಿಯರ ದಂಡೇ ಜಮಾಯಿಸುತ್ತದೆ. ಇನ್ನು ಮಸಾಲೆ ದೋಸೆ, ಇಡ್ಲಿ, ಖಾರಾ ಬಾತ್, ರವೆ ವಡೆ ಸೇರಿದಂತೆ ಕಾಫಿ ಕುಡಿಯಲು ಸಾಮಾನ್ಯ ಜನರಿಂದ ಹಿಡಿದು ರಾಜಕಾರಣಿಗಳು, ಸೆಲೆಬ್ರಿಟಿಗಳ ವರೆಗೆ ಇಲ್ಲಿಗೆ ಬರ್ತಾರೆ. ಇದೀಗ ಇಸ್ರೋದ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ (Former ISRO Chairman Dr. S. Somnath) ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ (Vidyarthi Bhavan in Bengaluru) ಭೇಟಿ ನೀಡಿ ಇಲ್ಲಿ ಸಿಗುವ ರುಚಿಕರ ಬೆಣ್ಣೆ ಮಸಾಲೆ ದೋಸೆಯನ್ನು ಸವಿದಿದ್ದಾರೆ. ಎಸ್. ಸೋಮನಾಥ್ ಭೇಟಿಯ ಕ್ಷಣಗಳನ್ನು ವಿದ್ಯಾರ್ಥಿ ಭವನದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಹೋಟೆಲ್ ಮಾಲೀಕ ಸಂತೋಷ ವ್ಯಕ್ತಪಡಿಸಿದ್ದಾರೆ.
Vidyarthibhavan ಹೆಸರಿನ ಇನ್ಸ್ಟಾಗ್ರಾಮ್ ನ ಅಧಿಕೃತ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, ಇಸ್ರೋದ ಮಾಜಿ ಅಧ್ಯಕ್ಷರಾದ @SomanathSpeak ಅವರನ್ನು ಇಂದು ಸಂಜೆ ವಿದ್ಯಾರ್ಥಿ ಭವನದಲ್ಲಿ ಗೌರವ ಸಲ್ಲಿಸಲಾಗಿದೆ. ಚಂದ್ರಯಾನ-3 ರ ಐತಿಹಾಸಿಕ ಯಶಸ್ಸಿನ ಹಿಂದಿನ ನಾಯಕನನ್ನು ಭೇಟಿಯಾಗಲು ಹೆಮ್ಮೆಯ ಕ್ಷಣ. ಅವರು ನಮ್ಮ ಪರಂಪರೆಯ ವಾತಾವರಣ ಮತ್ತು ಐಕಾನಿಕ್ ಸುವಾಸನೆಗಳನ್ನು ಆನಂದಿಸಿದ್ದಾರೆ ಎಂದು ಸಂತೋಷವಾಯಿತು” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಇಲ್ಲಿ ಶೇರ್ ಮಾಡಲಾದ ಫೋಟೋಗಳಲ್ಲಿ ಡಾ. ಸೋಮನಾಥ್ ತಮ್ಮ ಪತ್ನಿ ಮತ್ತು ರೆಸ್ಟೋರೆಂಟ್ನ ಮಾಲೀಕ ಎಸ್. ರಾಮಕೃಷ್ಣ ಅಡಿಗ ಅವರೊಂದಿಗೆ ಗರಿಗರಿಯಾದ ದೋಸೆಗಳನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಒಂದು ಫೋಟೋದಲ್ಲಿ ಡಾ. ಎಸ್. ಸೋಮನಾಥ್ ಅವರು ಏಣಿಯಂತೆ ದೋಸೆ ಪ್ಲೇಟ್ ನ್ನು ಕೈಯನ್ನು ಹಿಡಿದಿರುವ ವೆಟೈರ್ ಪಕ್ಕದಲ್ಲಿ ಪೋಸ್ ನೀಡಿದ್ದಾರೆ. ಪತ್ನಿಯೊಂದಿಗೆ ಉಪಾಹಾರ ಗೃಹದಲ್ಲಿ ಅವರ ಉಪಸ್ಥಿತಿಯು ರೆಸ್ಟೋರೆಂಟ್ ತಂಡವನ್ನು ಸಂತೋಷಪಡಿಸಿರುವುದನ್ನು ಕಾಣಬಹುದು.
ಇದನ್ನೂ ಓದಿ:Video: ಬೆಂಗಳೂರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ಫುಡ್ ಸವಿದು ಪ್ರಾಮಾಣಿಕ ರೇಟಿಂಗ್ಸ್ ನೀಡಿದ ಅಮೆರಿಕನ್ ವ್ಲಾಗರ್
ಈ ಪೋಸ್ಟ್ ಗೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಬ್ಬ ಬಳಕೆದಾರರೊಬ್ಬರು, ರಾಕೆಟ್ ಮ್ಯಾನ್ ವಿಥ್ ದೋಸಾ ಮ್ಯಾನ್ ಎಂದಿದ್ದಾರೆ. ಇನ್ನೊಬ್ಬರು ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಸುಮ್ಮನೆ ಹಣ ಖರ್ಚು ಎಂದು ಹೇಳಿದರೆ, ಇನ್ನು ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ