AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ತುರ್ತು ಶಸ್ತ್ರ ಚಿಕಿತ್ಸೆ ಅಂದ್ರು ವಿಚಿತ್ರ ಬೇಡಿಕೆ ಇಟ್ಟ ಬಾಸ್, ಕಹಿ ಅನುಭವ ಹಂಚಿಕೊಂಡ ಉದ್ಯೋಗಿ

ರಜೆ ವಿಷ್ಯದಲ್ಲಿ ಆಫೀಸ್ ಬಾಸ್ ಉದ್ಯೋಗಿಗಳ ಜತೆಗೆ ಕಾಂಪ್ರೊಮೈಸ್ ಮಾಡಿಕೊಳ್ಳಲ್ಲ. ಆರೋಗ್ಯ ಸಮಸ್ಯೆ ಅಂದ್ರು ಈ ಬಾಸ್ ರಜೆ ಕೊಡಲ್ಲ ಅನ್ನೋದು ಎಷ್ಟೋ ಉದ್ಯೋಗಿಗಳ ಗೋಳು. ಇದೀಗ ಉದ್ಯೋಗಿಯೊಬ್ಬರು ಶಸ್ತ್ರ ಚಿಕಿತ್ಸೆಗೆ ಹಾಜರಾಗುವ ದಿನವೂ ಆಫೀಸ್ ಗೆ ತೆರಳಿದ್ದಾರೆ. ಮಾನವೀಯತೆ ಇಲ್ಲದೇ ನಡೆದುಕೊಂಡ ಬಾಸ್ ನಡೆ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ತುರ್ತು ಶಸ್ತ್ರ ಚಿಕಿತ್ಸೆ ಅಂದ್ರು ವಿಚಿತ್ರ ಬೇಡಿಕೆ ಇಟ್ಟ ಬಾಸ್, ಕಹಿ ಅನುಭವ ಹಂಚಿಕೊಂಡ ಉದ್ಯೋಗಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Jun 15, 2026 | 7:47 PM

Share

ಎಷ್ಟೇ ಒತ್ತಡಭರಿತ ಕೆಲಸವೇ (job) ಇರಲಿ, ಕೆಲಸ ಬಿಟ್ಟರೆ ಬೇರೆ ಉದ್ಯೋಗ ಸಿಗಲ್ಲ ಎನ್ನುವ ಅನಿವಾರ್ಯ ಕಾರಣಕ್ಕಾಗಿ ಕೆಲಸ ಮಾಡುತ್ತಾರೆ. ಆದರೆ ಈ ಬಾಸ್ ಗಲು ರಜೆ ವಿಷ್ಯದಲ್ಲಿ ಉದ್ಯೋಗಿಗಳಿಗೆ ಕೊಡುವ ಕಾಟ ಅಷ್ಟಿಷ್ಟಲ್ಲ. ಹುಷಾರಿಲ್ಲ ಅಂದ್ರು ನಮ್ಮ ಬಾಸ್ ರಜೆ ಕೊಡೋಕೆ ಹಿಂದೆ ಮುಂದೆ ನೋಡ್ತಾರೆ ಎಂದು ಅದೆಷ್ಟೋ ಜನ ಹೇಳೋದಿದೆ. ಈ ವ್ಯಕ್ತಿಯ ವಿಷ್ಯದಲ್ಲೂ ಹಾಗೆಯೇ ಆಗಿದೆ. ಈ ಉದ್ಯೋಗಿ ತನ್ನ ಕಠಿಣ ಪರಿಸ್ಥಿತಿಯನ್ನು ರೆಡ್ಡಿಟ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ. ಗಂಭೀರ ಆರೋಗ್ಯ ಸಮಸ್ಯೆಯಿದ್ದು ತುರ್ತು ಶಸ್ತ್ರಚಿಕಿತ್ಸೆಗೆ ನಿಗದಿಪಡಿಸಿದ ದಿನವೇ ಕೆಲಸಕ್ಕೆ ಹಾಜರಾಗಲು ತಮ್ಮ ಬಾಸ್ ಕೇಳಿಕೊಂಡಿದ್ದರು ಎನ್ನುವ ಪೋಸ್ಟ್ ಆನ್ಲೈನ್‌ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

ರೆಡ್ಡಿಟ್ ಪೋಸ್ಟ್ ನಲ್ಲಿ ಸಂದರ್ಭಕ್ಕೆ ತಕ್ಕಂತೆ, ಕಳೆದ ವರ್ಷ ನನಗೆ ‘ಕನಸಿನ’ ಉದ್ಯಮದಲ್ಲಿ ಕೆಲಸ ಸಿಕ್ಕಿತು. ಆದಾಗ್ಯೂ, ಈ ಎರಡು ವರ್ಷಗಳ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಈ ಎರಡು ಬದಲಾವಣೆಗಳಾಗಿವೆ. ಆದರೆ, ನನ್ನ ಸಂಗಾತಿಯ ಕೆಲಸ ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿದ್ದರಿಂದ, ಇನ್ನೊಂದು ನನಗೆ ಕ್ಯಾನ್ಸರ್ ಇರುವುದು ಪತ್ತೆಯಾದ ಕಾರಣ. ನಾನು ಹತಾಶನಾಗಿದ್ದೆ, ಸಾಧ್ಯವಾದಷ್ಟು ಕಾಲ ಈ ಕೆಲಸವನ್ನು ಮಾಡಲು ನಾನು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ನಾನು ಯಾವುದೇ ಪೂರ್ಣ ದಿನ ರಜೆ ತೆಗೆದುಕೊಂಡಿಲ್ಲ. ನಾನು ಪ್ರತಿ ಬಾರಿಯೂ ಪ್ರಯಾಣಿಸಿ ಕೆಲಸ ಮಾಡಿದ್ದೇನೆ. ನಾನು ವಾರಾಂತ್ಯದಲ್ಲಿ, ಬೆಳಿಗ್ಗೆ ಹಾಗೂ ರಾತ್ರಿ ಹೆಚ್ಚಾಗಿ ಕರೆಯಲ್ಲಿಯೇ ಕೆಲಸ ಮಾಡುತ್ತೇನೆ. ನಾನು ಸೆಲೆಬ್ರಿಟಿ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತೇನೆ. ತೆರಿಗೆಗಳನ್ನು ಸೇರಿಸಿ ಗಂಟೆಗೆ ಸುಮಾರು 13 ಡಾಲರ್‌ಗಳನ್ನು ಗಳಿಸುತ್ತೇನೆ ಎಂದಿದ್ದಾರೆ.

ಕಳೆದ ವಾರ ನನ್ನ ನಿಯಂತ್ರಣಕ್ಕೆ ಮೀರಿದ ಆರೋಗ್ಯ ಸಮಸ್ಯೆಯಿಂದ ನಾನು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ನನ್ನ ಬಾಸ್ ಅದೇ ದಿನ ಸಭೆಗೆ ಹಾಜರಾಗಲು ನನ್ನನ್ನು ಕೇಳಿದರು. ನಾನು ಕೂಡ ಹಾಜರಾದೆ. ಈಗ ನಾನು ಚೇತರಿಸಿಕೊಳ್ಳುತ್ತಿದ್ದರೂ ಅವರು ತುಂಬಾ ಬೇಡಿಕೆಯಿಡುತ್ತಿದ್ದಾರೆ. ನಾನು ಮಧ್ಯದಲ್ಲಿ ಸಿಲುಕಿಕೊಂಡಿದ್ದೇನೆ. ದುಃಖಿತನಾಗಿದ್ದೇನೆ. ನನ್ನ ರೆಸ್ಯೂಮ್‌ನಲ್ಲಿ ಗೌರವಿಸಲ್ಪಡಲು ಮಾತ್ರ. ಈ ನಿಂದನೀಯವೆಂದು ಭಾವಿಸುವ ನಡವಳಿಕೆಗಾಗಿ ನಾನು ನಿರಂತರವಾಗಿ ಹಿಂದಕ್ಕೆ ಬಾಗುತ್ತಿದ್ದೇನೆ. ನಾನು ಇನ್ನೊಂದು ವರ್ಷ ಈ ಕೆಲಸದಲ್ಲಿ ಮುಂದುವರಿಯಬೇಕೇ? ಎಂದು ಸಲಹೆ ಕೇಳಿದ್ದಾರೆ.

ಇದನ್ನೂ ಓದಿ: ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಸರ್ಪ್ರೈಸ್ ಕೊಟ್ಟ ತಂದೆ, ಇದೇ ನೋಡಿ ತಂದೆ ಪ್ರೀತಿ

ಈ ರೆಡ್ಡಿಟ್ ಪೋಸ್ಟ್ ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿವೆ. ಒಬ್ಬ ಬಳಕೆದಾರ, ಆರೋಗ್ಯದ ಮೇಲೆ ಗಮನವಿರಲಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಆರೋಗ್ಯವೇ ಸರ್ವಸ್ವ. ಈ ಕೆಲಸದಿಂದ ನಿಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತೀರಿ. ರಜೆಯನ್ನು ಕೇಳಿ ನಿರಾಕರಿಸಿದರೆ, ಹೆಚ್ ಆರ್ ಗೆ ಹೋಗಿ. ಶಸ್ತ್ರಚಿಕಿತ್ಸಕರಿಂದ ಇದನ್ನು ಪ್ರಮಾಣೀಕರಿಸುವ ಪತ್ರವನ್ನು ಬರೆಯಿಸಿ. ನಂತರ ನೀವು ಚೇತರಿಸಿಕೊಳ್ಳುವಾಗ ಬೇರೆ ಉದ್ಯೋಗವನ್ನು ಹುಡುಕಲು ಪ್ರಾರಂಭಿಸಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಈ ಕೆಲಸ ಬಿಟ್ಟು ಆರೋಗ್ಯದ ಬಗ್ಗೆ ಗಮನ ಕೊಡುವುದೇ ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಶೀತಲ ಸಪ್ತಮಿ, ತುಳಸೀದಾಸ ಜಯಂತಿ: ಈ ದಿನದ ದ್ವಾದಶ ರಾಶಿಗಳ ಭವಿಷ್ಯ ಇಲ್ಲಿದೆ
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಮೂವರ ಶೂಟೌಟ್​​ ಕೇಸ್​​: ಅಂದು ನಡೆದದ್ದೇನು? ಇಂಚಿಂಚೂ ಮಾಹಿತಿ ನೀಡಿದ RFO
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್