ಕ್ಯಾಟ್​ವಾಕ್​! ಇಸ್ತಾನ್​ಬುಲ್​ ಫ್ಯಾಷನ್​ ಷೋ ಹಳೆಯ ವಿಡಿಯೋ ವೈರಲ್

Catwalk : ನನ್ನ ಹೆಸರಲ್ಲಿ ಇವರೆಂಥ ಕ್ಯಾಟ್​ವಾಕ್ ಮಾಡುವುದು, ಇವರಷ್ಟೇ ಏಕೆ ಕಿರೀಟ ಧರಿಸುವುದು? ಇಷ್ಟು ವರ್ಷಗಳ ಕಾಲ ನೋಡಿ ನೋಡಿ ಸಾಕಾಗಿ ನಾನೇ ಈಗ ರ್ಯಾಂಪ್​ವಾಕ್ ಮಾಡಿಬಿಟ್ಟೆ! ನೀವಾದರೂ ನನಗೆ ಕಿರೀಟ ತೊಡಿಸುತ್ತೀರಾ?

ಕ್ಯಾಟ್​ವಾಕ್​! ಇಸ್ತಾನ್​ಬುಲ್​ ಫ್ಯಾಷನ್​ ಷೋ ಹಳೆಯ ವಿಡಿಯೋ ವೈರಲ್
ನೀವಷ್ಟೇನಾ? ನಾನೂ...
Follow us
| Updated By: ಶ್ರೀದೇವಿ ಕಳಸದ

Updated on: Dec 03, 2022 | 9:49 AM

Viral Video : ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಅದರದೇ ಆದ ಸವಾಲು, ಶ್ರಮ ಇದ್ದೇ ಇರುತ್ತದೆ. ಅದರ ಹಿಂದಿನ ಕಷ್ಟಸುಖ ಅವರವರಿಗೇ ಗೊತ್ತು. ಕ್ಯಾಟ್​ವಾಕ್​ ಅನ್ನು ಪರಿಪೂರ್ಣವಾಗಿ ಸಾಧಿಸಿಕೊಳ್ಳಲು ಮಾಡೆಲ್​ಗಳು ಅನೇಕ ವರ್ಷಗಳನ್ನೇ ತೆಗೆದುಕೊಳ್ಳುತ್ತಾರೆ. ಸಾಕಷ್ಟು ಪ್ರಯತ್ನಗಳು ನಡೆದ ನಂತರ ಅವರಿಗೆ ಅವಕಾಶಗಳು ಸಿಗುತ್ತಾ ಹೋಗುತ್ತವೆ. ಇದು 2018ರಲ್ಲಿ ಇಸ್ತಾನ್​ಬುಲ್​ನಲ್ಲಿ ನಡೆದ ಫ್ಯಾಷನ್​ ಷೋ ಒಂದರ ಹಳೆಯ ವಿಡಿಯೋ. ಇದೀಗ ಮತ್ತೆ ವೈರಲ್ ಆಗುತ್ತಿದೆ. ಷೋ ನಡೆಯುತ್ತಿರುವಾಗ ಬೆಕ್ಕೊಂದು ರ್ಯಾಂಪ್​ವಾಕ್ ಮಾಡಿಬಿಟ್ಟಿದೆ! ಎಷ್ಟೊಂದು ಕಷ್ಟಪಡುತ್ತಾರಪ್ಪ ಈ ಜನ ನನ್ನಂತೆ ನಡೆಯಲು ಎಂದು…

ಜಾಣ ಬೆಕ್ಕು ಇದು. ರ್ಯಾಂಪ್​ ಮೇಲೆ ಯಾರಿಗೂ ತೊಂದರೆ ಮಾಡದೆ ಸಹಜವಾಗಿ ನಡೆದಿದೆ. ಎಲ್ಲ ಮಾಡೆಲ್​ಗಳ ಬೆಕ್ಕಿನ ನಡಿಗೆಗಿಂತ ನಿಜವಾದ ಬೆಕ್ಕಿನ ನಡಿಗೆಯನ್ನೇ ಜನ ಕುತೂಹಲದಿಂದ ನೋಡಿದ್ದಾರೆ. ಕ್ಯಾಟ್ಸ್​ ವಿತ್ ಜಾಬ್ಸ್​ ಎಂಬ ಟ್ವಿಟರ್ ಖಾತೆಯು ಈ ವಿಡಿಯೋ ಅನ್ನು ಮರುಹಂಚಿಕೊಂಡಿದೆ.

ಹಳೆಯ ವಿಡಿಯೋ 5 ಮಿಲಿಯನ್​ ವೀಕ್ಷಕರನ್ನು ಸೆಳೆದಿತ್ತು. ಎರಡು ಲಕ್ಷ ಜನರು ಇದನ್ನು ಇಷ್ಟಪಟ್ಟಿದ್ದರು. ಈ ವಿಡಿಯೋ ಅನ್ನು 7.9 ಮಿಲಿಯನ್ ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ಓಹ್ ದೇವರೇ, ಕ್ಯಾಟ್​ ಆನ್​ ದಿ ಕ್ಯಾಟ್​ವಾಕ್​ ಎಂದಿದ್ದಾರೆ.

ಇದನ್ನೂ ನೋಡಿ : ಮೇಆಂವೂ? ಲಗೇಜಿನೊಳಗೆ ಬೆಕ್ಕು; ನ್ಯೂಯಾರ್ಕ್​ ಏರ್​ಪೋರ್ಟ್​ನಲ್ಲಿ ನಡೆದ ಅಚ್ಚರಿಯ ಘಟನೆ

ಸೂಪರ್​! ಇದು ನಿಜಕ್ಕೂ ಬಹಳ ತಮಾಷೆಯಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಮಾಡೆಲ್​ಗಳು ಇನ್ನೂ ಸರಿಯಾಗಿ ಕ್ಯಾಟ್​ವಾಕ್ ಮಾಡಲು ಕಲಿತಿಲ್ಲ ಅದಕ್ಕೇ ರ್ಯಾಂಪ್​ ಮೇಲೆ ಬಂದು ಕಲಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನೋಡಿ ರಾಜಕುಮಾರಿಯಂತೆ ಬಳಕುವುದು ಹೀಗೆ ಎನ್ನುತ್ತಿದೆ ಈ ಬೆಕ್ಕು ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅನಿಸಿಕೆ ಏನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು