AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಟ್​ವಾಕ್​! ಇಸ್ತಾನ್​ಬುಲ್​ ಫ್ಯಾಷನ್​ ಷೋ ಹಳೆಯ ವಿಡಿಯೋ ವೈರಲ್

Catwalk : ನನ್ನ ಹೆಸರಲ್ಲಿ ಇವರೆಂಥ ಕ್ಯಾಟ್​ವಾಕ್ ಮಾಡುವುದು, ಇವರಷ್ಟೇ ಏಕೆ ಕಿರೀಟ ಧರಿಸುವುದು? ಇಷ್ಟು ವರ್ಷಗಳ ಕಾಲ ನೋಡಿ ನೋಡಿ ಸಾಕಾಗಿ ನಾನೇ ಈಗ ರ್ಯಾಂಪ್​ವಾಕ್ ಮಾಡಿಬಿಟ್ಟೆ! ನೀವಾದರೂ ನನಗೆ ಕಿರೀಟ ತೊಡಿಸುತ್ತೀರಾ?

ಕ್ಯಾಟ್​ವಾಕ್​! ಇಸ್ತಾನ್​ಬುಲ್​ ಫ್ಯಾಷನ್​ ಷೋ ಹಳೆಯ ವಿಡಿಯೋ ವೈರಲ್
ನೀವಷ್ಟೇನಾ? ನಾನೂ...
TV9 Web
| Edited By: ಶ್ರೀದೇವಿ ಕಳಸದ|

Updated on: Dec 03, 2022 | 9:49 AM

Share

Viral Video : ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಅದರದೇ ಆದ ಸವಾಲು, ಶ್ರಮ ಇದ್ದೇ ಇರುತ್ತದೆ. ಅದರ ಹಿಂದಿನ ಕಷ್ಟಸುಖ ಅವರವರಿಗೇ ಗೊತ್ತು. ಕ್ಯಾಟ್​ವಾಕ್​ ಅನ್ನು ಪರಿಪೂರ್ಣವಾಗಿ ಸಾಧಿಸಿಕೊಳ್ಳಲು ಮಾಡೆಲ್​ಗಳು ಅನೇಕ ವರ್ಷಗಳನ್ನೇ ತೆಗೆದುಕೊಳ್ಳುತ್ತಾರೆ. ಸಾಕಷ್ಟು ಪ್ರಯತ್ನಗಳು ನಡೆದ ನಂತರ ಅವರಿಗೆ ಅವಕಾಶಗಳು ಸಿಗುತ್ತಾ ಹೋಗುತ್ತವೆ. ಇದು 2018ರಲ್ಲಿ ಇಸ್ತಾನ್​ಬುಲ್​ನಲ್ಲಿ ನಡೆದ ಫ್ಯಾಷನ್​ ಷೋ ಒಂದರ ಹಳೆಯ ವಿಡಿಯೋ. ಇದೀಗ ಮತ್ತೆ ವೈರಲ್ ಆಗುತ್ತಿದೆ. ಷೋ ನಡೆಯುತ್ತಿರುವಾಗ ಬೆಕ್ಕೊಂದು ರ್ಯಾಂಪ್​ವಾಕ್ ಮಾಡಿಬಿಟ್ಟಿದೆ! ಎಷ್ಟೊಂದು ಕಷ್ಟಪಡುತ್ತಾರಪ್ಪ ಈ ಜನ ನನ್ನಂತೆ ನಡೆಯಲು ಎಂದು…

ಜಾಣ ಬೆಕ್ಕು ಇದು. ರ್ಯಾಂಪ್​ ಮೇಲೆ ಯಾರಿಗೂ ತೊಂದರೆ ಮಾಡದೆ ಸಹಜವಾಗಿ ನಡೆದಿದೆ. ಎಲ್ಲ ಮಾಡೆಲ್​ಗಳ ಬೆಕ್ಕಿನ ನಡಿಗೆಗಿಂತ ನಿಜವಾದ ಬೆಕ್ಕಿನ ನಡಿಗೆಯನ್ನೇ ಜನ ಕುತೂಹಲದಿಂದ ನೋಡಿದ್ದಾರೆ. ಕ್ಯಾಟ್ಸ್​ ವಿತ್ ಜಾಬ್ಸ್​ ಎಂಬ ಟ್ವಿಟರ್ ಖಾತೆಯು ಈ ವಿಡಿಯೋ ಅನ್ನು ಮರುಹಂಚಿಕೊಂಡಿದೆ.

ಹಳೆಯ ವಿಡಿಯೋ 5 ಮಿಲಿಯನ್​ ವೀಕ್ಷಕರನ್ನು ಸೆಳೆದಿತ್ತು. ಎರಡು ಲಕ್ಷ ಜನರು ಇದನ್ನು ಇಷ್ಟಪಟ್ಟಿದ್ದರು. ಈ ವಿಡಿಯೋ ಅನ್ನು 7.9 ಮಿಲಿಯನ್ ಜನರು ನೋಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ. ಓಹ್ ದೇವರೇ, ಕ್ಯಾಟ್​ ಆನ್​ ದಿ ಕ್ಯಾಟ್​ವಾಕ್​ ಎಂದಿದ್ದಾರೆ.

ಇದನ್ನೂ ನೋಡಿ : ಮೇಆಂವೂ? ಲಗೇಜಿನೊಳಗೆ ಬೆಕ್ಕು; ನ್ಯೂಯಾರ್ಕ್​ ಏರ್​ಪೋರ್ಟ್​ನಲ್ಲಿ ನಡೆದ ಅಚ್ಚರಿಯ ಘಟನೆ

ಸೂಪರ್​! ಇದು ನಿಜಕ್ಕೂ ಬಹಳ ತಮಾಷೆಯಾಗಿದೆ ಎಂದಿದ್ದಾರೆ ಇನ್ನೊಬ್ಬರು. ಈ ಮಾಡೆಲ್​ಗಳು ಇನ್ನೂ ಸರಿಯಾಗಿ ಕ್ಯಾಟ್​ವಾಕ್ ಮಾಡಲು ಕಲಿತಿಲ್ಲ ಅದಕ್ಕೇ ರ್ಯಾಂಪ್​ ಮೇಲೆ ಬಂದು ಕಲಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ನೋಡಿ ರಾಜಕುಮಾರಿಯಂತೆ ಬಳಕುವುದು ಹೀಗೆ ಎನ್ನುತ್ತಿದೆ ಈ ಬೆಕ್ಕು ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅನಿಸಿಕೆ ಏನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ