AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಈ ಚಮ್ಮಾರಪ್ಪ ಕಾಳು ಕೊಡುತ್ತಾನೆಂದು ಈ ಹಕ್ಕಿಗಳಿಗೆ ಗೊತ್ತು

Cobbler feeds birds : ಈತ ಹೀಗೆ ಅಂಗಡಿಯನ್ನು ದಿನವೂ ಹರವಿ ಕುಳಿತುಕೊಳ್ಳುತ್ತಾನೆ. ಅವನಿಗಾಗಿ ಕಾಯುವಂತೆ ಈ ಹಕ್ಕಿಗಳು ಕುಳಿತುಕೊಳ್ಳುತ್ತವೆ. 2.2 ಮಿಲಿಯನ್​ ನೆಟ್ಟಿಗರು ಈತನ ಶ್ರೀಮಂತಿಕೆಗೆ ಶರಣಾಗಿದ್ದಾರೆ.

Viral Video : ಈ ಚಮ್ಮಾರಪ್ಪ ಕಾಳು ಕೊಡುತ್ತಾನೆಂದು ಈ ಹಕ್ಕಿಗಳಿಗೆ ಗೊತ್ತು
ಈ ಚಮ್ಮಾರ ನಿತ್ಯವೂ ಪಕ್ಷಿಗಳಿಗೆ ಆಹಾರ ಕೊಡುತ್ತಾರೆ.
TV9 Web
| Updated By: ಶ್ರೀದೇವಿ ಕಳಸದ|

Updated on:Sep 13, 2022 | 12:56 PM

Share

Viral Video : ಕೊಡುತ್ತ ಹೋಗಬೇಕು, ಪಡೆಯುವುದರ ಬಗ್ಗೆ ಆಲೋಚನೆ ಇರಬಾರದು ಎನ್ನುವುದಕ್ಕೆ ಸಾಕ್ಷಿ ಈ ಚಮ್ಮಾರ. ತನ್ನ ಅಂಗಡಿಯನ್ನು ಹರವಿಕೊಂಡು ಕುಳಿತಿದ್ದಾನೆ. ಅವನು ಹಾಕುವ ಕಾಳಿಗಾಗಿ ಪಕ್ಷಿಗಳು ಸುತ್ತುವರಿದು ಕುಳಿತಿವೆ. ಕಾಳಿನ ಚೀಲವನ್ನು ಬಿಚ್ಚಿ ಇಡುತ್ತಿದ್ದಂತೆ ಎಲ್ಲ ಪಕ್ಷಿಗಳೂ ಬಂದು ಮುತ್ತುತ್ತವೆ. ಇದು ನಿತ್ಯವೂ ನಡೆಯುವಂಥ ಸುಂದರ ಪ್ರಕ್ರಿಯೆ. ಯಾರಿಗಾದರೂ ನಾವು ಏನನ್ನಾದರೂ ಕೊಡಬೇಕೆಂದರೆ, ದೊಡ್ಡ ಶ್ರೀಮಂತರಾಗಬೇಕಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈತನ ಹೃದಯವೈಶಾಲ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ಆಗಸ್ಟ್​ 15ರಂದು ಉಮ್ಮರ್ ಹುಸೇನ್​ ಎನ್ನುವ ಇನ್​ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇವರೊಬ್ಬ ವಿಡಿಯೋ ಕಂಟೆಂಟರ್. ಹೃದಯದಿಂದ ಯೋಚಿಸುವಂಥ ಅನೇಕ ಸಂಗತಿಗಳುಳ್ಳ ವಿಡಿಯೋಗಳನ್ನು ಇವರು ಅಪ್​ಲೋಡ್ ಮಾಡುತ್ತಾರಾದ್ದರಿಂದ ಲಕ್ಷಾಂತರ ಮಂದಿ ಇವರ ಖಾತೆಯನ್ನು ಫಾಲೋ ಮಾಡುತ್ತ ಬಂದಿದ್ದಾರೆ. ಪ್ರಸ್ತುತ ವಿಡಿಯೋ ಅನ್ನು ಈತನಕ 2.2 ಮಿಲಿಯನ್​ ಜನರು ವೀಕ್ಷಿಸಿದ್ದಾರೆ. ಇನ್ನೇನು ಇದನ್ನು ಮೆಚ್ಚಿದವರ ಸಂಖ್ಯೆ ಒಂದೂವರೆ ಲಕ್ಷಕ್ಕೆ ಏರಲಿದೆ. ಈ ಚಮ್ಮಾರನ ಅಂತಃಕರಣ ನೆಟ್ಟಿಗರನ್ನು ಬಹಳ ಆಪ್ತವಾಗಿ ಹಿಡಿದಿಟ್ಟಿದೆ ಎನ್ನುವುದಕ್ಕೆ ಈ ಅಂಕಿಸಂಖ್ಯೆಗಳೂ ಕಾರಣ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿಜಕ್ಕೂ ಈತ ಶ್ರೀಮಂತನೇ. ಇಂಥವರ ಸಂತತಿ ಹೆಚ್ಚಲಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇಂಥ ಕಾರ್ಯದಲ್ಲಿ ತೊಡಗಿಕೊಂಡಿರುವ ನೀವು ನಿಜಕ್ಕೂ ದೊಡ್ಡವರು ಎಂದು ಮತ್ತೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಹೃದಯವನ್ನು ಹಗೂರಾಗಿಟ್ಟುಕೊಳ್ಳುವುದು ನಮ್ಮ ವೈಯಕ್ತಿಕ ಆಯ್ಕೆ ಅಲ್ಲವೆ?

ಮತ್ತಷ್ಟು ವೈರಲ್ ಆದ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:51 pm, Tue, 13 September 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?