AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಈ ಚಮ್ಮಾರಪ್ಪ ಕಾಳು ಕೊಡುತ್ತಾನೆಂದು ಈ ಹಕ್ಕಿಗಳಿಗೆ ಗೊತ್ತು

Cobbler feeds birds : ಈತ ಹೀಗೆ ಅಂಗಡಿಯನ್ನು ದಿನವೂ ಹರವಿ ಕುಳಿತುಕೊಳ್ಳುತ್ತಾನೆ. ಅವನಿಗಾಗಿ ಕಾಯುವಂತೆ ಈ ಹಕ್ಕಿಗಳು ಕುಳಿತುಕೊಳ್ಳುತ್ತವೆ. 2.2 ಮಿಲಿಯನ್​ ನೆಟ್ಟಿಗರು ಈತನ ಶ್ರೀಮಂತಿಕೆಗೆ ಶರಣಾಗಿದ್ದಾರೆ.

Viral Video : ಈ ಚಮ್ಮಾರಪ್ಪ ಕಾಳು ಕೊಡುತ್ತಾನೆಂದು ಈ ಹಕ್ಕಿಗಳಿಗೆ ಗೊತ್ತು
ಈ ಚಮ್ಮಾರ ನಿತ್ಯವೂ ಪಕ್ಷಿಗಳಿಗೆ ಆಹಾರ ಕೊಡುತ್ತಾರೆ.
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 13, 2022 | 12:56 PM

Viral Video : ಕೊಡುತ್ತ ಹೋಗಬೇಕು, ಪಡೆಯುವುದರ ಬಗ್ಗೆ ಆಲೋಚನೆ ಇರಬಾರದು ಎನ್ನುವುದಕ್ಕೆ ಸಾಕ್ಷಿ ಈ ಚಮ್ಮಾರ. ತನ್ನ ಅಂಗಡಿಯನ್ನು ಹರವಿಕೊಂಡು ಕುಳಿತಿದ್ದಾನೆ. ಅವನು ಹಾಕುವ ಕಾಳಿಗಾಗಿ ಪಕ್ಷಿಗಳು ಸುತ್ತುವರಿದು ಕುಳಿತಿವೆ. ಕಾಳಿನ ಚೀಲವನ್ನು ಬಿಚ್ಚಿ ಇಡುತ್ತಿದ್ದಂತೆ ಎಲ್ಲ ಪಕ್ಷಿಗಳೂ ಬಂದು ಮುತ್ತುತ್ತವೆ. ಇದು ನಿತ್ಯವೂ ನಡೆಯುವಂಥ ಸುಂದರ ಪ್ರಕ್ರಿಯೆ. ಯಾರಿಗಾದರೂ ನಾವು ಏನನ್ನಾದರೂ ಕೊಡಬೇಕೆಂದರೆ, ದೊಡ್ಡ ಶ್ರೀಮಂತರಾಗಬೇಕಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈತನ ಹೃದಯವೈಶಾಲ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ಆಗಸ್ಟ್​ 15ರಂದು ಉಮ್ಮರ್ ಹುಸೇನ್​ ಎನ್ನುವ ಇನ್​ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇವರೊಬ್ಬ ವಿಡಿಯೋ ಕಂಟೆಂಟರ್. ಹೃದಯದಿಂದ ಯೋಚಿಸುವಂಥ ಅನೇಕ ಸಂಗತಿಗಳುಳ್ಳ ವಿಡಿಯೋಗಳನ್ನು ಇವರು ಅಪ್​ಲೋಡ್ ಮಾಡುತ್ತಾರಾದ್ದರಿಂದ ಲಕ್ಷಾಂತರ ಮಂದಿ ಇವರ ಖಾತೆಯನ್ನು ಫಾಲೋ ಮಾಡುತ್ತ ಬಂದಿದ್ದಾರೆ. ಪ್ರಸ್ತುತ ವಿಡಿಯೋ ಅನ್ನು ಈತನಕ 2.2 ಮಿಲಿಯನ್​ ಜನರು ವೀಕ್ಷಿಸಿದ್ದಾರೆ. ಇನ್ನೇನು ಇದನ್ನು ಮೆಚ್ಚಿದವರ ಸಂಖ್ಯೆ ಒಂದೂವರೆ ಲಕ್ಷಕ್ಕೆ ಏರಲಿದೆ. ಈ ಚಮ್ಮಾರನ ಅಂತಃಕರಣ ನೆಟ್ಟಿಗರನ್ನು ಬಹಳ ಆಪ್ತವಾಗಿ ಹಿಡಿದಿಟ್ಟಿದೆ ಎನ್ನುವುದಕ್ಕೆ ಈ ಅಂಕಿಸಂಖ್ಯೆಗಳೂ ಕಾರಣ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿಜಕ್ಕೂ ಈತ ಶ್ರೀಮಂತನೇ. ಇಂಥವರ ಸಂತತಿ ಹೆಚ್ಚಲಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇಂಥ ಕಾರ್ಯದಲ್ಲಿ ತೊಡಗಿಕೊಂಡಿರುವ ನೀವು ನಿಜಕ್ಕೂ ದೊಡ್ಡವರು ಎಂದು ಮತ್ತೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಹೃದಯವನ್ನು ಹಗೂರಾಗಿಟ್ಟುಕೊಳ್ಳುವುದು ನಮ್ಮ ವೈಯಕ್ತಿಕ ಆಯ್ಕೆ ಅಲ್ಲವೆ?

ಮತ್ತಷ್ಟು ವೈರಲ್ ಆದ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:51 pm, Tue, 13 September 22

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್