AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಈ ಚಮ್ಮಾರಪ್ಪ ಕಾಳು ಕೊಡುತ್ತಾನೆಂದು ಈ ಹಕ್ಕಿಗಳಿಗೆ ಗೊತ್ತು

Cobbler feeds birds : ಈತ ಹೀಗೆ ಅಂಗಡಿಯನ್ನು ದಿನವೂ ಹರವಿ ಕುಳಿತುಕೊಳ್ಳುತ್ತಾನೆ. ಅವನಿಗಾಗಿ ಕಾಯುವಂತೆ ಈ ಹಕ್ಕಿಗಳು ಕುಳಿತುಕೊಳ್ಳುತ್ತವೆ. 2.2 ಮಿಲಿಯನ್​ ನೆಟ್ಟಿಗರು ಈತನ ಶ್ರೀಮಂತಿಕೆಗೆ ಶರಣಾಗಿದ್ದಾರೆ.

Viral Video : ಈ ಚಮ್ಮಾರಪ್ಪ ಕಾಳು ಕೊಡುತ್ತಾನೆಂದು ಈ ಹಕ್ಕಿಗಳಿಗೆ ಗೊತ್ತು
ಈ ಚಮ್ಮಾರ ನಿತ್ಯವೂ ಪಕ್ಷಿಗಳಿಗೆ ಆಹಾರ ಕೊಡುತ್ತಾರೆ.
TV9 Web
| Edited By: |

Updated on:Sep 13, 2022 | 12:56 PM

Share

Viral Video : ಕೊಡುತ್ತ ಹೋಗಬೇಕು, ಪಡೆಯುವುದರ ಬಗ್ಗೆ ಆಲೋಚನೆ ಇರಬಾರದು ಎನ್ನುವುದಕ್ಕೆ ಸಾಕ್ಷಿ ಈ ಚಮ್ಮಾರ. ತನ್ನ ಅಂಗಡಿಯನ್ನು ಹರವಿಕೊಂಡು ಕುಳಿತಿದ್ದಾನೆ. ಅವನು ಹಾಕುವ ಕಾಳಿಗಾಗಿ ಪಕ್ಷಿಗಳು ಸುತ್ತುವರಿದು ಕುಳಿತಿವೆ. ಕಾಳಿನ ಚೀಲವನ್ನು ಬಿಚ್ಚಿ ಇಡುತ್ತಿದ್ದಂತೆ ಎಲ್ಲ ಪಕ್ಷಿಗಳೂ ಬಂದು ಮುತ್ತುತ್ತವೆ. ಇದು ನಿತ್ಯವೂ ನಡೆಯುವಂಥ ಸುಂದರ ಪ್ರಕ್ರಿಯೆ. ಯಾರಿಗಾದರೂ ನಾವು ಏನನ್ನಾದರೂ ಕೊಡಬೇಕೆಂದರೆ, ದೊಡ್ಡ ಶ್ರೀಮಂತರಾಗಬೇಕಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈತನ ಹೃದಯವೈಶಾಲ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ.

ಆಗಸ್ಟ್​ 15ರಂದು ಉಮ್ಮರ್ ಹುಸೇನ್​ ಎನ್ನುವ ಇನ್​ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇವರೊಬ್ಬ ವಿಡಿಯೋ ಕಂಟೆಂಟರ್. ಹೃದಯದಿಂದ ಯೋಚಿಸುವಂಥ ಅನೇಕ ಸಂಗತಿಗಳುಳ್ಳ ವಿಡಿಯೋಗಳನ್ನು ಇವರು ಅಪ್​ಲೋಡ್ ಮಾಡುತ್ತಾರಾದ್ದರಿಂದ ಲಕ್ಷಾಂತರ ಮಂದಿ ಇವರ ಖಾತೆಯನ್ನು ಫಾಲೋ ಮಾಡುತ್ತ ಬಂದಿದ್ದಾರೆ. ಪ್ರಸ್ತುತ ವಿಡಿಯೋ ಅನ್ನು ಈತನಕ 2.2 ಮಿಲಿಯನ್​ ಜನರು ವೀಕ್ಷಿಸಿದ್ದಾರೆ. ಇನ್ನೇನು ಇದನ್ನು ಮೆಚ್ಚಿದವರ ಸಂಖ್ಯೆ ಒಂದೂವರೆ ಲಕ್ಷಕ್ಕೆ ಏರಲಿದೆ. ಈ ಚಮ್ಮಾರನ ಅಂತಃಕರಣ ನೆಟ್ಟಿಗರನ್ನು ಬಹಳ ಆಪ್ತವಾಗಿ ಹಿಡಿದಿಟ್ಟಿದೆ ಎನ್ನುವುದಕ್ಕೆ ಈ ಅಂಕಿಸಂಖ್ಯೆಗಳೂ ಕಾರಣ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಿಜಕ್ಕೂ ಈತ ಶ್ರೀಮಂತನೇ. ಇಂಥವರ ಸಂತತಿ ಹೆಚ್ಚಲಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇಂಥ ಕಾರ್ಯದಲ್ಲಿ ತೊಡಗಿಕೊಂಡಿರುವ ನೀವು ನಿಜಕ್ಕೂ ದೊಡ್ಡವರು ಎಂದು ಮತ್ತೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಹೃದಯವನ್ನು ಹಗೂರಾಗಿಟ್ಟುಕೊಳ್ಳುವುದು ನಮ್ಮ ವೈಯಕ್ತಿಕ ಆಯ್ಕೆ ಅಲ್ಲವೆ?

ಮತ್ತಷ್ಟು ವೈರಲ್ ಆದ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:51 pm, Tue, 13 September 22

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ