Viral Video : ಬಾಲಕನ ಮೇಲೆ ನಾಯಿದಾಳಿ, ಕೇರಳದಲ್ಲಿ ನಡೆದ ಘಟನೆ

Dog Bite : ಮನೆಯ ಬಳಿ ಸೈಕಲ್​ ನಿಲ್ಲಿಸುತ್ತಿದ್ದಂತೆ ನಾಯಿಯೊಂದು ಈ ಬಾಲಕನ ಮೇಲೆ ಎರಗಿದೆ. ಮುಂದೇನಾಯಿತು?

Viral Video : ಬಾಲಕನ ಮೇಲೆ ನಾಯಿದಾಳಿ, ಕೇರಳದಲ್ಲಿ ನಡೆದ ಘಟನೆ
ಬಾಲಕನ ಮೇಲೆ ದಾಳಿ ಮಾಡುತ್ತಿರುವ ನಾಯಿ
Follow us
| Updated By: ಶ್ರೀದೇವಿ ಕಳಸದ

Updated on:Sep 13, 2022 | 11:13 AM

Viral Video : ಇತ್ತೀಚೆಗೆ ಮಹಾನಗರಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದೆಹಲಿಯಲ್ಲಿ ಮಾತ್ರ ಈ ಸಮಸ್ಯೆ ವಿಪರೀತಕ್ಕೆ ತಲುಪಿದೆ ಎಂಬಂಥ ಪರಿಸ್ಥಿತಿ ಇತ್ತು. ಆದರೆ ಇತರೇ ರಾಜ್ಯಗಳಲ್ಲೂ, ಹಳ್ಳಿಹಳ್ಳಿಗಳಲ್ಲೂ ಈ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವುದು ಒಂದೊಂದೇ ಪ್ರಕರಣಗಳ ಮೂಲಕ ಬೆಳಕಿಗೆ ಬರುತ್ತಿದೆ. ಹೀಗಾಗಿ ನಾಯಿಗಳೆಂದರೆ ಸ್ವಲ್ಪ ಭಯದ ವಾತಾವರಣ ಎಲ್ಲೆಡೆ ಉಂಟಾಗುತ್ತಿದೆ. ಕೇರಳದ ಕೋಝಿಕ್ಕೋಡ್​ನ ಹಳ್ಳಿಯೊಂದರಲ್ಲಿ ನಾಯಿಯೊಂದು ಬಾಲಕನ ಮೇಲೆ ಎರಗಿ ಅತ್ಯಂತ ಕ್ರೂರವಾಗಿ ದಾಳಿ ಮಾಡಿದ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ರೆಡ್ಡಿಟ್​, ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಭಾನುವಾರ ನಡೆದಿದೆ. 7 ನೇ ತರಗತಿ ಓದುತ್ತಿರುವ ಈತ ಎಲ್ಲೋ ಹೊರಹೋಗಿದ್ದವ ವಾಪಾಸು ಮನೆಯ ಬಳಿ ಬಂದು ಸೈಕಲ್​ ನಿಲ್ಲಿಸುತ್ತಿದ್ದ. ಆಗ ಇದ್ದಕ್ಕಿದ್ದಂತೆ ಓಡಿಬಂದ ಕಪ್ಪು ನಾಯಿಯೊಂದು ಅವನ ಮೇಲೆ ಭೀಕರವಾಗಿ ಎರಗಿದೆ. ಅವನ ಕೈಯನ್ನು ಕಚ್ಚಿ ಗಟ್ಟಿಯಾಗಿ ಹಿಡಿದಿದೆ. ಆಘಾತಕ್ಕೊಳಗಾದ ಬಾಲಕ ನೆಲಕ್ಕುರುಳಿ ಬಿದ್ದಿದ್ದಾನೆ. ಎದ್ದೇಳಲು ನೋಡಿದಾಗ ತೋಳನ್ನು ಕಚ್ಚಿ ಹಿಡಿದಿದೆ. ಇದೆಲ್ಲವನ್ನು ನೋಡಿದ ಸುತ್ತಮುತ್ತಲಿನ ಮಕ್ಕಳು ಗಾಬರಿಯಾಗಿ ತಮ್ಮ ಮನೆಗಳಿಗೆ ಓಡಿವೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ബേപ്പൂര്‍ അരക്കിണറില്‍ ആറാം ക്ലാസ് വിദ്യാര്‍ഥിയെ തെരുവ് നായ ആക്രമിക്കുന്നതിന്റെ ദൃശ്യങ്ങള്‍ from Kerala

ಎಷ್ಟೇ ತಪ್ಪಿಸಿಕೊಳ್ಳಲು ಹೋದರೂ ನಾಯಿ ಬಾಲಕನನ್ನು ಬಿಡುವುದೇ ಇಲ್ಲ. ಕೊನೆಗೂ ಹೇಗೋ ಎದ್ದು ಮನೆಯೊಳಗೆ ಓಡುತ್ತಾನೆ. ನಂತರ ನೆರೆಹೊರೆಯವರು ಬಾಲಕನ ಮನೆಗೆ ಧಾವಿಸುತ್ತಾರೆ.

ಇತ್ತೀಚೆಗೆ ಗಾಝಿಯಾಬಾದ್​ನ ಹೌಸಿಂಗ್ ಸೊಸೈಟಿಯ ಲಿಫ್ಟ್​ನೊಳಗೆ ಸಾಕುನಾಯಿಯೊಂದು ಪುಟ್ಟ ಹುಡುಗನಿಗೆ ಕಚ್ಚಿದ ಘಟನೆ ನಡೆದಿತ್ತು. ಇಂಥದೇ ಪ್ರಕರಣ ನೋಯ್ಡಾದಲ್ಲಿಯೂ ನಡೆದಿತ್ತು. ಈ ಎಲ್ಲ ಪ್ರಕರಣಗಳನ್ನು ಗಮನಿಸಿದ ದೆಹಲಿಯ ಮುನ್ಸಿಪಲ್ ಕಾರ್ಪೋರೇಷನ್​, ತಮ್ಮ ತಮ್ಮ ಸಾಕುಪ್ರಾಣಿಗಳನ್ನು ನೋಂದಾಯಿಸಿಕೊಳ್ಳಲು ಆದೇಶ ಹೊರಡಿಸಿದೆ. ನಿಯಮ ಅನುಸರಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.

ಯಾವ ಕಾರಣಕ್ಕಾಗಿ ಪ್ರಾಣಿಗಳು ಯಾವಾಗ ದಾಳಿ ಮಾಡುತ್ತವೆ ಎಂದು ನಿಖರವಾಗಿ ಹೇಳುವುದು ಕಷ್ಟಸಾಧ್ಯ.  ಹಾಗಾಗಿ ಮೈಯೆಲ್ಲ ಕಣ್ಣಾಗಿರಬೇಕಾಗುತ್ತದೆ ಓಡಾಡುವಾಗ. ನಾಯಿಯನ್ನು ಸಾಕಿದವರೂ ಅಷ್ಟೇ ಜವಾಬ್ದಾರಿಯಿಂದ ವರ್ತಿಸುವುದೂ ಬಹಳೇ ಮುಖ್ಯ.

ಮತ್ತಷ್ಟು ವೈರಲ್​  ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:03 am, Tue, 13 September 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ