Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಟೊಮ್ಯಾಟೋ ಬೆಲೆ ದುಬಾರಿಯಾಗಲು ಕಾರಣರಾದವರ ವಿಡಿಯೋ ವೈರಲ್

Golden Retriever : ಒಂದು ತಿಂಗಳಿನಿಂದ ತಲೆನೋವಾಗಿರುವ ಈ ಸಮಸ್ಯೆಯ ಮೂಲವನ್ನು ಟ್ವಿಟರ್ ಸಾಕ್ಷಿ ಸಮೇತ​ ಪತ್ತೆ ಹಚ್ಚಿದೆ. ಘನಗಂಭೀರೆಯಂತೆ ಕಾಣುವ ಈ ಕಳ್ಳಿಯು ಹೇಗೆ ಈ ಕೃತ್ಯದಲ್ಲಿ ತೊಡಗಿಕೊಂಡಿದ್ದಳು ಎನ್ನುವುದನ್ನು ನೋಡಿ.

Viral Video: ಟೊಮ್ಯಾಟೋ ಬೆಲೆ ದುಬಾರಿಯಾಗಲು ಕಾರಣರಾದವರ ವಿಡಿಯೋ ವೈರಲ್
ಟೊಮ್ಯಾಟೋ ಕಳ್ಳಿ
Follow us
ಶ್ರೀದೇವಿ ಕಳಸದ
|

Updated on:Jul 18, 2023 | 6:10 PM

Tomato : ಟೊಮ್ಯಾಟೋ ಬೆಲೆ ಇಷ್ಟೊಂದೇಕೆ ಏರಿದೆ ಎಂದು ಕೃಷಿ ತಜ್ಞರು, ಆರ್ಥಿಕ ತಜ್ಞರು, ಹವಾಮಾನ ತಜ್ಞರು, ರಾಜಕಾರಣಿಗಳು ಮತ್ತು ನಮ್ಮ ಅನ್ನದಾತರು ಎಷ್ಟೆಲ್ಲ ಯೋಚಿಸಿದರು. ಆದರೆ ಸರಿಯಾದ ಉತ್ತರ ದೊರಕಿತೆ? ಕಳೆದುಕೊಂಡಿದ್ದು ಒಂದೆಡೆ, ಹುಡುಕುವುದು ಇನ್ನೊಂದೆಡೆ ಎಂಬಂತಾದಾಗ ಸೂಕ್ತ ಉತ್ತರ ಹೇಗೆ ಸಿಗಲು ಸಾಧ್ಯ? ಅಂತೂ ಒಂದು ಟ್ವೀಟ್ (Tweet) ಮೂಲಕ ಸಾಕ್ಷಿಸಮೇತ ಇದಕ್ಕೆ ಕಾರಣ ಪತ್ತೆಯಾಗಿದೆ. ಘನಗಂಭೀರ ಮುಖಮುದ್ರೆ ಹೊತ್ತ ಕಳ್ಳಿಯೊಬ್ಬಳ ಕರಾಮತ್ತು ಇಡೀ ಜಗತ್ತಿಗೇ ಬಹಿರಂಗವಾಗಿದೆ! ಈ ವಿಡಿಯೋ ನೋಡಿದ ನೆಟ್ಟಿಗರು ನಗಲೂ ಆಗದ ಅಳಲೂ ಆಗದ ಪರಿಸ್ಥಿತಿಗೆ ಸಿಲುಕಿದ್ದಾರೆ.

ಆದರೆ ನೆಟ್ಟಿಗರು ಈ ಕಳ್ಳಿಯನ್ನೇ ಸಮರ್ಥಿಸಿಕೊಳ್ಳುತ್ತಿರುವುದು ಅಚ್ಚರಿಯನ್ನು ಹುಟ್ಟುಹಾಕುತ್ತಿದೆ. ಆಕೆಗೆ ಟೊಮ್ಯಾಟೋದ ಮಹತ್ವ ಗೊತ್ತು, ಕಳ್ಳರಿಂದ ಆಕೆ ಈ ಟೊಮ್ಯಾಟೋಗಳನ್ನು ರಕ್ಷಿಸಿದ್ದಾಳೆ ಎನ್ನುತ್ತಿದ್ದಾರೆ. ಈಕೆ ರಕ್ಷಿಸಿದ ಟೊಮ್ಯಾಟೋಗಳನ್ನು ನೀವು ತಿನ್ನುವಿರೇ? ಎಂದೂ ಕೇಳುತ್ತಿದ್ದಾರೆ. ಅದಕ್ಕೆ ಈ ಕಳ್ಳಿಯ ಪೋಷಕಿ, ಖಂಡಿತ! ತೊಳೆದು ತಿನ್ನುತ್ತೇನೆ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ : Viral: ಲೈಕ್​​ ಮಸುಕಾಗುತ್ತದೆ, ಡಿಜಿಟಲ್​ ಗುರುತು ಉಳಿಯುತ್ತದೆ; ಅಸ್ಸಾಂ ಪೊಲೀಸರ ಟ್ವೀಟ್​

ನಮ್ಮನೆಯಲ್ಲಿರುವ ಲ್ಯಾಬ್ರಡರ್​ ಕೂಡ ಈ ಗೋಲ್ಡನ್​ ರಿಟ್ರೈವರ್​ ಕಳ್ಳಿಯಂತೆಯೇ ಟೊಮ್ಯಾಟೋ ಕದಿಯುತ್ತಾನೆ ಎಂದಿದ್ದಾರೆ ಒಬ್ಬರು. ಬಾಯಿಯಲ್ಲಿಯೇ ಇಷ್ಟಿವೆ, ಇನ್ನು ಹೊಟ್ಟೆಯಲ್ಲಿ? ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ವಿಡಿಯೋ ಅನ್ನು ಈತನಕ ಸುಮಾರು 14,000 ಜನರು ನೋಡಿದ್ದಾರೆ. 102 ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನು ನೋಡಿದ ನೀವು ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:09 pm, Tue, 18 July 23

ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಹೊಸ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ ಚಂದು ಗೌಡ-ಕಾವ್ಯಾ ಮಹಾದೇವ್
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
VIDEO: ಆಂಬ್ಯುಲೆನ್ಸ್​ಗೆ ಕರೆ ಮಾಡಿ, ಆದರೆ ಅದು ನನಗಲ್ಲ..!
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ ಕಾರು ಜಸ್ಟ್​ ಮಿಸ್, ಬೈಕ್ ಹೋಗೇಬಿಡ್ತು
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪ್ರದೂಷ ಕಾಲದ ಮಹತ್ವ ಹಾಗೂ ಹಿಂದಿನ ರಹಸ್ಯ ತಿಳಿಯಿರಿ
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?
ಬಾಂಬೆ ಹೈಕೋರ್ಟ್​ ಆವರಣದಲ್ಲಿ ವಾಮಾಚಾರ?