AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರಾಮ ಲಲ್ಲಾನಿಗೆ 14 ಬಗೆಯ ದೈವಿಕ ಶಕ್ತಿಯ ಆಭರಣ, ಇದನ್ನು ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ?  

ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಸಾಂಗವಾಗಿ ನೆರವೇರಿದೆ. ಬಾಲ ರಾಮನ ಸುಂದರ ವಿಗ್ರಹವನ್ನು ಕಂಡು, ಈ  ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ನಾವೇ ಧನ್ಯರು ಎಂದು ರಾಮ ಭಕ್ತರು ಭಾವುಕರಾಗಿದ್ದಾರೆ. ಇನ್ನು ಬಾಲ ರಾಮನ ಸುಂದರ ವಿಗ್ರಹದ ಜೊತೆಗೆ ಬಾಲರಾಮನಿಗೆ ತೊಡಿಸಿದಂತಹ ವಿಶೇಷ ಆಭರಣಗಳು ಕೂಡಾ ಭಕ್ತರ ಮನ ಸೆಳೆದಿದೆ. ಅಷ್ಟಕ್ಕೂ ಈ ದೈವಿಕ ಶಕ್ತಿಯ  ಆಭರಣಗಳನ್ನು ತಯಾರಿಸಿದವರು ಯಾರು ಗೊತ್ತಾ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ. 

Viral Video: ರಾಮ ಲಲ್ಲಾನಿಗೆ 14 ಬಗೆಯ ದೈವಿಕ ಶಕ್ತಿಯ ಆಭರಣ, ಇದನ್ನು ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ?  
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on:Jan 24, 2024 | 5:51 PM

Share

ಕೋಟ್ಯಾಂತರ ಹಿಂದುಗಳ ಭವ್ಯ ರಾಮ ಮಂದಿರದ ಕನಸು ಸಾಕಾರಗೊಂಡಿದ್ದು, ಸೋಮವಾರದಂದು (ಜ.22) ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಭು ಶ್ರೀರಾಮನು ಬಾಲ ರಾಮನಾಗಿ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾರೆ. ಬಾಲ ರಾಮನ ಸುಂದರ ವಿಗ್ರಹವನ್ನು ಕಂಡು, ಈ  ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ನಾವೇ ಧನ್ಯರು ಎಂದು ರಾಮ ಭಕ್ತರು ಭಾವುಕರಾಗಿದ್ದಾರೆ. ಇನ್ನು ಬಾಲ ರಾಮನ ಸುಂದರ ವಿಗ್ರಹದ ಜೊತೆಗೆ ಬಾಲರಾಮನಿಗೆ ತೊಡಿಸಿದಂತಹ ದೈವಿಕ ಶಕ್ತಿಯ  ಆಭರಣಗಳು ಕೂಡಾ ಭಕ್ತರ ಮನ ಸೆಳೆದಿದೆ. ರಾಮ ಲಲ್ಲಾ ವಿಗ್ರಹಕ್ಕೆ  ಅಲಂಕರಿಸಿರುವ ಪ್ರತಿಯೊಂದು ಆಭರಣವೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ಈ ಆಭರಣಗಳ ವಿಶೇಷತೆಯ ಸಂಪೂರ್ಣ  ವಿವರಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಹಿರಂಗ ಪಡಡಿಸಿದೆ. ಅಷ್ಟಕ್ಕೂ ಈ ವಿಶೇಷ ಆಭರಣಗಳು ತಯಾರಿಸಿದವರು ಯಾರು ಗೊತ್ತಾ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.

ಬಾಲ ರಾಮನ  ವಿಶೇಷ ಆಭರಣಗಳನ್ನು ಹರ್ಶೈಮಲ್ ಶ್ಯಾಮ್ಲಾಲ್ ಜ್ಯುವೆಲರ್ಸ್ (Harsahaimal Shiamalal Jewellers) ಅವರು ತಯಾರಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆಧ್ಯಾತ್ಮ ರಾಮಾಯಣ, ವಾಲ್ಮೀಕಿ ರಾಮಾಯಣ, ರಾಮ ಚರಿತ ಮಾನಸ, ಆಳವಂದರ್ ಸ್ತೋತ್ರ ಸೇರಿದಂತೆ ಗ್ರಂಥಗಳ ಸಂಶೋಧನೆ ಮತ್ತು ಅಧ್ಯಯನಗಳ ಆಧಾರದ ಮೇಲೆ  ಬಾಲ ರಾಮನ ಆಭರಣಗಳನ್ನು ಉತ್ತರ ಪ್ರದೇಶದ ಲಕ್ನೋದ ಇಂಟರ್ ನ್ಯಾಷನಲ್ ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ (IGI) ಪ್ರಮಾಣೀಕರಿಸಿದ ಹರ್ಶೈಮಲ್ ಶ್ಯಾಮ್ಲಾಲ್ ಜ್ಯುವೆಲರ್ಸ್ ವಿನ್ಯಾಸಗೊಳಿಸಿದೆ. ಮುಕುಟ, ಕುಂಡಲ, ಕಂಠ, ಕೌಸ್ತುಭ ಮಣಿ, ಪಡಿಕಾ, ವಿಜಯ ಹಾರ, ತೋಳು ಪಟ್ಟಿ, ಬಿಲ್ಲು ಬಾಣ, ತಿಲಕ, ಮುದ್ರಿಕ ಹೀಗೆ   ಬಾಲ ರಾಮನ 14 ಆಭರಣಗಳನ್ನು ಈ ಸಂಸ್ಥೆಯೇ ವಿನ್ಯಾಸಗೊಳಿಸಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Voompla (@voompla)

ಶ್ರೀ ರಾಮನ ಆಜ್ಞೆಯಂತೆ  ಹಾಗೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಾಲ ರಾಮನಿಗೆ ಆಭರಣಗಳನ್ನು ರೂಪಿಸುವ ಜವಬ್ದಾರಿಯನ್ನು ನಮಗೆ ವಹಿಸಿಕೊಟ್ಟಿರುವುದಕ್ಕೆ, ನಮಗೆ ಅಪಾರ ಹೆಮ್ಮೆ ಮತ್ತು ಮತ್ತು ಗೌರವವಿದೆ ಎಂದು HSJ ಜ್ಯುವೆಲರ್ಸ್ ನಿರ್ದೇಶಕ ಅಂಕುರ್ ಆನಂದ್ ಹೇಳಿದ್ದಾರೆ.

@voompla ಎಂಬ ಇನ್ಸ್ಟಾಗ್ರಾಮ್  ಪೇಜ್ ಅಲ್ಲಿ ಈ ವಿಶೇಷ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಬಾಲ ರಾಮನಿಗಾಗಿ ಶುದ್ಧ ಚಿನ್ನ, ವಜ್ರ, ಪಚ್ಚೆ, ಮಾಣಿಕ್ಯ, ಮುತ್ತು ರತ್ನಗಳಿಂದ  ಮುಕುಟ, ತಿಲಕ, ವಿಜಯ ಹಾರ ಸೇರಿದಂತೆ 14 ಬಗೆಯ ಆಭರಣಗಳನ್ನು  ತಯಾರಿಸುತ್ತಿರುವಂತಹ ಪರಿಯನ್ನು ಕಾಣಬಹುದು.

ಇದನ್ನೂ ಓದಿ: ‘ಶ್ರೀಮಂತ ಹುಡುಗರನ್ನು ಸೆಳೆಯಲು ಯುವತಿಯರೇ ಈ ಸರ್ಜರಿ ಮಾಡಿಸಿ’; ಕಂಪನಿಗೆ ಕಂಟಕವಾದ ಈ ಜಾಹೀರಾತು

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 44 ಸಾವಿರಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ.  ಇನ್ನೂ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಆಭರಣ ತಯಾರಕರ ಪರಿಶ್ರಮಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:33 pm, Wed, 24 January 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ