AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಎರಡು ದಿನಗಳ ನಂತರ ಕೆಸರಿನಿಂದ ಹೊರಬಂದ ಕೀನ್ಯಾದ ಆನೆಗಳು

Elephant in Mud : ನೀರು ಹುಡುಕಿಕೊಂಡು ಬಂದ ಈ ಹೆಣ್ಣಾನೆಗಳಿಗೇನು ಗೊತ್ತಿತ್ತು, ಈ ನೀರು ತಮ್ಮನ್ನು ಸಾವಿನ ದವಡೆಗೆ ನೂಕಬಹುದೆಂದು. ಅಂತೂ ಈ ಆನೆಗಳನ್ನು ರಕ್ಷಿಸಿದ ಅದ್ಭುತ ವಿಡಿಯೋ ಇಲ್ಲಿದೆ.

Viral Video : ಎರಡು ದಿನಗಳ ನಂತರ ಕೆಸರಿನಿಂದ ಹೊರಬಂದ ಕೀನ್ಯಾದ ಆನೆಗಳು
ಹುದುಲಿನಲ್ಲಿ ಸಿಕ್ಕಿಹಾಕಿಕೊಂಡ ಆನೆಗಳು
TV9 Web
| Updated By: ಶ್ರೀದೇವಿ ಕಳಸದ|

Updated on:Sep 15, 2022 | 1:08 PM

Share

Viral Video : ಈ ಘಟನೆ ನಡೆದಿದ್ದು ಆಫ್ರಿಕಾದ ಕೀನ್ಯಾದಲ್ಲಿ. ದಾಹ ಇಂಗಿಸಿಕೊಳ್ಳಲು ಬಂದ ಎರಡು ಹೆಣ್ಣಾನೆಗಳಿಗೆ ಈ ನೀರು ಸಾವಿನ ದರ್ಶನ ಮಾಡಿಸಿದೆ. ಈ ಪ್ರದೇಶದಲ್ಲಿ ಬರಗಾಲ ಉಂಟಾದಾಗ ಇಂಥ ಘಟನೆಗಳು ಸಾಮಾನ್ಯ. ನೀರು ಹುಡುಕಿಕೊಂಡು ಬರುವ ಆನೇಕ ಪ್ರಾಣಿಗಳು ಹೀಗೆ ಅಪಾಯಕ್ಕೆ ಸಿಲುಕಿಕೊಳ್ಳುತ್ತಿರುತ್ತವೆ. ಯಾರಾದರೂ ಇದ್ದರೆ, ಕಾಪಾಡಲು ಸಾಧ್ಯವಾದರೆ ಕಾಪಾಡುತ್ತಾರೆ ಇಲ್ಲವಾದಲ್ಲಿ ಇಲ್ಲ. ಸದ್ಯ ಈ ಆನೆಗಳೆರಡೂ ಬದುಕಿಬಂದಿವೆ. ನೀರು ಹುಡುಕಿಕೊಂಡು ಹೊರಟ ಈ ಆನೆಗಳು ನೀರನ್ನಷ್ಟೇ ನೋಡಿವೆ, ಸುತ್ತಲೂ ದಟ್ಟವಾದ ಕೆಸರು ತುಂಬಿಕೊಂಡಿದೆ ಎನ್ನುವುದರ ಕಡೆಗೆ ಇವುಗಳ ಗಮನ ಹೊರಳಿಲ್ಲ. ಚಲಿಸುತ್ತಿದ್ದಂತೆ ಜಿಗುಟಾದ ಮಣ್ಣಿನೊಳಗೆ ಇವುಗಳ ಕಾಲುಗಳು ಸಿಲುಕಿಕೊಂಡುಬಿಟ್ಟಿವೆ. ಈ ದೈತ್ಯಪ್ರಾಣಿಗಳನ್ನು ಈ ಸಂದರ್ಭದಿಂದ ಪಾರು ಮಾಡುವುದು ಹೇಗೆ? ಎಲ್ಲರೂ ನಿಂತು ನೋಡಿ ಹೋಗುವವರೇ. ಇದೇ ಸ್ಥಿತಿಯಲ್ಲಿ ಎರಡು ದಿನಗಳನ್ನು ಕಳೆದಿವೆ ಈ ಆನೆಗಳು. ಕೊನೆಗೆ ಈ ಪರಿಸ್ಥಿತಿಯಿಂದ ಹೊರಬಂದಿದ್ದು ಹೇಗೆ? ವಿಡಿಯೋ ನೋಡಿ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೆಲಿಕಾಪ್ಟರ್​ನಲ್ಲಿ ಬಂದಿಳಿಯುವವರು ಶೆಲ್ಡ್ರಿಕ್​ ವೈಲ್ಡ್​ಲೈಫ್ ಟ್ರಸ್ಟ್​ನ ಸದಸ್ಯರು. ಕಠಿಣ ಪರಿಶ್ರಮದ ನಂತರ ಆನೆಗಳನ್ನು ಆ ಪರಿಸ್ಥಿತಿಯಿಂದ ಕಾಪಾಡುವುದು ಕಂಡುಬರುತ್ತದೆ. ದಿಬ್ಬದ ಮೇಲೆ ಊರಿನವರೆಲ್ಲ ಬೆರಗಿನಿಂದ ನಿಂತುಕೊಂಡು ಈ ದೃಶ್ಯವನ್ನು ವೀಕ್ಷಿಸುವುದು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ 71,000 ಕ್ಕೂ ಹೆಚ್ಚು ಮೆಚ್ಚುಗೆ ಪಡೆದಿದೆ. ಅನೇಕರು ಈ ಕಾರ್ಯಾಚರಣೆಯ ತಂಡವನ್ನು ಶ್ಲಾಘಿಸಿದ್ದಾರೆ. ಹಲವಾರು ಜನರು ಆನೆಗಳ ಆರೋಗ್ಯ ಹೇಗಿದೆ ಈಗ ಎಂದು ವಿಚಾರಿಸಿಕೊಂಡಿದ್ದಾರೆ.

ಬರ ಎನ್ನುವುದು ಇಡೀ ಜೀವಸಂಕುಲವನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಆದ್ದರಿಂದ ಪರಿಸರ ಮತ್ತು ಪ್ರಕೃತಿಯ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಕರ್ತವ್ಯ ಅಲ್ಲವೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 12:45 pm, Thu, 15 September 22

ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ