AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹುಷಾರಿಲ್ಲ ಅಂದ್ರೂ ರಜೆ ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಉದ್ಯೋಗಿ

ಕಾರ್ಪೊರೇಟ್ ಉದ್ಯೋಗಿಗಳ ಕಷ್ಟಗಳ ಹೇಳಲಾಗದು. ಮುರೊತ್ತು ಕೆಲಸ, ರೆಸ್ಟ್ ಅನ್ನೋದೇ ಇರಲ್ಲ.. ಹುಷಾರಿಲ್ಲ ಅಂದ್ರು ರಜೆ ಸಿಗಲ್ಲ. ಇಲ್ಲೊಬ್ಬ ಉದ್ಯೋಗಿದು ಅದೇ ಗೋಳು. ಜ್ವರ ಬಂದಿದೆ ಎಂದು ರಜೆ ತೆಗೆದುಕೊಳ್ತೇನೆ ಎಂದದ್ದಕ್ಕೆ ಮ್ಯಾನೇಜರ್ ಕಠೋರವಾಗಿ ವರ್ತಿಸಿದ್ದಾರೆ. ಈ ಮ್ಯಾನೇಜರ್‌ ಪ್ರತಿಕ್ರಿಯೆ ಕಂಡು ಉದ್ಯೋಗಿ ಶಾಕ್ ಆಗಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಹುಷಾರಿಲ್ಲ ಅಂದ್ರೂ ರಜೆ ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಉದ್ಯೋಗಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Apr 10, 2026 | 10:48 AM

Share

ಕೆಲಸ (job) ಅಂದ್ರೆ ಹಾಗೆನೇ, ಕತ್ತೆ ತರಹ ದುಡಿದ್ರೂ ಬೆಲೆ ಇಲ್ಲ. ನೀವು ಏನೇ ಹೇಳಿ, ನಮ್ಮ ಬಾಸ್ ಒಂದೇ ಒಂದು ರಜೆ ಕೇಳಿದ್ರು ಕೊಡಲ್ಲ. ಹುಷಾರಿಲ್ಲ ಅಂದ್ರೂ ಆಫೀಸಿಗೆ ಬಂದು ಕೆಲಸ ಮಾಡು ಅಂತಾರೆ. ಒಂದು ದಿನ ರಜೆ ಅಂದ್ರೆ ಆಕಾಶ ಭೂಮಿ ಒಂದು ಮಾಡ್ತಾರೆ. ಕೆಲ ಉದ್ಯೋಗಿಗಳು ಈ ರೀತಿ ಹೇಳುವುದನ್ನು ನೀವು ನೋಡಿರುತ್ತೀರಿ. ಇಲ್ಲೊಬ್ಬ ಉದ್ಯೋಗಿಯೂ ಹೊಟ್ಟೆ ಹಾಗೂ ಜ್ವರದ ಕಾರಣ ಶಿಫ್ಟ್ ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಮ್ಯಾನೇಜರ್‌ಗೆ ಕರೆ ಮಾಡಿ ರಜೆ ಕೇಳಿದ್ದಾರೆ. ಉದ್ಯೋಗಿ ರಜೆ ಕೇಳುತ್ತಿದ್ದಂತೆ ಮ್ಯಾನೇಜರ್ ತನ್ನ ಮಾತಿನ ಧಾಟಿಯನ್ನೇ ಬದಲಾಯಿಸಿದ್ದಾರೆ. ರಜೆ ಕೇಳಲು ಹೋದಾಗ ಉದ್ಯೋಗಿಗಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದು, ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.  ನೆಟ್ಟಿಗರು ಕೆಲಸದ ಸಂಸ್ಕೃತಿಯನ್ನು ಟೀಕಿಸಿದ್ದಾರೆ.

Indianworkculture ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿಯೊಬ್ಬರು ರಜೆ ಕೇಳಿದಾಗ ಮ್ಯಾನೇಜರ್ ಪ್ರತಿಕ್ರಿಯೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಉದ್ಯೋಗಿಯೊಬ್ಬರಿಗೆ ಜ್ವರ ಹಾಗೂ ಹೊಟ್ಟೆಯ ಸಮಸ್ಯೆ ಕಾಣಿಸಿಕೊಂಡಿದ್ದು, ಹೀಗಾಗಿ ಶಿಫ್ಟ್ ಆರಂಭವಾಗುವ ಒಂದು ಗಂಟೆ ಮುನ್ನ ಮ್ಯಾನೇಜರ್‌ಗೆ ಕರೆ ಮಾಡಿ ನಾನು ಅನಾರೋಗ್ಯದ ಕಾರಣ ಸಿಕ್ ಲೀವ್ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಈ ಮ್ಯಾನೇಜರ್ ಮಾತ್ರ ಉದ್ಯೋಗಿಯ ಬಳಿ ರಜೆ ತೆಗೆದುಕೊಳ್ಳುವಾಗ ಅನುಮತಿ ಕೇಳಬೇಕು, ಬದಲಾಗಿ ಮಾಹಿತಿ ಯಾವುದೇ ಕಾರಣಕ್ಕೂ ಕೊಡಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

Reddit Post

ಅಷ್ಟೇ ಅಲ್ಲದೇ, ಅನಾರೋಗ್ಯದ ರಜೆ ಸಿಗಬೇಕಾದರೆ ಕನಿಷ್ಠ ಮೂರು ದಿನವಾದ್ರೂ ಆಸ್ಪತ್ರೆಗೆ ದಾಖಲಾಗಿರಬೇಕು ಇದ್ದ ನಿಯಮವನ್ನೇ ಬದಲಾಯಿಸಿ ಬಿಟ್ಟರು. ಕಂಪನಿಯ ನಿಯಮದ ಪ್ರಕಾರ 2 ದಿನದ ವಿಶ್ರಾಂತಿಗೂ ರಜೆ ತೆಗೆದುಕೊಳ್ಳುವ ಅವಕಾಶವಿದೆ. ಅದಲ್ಲದೇ, ಈ ವ್ಯಕ್ತಿ ವೈದ್ಯರಿಂದ ಸರ್ಟಿಫಿಕೇಟ್ ತಂದು ಅಪ್ಲೈ ಮಾಡಿದ್ರೂ, ಮ್ಯಾನೇಜರ್ ಅದನ್ನು ಒಪ್ಪಲಿಲ್ಲ. ಬದಲಿಗೆ, ಖಾಸಗಿ ಪ್ರಿಸ್ಕ್ರಿಪ್ಷನ್ ನನಗೆ ಮತ್ತು ಟೀಮ್ ಲೀಡ್‌ಗೆ ತೋರಿಸಬೇಕು, ನಾವು ಅದನ್ನು ರಿವ್ಯೂ ಮಾಡಿದ ಮೇಲೆಯೇ ರಜೆ ಅಪ್ರೂವ್ ಮಾಡುವುದು ಎಂದು ಖಡಕ್ ಆಗಿ ಹೇಳಿರುವ ಬಗ್ಗೆ ಇಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾತ್ರಿ 12 ಗಂಟೆಯಾದ್ರು ಮುಗಿಯದ ಕೆಲಸ; ಬೈಕ್‌ನಲ್ಲಿ ಲ್ಯಾಪ್ ಟಾಪ್ ಹಿಡಿದು ಕುಳಿತ ವ್ಯಕ್ತಿ

ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ಮ್ಯಾನೇಜರ್ ಒಬ್ಬ ಹುಚ್ಚ. ಆದರೆ ಇದು ನಿಮ್ಮ ಅಪಾಯಿಂಟ್ಮೆಂಟ್ ಲೆಟರ್ ನಲ್ಲಿ ಬರೆದಿದೆಯೇ? ವಿಷಯ ತಿಳಿಸಿ ಹೆಚ್ ಆರ್ ಗೆ ವರದಿ ಮಾಡಿ. ಅಲ್ಲಿನ ಸಂಸ್ಕೃತಿ ಹೀಗಿದ್ದರೆ ಬೇರೆ ಕೆಲಸ ಹುಡುಕಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಆಫೀಸಿಗೆ ಹೋಗಿ ಮ್ಯಾನೇಜರ್ ಟೇಬಲ್ ಮೇಲೆ ವಾಂತಿ ಮಾಡಿ. ನೀವು ಅಸ್ವಸ್ಥಳಾಗಿದ್ದರಿಂದ ಮ್ಯಾನೇಜರ್ ಯಾವುದೇ ಪ್ರಶ್ನೆ ಕೇಳಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದು ಯಾವ ರೀತಿಯ ಕಂಪನಿ? ನಾನು ತಲೆನೋವಿನಂತಹ ಸಣ್ಣ ಸಮಸ್ಯೆಗೆ ಅನಾರೋಗ್ಯ ರಜೆ ತೆಗೆದುಕೊಂಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ಕಾಂಗ್ರೆಸ್ ಕಚೇರಿಗೆ ಇಟ್ಟಿಗೆ ಎಸೆದ ಬಿಜೆಪಿ ಎಂಎಲ್​​​ಸಿ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!