AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗ ಮಾಡಿದ್ದೇನು ಗೊತ್ತಾ?

ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗನೊಬ್ಬ ವಿಚಿತ್ರವಾಗಿ ಪ್ರತಿಭಟನೆ ನಡೆಸಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗ ಮಾಡಿದ್ದೇನು ಗೊತ್ತಾ?
Follow us
ನಯನಾ ರಾಜೀವ್
|

Updated on: Jun 21, 2024 | 12:10 PM

ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗ ಕೋಪ ಮಾಡಿಕೊಳ್ಳಲಿಲ್ಲ ಬದಲಾಗಿ ಈ ವಿಶಿಷ್ಟ  ಪ್ರತಿಭಟನೆ ಮೂಲಕ ತಂದೆ ಹಣ ಕೊಡುವಂತೆ ಮಾಡಿರುವ ಘಟನೆ ಜಾರ್ಖಂಡ್​ನ ಗೊಡ್ಡಾದಲ್ಲಿ ನಡೆದಿದೆ. ಮೊದಲು ಅಣ್ಣನಿಗೆ ಸಿಗುತ್ತಿದ್ದ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ವ್ಯಕ್ತಿ ಕೇಳಿದ್ದ, ತಂದೆ ಈ ಮಾತನ್ನು ಒಪ್ಪದಿದ್ದಾಗ ಮಗ ಕಾನೂನಿನ ಮೊರೆ ಹೋಗಿದ್ದ, ಪಂಚಾಯಿಗಳೂ ನಡೆದವು, ಆದರೂ ಒಪ್ಪದಿದ್ದಾಗ ಮಗ ಒಳ್ಳೆಯ ಉಪಾಯ ಮಾಡಿದ್ದಾನೆ.

ಮಗ ಬ್ಯಾಂಡ್​ ಬಾರಿಸುವವರನ್ನು ಕರೆದುಕೊಂಡು ಬಂದು ಇಡೀ ಊರು ತುಂಬಾ ಸುತ್ತಾಡಲು ಶುರು ಮಾಡಿದ್ದ, ಅಪ್ಪನ ಎದುರು ಕೂಡ ಬ್ಯಾಂಡ್​ ಬಾರಿಸುವಂತೆ ಮಾಡಿದ್ದ. ಓಂ ಪ್ರಕಾಶ್​ ಶುಕ್ಲಾ ಮಹುವಾರದಲ್ಲಿ ತಮ್ಮ ಪೂರ್ವಜರ ಜಮೀನನ್ನು ಹೊಂದಿದ್ದ, ರೈಲ್ವೆ ನಿರ್ಮಾಣ ಕಾಮಗಾರಿಗಾಗಿ ಸರ್ಕಾರವು ಕೋಟ್ಯಂತರ ರೂಪಾಯಿಗೆ ಖರೀದಿಸಿದೆ. ಈ ಹಿಂದೆ ತಂದೆ ಮಗ ಇಬ್ಬರಿಗೂ ಸಮಾನ ಪಾಲು ನೀಡುವುದಾಗಿ ಹೇಳಿದ್ದರು, ನಂತರ ಹಣ ಕೊಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದರು.

ಇದಾದ ಬಳಿಕ ಪಂಚಾಯ್ತಿ ನಡೆಸಿದ್ದಾರೆ, ಬಳಿಕ ಕೋರ್ಟ್​ ಮೊರೆ ಹೋಗಿದ್ದರು, ಆದರೆ ಕೆಲಸಗಳು ಕಾರ್ಯರೂಪಕ್ಕೆ ಬರದಿದ್ದಾಗ, ಅವರು ಬೇರೆ ವಿಧಾನವನ್ನೇ ಅಳವಡಿಸಿಕೊಂಡಿದ್ದಾರೆ, ಬ್ಯಾಂಡ್​ ಬಾರಿಸುವವರನ್ನು ಕರೆದುಕೊಂಡು ಗಂಟೆ ಗಟ್ಟಲೆ ಮನೆಯ ಮುಂದೆ ಬ್ಯಾಂಡ್​ ಬಾರಿಸಿದ್ದಾರೆ.

ಮತ್ತಷ್ಟು ಓದಿ: ಹೃದಯಸ್ಪರ್ಶಿ ಪ್ರೇಮಕಥೆ.. ಮೃತ ಪ್ರೇಮಿಗಳಿಗೆ ಪ್ರೇತ ಮದುವೆ ಮಾಡಿಸಿದ ಕುಟುಂಬಸ್ಥರು

ಬಳಿಕ ಕುಟುಂಬ ಮತ್ತೊಮ್ಮೆ ಪಂಚಾಯ್ತಿಯ ಮೆಟ್ಟಿಲೇರುವಂತಾಯಿತು, ಅದರಲ್ಲಿ ಇಬ್ಬರೂ ಗಂಡುಮಕ್ಕಳಿಗೂ ಸಮಾನವಾಗಿ ಹಣವನ್ನು ಹಂಚುವಂತೆ ನಿರ್ಧಾರ ತೆಗೆದುಕೊಳ್ಳಲಾಯಿತು. ಸಹಜವಾಗಿ ಇದನ್ನು ಓಂ ಪ್ರಕಾಶ್ ತಂದೆ ಒಪ್ಪಿಕೊಂಡಿದ್ದಾರೆ, ಆದರೆ ಹಣ ಖಾತೆಗೆ ಬರುವವರೆಗೂ ಇದೇ ರೀತಿ ಬ್ಯಾಂಡ್​ ಬಾರಿಸುತ್ತಾ ಇರುವುದಾಗಿ ಓಂ ಪ್ರಕಾಶ್ ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ