AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗ ಮಾಡಿದ್ದೇನು ಗೊತ್ತಾ?

ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗನೊಬ್ಬ ವಿಚಿತ್ರವಾಗಿ ಪ್ರತಿಭಟನೆ ನಡೆಸಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗ ಮಾಡಿದ್ದೇನು ಗೊತ್ತಾ?
ನಯನಾ ರಾಜೀವ್
|

Updated on: Jun 21, 2024 | 12:10 PM

Share

ತಂದೆ ಆಸ್ತಿಯಲ್ಲಿ ಪಾಲು ಕೊಡಲಿಲ್ಲ ಎಂದು ಮಗ ಕೋಪ ಮಾಡಿಕೊಳ್ಳಲಿಲ್ಲ ಬದಲಾಗಿ ಈ ವಿಶಿಷ್ಟ  ಪ್ರತಿಭಟನೆ ಮೂಲಕ ತಂದೆ ಹಣ ಕೊಡುವಂತೆ ಮಾಡಿರುವ ಘಟನೆ ಜಾರ್ಖಂಡ್​ನ ಗೊಡ್ಡಾದಲ್ಲಿ ನಡೆದಿದೆ. ಮೊದಲು ಅಣ್ಣನಿಗೆ ಸಿಗುತ್ತಿದ್ದ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ವ್ಯಕ್ತಿ ಕೇಳಿದ್ದ, ತಂದೆ ಈ ಮಾತನ್ನು ಒಪ್ಪದಿದ್ದಾಗ ಮಗ ಕಾನೂನಿನ ಮೊರೆ ಹೋಗಿದ್ದ, ಪಂಚಾಯಿಗಳೂ ನಡೆದವು, ಆದರೂ ಒಪ್ಪದಿದ್ದಾಗ ಮಗ ಒಳ್ಳೆಯ ಉಪಾಯ ಮಾಡಿದ್ದಾನೆ.

ಮಗ ಬ್ಯಾಂಡ್​ ಬಾರಿಸುವವರನ್ನು ಕರೆದುಕೊಂಡು ಬಂದು ಇಡೀ ಊರು ತುಂಬಾ ಸುತ್ತಾಡಲು ಶುರು ಮಾಡಿದ್ದ, ಅಪ್ಪನ ಎದುರು ಕೂಡ ಬ್ಯಾಂಡ್​ ಬಾರಿಸುವಂತೆ ಮಾಡಿದ್ದ. ಓಂ ಪ್ರಕಾಶ್​ ಶುಕ್ಲಾ ಮಹುವಾರದಲ್ಲಿ ತಮ್ಮ ಪೂರ್ವಜರ ಜಮೀನನ್ನು ಹೊಂದಿದ್ದ, ರೈಲ್ವೆ ನಿರ್ಮಾಣ ಕಾಮಗಾರಿಗಾಗಿ ಸರ್ಕಾರವು ಕೋಟ್ಯಂತರ ರೂಪಾಯಿಗೆ ಖರೀದಿಸಿದೆ. ಈ ಹಿಂದೆ ತಂದೆ ಮಗ ಇಬ್ಬರಿಗೂ ಸಮಾನ ಪಾಲು ನೀಡುವುದಾಗಿ ಹೇಳಿದ್ದರು, ನಂತರ ಹಣ ಕೊಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದರು.

ಇದಾದ ಬಳಿಕ ಪಂಚಾಯ್ತಿ ನಡೆಸಿದ್ದಾರೆ, ಬಳಿಕ ಕೋರ್ಟ್​ ಮೊರೆ ಹೋಗಿದ್ದರು, ಆದರೆ ಕೆಲಸಗಳು ಕಾರ್ಯರೂಪಕ್ಕೆ ಬರದಿದ್ದಾಗ, ಅವರು ಬೇರೆ ವಿಧಾನವನ್ನೇ ಅಳವಡಿಸಿಕೊಂಡಿದ್ದಾರೆ, ಬ್ಯಾಂಡ್​ ಬಾರಿಸುವವರನ್ನು ಕರೆದುಕೊಂಡು ಗಂಟೆ ಗಟ್ಟಲೆ ಮನೆಯ ಮುಂದೆ ಬ್ಯಾಂಡ್​ ಬಾರಿಸಿದ್ದಾರೆ.

ಮತ್ತಷ್ಟು ಓದಿ: ಹೃದಯಸ್ಪರ್ಶಿ ಪ್ರೇಮಕಥೆ.. ಮೃತ ಪ್ರೇಮಿಗಳಿಗೆ ಪ್ರೇತ ಮದುವೆ ಮಾಡಿಸಿದ ಕುಟುಂಬಸ್ಥರು

ಬಳಿಕ ಕುಟುಂಬ ಮತ್ತೊಮ್ಮೆ ಪಂಚಾಯ್ತಿಯ ಮೆಟ್ಟಿಲೇರುವಂತಾಯಿತು, ಅದರಲ್ಲಿ ಇಬ್ಬರೂ ಗಂಡುಮಕ್ಕಳಿಗೂ ಸಮಾನವಾಗಿ ಹಣವನ್ನು ಹಂಚುವಂತೆ ನಿರ್ಧಾರ ತೆಗೆದುಕೊಳ್ಳಲಾಯಿತು. ಸಹಜವಾಗಿ ಇದನ್ನು ಓಂ ಪ್ರಕಾಶ್ ತಂದೆ ಒಪ್ಪಿಕೊಂಡಿದ್ದಾರೆ, ಆದರೆ ಹಣ ಖಾತೆಗೆ ಬರುವವರೆಗೂ ಇದೇ ರೀತಿ ಬ್ಯಾಂಡ್​ ಬಾರಿಸುತ್ತಾ ಇರುವುದಾಗಿ ಓಂ ಪ್ರಕಾಶ್ ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ