AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ

ಅರೆ ನಿಮಿಷ ಮಾವುತನತ್ತ ಸೊಂಡಿಲು ಬೀಸಿ ಕೊನೆಯ ಸ್ಪರ್ಶಕ್ಕಾಗಿ ಹಾತೊರೆದಂತೆ ಮಾಡಿದ ಆನೆ, ಕಡೆಯಲ್ಲಿ ಅಂತಿಮ ನಮನ ಸಲ್ಲಿಸಿ ಶವವನ್ನೇ ದಿಟ್ಟಿಸುತ್ತಾ ಮೆಲ್ಲಮೆಲ್ಲನೆ ಹಿಂದಕ್ಕೆ ಹೆಜ್ಜೆಯಿಟ್ಟು ನಿರ್ಗಮಿಸಿರುವ ದೃಶ್ಯವನ್ನು ನೋಡಿದರೆ ಅರಿವಿಲ್ಲದಂತೆಯೇ ಕಣ್ಣಂಚಲ್ಲಿ ನೀರು ಜಿನುಗಿಬಿಡುತ್ತದೆ.

ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ
ಮಾವುತನ ಅಂತಿಮ ದರ್ಶನ ಪಡೆದ ಆನೆ
TV9 Web
| Edited By: |

Updated on:Jun 04, 2021 | 2:59 PM

Share

ಕೊಚ್ಚಿ: ಕೆಲವೊಂದಷ್ಟು ಘಟನೆಗಳ ತೀವ್ರತೆ ಎಂತಹ ಕಲ್ಲು ಹೃದಯವನ್ನೂ ಕರಗಿಸಿಬಿಡುತ್ತದೆ. ಭಾವುಕರಾಗಲೇಬಾರದು ಎಂದು ಎಷ್ಟೇ ಸಮಚಿತ್ತರಾಗಿದ್ದರೂ ಅವು ನಮ್ಮ ಅಂತರಂಗವನ್ನು ಕಲಕದೇ ಇರುವುದಿಲ್ಲ. ಕೊರೊನಾದಿಂದಾಗಿ ಸಾವು ಎನ್ನುವುದು ತೀರಾ ಸಹಜವೆಂಬಂತಾಗಿರುವ ಈ ಕಾಲಘಟ್ಟದಲ್ಲೂ ಕೆಲ ಸಾವು ನಮ್ಮನ್ನು ಘಾಸಿಗೊಳಿಸಿಬಿಡುತ್ತವೆ. ಕೇರಳದಲ್ಲಿ ಆನೆಯೊಂದು ತನ್ನನ್ನು ಸಾಕಿ ಸಲುಹಿದ ಮಾವುತ ಕ್ಯಾನ್ಸರ್​ನಿಂದ ಕಣ್ಮುಚ್ಚಿದಾಗ ಅಂತಿಮ ಘಳಿಗೆಯಲ್ಲಿ ಬಂದು ದರ್ಶನ ಪಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೋಡುಗರ ಕಣ್ಣಂಚನ್ನು ಒದ್ದೆ ಮಾಡುತ್ತಿದೆ. ಮಾತೇ ಬಾರದ ಮೂಕ ಪ್ರಾಣಿಯೊಂದು ತನ್ನ ಪ್ರೀತಿಯ ವ್ಯಕ್ತಿಗೆ ಗೌರವಯುತವಾದ ವಿದಾಯ ನೀಡುತ್ತಿರುವುದು ಎದೆಯನ್ನು ಭಾರವಾಗಿಸುತ್ತದೆ.

ಪ್ರಾಣಿ ಹಾಗೂ ಮನುಷ್ಯನ ನಡುವೆ ಬುದ್ಧಿಶಕ್ತಿಯ ವಿಚಾರದಲ್ಲಿ, ಜೀವನ ಕ್ರಮದಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಒಂದು ಬಾಂಧವ್ಯ ಏರ್ಪಟ್ಟಾಗ ಭೇದಭಾವಗಳೆಲ್ಲಾ ಕ್ಷುಲ್ಲಕವಾಗಿ ಪ್ರೀತಿಯೊಂದೇ ಎದ್ದು ಕಾಣುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಸಾಧಾರಣವಾಗಿ ನಾಯಿ, ಹಸು ಅಥವಾ ಇನ್ನಿತರ ಸಾಕುಪ್ರಾಣಿಗಳು ತನ್ನ ಮಾಲೀಕರಿಗೆ ಭಾವಪೂರ್ಣ ವಿದಾಯ ಸಲ್ಲಿಸುವ ದೃಶ್ಯಾವಳಿಗಳನ್ನು ನಾವು ನೋಡಿರುತ್ತೇವೆ. ಆದರೆ, ದೈತ್ಯ ಆನೆಯೊಂದು ಹೀಗೆ ಭಾವುಕವಾಗಿ ಮೆಲ್ಲನೆ ಹೆಜ್ಜೆಗಳನ್ನಿಟ್ಟು ಬಂದು ಮಾವುತನಿಗೆ ಅಂತಿಮವಾಗಿ ಸೊಂಡಿಲೆತ್ತಿ ವಿದಾಯ ಸಲ್ಲಿಸುವುದು ತೀರಾ ಅಪರೂಪವೆನ್ನಬಹುದಾದ ಘಟನೆ.

ಕೇರಳದಲ್ಲಿ ಈ ಘಟನೆ ನಡೆದಿದ್ದು ಮನೆಯ ಪ್ರಾಂಗಣದಲ್ಲಿರಿಸಲಾದ ಮಾವುತನ ಶವವನ್ನು ನೋಡಲು ಆನೆ ಭಾರವಾದ ಹೆಜ್ಜೆಗಳನ್ನಿಕ್ಕುತ್ತಾ ಆಗಮಿಸಿದೆ. ಸುತ್ತಲೂ ಹತ್ತಾರು ಜನ ನೆರೆದಿದ್ದರೂ ಅದರ ಚಿತ್ತ ಹರಿದಿದ್ದು ಮಾತ್ರ ಉಸಿರು ನಿಲ್ಲಿಸಿದ್ದ ತನ್ನ ಮಾವುತನೆಡೆಗೆ. ಶೋಕತಪ್ತ ವಾತಾವರಣದಲ್ಲಿ ಆಗಮಿಸಿದ ಆನೆ ಎಲ್ಲರಲ್ಲೂ ದುಃಖದ ಕಟ್ಟೆ ಒಡೆಯುವಂತೆ ವರ್ತಿಸಿದೆ. ಅತ್ಯಂತ ಮೌನವಾಗಿ ಶವದ ಎದುರು ನಿಂತು ಆ ದೃಶ್ಯವನ್ನು ಕಣ್ತುಂಬಿಕೊಂಡು ಸೊಂಡಿಲೆತ್ತಿ ಬೀಳ್ಕೊಡಿಗೆ ಸೂಚಿಸಿದೆ.

ಬರೀ ಮೌನವನ್ನೇ ತುಂಬಿಕೊಂಡ ಈ ವಿದಾಯ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿದೆ. ನೆಚ್ಚಿನ ಆನೆ ಹತ್ತಿರ ಬಂದು ಭಾವುಕವಾಗಿದ್ದನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊನೆಗೆ ಶವದ ಪಕ್ಕದಲ್ಲಿ ನಿಂತವರೊಬ್ಬರು ಆನೆಯ ಬಳಿ ಬಂದು ಸೊಂಡಿಲು ನೇವರಿಸಿ ಅದನ್ನು ಸಂತೈಸುವಂತೆ ಮಾಡಿದ್ದಾರೆ. ಅರೆ ನಿಮಿಷ ಮಾವುತನತ್ತ ಸೊಂಡಿಲು ಬೀಸಿ ಕೊನೆಯ ಸ್ಪರ್ಶಕ್ಕಾಗಿ ಹಾತೊರೆದಂತೆ ಮಾಡಿದ ಆನೆ, ಕಡೆಯಲ್ಲಿ ಅಂತಿಮ ನಮನ ಸಲ್ಲಿಸಿ ಶವವನ್ನೇ ದಿಟ್ಟಿಸುತ್ತಾ ಮೆಲ್ಲಮೆಲ್ಲನೆ ಹಿಂದಕ್ಕೆ ಹೆಜ್ಜೆಯಿಟ್ಟು ನಿರ್ಗಮಿಸಿರುವ ದೃಶ್ಯವನ್ನು ನೋಡಿದರೆ ಅರಿವಿಲ್ಲದಂತೆಯೇ ಕಣ್ಣಂಚಲ್ಲಿ ನೀರು ಜಿನುಗಿಬಿಡುತ್ತದೆ.

ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಸಾಯುತ್ತಿದ್ದ ತನ್ನ ತಾಯಿಗೆ ವಿಡಿಯೋ ಕರೆಯಲ್ಲಿ ಹಾಡು ಹೇಳಿ ವಿದಾಯ ಹೇಳಿದ ಮಗ; ಮನಕಲಕುವ ಕಥೆ ಹಂಚಿಕೊಂಡ ವೈದ್ಯರು 

Caught on Camera: ದೇವಸ್ಥಾನದ ಆನೆಗೆ ಮನಬಂದಂತೆ ಥಳಿಸಿದ ಮಾವುತರು, ಮನಕಲಕುವ ವಿಡಿಯೋ ವೈರಲ್

Published On - 2:55 pm, Fri, 4 June 21

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ