AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸೋಂಕಿನಿಂದ ಸಾಯುತ್ತಿದ್ದ ತನ್ನ ತಾಯಿಗೆ ವಿಡಿಯೋ ಕರೆಯಲ್ಲಿ ಹಾಡು ಹೇಳಿ ವಿದಾಯ ಹೇಳಿದ ಮಗ; ಮನಕಲಕುವ ಕಥೆ ಹಂಚಿಕೊಂಡ ವೈದ್ಯರು

ಕೊವಿಡ್​ ಸೋಂಕಿನ ತೀವ್ರತೆಯಿಂದ ಸಾಯುತ್ತಿರುವ ರೋಗಿಯ ಮಗ ತನ್ನ ಅಮ್ಮನೊಂದಿಗೆ ವಿಡಿಯೋ ಕರೆಯಲ್ಲಿ ಹಾಡು ಹೇಳಿ ವಿದಾಯ ಹೇಳಿದ ಮನಕಲಕುವ ಘಟನೆಯೊಂದು ನಡೆದಿದೆ.

ಕೊರೊನಾ ಸೋಂಕಿನಿಂದ ಸಾಯುತ್ತಿದ್ದ ತನ್ನ ತಾಯಿಗೆ ವಿಡಿಯೋ ಕರೆಯಲ್ಲಿ ಹಾಡು ಹೇಳಿ ವಿದಾಯ ಹೇಳಿದ ಮಗ; ಮನಕಲಕುವ ಕಥೆ ಹಂಚಿಕೊಂಡ ವೈದ್ಯರು
ಸಾಂದರ್ಭಿಕ ಚಿತ್ರ
shruti hegde
|

Updated on: May 13, 2021 | 5:05 PM

Share

ಕೊವಿಡ್​ ಸೋಂಕಿನ ತೀವ್ರತೆಯಿಂದ ಸಾಯುತ್ತಿರುವ ರೋಗಿಯ ಮಗ ತನ್ನ ಅಮ್ಮನೊಂದಿಗೆ ವಿಡಿಯೋ ಕರೆಯಲ್ಲಿ ಹಾಡು ಹೇಳಿ ವಿದಾಯ ಹೇಳಿದ ಮನಕಲಕುವ ಘಟನೆಯೊಂದು ನಡೆದಿದೆ. ಈ ಕುರಿತಂತೆ ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಳ್ಳುತ್ತಿದ್ದಂತೆಯೇ  ವಿಷಯ ತಿಳಿದ ಅನೇಕರು ಮನನೊಂದು ಕಣ್ಣೀರು ಹಾಕಿದ್ದಾರೆ.

ತಾಯಿ ಮಗನ ಕೊನೆಯ ಭೇಟಿ ಎಂದು ಇಬ್ಬರಿಗೂ ತಿಳಿದಿತ್ತು. ಅಮ್ಮನೊಂದಿಗೆ ಮಾತನಾಡುವ ಸಂದರ್ಭದಲ್ಲಿ ಮಗನ ಮನ ನೊಂದಿತ್ತು. ಅಮ್ಮನನ್ನು ಇನ್ನು ನೋಡಲು ಸಾಧ್ಯವಿಲ್ಲ ಎಂಬ ಕೊರಗು ಕಣ್ಣಿನ ನೀರಿನ ಮೂಲಕ ಹರಿ ಬರುತ್ತಿತ್ತು. ವಿಧಿಯಾಟಕ್ಕೆ ಹೊಣೆ ಯಾರು ಎಂಬಂತೆ ಕಷ್ಟವಾದರೂ ಸತ್ಯವನ್ನು ಅರಗಿಸಿಕೊಳ್ಳಲೇ ಬೇಕಿತ್ತು. ಕೊನೇ ಕ್ಷಣದಲ್ಲಿ ಅಮ್ಮನಿಗಾಗಿ ಹಾಡೊಂದು ಹೇಳಿ ವಿದಾಯ ಹೇಳಿದ ಘಟನೆಯೊಂದು ಎಲ್ಲರ ಮನಕಲಕುಂತಿದೆ.

ಮಗ ಸೋಹಮ್​ ಚಟರ್ಜಿ ಅವರು ವೈದ್ಯರಾದ ದೀಪ್ಶಿಕಾ ಘೋಷ್​ ಅವರ ಬಳಿ ಅಮ್ಮನೊಂದಿಗೆ ಮಾತನಾಡಲು ನಿಮ್ಮ ಕೆಲ ಸಮಯವನ್ನು ಕೊಡಿ ಎಂದು ಕೇಳಿ ವಿಡಿಯೋ ಕಾಲ್​ ಮಾಡುತ್ತಾರೆ. ಇನ್ನೂ ಕೆಲ ಸಮಯ ಅಮ್ಮನೊಂದಿಗೆ ಕಳೆಯುವುದಾಗಿ ಹೇಳಿ, ಅಮ್ಮನಿಗಾಗಿ ಹಾಡೊಂದನ್ನು ಹಾಡುತ್ತಾರೆ. ಜನಪ್ರಿಯ ಹಿಂದಿ ಹಾಡಾದ ‘ತೇರಾ ಮುಜ್ಸೆ ಹೈ ಪೆಹ್ಲೆ ಕಾ ನತಾ ಕೊಯಿ’ಎಂಬ ಹಾಡನ್ನು ತನ್ನ ತಾಯಿಗಾಗಿ ಹಾಡುತ್ತಾರೆ. ಈ ಹಾಡು ಸಿನಿಮಾದಲ್ಲಿ ಹಲವು ವರ್ಷಗಳ ಬಳಿಕ ತಾಯಿ ಮತ್ತು ಮಗ ಒಂದಾಗುವ ಕ್ಷಣದಲ್ಲಿ ಹಾಡುವ ಚಿತ್ರಗೀತೆಯಾಗಿದೆ’  ಈ ಕುರಿತಾಗಿ ವೈದ್ಯರು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇಂದು ಆಸ್ಪತ್ರೆಯಲ್ಲಿ ನನ್ನ ಶಿಫ್ಟ್​ನ ಕೊನೆಯಲ್ಲಿ ನಡೆದ ಘಟನೆ. ವಿಡಿಯೋ ಕರೆಯ ಕೊನೆಯ ಭೇಟಿಯಲ್ಲಿ ತಾಯಿ ಮತ್ತು ಮಗನ ಸಂಭಾಷಣೆಯನ್ನು ಕೇಳುತ್ತಾ ಅಲ್ಲಿಯೇ ನಿಂತಿದ್ದೆ. ಸೋಹಮ್​ ಚಟರ್ಜಿ ಅವರು ತನ್ನ ತಾಯಿಗೆ ಹಾಡುತ್ತಿರುವುದನ್ನು ನೋಡುತ್ತಿದ್ದಂತೆಯೇ, ದಾದಿಯರು ಸಹ ಬಂದು ಮೌನವಾಗಿ ನಿಂತಿದ್ದರು. ಎಲ್ಲರ ಕಣ್ಣುಗಳು ತೇವವಾಗಿತ್ತು. ಮನಕಲಕುವ ದೃಶ್ಯಕ್ಕೆ ಎದೆ ಭಾರವಾಗಿತ್ತು ಎಂದು ವೈದ್ಯರು ಬರೆದುಕೊಂಡಿದ್ದಾರೆ.

ಇದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರಿಂದ ಅಗಾಧ ಪ್ರತಿಕ್ರಿಯೆಗಳು ಬಂದಿವೆ. ಇಂತಹ ಮನಮಿಡಿಯುವ ಕಥೆ ಕೇಳಿದ ನೆಟ್ಟಿಗರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಮಂಡ್ಯ: ಸೋಂಕಿತ ತಾಯಿ ಸಾವಿನ ಸುದ್ದಿ ತಿಳಿದು ಕೊನೆಯುಸಿರೆಳೆದ ಮಗ

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
BBL 2026: ರಣರೋಚಕ ಪಂದ್ಯದಲ್ಲಿ ರೋಚಕ ಜಯ..!
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ