AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳ್ಳಿಮನೆಗಳಲ್ಲಿ ಹಾಲಿನ ತಾಜಾತನವನ್ನು ಹೀಗೆ ಕಾಪಾಡಿಕೊಳ್ಳಲಾಗುತ್ತದೆ

Milk : ‘ಇಂದಿಗೂ ನನ್ನ ಹಳ್ಳಿಯ ಮನೆಯಲ್ಲಿ ಹಾಲನ್ನು ತಾಜಾತನದಿಂದ ಇಟ್ಟುಕೊಳ್ಳುವ ಈ ಹಳೆಯ ವಿಧಾನವನ್ನೇ ಅನುಸರಿಸಲಾಗುತ್ತದೆ’ ಎಂದಿದ್ದಾರೆ ಐಎಫ್ಎಸ್​ ಅಧಿಕಾರಿ ಪ್ರವೀಣ ಕಸ್ವಾನ್​

ಹಳ್ಳಿಮನೆಗಳಲ್ಲಿ ಹಾಲಿನ ತಾಜಾತನವನ್ನು ಹೀಗೆ ಕಾಪಾಡಿಕೊಳ್ಳಲಾಗುತ್ತದೆ
how milk is kept fresh in village households
TV9 Web
| Edited By: ಶ್ರೀದೇವಿ ಕಳಸದ|

Updated on:Oct 06, 2022 | 3:02 PM

Share

Trending : ಆಧುನಿಕ ತಂತ್ರಜ್ಞಾನದ ಸಹಾಯದಿಂದ ಆಹಾರ ಪದಾರ್ಥಗಳನ್ನು ಸಂರಕ್ಷಿಸುವ ವಿಧಾನಗಳಿಗೆ ನಾವೆಲ್ಲ ಬಹಳ ಸುಲಭವಾಗಿ ಮೊರೆ ಹೋಗಿದ್ದೇವೆ. ಆದರೆ ಹಳ್ಳಿಗಳಲ್ಲಿ ಇಂದಿಗೂ ನೈಸರ್ಗಿಕ ಸಂಪನ್ಮೂಲಗಳ ಸಹಾಯದಿಂದ ಆಹಾರ ಪದಾರ್ಥಗಳನ್ನು ತಾಜಾ ಉಳಿಸಿಕೊಳ್ಳುವ ಉಪಾಯಗಳನ್ನೇ ಪಾಲಿಸುತ್ತಿದ್ದಾರೆ. ಇದೀಗ ಟ್ವೀಟರ್​ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ ಹಂಚಿಕೊಂಡವರು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್. ಹಳ್ಳಿಯ ಮನೆಗಳಲ್ಲಿ ಇಡೀ ದಿನ ಹಾಲನ್ನು ತಾಜಾ ಇರುವಂತೆ ಮಾಡಲು ಏನು ಉಪಾಯ ಕಂಡುಕೊಳ್ಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಿ.

ನನ್ನ ಮನೆಯಲ್ಲಿರುವ ಈ ಒಲೆಗಳ ಸರಳ ಪರಿಕಲ್ಪನೆಯನ್ನು ಗಮನಿಸಿ. ಸುಮಾರು 20-25 ಲೀಟರ್ ಹಾಲು ತುಂಬಿದ ಪಾತ್ರೆಗಳನ್ನು ಇಲ್ಲಿ ಬೆಳಗ್ಗೆಯೇ ಇಡಲಾಗುತ್ತದೆ. ದಿನವಿಡೀ ಕಡಿಮೆ ಶಾಖದಲ್ಲಿ ಹಾಲು ಕಾಯುತ್ತಲೇ ಇರುತ್ತದೆ. ಇದು ಇಂದಿಗೂ ಮುಂದುವರಿದುಕೊಂಡುಬಂದಿದೆ.’ ಎಂಬ ಶೀರ್ಷಿಕೆಯೊಂದಿಗೆ ಈ ಪೋಸ್ಟ್​ ಹಂಚಿಕೊಂಡಿದ್ದಾರೆ ಕಸ್ವಾನ್.

ಇವರ ಇನ್ನೊಂದು ಪೋಸ್ಟ್​ನೊಳಗೆ, ಪಂಜರದಂಥ ಸಾಧನದೊಳಗೆ ಕಾಯ್ದ ಹಾಲಿನ ಪಾತ್ರೆಯನ್ನು ಇಟ್ಟಿರುವುದನ್ನು ನೋಡಬಹುದಾಗಿದೆ. ‘ಗೃಹ ತಂತ್ರಜ್ಞಾನ ಬಹಳ ಸರಳವಾಗಿದೆ. ರಾತ್ರಿ ಕರೆಂಟ್ ಇಲ್ಲದಿದ್ದರೂ ಹಾಲು ಚೆನ್ನಾಗಿರಬೇಕು. ಅದಕ್ಕೆ ಹಾಲಿನ ದೊಡ್ಡ ಪಾತ್ರೆಯನ್ನು ಈ ಪಂಜರದಲ್ಲಿ ಇಡಲಾಗುತ್ತದೆ. ಇಂದಿಗೂ ನನ್ನ ತಾಯಿ ಇದೇ ರೀತಿ ಹಾಲನ್ನು ಸಂರಕ್ಷಿಸುತ್ತಿರುವುದು’ ಎಂಬ ಒಕ್ಕಣೆಯನ್ನು ಈ ಪೋಸ್ಟ್​ಗೆ ಬರೆದಿದ್ದಾರೆ.

ಅನೇಕರು ಅನೇಕ ರೀತಿಯಲ್ಲಿ ಪ್ರಶ್ನಿಸಿ, ಪ್ರತಿಕ್ರಿಯಿಸಿದ್ದಾರೆ. ಈ ವಿಧಾನ ಬಹಳ ಚೆನ್ನಾಗಿದೆ. ನನ್ನ ಮಕ್ಕಳನ್ನು ರಜೆಗೆ ಅಜ್ಜಿಯ ಮನೆಗೆ ಕಳಿಸಿ ಇಂಥ ಸಹಜ ಸರಳ ವಿಧಾನಗಳನ್ನು ಗಮನಿಸುವಂತೆ ಹೇಳುತ್ತೇನೆ ಎಂದಿದ್ದಾರೆ ಒಬ್ಬ ಟ್ವಿಟರ್ ಖಾತೆದಾರರು. ಅರೆ ಹಾಲು ಒಡೆಯುವುದಿಲ್ಲವಾ? ಎಂದಿದ್ದಾರೆ ಮತ್ತೊಬ್ಬರು. ನಮ್ಮ ಮನೆಯಲ್ಲಿಯೂ ಇದೇ ವಿಧಾನವನ್ನು ಅನುಸರಿಸುತ್ತೇವೆ ಎಂದಿದ್ದಾರೆ ಮತ್ತೊಬ್ಬರು.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:01 pm, Thu, 6 October 22

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು