AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲೆಕೆಳಗೆ ಮಾಡಿ ಕತ್ತರಿಗೈಯಲ್ಲಿ ಪಿಯಾನೋ ನುಡಿಸುವ ಈ ಪ್ರತಿಭಾನ್ವಿತೆ

Girl Plays Piano : ಪ್ರ್ಯಾಕ್ಟೀಸ್ ಮಾಡುವಾಗ ಬಹಳ ಬೇಸರವಾಗುತ್ತಿತ್ತು. ಹಾಗಾಗಿ ಈ ಉಪಾಯ ಕಂಡುಕೊಂಡೆ ಎಂದಿದ್ದಾಳೆ ಚೀನಾದ ಈ ಯುವಕಲಾವಿದೆ. ನೆಟ್ಟಿಗರಂತೂ ಫಿದಾ!

ತಲೆಕೆಳಗೆ ಮಾಡಿ ಕತ್ತರಿಗೈಯಲ್ಲಿ ಪಿಯಾನೋ ನುಡಿಸುವ ಈ ಪ್ರತಿಭಾನ್ವಿತೆ
Chinese Girl Plays Piano Lying Upside Down
TV9 Web
| Edited By: |

Updated on: Oct 06, 2022 | 4:03 PM

Share

Viral Video : ಯಾವ ಕಲೆಯೂ ಸರಾಗವಾಗಿ ಬಾರದು. ಸಾಕಷ್ಟು ಪರಿಶ್ರಮ ತಾಳ್ಮೆ ನಿತ್ಯ ಅಭ್ಯಾಸ ಬೇಕೇಬೇಕು. ಚೀನಾದಲ್ಲಿ ಈ ಹುಡುಗಿ ಎಷ್ಟೊಂದು ನಿರಾಯಾಸವಾಗಿ ತಲೆಕೆಳಗೆ ಮಾಡಿಕೊಂಡು ಕತ್ತರಿಗೈಯಲ್ಲಿ ಪಿಯಾನೋ ನುಡಿಸುತ್ತಿದ್ದಾಳೆ ನೋಡಿ ಮತ್ತು ಕೇಳಿ. ನೆಟ್ಟಿಗರಂತೂ ದಂಗು ಬಡಿದು ನೋಡುತ್ತಿದ್ದಾರೆ ಈ ಅದ್ಭುತವಾದ ವಿಡಿಯೋ ಅನ್ನು. ಇವಳ ಅಸಾಧಾರಣ ಪ್ರತಿಭೆ ಮತ್ತು ಕೌಶಲಕ್ಕೆ ಕ್ಯಾ ಬಾತ್ ಹೈ ಎನ್ನುತ್ತಿದ್ದಾರೆ. ಈಕೆಯ ಹೆಸರು ಶೆನ್​. ಹೀಗೇ ಒಂದು ದಿನ ಪಿಯಾನೋ ಅಭ್ಯಾಸ ಮಾಡುವಾಗ ಬೇಸರ ಬರುತ್ತಿತ್ತು. ಅದನ್ನು ಒಂದು ಮೋಜಿನಂತೆ ಪರಿವರ್ತಿಸಿಕೊಳ್ಳಲು ಈ ಹಾದಿ ಕಂಡುಕೊಂಡೆ ಎಂದು ನೌ ದಿಸ್ ನ್ಯೂಸ್​ಗೆ ತಿಳಿಸಿದ್ದಾಳೆ ಈ ಹುಡುಗಿ.

ಈ ವಿಡಿಯೋದಲ್ಲಿ ನುಡಿಸಿದ ಹಾಡು ‘ಡಾಲ್ ಅಂಡ್ ಬೇರ್ ಡ್ಯಾನ್ಸಿಂಗ್’. ಈ ವಿಡಿಯೋ ಈತನಕ ಸುಮಾರು 30,000 ವೀಕ್ಷಕರನ್ನು ತಲುಪಿದೆ. 27 ಕ್ಕೂ ಹೆಚ್ಚು ರೀಟ್ವೀಟ್​ಗೆ ಒಳಗಾಗಿದೆ. ‘ಬಡ್ಡಿಂಗ್ ರಾಕ್‌ಸ್ಟಾರ್’ ಎಂದು ನೆಟ್ಟಿಗರೊಬ್ಬರು ಕರೆದಿದ್ದಾರೆ. ಅದ್ಭುತ ಮೆದುಳು ಈಕೆಯದು ಎಂದಿದ್ದಾರೆ ಮತ್ತೊಬ್ಬರು.

ಕಲೆ ಎನ್ನುವುದು ಸ್ವಂತ ಆಸಕ್ತಿಯಿಂದ ಹುಟ್ಟುವಂಥದ್ದು. ಯಾರ ಒತ್ತಾಯಕ್ಕೂ ಈ ಸೃಜನಶೀಲ ಕಲೆಗಳು ಒಲಿಯಲಾರವು. ಎದ್ದರೂ ಬಿದ್ದರೂ ಬೇಸರವಾದರೂ ಖುಷಿಯಾದರೂ ಕಲೆಯೇ ಅಂತಿಮ ಎಂದು ಅದರೊಂದಿಗೆ ಒಂದಾದಾಗ ಮಾತ್ರ ಸಾಧನೆ ಸಾಧ್ಯ.

ಈಗ ಈ ಕಲಾವಿದೆಯನ್ನೇ ಗಮನಿಸಿ, ತನಗೆ ಪ್ರ್ಯಾಕ್ಟೀಸ್ ಮಾಡುವುದು ಬೇಸರವೆಂದು ಹೀಗೊಂದು ಉಪಾಯ ಕಂಡುಕೊಂಡು ವಿಡಿಯೋ ಮಾಡಿ ಹಂಚಿಕೊಂಡು ಅಷ್ಟೇ ಚೈತನ್ಯ ಕಂಡುಕೊಂಡಳು. ನಮ್ಮ ಖುಷಿಯ ಮೂಲ ನಮ್ಮಲ್ಲೇ ಇರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಮಾದರಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
ಎ ಖಾತಾದಿಂದ ಬಿ ಖಾತಾಗೆ ಕನ್ವರ್ಷನ್: ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್
ಎ ಖಾತಾದಿಂದ ಬಿ ಖಾತಾಗೆ ಕನ್ವರ್ಷನ್: ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್
ಸದನದಲ್ಲಿ ಡಿಕೆಶಿ-ಮುನಿರತ್ನ ನಡುವೆ ಮಾತಿನ ಕದನ
ಸದನದಲ್ಲಿ ಡಿಕೆಶಿ-ಮುನಿರತ್ನ ನಡುವೆ ಮಾತಿನ ಕದನ
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್: ಏನೆಲ್ಲ ಪರಿಶೀಲನೆ ನಡೀತು?
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್: ಏನೆಲ್ಲ ಪರಿಶೀಲನೆ ನಡೀತು?
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್!
ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ
ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ
ದೇವಿಯನ್ನು ಹಾಲು ತುಪ್ಪದಿಂದ ಕಾಂಗ್ರೆಸ್‌ ಶುದ್ಧೀಕರಣ
ದೇವಿಯನ್ನು ಹಾಲು ತುಪ್ಪದಿಂದ ಕಾಂಗ್ರೆಸ್‌ ಶುದ್ಧೀಕರಣ
ಶ್ರೀರಾಮ ನವಮಿ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಫುಲ್​​ ರಶ್​​
ಶ್ರೀರಾಮ ನವಮಿ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಫುಲ್​​ ರಶ್​​
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಸುತ್ತೂರು ಮಠಕ್ಕೆ ಭೇಟಿ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಂದ ಸುತ್ತೂರು ಮಠಕ್ಕೆ ಭೇಟಿ
‘ಚಾನ್ಸ್ ಕೊಡಿ ಅಂತ ಕೇಳಿಕೊಂಡ್ರಲ್ಲ’; ಕೃಷ್ಣ ವಿರುದ್ಧ ಕಿಡಿಕಾರಿದ ಗುರು
‘ಚಾನ್ಸ್ ಕೊಡಿ ಅಂತ ಕೇಳಿಕೊಂಡ್ರಲ್ಲ’; ಕೃಷ್ಣ ವಿರುದ್ಧ ಕಿಡಿಕಾರಿದ ಗುರು