AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶಭಾಷ್​ ಉಡುಪಿಯ ‘ಆಭರಣ’ ಬಾಲೆಯರೇ, ಕುಣಿಯಿರೈ ಮನದಣಿಯೇ!

Udupi : ಮಳಿಗೆಯೊಳಗೆ ದಿನವೂ ಗಂಟೆಗಟ್ಟಲೆ ನಿಂತಲ್ಲೇ ನಿಂತು ಸೌಜನ್ಯದಿಂದ ಗ್ರಾಹಕರೊಂದಿಗೆ ಒಡನಾಡಿ ವಹಿವಾಟು ನಡೆಸುವ ಈ ಮಹಿಳೆಯರು ಇದ್ದಕ್ಕಿದ್ದ ಹಾಗೆ ಬೀದಿಯಲ್ಲಿ ಬಂದು ಕುಣಿದರೆ ಹೇಗಿರಬೇಡ! ಅಂದಹಾಗೆ ಯಾರಪ್ಪಣೆ ಬೇಕು ಕುಣಿಯೋದಕ್ಕೆ?

Viral Video: ಶಭಾಷ್​ ಉಡುಪಿಯ ‘ಆಭರಣ’ ಬಾಲೆಯರೇ, ಕುಣಿಯಿರೈ ಮನದಣಿಯೇ!
ಉಡುಪಿಯ ಬೀದಿಯಲ್ಲಿ ಆಭರಣ ಮಳಿಗೆಯ ಮಹಿಳಾ ಉದ್ಯೋಗಿಗಳ ನೃತ್ಯ
TV9 Web
| Edited By: |

Updated on:Aug 22, 2022 | 3:35 PM

Share

Woman And Dance : ಲಯ ನಾದದ ಗತಿಗೆ ಮನಸೋಲದವರು ಯಾರಿಲ್ಲ? ಬಾಲ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಉಲ್ಲಾಸ ಪಡುವುದು ಉಲ್ಲಾಸ ನೀಡುವುದು ಎನ್ನುವುದು ಎಲ್ಲಿಂದ ಪ್ರಾರಂಭವಾಯಿತು? ಸಂಗೀತ, ನೃತ್ಯ ಎನ್ನುವುದು ನರನಾಡಿಗಳಲ್ಲೇ ಬೆಸೆದುಕೊಂಡಿರುವಂಥದ್ದು. ಅದು ನೀಡುವ ಚೈತನ್ಯಕ್ಕೆ ಸರಿಸಾಟಿ ಯಾವುದೂ ಇಲ್ಲ. ಅಂತೆಯೇ ಅದು ತನ್ನ ತೆಕ್ಕೆಗೆ ಎಳೆದುಕೊಳ್ಳುವಾಗಲೂ ಅದಕ್ಕೆ ಲಿಂಗಬೇಧವಿರುವುದಿಲ್ಲ. ನೃತ್ಯ ಮತ್ತು ನಾದದ ಮಹಿಮೆಯದು. ಉಡುಪಿಯಲ್ಲಿ ಇತ್ತೀಚೆಗೆ ಇಂಥ ಉತ್ಸಾಹಪೂರ್ಣ ಗಳಿಗೆಗಳಿಗೆ ಸಾರ್ವಜನಿಕರು ಸಾಕ್ಷಿಯಾದರು. ಈ ಗಳಿಗೆಗಳನ್ನು ರಸವತ್ತಾಗಿಸಿದವರು ಉಡುಪಿ ಆಭರಣ ಮಹಿಳಾ ಉದ್ಯೋಗಿಗಳು. ಹುಲಿವೇಷದ ತಾಸೆವಾದನದ ಗತಿಗೆ ಶರಣಾದ ಈ ಮಹಿಳೆಯರು ಮೈಮನದಣಿಯೆ ಕುಣಿದದ್ದು ನೋಡಿದಾಗ ರೋಮಾಂಚನ ಉಂಟಾಗುವುದಿಲ್ಲವೆ?

ಕಳಲೆ ಪುರುಷೋತ್ತಮ ಎನ್ನುವವರು ಫೇಸ್​ಬುಕ್​ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನರ್ತಿಸಿರುವ ಹೆಣ್ಣುಮಕ್ಕಳ ಜೀವನೋತ್ಸಾಹ ಕಂಡು ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಎಲ್ಲರೊಳಗೂ ಹೀಗೆ ಮೈಮರೆತು ನರ್ತಿಸುವ ಮಗುವೊಂದು ಸುಪ್ತವಾಗಿದ್ದೇ ಇರುತ್ತದೆ. ಅದರದೇ ಆದ ಲಯದೊಂದಿಗೆ ಮನಸ್ಸು ಮಿಳಿತಗೊಂಡಿರುತ್ತದೆ. ಅದು ಹೀಗೆ ಕುಣಿಯಲು ಅವಕಾಶಕ್ಕಾಗಿ ಕಾಯುತ್ತಿರುತ್ತದೆ. ಯಾವಾಗ ಅದು ಮೈಚಳಿಬಿಟ್ಟು ಹೀಗೆ ಜೀವನೋತ್ಸಾಹ ಮೆರೆಯುತ್ತದೆಯೋ, ಯಾರು ಬಲ್ಲರು? ಇಂಥ ಅಪೂರ್ವ ಗಳಿಗೆಗಳು ನಿಮ್ಮ ಬದುಕಿನಲ್ಲಿಯೂ ಆಗಾಗ ಬರುತ್ತಿರಲಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 3:14 pm, Mon, 22 August 22

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು