AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಬೆಂಗಳೂರಿನಲ್ಲಿ 38 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ

ಈಗಿನ ಕಾಲದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳೋದೇ ಕಷ್ಟ. ಹೀಗಿರುವಾಗ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು 38 ಲಕ್ಷ ರೂ ಆಫರ್‌ ತ್ಯಜಿಸಿ 30 ಲಕ್ಷ ರೂ ಸಂಬಳದ ಉದ್ಯೋಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತನ್ನ ನಿರ್ಧಾರದ ಹಿಂದಿನ ಕಾರಣ ರಿವೀಲ್ ಮಾಡಿದ್ದು, ಈ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಿನಲ್ಲಿ 38 ಲಕ್ಷ ರೂ ಸಂಬಳದ ಜಾಬ್ ಆಫರ್ ತಿರಸ್ಕರಿಸಿದ ವ್ಯಕ್ತಿ
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: May 18, 2026 | 7:23 PM

Share

ಉದ್ಯೋಗ ಎಲ್ಲರಿಗೂ ಅವಶ್ಯಕ. ಹೀಗಾಗಿ ಎಷ್ಟೋ ಯುವಕರು ಊರು ಬಿಟ್ಟು ದೂರದ ಬೆಂಗಳೂರು, ಮುಂಬೈ ಹೀಗೆ ಇತರ ಊರುಗಳಿಗೆ ಹೋಗ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೊಬ್ಬರು ಒಂದೊಳ್ಳೆ ಉದ್ಯೋಗ ಆಫರ್ ತಿರಸ್ಕರಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ಅಧಿಕ ಸಂಬಳದ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಬದಲು ಹೈದರಾಬಾದ್‌ನಲ್ಲಿ (Hyderabad) ಕಡಿಮೆ ಸಂಬಳದ ಉದ್ಯೋಗ ಆಯ್ಕೆ ಮಾಡಿಕೊಂಡಿದ್ದಾರೆ. ಈ ವ್ಯಕ್ತಿಯ ಪೋಸ್ಟ್ ಆನ್ಲೈನ್ ನಲ್ಲಿ ಚರ್ಚೆ ಹುಟ್ಟುಹಾಕಿದೆ.

ಮದನ್ ಮೋಹನ್ (Madan Mohan) ಎಂಬ ವ್ಯಕ್ತಿ ತನ್ನ ಎಕ್ಸ್ ಖಾತೆಯಲ್ಲಿ ಉದ್ಯೋಗ ಆಯ್ಕೆಯ ಅನುಭವ ಹಂಚಿಕೊಂಡಿದ್ದಾನೆ. ನನ್ನ ಪ್ರಸ್ತುತ ಸಂಸ್ಥೆಗೆ ಸೇರುವ ಮೊದಲು ನನ್ನ ಕೈಯಲ್ಲಿ ಎರಡು ಆಫರ್‌ಗಳಿದ್ದವು. ಆಫರ್ 1: ಪ್ಯಾಕೇಜ್ 38 ಲಕ್ಷ ರೂ , ಸ್ಥಳ ಬೆಂಗಳೂರು. ಆಫರ್ 2: ಪ್ಯಾಕೇಜ್ 30 ಲಕ್ಷ ರೂ , ಸ್ಥಳ ಹೈದರಾಬಾದ್. ನನ್ನ ಸುತ್ತಲಿನ ಹೆಚ್ಚಿನ ಜನರು, ನೀವು ಇನ್ನೂ 38 ಲಕ್ಷ ರೂ ಸಂಬಳದ ಉದ್ಯೋಗ ಏಕೆ ಬಿಡುತ್ತೀರಿ?” ಎಂದು ಕೇಳಿದರು, ಆದರೆ ನಾನು ಅರಿತುಕೊಂಡದ್ದು ಇಲ್ಲಿದೆ ಕೆಲವೊಮ್ಮೆ, ಉತ್ತಮ ನಿರ್ಧಾರವೆಂದರೆ ಅತ್ಯುನ್ನತ ಪ್ಯಾಕೇಜ್ ಅಲ್ಲ ಎಂದಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ನಾನು ಕಳೆದ 15 ವರ್ಷಗಳಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದೇನೆ. ನನಗೆ, ಇಲ್ಲಿನ ಜೀವನ ಎಂದರೆ ಉತ್ತಮ ಆಹಾರ, ಕಡಿಮೆ ಜೀವನ ವೆಚ್ಚ, ಕಡಿಮೆ ಒತ್ತಡ, ಸೌಕರ್ಯ ಮತ್ತು ಪರಿಚಿತತೆ, ಹತ್ತಿರದ ಕುಟುಂಬ, ಸ್ನೇಹಿತರು ಹಾಗೂ ನಿಜವಾಗಿಯೂ ಮನೆಯಂತೆ ಭಾಸವಾಗುವ ನಗರ ಎಂದಿದ್ದಾರೆ.

ದೊಡ್ಡ ಸಂಬಳವು ಆಕರ್ಷಕವಾಗಿ ಕಾಣುತ್ತದೆ, ಆದರೆ ಮನಸ್ಸಿನ ಶಾಂತಿ, ಜೀವನಶೈಲಿ, ಸಂತೋಷ ಹಾಗೂ ಮಾನಸಿಕ ನೆಮ್ಮದಿ ಕೂಡ ಮೌಲ್ಯವನ್ನು ಹೊಂದಿರುತ್ತದೆ. ಆದರೆ ಅವು ಹೆಚ್ಚು ಮುಖ್ಯವಾಗುತ್ತವೆ. ಅನೇಕ ಜನರು ಸಂಬಳವನ್ನು ಮಾತ್ರ ಲೆಕ್ಕ ಹಾಕುತ್ತಾರೆ. ಬಹಳ ಕಡಿಮೆ ಜನರು ಜೀವನದ ಗುಣಮಟ್ಟವನ್ನು ಲೆಕ್ಕ ಹಾಕುತ್ತಾರೆ ಎಂದು ಹೇಳಿದ್ದಾರೆ.

ಇಂದು, ನಾನು ತೆಗೆದುಕೊಂಡ ನಿರ್ಧಾರದಿಂದ ನನಗೆ ಸಂತೋಷವಾಗಿದೆ ಏಕೆಂದರೆ ಯಶಸ್ಸು ಕೇವಲ ಹೆಚ್ಚು ಗಳಿಸುವುದಲ್ಲ. ನೀವು ಆನಂದಿಸುವ ಜೀವನವನ್ನು ನಿರ್ಮಿಸುವುದರಲ್ಲಿ ಇರುತ್ತದೆ. ಒತ್ತಡದ ಬದಲು ಶಾಂತಿಯನ್ನು ಆರಿಸಿಕೊಳ್ಳುವುದು ವೃತ್ತಿಜೀವನದ ಅತ್ಯಂತ ಬುದ್ಧಿವಂತ ನಡೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: ಊರು ಬದಲಾಯಿಸುವುದು ಸುಲಭದ ಕೆಲಸವಲ್ಲ; ಬೆಂಗಳೂರಿಗೆ ಸ್ಥಳಾಂತರಗೊಳ್ಳುವಾಗ ದಂಪತಿ ಹೀಗೆಂದಿದ್ದೇಕೆ?

ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹೈದರಾಬಾದ್ ಎಲ್ಲಕ್ಕಿಂತ ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಹೈದರಾಬಾದ್ ನನಗೆ ಮನೆಯಂತೆ ಅನಿಸುತ್ತದೆ ಎಂದಿದ್ದಾರೆ. ಮತ್ತೊಬ್ಬರು, ನನಗೆ ಬೆಂಗಳೂರು ಉತ್ತಮವಾಗಿದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More