AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ವೈಫೈ ಸಮಸ್ಯೆಯಾಗಿದೆ ಎಂದು ಏರ್​​​​ಟೆಲ್​​​ ಎಂಜಿನಿಯರ್​​​ನ ಕಾಲ್ಬೆರಳು ಮುರಿದ ಐಎಎಸ್ ಅಧಿಕಾರಿ 

ಮನೆಯ ವೈಫೈ ಸಮಸ್ಯೆಯಿಂದ ಅಸಮಾದಾನಗೊಂಡ ಐಎಎಸ್ ಅಧಿಕಾರಿ ಅಮನ್ ಮಿತ್ತಲ್ ಮತ್ತು ಅವರ ಸಹೋದರ ಏರ್​​​​ಟೆಲ್​​​ ಕಂಪೆನಿಯ ಇಬ್ಬರು ಎಂಜಿನಿಯರ್​​ಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಪರಿಣಾಮವಾಗಿ ಅದರಲ್ಲಿ ಒಬ್ಬ  ಎಂಜಿನಿಯರ್​​ನ  ಕಾಲ್ಬೆರಳು ಮುರಿತಕ್ಕೊಳಗಾಗಿದೆ. ಈ ಘಟನೆಯು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಮಿತ್ತಲ್ ಸಹೋದರರ  ವಿರುದ್ಧ ಎಫ್.ಐ.ಆರ್ ದಾಖಲಾದೆ ಎಂದು ವರದಿಗಳು ತಿಳಿಸಿವೆ.

ಮನೆಯಲ್ಲಿ ವೈಫೈ ಸಮಸ್ಯೆಯಾಗಿದೆ ಎಂದು ಏರ್​​​​ಟೆಲ್​​​ ಎಂಜಿನಿಯರ್​​​ನ ಕಾಲ್ಬೆರಳು ಮುರಿದ ಐಎಎಸ್ ಅಧಿಕಾರಿ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 04, 2024 | 10:51 AM

ಮನುಷ್ಯನಿಗೆ ಹಣ, ಆಸ್ತಿ, ಅಂತಸ್ತು, ಅಧಿಕಾರ ಈ ಎಲ್ಲಕ್ಕಿಂತ  ಮುಖ್ಯವಾಗಿ ಮಾನವೀಯ ಗುಣ ಇರಬೇಕು ಎಂದು ಹೇಳ್ತಾರೆ. ಆದರೆ ಇಂದು ಕೆಲವೊಬ್ಬರು ತಮ್ಮ ಹಣ, ಅಧಿಕಾರದ ಸೊಕ್ಕಿನಿಂದ ಸಾಮಾನ್ಯ ಜನರ ಮೇಲೆ ತಮ್ಮ ದರ್ಪ ತೋರಿಸುತ್ತಿದ್ದಾರೆ.  ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಮನೆಯ ಇಂಟರ್ನೆಟ್ ರೂಟರ್ ಸಮಸ್ಯೆಯನ್ನು ಪರಿಹರಿಸಲು ಬಂದಂತಹ ಇಬ್ಬರು ಎಂಜಿನಿಯರ್ಗಳ ಮೇಲೆ ಐಎಎಸ್ ಅಧಿಕಾರಿ ಅಮನ್ ಮಿತ್ತಲ್ ಮತ್ತು ಅವರ ಸಹೋದರ ದೇವೇಶ್ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಎಂಜಿನಿಯರ್ ಒಬ್ಬರ ಕಾಲ್ಬೆರಳು ಮುರಿತಕ್ಕೊಳಗಾಗಿದೆ.

ಈ ಘಟನೆ ಮುಂಬೈಯ ಘನ್ಸೋಲಿಯಲ್ಲಿರುವ ಅಮನ್ ಮಿತ್ತಲ್ ಅವರ ಮನೆಯಲ್ಲಿ ನಡೆದಿದ್ದು, ಇಂಟರ್ನೆಟ್ ರೂಟರ್ ಸಮಸ್ಯೆಯನ್ನು ಸರಿಪಡಿಸಲು ಬಂದ ಏರ್​​​​ಟೆಲ್​​​ ಎಂಜಿನಿಯರ್ಗಳಾದ ಭೂಷನ್ ಗುಜರ್ ಮತ್ತು ಸಾಗರ್ ಮಂಧಾರೆ ಅವರ ಮೇಲೆ  ಅಮನ್ ಮಿತ್ತಲ್ ಮತ್ತು ಅವರ ಸಹೋದರ ಹಲ್ಲೆ ನಡೆಸಿದ್ದಾರೆ.

ಡಿಸೆಂಬರ್ 30 ರಂದು ಈ ಘಟನೆ ನಡೆದಿದ್ದು, ಮನೆಯ ವೈಫೈ ಸರಿಪಡಿಸುವ ವೇಳೆಯಲ್ಲಿ ಎಂಜಿನಿಯರ್ಗಳು ಮತ್ತು ಮಿತ್ತಲ್ ಸಹೋದರರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.   ಕೊನೆಯಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟು ಮಿತ್ತಲ್ ಸಹೋದದರು ರಾಡ್ ಮತ್ತು ಪೈಪ್ನಿಂದ ಎಂಜಿನಿಯರ್ಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮವಾಗಿ ಒಬ್ಬ ಎಂಜಿನಿಯರ್ ನ  ಕಾಲ್ಬೆರಳು ಮುರಿತಕ್ಕೊಳಗಾಗಿದೆ.

ಈ ಘಟನೆಯ ಬಳಿಕ 2015 ನೇ ಬ್ಯಾಚ್ನ ಐಎಎಸ್ ಅಧಿಕಾರಿ ಹಾಗೂ ಮಹರಾಷ್ಟ್ರ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿಯಾಗಿರುವ  ಅಮನ್ ಮಿತ್ತಲ್ ಮತ್ತು ಅವರ ಸಹೋದರ ದೇವೇಶ್ ವಿರುದ್ಧ  ಹಿಂಸಾಚಾರದ ಅರೋಪದ ಮೇಲೆ  ರಬಲೆ ಪೊಲೀಸ್ ಠಾಣೆಯಲ್ಲಿ  ಎಫ್.ಐ.ಆರ್ ದಾಖಲಿಸಲಾಗಿದೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆದರೆ  ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಅಲ್ಲದೆ ಮಿತ್ತಲ್ ಸಹೋದರರು ಕೂಡಾ ಎಂಜಿನಿಯರ್ ಗಳ ವಿರುದ್ಧ ಪ್ರತಿ ದೂರನ್ನು ದಾಖಲಿಸಿದ್ದಾರೆ  ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ: ಬಹುಶಃ ಹೋಮ್ ಡೆಲಿವರಿ ಅಂದ್ರೆ ಇದೇ ಇರ್ಬೇಕು ನೋಡಿ…

ವಿಚಾರಣೆಗಾಗಿ ಅಮನ್ ಮಿತ್ತಲ್ ಮತ್ತು ದೇವೇಶ್ ಮಿತ್ತಲ್ ಅವರಿಗೆ ನೋಟಿಸ್ ನೀಡಿರುವುದಾಗಿ ರಬಲೆ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ರಾಜೇಂದ್ರ ಕೋಟೆ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎರಡೂ ಕಡೆಯವರು ಪರಸ್ಪರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ. ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
ಮಂಗಳೂರುಗೆ ಇಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಭೇಟಿ
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್
‘ಅವಕಾಶ ಸಿಕ್ಕರೆ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಆಗಲು ಸಿದ್ಧ’; ವಿನೋದ್
ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್​ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ
ಕ್ರೀಡಾ ಸ್ಫೂರ್ತಿ ಅಲ್ಲ... ರಿಷಭ್ ಪಂತ್​ ಮಾಡಿದ್ದು ನಾಟಕ: ಇಲ್ಲಿದೆ ವಿಡಿಯೋ
VIDEO: ನಿಜಕ್ಕೂ ಇದು ನೋ ಬಾಲಾ? ಇಲ್ಲಿದೆ ಉತ್ತರ 
VIDEO: ನಿಜಕ್ಕೂ ಇದು ನೋ ಬಾಲಾ? ಇಲ್ಲಿದೆ ಉತ್ತರ 
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್
VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
VIDEO: ಮಂಕಡ್ ರನೌಟ್​ಗೆ ಅಪೀಲ್​ ಮಾಡುತ್ತಿದ್ದಂತೆ, ವಿರಾಟ್ ಕೊಹ್ಲಿ ಆಕ್ರೋಶ
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
ಪರೀಕ್ಷಾರ್ಥ ಹಾರಾಟ ವೇಳೆ ಸಮುದ್ರಕ್ಕೆ ಅಪ್ಪಳಿಸಿದ ಸ್ಪೇಸ್​ಎಕ್ಸ್​ನ ರಾಕೆಟ್
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
VIDEO: ದಿಗ್ವೇಶ್ ಮಹಾ ಎಡವಟ್ಟು... ಇದೇ ಕಾರಣಕ್ಕೆ ಅಂಪೈರ್ ಔಟ್ ನೀಡಿಲ್ಲ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ
ವಸ್ತ್ರದಾನದ ಮಹತ್ವ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ