AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tomato: ತಾಯಿಯ ಆಸೆ ಪೂರೈಸಲು ದುಬೈಯಿಂದ 10 ಕೆಜಿ ಟೊಮೆಟೊ ತಂದ ಮಗಳು! ಟ್ವೀಟ್ ವೈರಲ್

ಈ ಹಣದುಬ್ಬರದ ಸಮಯದಲ್ಲಿ ದುಬೈನಿಂದ ಟೊಮೆಟೊ ತಂದ ಮಗಳಿಗೆ ‘ಅತ್ಯುತ್ತಮ ಮಗಳು ಪ್ರಶಸ್ತಿ’ ನೀಡಬಹುದು ಎಂದು ಟ್ವಿಟರ್ ಬಳಕೆದಾರ ನಯನತಾರಾ ಮೆನನ್ ಬಾಗ್ಲಾ ಎಂಬವರು ಪ್ರತಿಕ್ರಿಯಿಸಿದ್ದಾರೆ.

Tomato: ತಾಯಿಯ ಆಸೆ ಪೂರೈಸಲು ದುಬೈಯಿಂದ 10 ಕೆಜಿ ಟೊಮೆಟೊ ತಂದ ಮಗಳು! ಟ್ವೀಟ್ ವೈರಲ್
ಸಾಂದರ್ಭಿಕ ಚಿತ್ರ
Follow us
Ganapathi Sharma
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 22, 2023 | 1:17 PM

ನವದೆಹಲಿ, ಜುಲೈ 21: ತಾಯಿಯ ಆಸೆಯನ್ನು ಪೂರೈಸುವುದಕ್ಕಾಗಿ ದುಬೈ ವಲಸಿಗ ಮಹಿಳೆಯೊಬ್ಬರು ಸೂಟ್‌ಕೇಸ್‌ನಲ್ಲಿ 10 ಕೆಜಿ ಟೊಮೆಟೊಗಳನ್ನು (Tomato) ಪ್ಯಾಕ್ ಮಾಡಿ ಭಾರತಕ್ಕೆ (India) ತಂದ ಅಪರೂಪದ ವಿದ್ಯಮಾನ ವರದಿಯಾಗಿದೆ. ರಜೆಗಾಗಿ ಭಾರತಕ್ಕೆ ಮನೆಗೆ ಹೊರಟಿದ್ದ ಮಹಿಳೆ ತನ್ನ ತಾಯಿ ಬಳಿ ದುಬೈನಿಂದ ಏನು ತರಬೇಕು ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರ ಅಮ್ಮ, ದೇಶದಲ್ಲಿ ಟೊಮೆಟೊ ಬೆಲೆ ಏರಿಕೆಯಾಗಿದ್ದು, ಅದುವೇ ಆದೀತು ಎಂದು ಉತ್ತರಿಸಿದ್ದಾರೆ. ಮಹಿಳೆ ಟೊಮೆಟೊದೊಂದಿಗೆ ಸ್ವದೇಶಕ್ಕೆ ಬಂದಿದ್ದಾರೆ. ಈ ಕುರಿತ ಟ್ವೀಟೊಂದು ಈಗ ವೈರಲ್ ಆಗಿದೆ.

‘ನನ್ನ ಸಹೋದರಿ ತನ್ನ ಮಕ್ಕಳ ಬೇಸಿಗೆ ರಜೆಗಾಗಿ ದುಬೈನಿಂದ ಭಾರತಕ್ಕೆ ಬಂದಿದ್ದಾಳೆ. ಬರುವ ಮುನ್ನ ದುಬೈನಿಂದ ಏನಾದರೂ ಬೇಕೇ ಎಂದು ನನ್ನ ಅಮ್ಮನನ್ನು ಕೇಳಿದ್ದಳು. ತಾಯಿ 10 ಕಿಲೋ ಟೊಮೆಟೊಗಳನ್ನು ತನ್ನಿ ಎಂದು ಹೇಳಿದ್ದರು. ಹೀಗಾಗಿ ಅವಳು ಸೂಟ್‌ಕೇಸ್‌ನಲ್ಲಿ 10 ಕೆಜಿ ಟೊಮೇಟೊ ಪ್ಯಾಕ್ ಮಾಡಿ ತಂದಿದ್ದಾಳೆ’ ಎಂದು ರೇವ್ಸ್ ಎಂಬ ಹೆಸರಿನ ಟ್ವೀಟ್ ಅಕೌಂಟ್​​ನಿಂದ ಟ್ವೀಟ್ ಮಾಡಲಾಗಿದೆ.

ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ‘ಅವಳು (ಸಹೋದರಿ) ಅದನ್ನು ದೊಡ್ಡ ಪರ್ಲ್‌ಪೆಟ್ ಬಾಕ್ಸ್‌ಗಳಲ್ಲಿ ಹಾಕಿದಳು ಮತ್ತು ಅವುಗಳನ್ನು ಸೂಟ್‌ಕೇಸ್‌ನಲ್ಲಿ ಇರಿಸಿ ತಂದಳು ಎಂದು ರೇವ್ಸ್ ಟ್ವೀಟ್​​​ನಲ್ಲಿ ಉಲ್ಲೇಖಿಸಿದ್ದಾರೆ.

ಈ ಟ್ವೀಟ್ ಸದ್ಯ 53,500ಕ್ಕೂ ವಿವ್ಸ್ ಪಡೆದಿದೆ. ಅನೇಕರು ಬಳಕೆದಾರರಿಗೆ ಟೊಮೆಟೊ ಸಂಗ್ರಹಣೆ ಮತ್ತು ಕಸ್ಟಮ್ಸ್ ನಿಯಮಗಳ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಹಣದುಬ್ಬರದ ಸಮಯದಲ್ಲಿ ದುಬೈನಿಂದ ಟೊಮೆಟೊ ತಂದ ಮಗಳಿಗೆ ‘ಅತ್ಯುತ್ತಮ ಮಗಳು ಪ್ರಶಸ್ತಿ’ ನೀಡಬಹುದು ಎಂದು ಟ್ವಿಟರ್ ಬಳಕೆದಾರ ನಯನತಾರಾ ಮೆನನ್ ಬಾಗ್ಲಾ ಎಂಬವರು ಪ್ರತಿಕ್ರಿಯಿಸಿದ್ದಾರೆ.

ಕಳೆದ ಕೆಲವು ವಾರಗಳಿಂದ ಟೊಮೆಟೊ ಬೆಲೆ ಏರಿಕೆಯಾಗಿದ್ದು, ದೇಶದ ಕೆಲವು ಭಾಗಗಳಲ್ಲಿ ಕೆಜಿಗೆ 250 ರೂ.ವರೆಗೆ ಏರಿಕೆಯಾಗಿದೆ.

ಇದನ್ನೂ ಓದಿ: Tomato Price: ಸರ್ಕಾರದಿಂದ ಟೊಮೆಟೋಗೆ ಸಬ್ಸಿಡಿ ಇನ್ನಷ್ಟು ಹೆಚ್ಚಳ; ಕಿಲೋಗೆ 70 ರೂನಂತೆ ಮಾರಾಟ

ನೇಪಾಳದಿಂದ ಭಾರತಕ್ಕೆ ಕಳ್ಳಸಾಗಣೆಯಾಗುತ್ತಿದ್ದ ಮೂರು ಟನ್ ಟೊಮೆಟೊಗಳನ್ನು ಕಸ್ಟಮ್ಸ್ ಅಧಿಕಾರಿಗಳು ಇತ್ತೀಚೆಗೆ ವಶಪಡಿಸಿದ್ದರು ಎಂದು ‘ಐಎಎನ್​​ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ವರದಿಗಳ ಪ್ರಕಾರ, ತಡವಾದ ಮುಂಗಾರು ಮಳೆ, ಹೆಚ್ಚಿನ ತಾಪಮಾನ ಮತ್ತು ಕಡಿಮೆ ಉತ್ಪಾದನೆಯು ಇತ್ತೀಚೆಗೆ ಟೊಮೆಟೊ ಬೆಲೆ ಏರಿಕೆಗೆ ಕಾರಣವಾಗಿರಬಹುದು. ಭಾರೀ ಮಳೆಯೂ ಬೆಲೆಯಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:15 pm, Fri, 21 July 23

‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್