AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಆ ಪುಟ್ಟ ಬಾಲಕ; ಅವನ ಮಾತು ಕೇಳಿದ್ರೆ ಚಿಪ್ಸ್​ ಮಾಡದೇ ಇರ್ತೀರಾ? ವಿಡಿಯೋ ವೈರಲ್

ಮನೆಯಲ್ಲಿಯೇ ಗರಿಗರಿಯಾದ ಪೊಟಾಟೊ(ಆಲೂಗಡ್ಡೆ) ಲೇಸ್​ ಅಥವಾ ಚಿಪ್ಸ್ ಮಾಡುವ ವಿಧಾನ ಹೇಗೆ ಎಂಬುದನ್ನು ಕೇರಳ ಮೂಲದ ಬಾಲಕ ಶಂಕರ್​ ವಿವರಿಸುತ್ತಾನೆ. ಇತ್ತೀಚೆಗೆ ಶಂಕರ್​ ವ್ಲಾಗ್ಸ್ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹರಿ ಬಿಟ್ಟಿದ್ದಾನೆ. ಚಿಪ್ಸ್​ ತಯಾರಿಸುವ ವಿಡಿಯೋ ಸುಮಾರು 5 ಲಕ್ಷ ವೀಕ್ಷಣೆಯನ್ನು ಗಳಿಸಿಕೊಂಡಿದೆ.

ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಆ ಪುಟ್ಟ ಬಾಲಕ; ಅವನ ಮಾತು ಕೇಳಿದ್ರೆ ಚಿಪ್ಸ್​ ಮಾಡದೇ ಇರ್ತೀರಾ? ವಿಡಿಯೋ ವೈರಲ್
ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಪುಟ್ಟ ಬಾಲಕ
shruti hegde
|

Updated on:May 31, 2021 | 11:19 AM

Share

ಕೊರೊನಾ ವೈರಸ್​ ಹರಡುತ್ತಿದ್ದಂತೆಯೇ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಯಿತು, ಲಾಕ್​ಡೌನ್​ ಕೂಡಾ ಜಾರಿಯಲ್ಲಿದೆ. ಈ ಮಧ್ಯೆ ಮನೆಯಲ್ಲಿ ಕೂತು ಸಮಯವೇ ಸಾಗುತ್ತಿಲ್ಲ ಎನ್ನುತ್ತಿರುವವರು ಒಂದು ಕಡೆ, ಅಮ್ಮಾ ಹಸಿವು… ಎಂಬ ಮಕ್ಕಳ ಕೂಗು ಇನ್ನೊಂದು ಕಡೆ. ತಿಂಡಿ ತಿನಿಸುಗಳನ್ನು ಅಂಗಡಿಗಳಿಂದ ತರೋಣ ಎಂದರೆ ಹೊರಗಡೆ ಕಾಲಿಡುವಂತಿಲ್ಲ. ಅಗತ್ಯವಾದ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿರುವುದಿಂದ ಮಕ್ಕಳಿಗಿಷ್ಟವಾದ ಗರಿಗರಿ ಚಿಪ್ಸ್​ಗಳು ಸಿಗುತ್ತಿಲ್ಲ. ಹೀಗಿರುವಾಗ ಮನೆಯಲ್ಲೇ ಚಿಪ್ಸ್​ ಮಾಡುವುದು ಹೇಗೆ ಎಂಬುದನ್ನು ಆ ಪುಟ್ಟ ಬಾಲಕ ಹೇಳುತ್ತಾನೆ. ಚಟ್​ಪಟ್​ ಅಂತ ಮಾಡನಾಡುತ್ತಲೇ ಚಿಪ್ಸ್​ ತಯಾರಿಸಿ ಸವಿದೇ ಬಿಡುತ್ತಾನೆ. ಇದೀಗ ಕೇರಳದ ಆ ಪುಟ್ಟ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸದ್ದು ಮಾಡುತ್ತಿದೆ. ಬಾಲಕನ ಮಾತಿಗೆ ನೆಟ್ಟಿಗರು ಫುಲ್​ ಫಿದಾ ಆಗಿದ್ದಂತೂ ಸತ್ಯ.

ಮನೆಯಲ್ಲಿಯೇ ಗರಿಗರಿಯಾದ ಪೊಟಾಟೊ(ಆಲೂಗಡ್ಡೆ) ಲೇಸ್​ ಅಥವಾ ಚಿಪ್ಸ್ ಮಾಡುವ ವಿಧಾನ ಹೇಗೆ ಎಂಬುದನ್ನು ಕೇರಳ ಮೂಲದ ಬಾಲಕ ಶಂಕರ್​ ವಿವರಿಸುತ್ತಾನೆ. ಇತ್ತೀಚೆಗೆ ಶಂಕರ್​ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋ ಹರಿ ಬಿಟ್ಟಿದ್ದಾನೆ. ಚಿಪ್ಸ್​ ತಯಾರಿಸುವ ವಿಡಿಯೋ ಸುಮಾರು 5 ಲಕ್ಷ ವೀಕ್ಷಣೆಯನ್ನು ಗಳಿಸಿಕೊಂಡಿದೆ.

ಲಾಕ್​ಡೌನ್​ ಸಮಯದಲ್ಲಿ ಶಾಲೆ ಮುಚ್ಚಲ್ಪಟ್ಟಾಗ ಶಂಕರ್​ ಹೆಚ್ಚು ಉತ್ಸುಕನಾಗಿದ್ದನು. ಆದರೆ ನಂತರ ತನ್ನ ಸ್ನೇಹಿತರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಆತನಿಗೆ ಕಾಡತೊಡಗಿತು. ಹಾಗಾಗಿ ಯೂಟ್ಯೂಬ್​ ಚಾನೆಲ್​ ತೆರಯಬೇಕು ಎಂಬ ಆಸೆ ಹೊತ್ತು ತನ್ನದೇ ಹೆಸರಿನ ಯುಟ್ಯೂಬ್​ ಚಾನೆಲ್​ ಅನ್ನು ತೆರೆದಿದ್ದಾನೆ. ಆತನ ಚಟ್​ಪಟ್​ ಮಾತು ಜತೆಗೆ ಗರಿಗರಿಯಾದ ಚಿಪ್ಸ್​ ತಯಾರಿಸುವ ವಿಧಾನ ಇದೀಗ ನೆಟ್ಟಿಗರ ಮನಸೆಳೆದಿದೆ.

ಬಾಲಕ ಶಂಕರ್​ ಗರಿಗರಿಯಾದ ಪೊಟಾಟೊ ಚಿಪ್ಸ್ಅನ್ನು ಸರಳ ವಿಧಾನದಲ್ಲಿ​ ತಯಾರಿಸುವುದು ಹೇಗೆ ಎಂಬುದನ್ನು ತನ್ನ ಯುಟ್ಯೂಬ್​ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೋ ಇಲ್ಲಿದೆ ನೋಡಿ..

ಬೇಕಾಗುವ ಸಾಮಗ್ರಿಗಳು ಆಲೂಗಡ್ಡೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್​ ಟೊಮ್ಯಾಟೊ ಗರಂ ಮಸಾಲಾ ಸಕ್ಕರೆ ಮೆಣಸಿನ ಪುಡಿ ಉಪ್ಪು ಎಣ್ಣೆ

ತಯಾರಿಸುವ ವಿಧಾನ ಟೊಮ್ಯಾಟೋನಿಂದ ಸಾಸ್​ ತಯಾರಿಸಿಕೊಳ್ಳಿ. ಮನೆಯಲ್ಲಿರುವ ಆಲೂಗಡ್ಡೆಯ ಸಿಪ್ಪೆ ತೆಗೆದು ತೆಳುವಾಗಿ ಕತ್ತರಿಸಿಕೊಳ್ಳಿ. ಪ್ಯಾನ್​ಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಎಣ್ಣೆ ಕಾದ ಬಳಿಕ ತೆಳುವಾಗು ಕತ್ತರಿಸಿದ ಆಲೂಗಡ್ಡೆಯನ್ನು ಫ್ರೈ ಮಾಡಿ. ಬಳಿಕ ಗರಿಗರಿಯಾದ ಕತ್ತರಿಸಿದ ಆಲೂ ಸಿದ್ಧವಾಗುತ್ತದೆ. ಅದಕ್ಕೆ ತಯಾರಿಸಿಕೊಂಡ ಗರಂ ಮಸಾಲಾ ಹಾಕಿ ಮಿಕ್ಸ್​ ಮಾಡಿದರೆ ಪೊಟಾಟೊ ಚಿಪ್ಸ್​ ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ: 

ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್​ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್

ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್

Published On - 11:03 am, Mon, 31 May 21

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ